ಕನ್ನಡ ವಚನಗಳು | 1st PUC Kannada Vachanagalu Notes

vachanagalu in kannada notes | ಕನ್ನಡ ವಚನಗಳು | 1st PUC Kannada

Vachanagalu in Kannada Notes, ಕನ್ನಡ ವಚನಗಳು PDF, 1st PUC Kannada Textbook Answers, allama prabhu Vachanagalu Questions and Answers Pdf, Notes , 1st PUC Kannada Vachanagalu Notes

ಪರಿವಿಡಿ

vachanagalu in kannada notes

ಕವಿ ಪರಿಚಯ:
ಅಲ್ಲಮಪ್ರಭು 12 ನೇ ಶತಮಾನದಲ್ಲಿದ್ದ ವಚನಕಾರದಲ್ಲಿ ಮಹತ್ವದ ವಚನಕಾರನೆಂದು ಪ್ರಸಿದ್ಧವಾಗಿರುವರು

ಜನ್ಮಸ್ಥಳ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ

ತಂದೆ : ನಿರಹಂಕಾರ

ತಾಯಿ : ಸುಜ್ಞಾನಿ

ಬಾಲ್ಯದಲ್ಲಿ ಕಾಮಲತೆ ಎಂಬ ತರುಣಿಯಲ್ಲಿ ಮೋಹಿತನಾಗಿದ್ದು , ಅವಳ ಮರಣದಿಂದ ವಿರಕ್ತಿಯನ್ನು ಹೊಂದಿದನೆಂದು ಹೇಳಲಾಗಿದೆ .

ಅಲ್ಲಮನ ಗುರು : ಅನಿಮಿಷಯ್ಯ

ಅಂಕಿತ ನಾಮ : ಗುಹೇಶ್ವರ

ಅಲ್ಲಮನ ಉದ್ದೇಶ : ಜ್ಞಾನ ಪ್ರಸಾರಣ ಅಲ್ಲಮನ ಉದ್ದೇಶವಾಗಿತ್ತು

ಬಸವಣ್ಣನವರು ಸ್ಥಾಪಿಸಿದ ಶೂನ್ಯಸಿಂಹಾಸನದ ಪೀಠವನ್ನು ಈತ ಅಲಂಕರಿಸಿದ್ದನು.

ಸಂಕೀರ್ಣತೆ ಈತನ ವಚನಗಳ ವೈಶಿಷ್ಟ್ಯವಾಗಿದೆ .

ವಚನಗಳ ಭಾವಾರ್ಥ / ಸಾರಾಂಶ

ಕಾಲುಗಳೆಂಬವು ಗಾಲಿ ಕಂಡಯ್ಯಾ

allama prabhu Vachanagalu Questions and Answers Pdf

ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ

ಬಂದಿಯ ಹೊಡೆವವರೈವರೂ ಮಾನಿಸರು ,

ಒಬ್ಬರಿಗೊಬ್ಬರು ಸಮವಿಲ್ಲಯ್ಯ

ಅದರಿಚ್ಚೆಯನರಿದು ಹೊಡೆಯದಿರ್ದಡೆ

ಅದರಚ್ಚು ಮುರಿಯಿತ್ತು , ಗುಹೇಶ್ವರಾ

ಕನ್ನಡ ವಚನಗಳು | Vachanagalu in Kannada Notes Best No1 Notes
ಕನ್ನಡ ವಚನಗಳು | Vachanagalu in Kannada Notes Best No1 Notes

ಈ ಮೇಲಿನ ವಚನದಲ್ಲಿ ಅಲ್ಲಮಪ್ರಭುವು ದೇಹವನ್ನು ಬಂಡಿಗೆ ಹೋಲಿಸಿದ್ದಾರೆ . ಬಂಡಿ ಮುಂದೆ ಸಾಗಲು ಗಾಲಿಗಳು ಬೇಕೇಬೇಕು ಹಾಗಾಗಿ ಮನುಷ್ಯನ ದೇಹವೆಂಬ ಬಂಡಿಗೆ ಅವನ ಕಾಲುಗಳೆರಡು ಗಾಲಿಗಳು ಇದಂತೆ ಎಂದಿದ್ದಾರೆ . ಕಾಲು ಓಡಾಡಲು ಅಗತ್ಯವಾದುದರಿಂದ ಅವುಗಳನ್ನು ಬಂಡಿಯ ಚಕ್ರಕ್ಕೆ ಹೋಲಿಸಿರುವುದು ಸೂಕ್ತವಾಗಿದೆ .

ಅಲ್ಲಮಪ್ರಭುಗಳು ದೇಹವನ್ನು ತುಂಬಿದ ಬಂಡಿಗೆ ಹೋಲಿಸಿದ್ದಾರೆ . ತುಂಬಿದ ಬಂಡಿಯನ್ನು ಎಚ್ಚರಿಕೆಯಿಂದ ಮುನ್ನಡೆಸಬೇಕು . ಅದೇ ರೀತಿ ದೇಹವನ್ನು ಅತ್ಯಂತ ಜಾಗರೂಕತೆಯಿಂದ , ಎಚ್ಚರದಿಂದ ನೋಡಿಕೊಳ್ಳಬೇಕು .

ಅಲ್ಲಮಪ್ರಭು ಪಂಚೇಂದ್ರಿಯಗಳನ್ನು ಬಂಡಿ ಹೊಡೆಯುವವರಿಗೆ ಸಮೀಕರಿಸಿದ್ದಾರೆ . ಬಂಡಿ ಹೊಡೆಯುವವನಿಗೆ ಬಂಡಿಯನ್ನು ಜಾಗರೂಕತೆ ಯಿಂದ ಮುನ್ನಡೆಸುವ ಪರಿಣತಿಯಿರಬೇಕು ಎಂದು ತಿಳಿಸಿದ್ದಾರೆ .

ದೇಹವೆಂಬ ಬಂಡಿಯನ್ನು ಹೊಡೆವವರು ನಮ್ಮ ಪಂಚೇಂದ್ರಿಯಗಳು , ನೋಟ , ಸ್ಪರ್ಶ , ಶ್ರವಣ , ರುಚಿ , ಗಂಧಗಳ ಅನುಭವಕ್ಕೆ ಬಲಿಯಾದ ಮನುಷ್ಯ ದೇಹಸುಖಕ್ಕೆ ಬಲಿಯಾಗುವ ಸಂದರ್ಭಗಳೇ ಅಧಿಕ .

ಹಾಗಾಗದಂತೆ ಪಂಚೇಂದ್ರಿಯಗಳ ಮೇಲಿನ ಹಿಡಿತ ಮುಖ್ಯ . ಪಂಚೇಂದ್ರಿಯಗಳೆಲ್ಲವೂ ಒಂದಕ್ಕೊಂದು ಸರಿಸಾಟಿಯಿಲ್ಲದವು . ಎಲ್ಲವೂ ಬೇರೆ ಬೇರೆಯ ಅಗತ್ಯಗಳನ್ನು ಪೂರೈಸುವಂಥವು . ಪಂಚೇಂದ್ರಿಯಗಳ ಮೂಲಕವೇ ನಮಗೆ ಸಕಲ ಅನುಭವಗಳೂ ಲಭಿಸುವುದರಿಂದ , ಅವುಗಳೇ ದೇಹವೆಂಬ ಬಂಡಿಗೆ ಆಧಾರ .

ಆದರೆ ಇಂದ್ರಿಯ ಜನ್ಯವಾದ ಅನುಭವಗಳು ಮನುಷ್ಯನನ್ನು ಎತ್ತೆತ್ತಲೋ ಒಯ್ಯಬಾರದು . ಹಾಗಾದಲ್ಲಿ ಆ ಬಂಡಿಯ ಅಚ್ಚು , ಎಂದರೆ ಆತ್ಮನಾಶವಾಗುತ್ತದೆ . ಆದ್ದರಿಂದ ಪಂಚೇಂದ್ರಿಯಗಳನ್ನು ಬಳಸಿಕೊಂಡೇ ದೇಹವೆಂಬ ಬಂಡಿಯನ್ನು ಮುನ್ನಡೆಸಿ ಆತ್ರೋದ್ಧಾರವನ್ನು ಕಂಡುಕೊಳ್ಳಬೇಕು ಎನ್ನುವುದು ಅಲ್ಲಮಪ್ರಭುವಿನ ಚಿಂತನೆಯಾಗಿದೆ .

ಕನ್ನಡ ವಚನಗಳು | Vachanagalu in Kannada Notes Best No1 Notes

ಶಬ್ದಗಳ ಅರ್ಥ :

ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು ?

ಹಸಿವು ಹೋಹುದೇ

ಅಂಗದ ಮೇಲೆ ಲಿಂಗ ಸ್ವಾಯತವಾದಡೇನು ?

ಭಕ್ತನಾಗಬಲ್ಲನೇ ?

ಇಟ್ಟ ಕಲ್ಲು ಮಳೆಯ ಮೇಲೆ ಸಿಲುಕಿದಡೆ ,

ಆ ಕಲ್ಲು ಲಿಂಗವೆ ? ಆ ಮಳೆ ಭಕ್ತನೆ ? ಇಟ್ಟಾತ ಗುರುವೆ

ಇಂತಪ್ಪವರ ಕಂಡಡೆ ನಾಚುವೆನಯ್ಯಾ , ಗುಹೇಶ್ವರಾ .

ಬೆಡಗಿನ ವಚನಗಳಿಂದ ಪ್ರಸಿದ್ಧನಾಗಿರುವ ಅಲ್ಲಮಪ್ರಭುವು ಭಕ್ತರಂತೆ ವೇಷ ತೊಟ್ಟಿರುವ ಡಾಂಭಿಕರ ನಡವಳಿಕೆಯನ್ನು ತನ್ನ ಈ ವಚನದಲ್ಲಿ ವಿಮರ್ಶಿಸಿದ್ದಾನೆ .

ಭಕ್ತಿಯೆಂಬುದು ಶಿವನನ್ನು ಕಾಣಬೇಕೆಂಬ ಉತ್ಕಟವಾದ ಹಸಿವಿನ೦ತೆ . ಹ ಊಟ ಹಾಕಿ ತೃಪ್ತಿಪಡಿಸಬೇಕೇ ಹೊರ ತು , ರುಚಿಯಾದ ಊಟದ ಪೊಟ್ಟಣವನ್ನು ತಂದು ಹಸಿದವನ ಹೊಟ್ಟೆಗೆ ಕಟ್ಟಿದರೆ ಅವನ ಮೇಲ್ನೋಟಕ್ಕೆ ಕಾಣುವುದಿಲ್ಲವಾದರೂ ಹೊಟ್ಟೆಯೊಳಗೆ ಹುಟ್ಟಿ ತಲ್ಲಣಗೊಳಿಸುತ್ತದೆ .

ಹೊಟ್ಟೆ ಹಸಿದವನಿಗೆ ಹೊಟ್ಟೆ ತುಂಬ ಹಸಿವು ಇಂಗುವುದೇ ? ಇಂಗಲಾರದು . ಅದರಂತೆಯೇ ಶಿವಲಿಂಗವನ್ನು ಕರಡಿಗೆಯಲ್ಲಿಟ್ಟು , ಶಿವದಾರವನ್ನು ಮೈಮೇಲೆ ಧರಿಸಿದ್ದ ಮಾತ್ರಕ್ಕೆ ಅವನು ಶಿವಭಕ್ತನಾಗಿ ಬಿಡುವನ ? ಮಳೆಯ ಮೇಲೆ ಬಂಡೆ ಕಲ್ಲು ಬಿದ್ದಿರಲು ಅದು ಶಿವಲಿಂಗ , ಮಳೆಯೇ ಶಿವಭಕ್ತ ಕಲ್ಲನ್ನು ಮಳೆಯ ಮೇಲೆ ಎಸೆದಾತ ಗುರು ಎನ್ನಲಾಗದು .

ಭಕ್ತನಲ್ಲದವನ ಮೈಮೇಲಿನ ಶಿವಲಿಂಗವು ಮಳೆಯ ಮೇಲೆ ಬಿದ್ದಿರುವ ಕಲ್ಲಿನಂತೆ ಎಂದು ಅಲ್ಲಮಪ್ರಭುವು ವಿಮರ್ಶಿಸಿದ್ದಾನೆ . ದೇವರು ನಿಜವಾದ ಭಕ್ತನ ಅಂತರಂಗದಲ್ಲಿರುತ್ತಾನೆ , ಬಾಹ್ಯ ಪ್ರದರ್ಶನ ವಸ್ತುಗಳಲ್ಲಲ್ಲ ಎಂಬುದನ್ನು ಅಲ್ಲಮಪ್ರಭುವು ಈ ವಚನದ ಮೂಲಕ ಸಾರಿದ್ದಾನೆ.

ಕನ್ನಡ ವಚನಗಳು | Vachanagalu in Kannada Notes Best No1 Notes

ಶಬ್ದಗಳ ಅರ್ಥ :

ನಾ ದೇವನಲ್ಲದೆ ನೀ ದೇವನೆ ?

ನೀ ದೇವನಾದಡೆ ಎನ್ನನೇಕೆ ಸಲಹೆ ?

ಅಲೈದು ಒಂದು ಕುಡಿತ ಉದಕವನೆರೆವೆ

ಹಸಿದಾಗ ಒಂದು ತುತ್ತು ಓಗರವನಿಕ್ಕುವೆ .

ನಾದೇವ ಕಾಣಾ , ಗುಹೇಶ್ವರಾ .

ವಚನಕಾರರು ಹಾಗೂ ಭಕ್ತಿಪರಂಪರೆಯ ಕವಿಗಳು ದೇವರನ್ನು ತಮ್ಮ ಹಾಗೆಯೇ ಪರಿಭಾವಿಸಿ ಸಂಪಾದಿಸಬಲ್ಲರು , ಜಗಳವಾಡಬಲ್ಲರು , ಸವಾಲು ಎಸೆಯಬಲ್ಲರು.

ಈ ವಚನದಲ್ಲಿ ಅಲ್ಲಮನು ಪ್ರಭು ಮನುಷ್ಯನನ್ನು ಸಲಹುವವನು ದೇವರು ಎಂಬ ಭಾವನೆಯು ಸುಳ್ಳಾಗುವಂತೆ ಹಸಿವ ನೀರಡಿಕೆಗಳು ಮನುಷ್ಯನನ್ನು ತಲ್ಲಣಗೊಳಿಸುವುದರಿಂದ ದೇವರಿಗೆ ಸವಾಲು ಹಾಕಿದ್ದಾನೆ .

ದೇವರೇ ಆಗಿದ್ದರೆ ನೀನು ಏಕೆ ಸಲಹುತ್ತಿಲ್ಲ ? ಮನುಷ್ಯನಾದ ನಾನೇ ಹಸಿದವನಿಗೆ ತುತ್ತು ಊಟವನ್ನು , ಬಾಯಾರಿಕೇಯದವನಿಗೆ ನೀರನ್ನು ಕೊಡಬಲ್ಲೆ . ಹಾಗಾಗಿ ನಿನ್ನ ಹೆಚ್ಚುಗಾರಿಕೆಯೇನೂ ಇಲ್ಲ . ಸಲಹದ ನೀನು ದೇವರಲ್ಲ . ಸಲಹುವ ನಾನೇ ( ಇಲ್ಲಿ ನಾನು ಎನ್ನುವುದು ಸಲಹುವ ಯಾರಾದರೂ ಸರಿ ಎಂಬರ್ಥದಲ್ಲಿದೆ ) ದೇವರು ಎಂದಿದ್ದಾರೆ .

ಇದು ತಾನು ದೇವರಿಗಿಂತ ಶ್ರೇಷ್ಠ ಎಂಬ ಅಹಂ ತೋರಿಸುವುದಿಲ್ಲ . ಬದಲಿಗೆ ಮನುಷ್ಯನ ಮೂಲಭೂತ ಸಮಸ್ಯೆಯಾ ಹಸಿವು , ನೀರಡಿಕೆಗಳನ್ನು ನೀಗಿಸಬೇಕಾದ ಮಹತ್ವವನ್ನು ತಿಳಿಸುತ್ತದೆ . ‘ ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲೆಡೆ ವಸುಧೆಯೊಳಗಾತನೆ ಗಾರುಡಿಗ ರಾಮನಾಥ ‘ ಎನ್ನುವ ದಾಸಿಮಯ್ಯನ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು . ಇಲ್ಲಿ ಅಲ್ಲಮನ ಜೀವಪರವಾದ ಚಿಂತನೆ ಪ್ರಕಟವಾಗಿದೆ .

ಶಬ್ದಗಳ ಅರ್ಥ :

ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು ?

ಹಸಿವು ಹೋಹುದೇ

ಅಂಗದ ಮೇಲೆ ಲಿಂಗ ಸ್ವಾಯತವಾದಡೇನು ?

ಭಕ್ತನಾಗಬಲ್ಲನೇ ?

ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ

ಆ ಕಲ್ಲು ಲಿಂಗವೆ ? ಆ ಮಳೆ ಭಕ್ತನೆ ? ಇಟ್ಟಾತ ಗುರುವೆ ?

ಇಂತಪ್ಪವರ ಕಂಡಡೆ ನಾಚುವೆನಯ್ಯಾ , ಗುಹೇಶ್ವರಾ .

12ನೇ ಶತಮಾನದ ಬಹುಮುಖ್ಯ ವಚನಕಾರರಲ್ಲಿ ಒಬ್ಬರಾದ ಅಲ್ಲಮಪ್ರಭುಗಳು ರಚಿಸಿರುವ ವಚನವಿದಾಗಿದೆ . ಇಲ್ಲಿ ಆಡಂಬರ ಹಾಗೂ ಯಾಂತ್ರಿಕ ಭಕ್ತಿಯನ್ನು ಪ್ರಶ್ನಿಸಿರುವರಲ್ಲದೆ ಶರಣ ಮತ್ತು ಆರಾಧನೆಯ ನಡುವಿನ ವ್ಯತ್ಯಾಸವನ್ನು ಇಲ್ಲಿ ಖಂಡಿಸಿರುವರು

ಬೆಡಗಿನ ವಚನಗಳಿಂದ ಪ್ರಸಿದ್ಧನಾಗಿರುವ ಅಲ್ಲಮಪ್ರಭುವು ಭಕ್ತರಂತೆ ವೇಷ ತೊಟ್ಟಿರುವ ಡಾಂಭಿಕರ ನಡೆವಳಿಕೆಯನ್ನು ತನ್ನ ಈ ವಚನದಲ್ಲಿ ವಿಮರ್ಶಿಸಿದ್ದಾನೆ . ಭಕ್ತಿಯೆಂಬುದು ಶಿವನನ್ನು ಕಾಣಬೇಕೆಂಬ ಉತ್ಕಟವಾದ ಹಸಿವಿನಂತೆ , ಹಸಿವು ಮೇಲ್ನೋಟಕ್ಕೆ ಕಾಣುವುದಿಲ್ಲವಾದರೂ ಹೊಟ್ಟೆಯೊಳಗೆ ಹುಟ್ಟಿ ತಲ್ಲಣಗೊಳಿಸುತ್ತದೆ .

2nd PUC Kannada Vachanagalu Notes

ಹೊಟ್ಟೆ ತುಂಬಾ ಊಟ ಹಾಕಿ ಹೊಟ್ಟೆ ಹಸಿದವನಿಗೆ ತೃಪ್ತಿಪಡಿಸಬೇಕೇ ಹೊರತು , ರುಚಿಯಾದ ಊಟದ ಪೊಟ್ಟಣವನ್ನು ತಂದು ಹಸಿದವನ ಹೊಟ್ಟೆಗೆ ಕಟ್ಟಿದರೆ ಅವನ ಹಸಿವು ಇಂಗುವುದೇ ? ಕಂಡಿತ ಇಂಗಲಾರದು ಹಾಗಾಗಿ.

ಅದರಂತೆಯೇ ಶಿವಲಿಂಗವನ್ನು ಕರಡಿಗೆಯಲ್ಲಿಟ್ಟು , ಶಿವದಾರವನ್ನು ಮೈಮೇಲೆ ಧರಿಸಿದ ಮಾತ್ರಕ್ಕೆ ಅವನು ಶಿವಭಕ್ತನಾಗಿಬಿಡುವನೆ ? ಮಳೆಯ ಮೇಲೆ ಕಲ್ಲು ಬಿದ್ದಿರಲು ಅದು ಶಿವಲಿಂಗ , ಮಳೆಯೇ ಶಿವಭಕ್ತ , ಕಲ್ಲನ್ನು ಎಸೆದಾತ ಗುರು ಎನ್ನಲಾಗದು .

ಭಕ್ತನಲ್ಲದವನ ಮೈಮೇಲಿನ ಶಿವಲಿಂಗವು ಮೆಳೆಯ ಮೇಲೆ ಬಿದ್ದಿರುವ ಕಲ್ಲಿನಂತೆ ಎಂದು ಅಲ್ಲಮಪ್ರಭುವು ವಿಮರ್ಶಿಸಿದ್ದಾನೆ . ದೇವರು ನಿಜವಾದ ಭಕ್ತನ ಅಂತರಂಗದಲ್ಲಿರುತ್ತಾನೆ , ಬಾಹ್ಯ ಪ್ರದರ್ಶನದ ವಸ್ತುಗಳಲ್ಲಲ್ಲ ಎಂಬುದನ್ನು ಅಲ್ಲಮಪ್ರಭುವು ಈ ವಚನದ ಮೂಲಕ ಸಾರಿದ್ದಾನೆ .

2nd puc kannada notes vachanagalu

ಕನ್ನಡ ವಚನಗಳು

ನಾ ದೇವನಲ್ಲದೆ ನೀ ದೇವನೆ ?

ನೀ ದೇವನಾದಡೆ ಎನ್ನನೇಕೆ ಸಲಹೆ ?

ಆರೈದು ಒಂದು ಕುಡಿತೆ ಉದಕವನೆರೆವೆ ,

ಹಸಿದಾಗ ಒಂದು ತುತ್ತು ಓಗರವನಿಕ್ಕುವೆ .

ನಾದೇವ ಕಾಣಾ , ಗುಹೇಶ್ವರಾ .

Vachanagalu in Kannada Notes

ಭಕ್ತಿಪರಂಪರೆಯ ಹಾಗೂ ವಚನಕಾರರು ಕವಿಗಳು ದೇವರನ್ನು ತಮ್ಮ ಹಾಗೆಯೇ ಪರಿಭಾವಿಸಿ ಸಂವಾದಿಸಬಲ್ಲರು , ಜಗಳವಾಡಬಲ್ಲರು , ಸವಾಲು ಎಸೆಯಬಲ್ಲರು . ಈ ವಚನದಲ್ಲಿ ಅಲ್ಲಮನು ಮನುಷ್ಯನನ್ನು ಸಲಹುವವನು ದೇವರು ಎಂಬ ಭಾವನೆಯು ಸುಳ್ಳಾಗುವಂತೆ ಹಸಿವು , ನೀರಡಿಕೆಗಳು ಮನುಷ್ಯನನ್ನು ತಲ್ಲಣಗೊಳಿಸುವುದರಿಂದ ದೇವರಿಗೆ ಸವಾಲು ಹಾಕಿದ್ದಾನೆ .

ಮನುಷ್ಯನಾದ ನಾನೇ ಹಸಿದವನಿಗೆ ತುತ್ತು ಊಟವನ್ನು ಬಾಯಾರಿದವನಿಗೆ ನೀರನ್ನು ಕೊಡಬಲ್ಲೆ . ಹಾಗಾಗಿ ನಿನ್ನ ಹೆಚ್ಚುಗಾರಿಕೆಯೇನೂ ಇಲ್ಲ . ಸಲಹದ ನೀನು ದೇವರಲ್ಲ . ಸಲಹುವ ನಾನೇ ದೇವರು ಎಂದಿದ್ದಾನೆ .

ಇದು ತಾನು ದೇವರಿಗಿಂತ ಶ್ರೇಷ್ಠ ಎಂಬ ಅಹಂ ತೋರಿಸುವುದಿಲ್ಲ . ಬದಲಿಗೆ ಮ ಮೂಲಭೂತ ಸಮಸ್ಯೆಯಾದ ಹಸಿವು , ನೀರಡಿಕೆಗಳನ್ನು ನೀಗಿಸಬೇಕಾದ ಮಹತ್ವವನ್ನು ತಿಳಿಸುತ್ತದೆ . ‘ ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲೆಡೆ ವಸುಧೆಯೊಳಗಾತನೆ ಗಾರುಡಿಗ ರಾಮನಾಥ ‘ ಎನ್ನುವ ದಾಸಿಮಯ್ಯನ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದ .

ಕನ್ನಡ ವಚನಗಳು | Vachanagalu in Kannada Notes Best No1 Notes

ಕನ್ನಡ ವಚನಗಳು | Vachanagalu in Kannada Notes Best No1 Notes
ಕನ್ನಡ ವಚನಗಳು | Vachanagalu in Kannada Notes Best No1 Notes

ಒಂದು ವಾಕ್ಯದಲ್ಲಿ ಉತ್ತರಿಸಿ

ಅಕ್ಕನು ಹೇಳುವ ತೊದರು ಯಾವುದು ?

ಅಕ್ಕನು ರತ್ನದ ಸಂಕೋಲೆಯನ್ನು ತೊಡರು ಎಂದಿದ್ದಾರೆ

ಲೋಕದ ಚೇಷ್ಟೆಗೆ ಬೀಜವಾದುದು ಯಾವುದು

ಲೋಕದ ಚೇಷ್ಟೆಗೆ ರವಿಯು ಬೀಜವಾಗಿದ್ದಾನೆ

ಭವ ಯಾವಾಗ ಕೆಡುವುದು ?

ಆತ್ಮಪರಮಾತ್ಮನಲ್ಲಿ ಲೀನವಾದಾಗ ಭವ ಕೆಡುವುದು

ಸತ್ಯವ ನುಡಿವುದು ಯಾವುದರ ಶೃಂಗಾರವಾಗಬೇಕು ?

ಸತ್ಯವನ್ನು ನುಡಿಯುವುದು ನಾವು ಆಡುವ ಮಾತಿಗೆ ಶೃಂಗಾರವಾಗಬೇಕು

ಅಕ್ಕ ಹೇಳುವ ಬಂಧನ ಯಾವುದು ?

ಅಕ್ಕ ಹೇಳುವ ಬಂಧನ ಮುತ್ತಿನ ಬಲೆ ಎಂಬುದು

ಅಕ್ಕನ ವಚನಗಳ ಅಂಕಿತ ಯಾವುದು ?

ಚೆನ್ನಮಲ್ಲಿಕಾರ್ಜುನ

ಕರಣಂಗಳ ಚೇಷ್ಟೆಗೆ ಬೀಜವಾದುದು ಯಾವುದು ?

ಕರಣಂಗಳ ಚೇಷ್ಟೆಗೆ ಮನವೇ ಬೀಜ

ಕಣ್ಣೆ ಶೃಂಗಾರ ಯಾವುದು

ಗುರುಹಿರಿಯರನ್ನು ನೋಡುವುದೇ ಕಣ್ಣುಗಳಿಗೆ ಶೃಂಗಾರ

ಕಾಲುಗಳನ್ನು ಯಾವುದಕ್ಕೆ ಹೋಲಿಸಲಾಗಿದೆ ?

ಕಾಲುಗಳನ್ನು ದೇಹವೆಂಬ ಬಂಡಿಯ ಗಾಲಿಗಳಿಗೆ ಹೋಲಿಸಲಾಗಿದೆ

ದೇಹವೆಂಬುದು ಏನು ?

ದೇಹವೆಂಬುದು ‘ ತುಂಬಿದ ಬಂಡಿ ‘ ಎಂದಿದ್ದಾರೆ ಅಲ್ಲಮಪ್ರಭು

ಕಟ್ಟೋರಗದ ಮೊಟ್ಟೆಯನ್ನು ಎಲ್ಲಿ ಕಟ್ಟಲಾಗಿದೆ ?

ಕಟ್ಟೋಗರದ ಮೊಟ್ಟೆಯನ್ನು ಹಸಿದವರ ಹೊಟ್ಟೆಯ ಮೇಲೆ ಕಟ್ಟಲಾಗಿದೆ

ಇಟ್ಟ ಕಲ್ಲು ಎಲ್ಲಿ ಸಿಲುಕಿದರೆ ಲಿಂಗವೆಂದು ಕೇಳುತ್ತಾನೆ ?

ಇಟ್ಟ ಕಲ್ಲು ಮಳೆಯ ಮೇಲೆ ಸಿಲುಕಿದಡೆ ಲಿಂಗವೇ ? ಎಂದು ಕೇಳಿದ್ದಾರೆ

ಹಸಿದಾಗ ಏನನ್ನು ನೀಡಬೇಕೆಂದು ಅಲ್ಲಮ ಹೇಳುತ್ತಾನೆ ?

ಹಸಿದಾಗ ಒಂದು ತುತ್ತು ಓಗರ ( ಅನ್ನವನ್ನು ನೀಡಬೇಕೆಂದು ಅಲ್ಲಮ ಹೇಳಿದ್ದಾನೆ

ದಯ ಧರ್ಮದ ಮೊನೆ ಯಾವುದಕ್ಕೆ ಇರುವುದಿಲ್ಲ ?

ದಯ ಧರ್ಮದ ಮೊನೆಯು ಇರಿಯುವ ಆಯುಧಕ್ಕೆ ಇರುವುದಿಲ್ಲ

ತಪವನ್ನು ಘಟ್ಟಿವಾಳಯ್ಯ ಏನೆಂದು ಕರೆಯುತ್ತಾರೆ ?

ಘಟ್ಟಿವಾಳಯ್ಯನವರು ತಪವನ್ನು ಬಂಧನವೆಂದು ಕರೆದಿದ್ದಾರೆ

ನಗೆಗೆ ಈಡಾಗುವುದು ಯಾವುದು ?

ಕಟ್ಟಿನ ವ್ರತದ ಭಾಷೆಯು ನಗೆಗೀಡಾಗುವುದು

ಭಾಷೆಹೀನರ ಕಂಡಾಗ ಏನಾಯಿತು ?

ಭಾಷೆಹೀನರನ್ನು ಕಂಡಾಗ ನಾಚಿಕೆಯಾಯಿತು

ಘಟ್ಟಿವಾಳಯ್ಯನವರ ವಚನಗಳ ಅಂಕಿತ ಯಾವುದು

ಚಿಕ್ಕಯ್ಯಪ್ರಿಯ ಸಿದ್ಧಲಿಂಗ ‘ ಎಂಬುದು ಘಟ್ಟಿವಾಳಯ್ಯನವರ ವಚನಗಳ ಅಂಕಿತ

ಕನ್ನಡ ವಚನಗಳು | Vachanagalu in Kannada Notes Best No1 Notes

ಕನ್ನಡ ವಚನಗಳು | Vachanagalu in Kannada Notes Best No1 Notes
ಕನ್ನಡ ವಚನಗಳು | Vachanagalu in Kannada Notes Best No1 Notes

ಕನ್ನಡ ವಚನಗಳು | Vachanagalu in Kannada Notes Best No1 Notes

2 – 3 ವಾಕ್ಯಗಳಲ್ಲಿ ಉತ್ತರಿಸಿ

ಕೈದು , ಕಾಳೋರಗಗಳಿಗೆ ಏನೇನು ಇರುವುದಿಲ್ಲ ?

ಇರಿವ ಕೈದುವಿಗೆ ದಯಧರ್ಮಗಳಿರುವುದಿಲ್ಲ . ಕಾಳೋರಗದ ದಾಡೆಯಲ್ಲಿ ಅಮೃತದ ಸುಧೆ ಇರುವುದಿಲ್ಲ .

ತಗಹು , ಸೂತಕಗಳು ಯಾವುವು ?

ನೇಮವೆಂಬುದು ತಗಹು ( ಕಟ್ಟುಪಾಡು ) ಮತ್ತು ಶೀಲವೆಂಬುದು ಸೂತಕ ಎಂದು ಘಟ್ಟಿವಾಳಯ್ಯನವರು ಅಭಿಪ್ರಾಯ ಪಟ್ಟಿದ್ದಾರೆ .

ಕಾಲು ಮತ್ತು ದೇಹವನ್ನು ಯಾವುದಕ್ಕೆ ಹೋಲಿಸಲಾಗಿದೆ ?

ದೇಹವನ್ನು ತುಂಬಿದ ಬಂಡಿಗೆ ಹೋಲಿಸಲಾಗಿದೆ ಮತ್ತು ಕಾಲುಗಳನ್ನು ಬಂಡಿಯ ಗಾಲಿಗಳಿಗೆ ಹೋಲಿಸಲಾಗಿದೆ .

ಯಾರನ್ನು ಕಂಡರೆ ಅಲ್ಲಮ ನಾಚುವೆನೆಂದು ಹೇಳುವನು ?

ಆಡಂಬರ ಮತ್ತು ಯಾಂತ್ರಿಕ ಭಕ್ತರನ್ನು ಅಲ್ಲಮಪ್ರಭುವು ವಿಡಂಬಿಸಿದ್ದಾರೆ . ಅಂಗದ ಮೇಲೆ ಲಿಂಗವ ಧರಿಸಿ , ಅಂತರಂಗ ಭಕ್ತಿಯಿಲ್ಲದೆ ಭಕ್ತರಂತೆ ಮೆರೆವವರನ್ನು ಕಂಡರೆ ತಾವು ನಾಚುವುದಾಗಿ ಅಲ್ಲಮಪ್ರಭುವು ಹೇಳುವನು .

ಅಲ್ಲಮ ಏನನ್ನು ನೀಡುವುದರಿಂದ ನಾ ದೇವ ಎಂದು ಹೇಳುತ್ತಾನೆ ?

ದೇಹ ನೀರಡಿಕೆಗೆ ಒಳಗಾದಾಗ ಆರೈದು ಕುಡಿತೆ ಉದಕವನ್ನೆರೆವುದರಿಂದ , ಹಸಿದಾಗ ಒಂದು ತುತ್ತು ಅನ್ನ ( ಓಗರ ) ವನ್ನು ನೀಡಿ ಆರೈಕೆ ಮಾಡುವುದರಿಂದಾಗಿ ‘ ನಾ ದೇವ ‘ ಎಂದು ದೇವರಿಗೆ ಹೇಳಿದ್ದಾನೆ.

ಕೈದು , ಕಾಳೋರಗಗಳಿಗೆ ಏನೇನು ಇರುವುದಿಲ್ಲ ?

ಇರಿವ ಕೈದುವಿಗೆ ದಯಧರ್ಮಗಳಿರುವುದಿಲ್ಲ . ಕಾಳೋರಗದ ದಾಡೆಯಲ್ಲಿ ಅಮೃತದ ಸುಧೆ ಇರುವುದಿಲ್ಲ .

ತಗಹು , ಸೂತಕಗಳು ಯಾವುವು ?

ನೇಮವೆಂಬುದು ತಗಹು ( ಕಟ್ಟುಪಾಡು ) ಮತ್ತು ಶೀಲವೆಂಬುದು ಸೂತಕ ಎಂದು ಘಟ್ಟಿವಾಳಯ್ಯನವರು ಅಭಿಪ್ರಾಯ ಪಟ್ಟಿದ್ದಾರೆ

ರತ್ನ ಮುತ್ತು ಏನನ್ನು ಸೂಚಿಸುತ್ತವೆ ?

ರತ್ನವು ತೊಡರಿನ ಸಂಕೋಲೆಯನ್ನೂ ಮುತ್ತು ಬಲೆಯ ಬಂಧನವನ್ನೂ ಸೂಚಿಸುತ್ತವೆ .

ಲೋಕ ಹಾಗೂ ಕರಣಗಳ ಚೇಷ್ಟೆಗೆ ಬೀಜ ಯಾವುದು ?

ಲೋಕದ ಚೇಷ್ಟೆಗೆ ರವಿಯು ಬೀಜ , ಕರಣಗಳ ಚೇಷ್ಟೆಗೆ ಮನವೇ ಬೀಜ .

ಕಣ್ಣು ಹಾಗೂ ಕರ್ಣಗಳಿಗೆ ಶೃಂಗಾರ ಯಾವುದು ?

ಗುರುಹಿರಿಯರನ್ನು ನೋಡುವುದು ಕಣ್ಣಿಗೆ ಶೃಂಗಾರ , ಪುರಾತನರ ಸಂಗೀತವನ್ನು ಕೇಳುವುದು ಕರ್ಣಕ್ಕೆ ಶೃಂಗಾರ.

ಕನ್ನಡ ವಚನಗಳು | Vachanagalu in Kannada Notes Best No1 Notes

5-6 ವಾಕ್ಯಗಳಲ್ಲಿ ಉತ್ತರಿಸಿ :

ಲೋಕದ ಭಜನೆಯಲ್ಲಿ ಸಿಲುಕಿದವರಿಗೆ ಮುಕ್ತಿಯಿಲ್ಲ ಎಂಬುದನ್ನು ಅಕ್ಕ ಹೇಗೆ ನಿರೂಪಿಸಿದ್ದಾಳೆ ?

ಅಕ್ಕಮಹಾದೇವಿಯು ಮಹಾ ಅನುಭಾವಿಯಾದ ಶಿವಶರಣೆ . ಅವಳು ಲೌಕಿಕದಿಂದ ಬಿಡಿಸಿಕೊಂಡು ಅಲೌಕಿಕದಲ್ಲಿ ಬದುಕಿದವಳು . ಲೋಕದ ಮಾಯೆಯನ್ನು ಅಕ್ಕಮಹಾದೇವಿ ಮುತ್ತು ರತ್ನ , ಚಿನ್ನಗಳಿಗೆ ಹೋಲಿಸಿ , ಅವುಗಳ ಮಾಯೆಗೆ ಸಿಲುಕಿದವರಿಗೆ ಮುಕ್ತಿಯಿಲ್ಲ ಎಂದಿರುವಳು.

ಬೇಡಿಯು ಕಬ್ಬಿಣದಾದ್ದರೇನು , ರತ್ನದ್ದಾದರೇನು ? ಅದು ಬಂಧನವೇ ತಾನೆ ? ಅದೇರೀತಿ ಬಲೆಯು ಮುತ್ತಿನದಾದ ರೇನು , ನೂಲಿನದಾದರೇನು ? ಬಂಧಿಸಿಯೇ ಬಂಧಿಸುತ್ತದೆ . ಚಿನ್ನದ ಕತ್ತಿಯಾದರೇನು ? ಅದರಿಂದ ತಲೆಯನ್ನು ಕತ್ತರಿಸಿದರೆ ಸಾಯದೇ ಉಳಿಯುವುದಿಲ್ಲ .

ಹೀಗೆಯೇ ಜಗದ ಮಾಯೆ ಕೂಡ ನಮ್ಮನ್ನು ಆಕರ್ಷಿಸಿ , ಬಂಧಿಸಿಡುತ್ತದೆ . ಈ ಬಂಧನದಲ್ಲಿ ಸಿಲುಕಿ , ಅದರ ಭಜನೆಯಲ್ಲಿ ತೊಡಗುವವರಿಗೆ ಮುಕ್ತಿ ಸಿಗದು . ಲೌಕಿಕದ ಆಕರ್ಷಣೆ , ಜನನ – ಮರಣಗಳ ಸಂಕೋಲೆಯಿಂದ ಬಿಡಿಸಿಕೊಳ್ಳಬೇಕು . ಆಗ ಮಾತ್ರ ಮುಕ್ತಿ ದೊರಕೀತು ಎಂಬುದು ಅಕ್ಕಮಹಾದೇವಿಯ ಅಭಿಪ್ರಾಯವಾಗಿದೆ.

ಹುಟ್ಟು – ಸಾವನ್ನು ಮೀರುವುದು ಹೇಗೆಂದು ಅಕ್ಕಮಹಾದೇವಿ ತನ್ನ ವಚನದಲ್ಲಿ ವಿವರಿಸಿದ್ದಾಳೆ ?

ಅಕ್ಕಮಹಾದೇವಿ ಒಬ್ಬ ಅನುಭಾವಿ ಕವಯಿತ್ರಿ . ಹುಟ್ಟು – ಸಾವು , ಜಗದ ಜಂಜಡಗಳಿಂದ ಬಿಡಿಸಿಕೊಳ್ಳದಿದ್ದರೆ ಅಲೌಕಿಕ ವಾದ ಆನಂದ ದೊರೆಯದೆಂಬುದನ್ನು ಪ್ರತಿಪಾದಿಸಿದಳು . ಅವಳ ಅಭಿಪ್ರಾಯದಲ್ಲಿ ನಮ್ಮ ಎಲ್ಲ ಆಸೆ , ಆಕಾಂಕ್ಷೆ , ಮಾಯೆ , ಸೆಳೆತ , ಆಕರ್ಷಣೆಗಳಿಗೆ ನಮ್ಮಮನಸ್ಸೆ ಮೂಲಕಾರಣ .

ಮನಸ್ಸನ್ನು ಈ ಸೆಳೆತದಲ್ಲಿ ಹರಿಯಬಿಡಬಹುದು ಅಥವಾ ನಿಯಂತ್ರಿಸಿಕೊಂಡು ಅವುಗಳಿಂದ ಬಿಡಿಸಿಕೊಳ್ಳಬಹುದು . ಎಲ್ಲವೂ ನಮ್ಮ ಕೈಯಲ್ಲಿದೆ .

ಇರುವ ಒಂದು ಮನಸ್ಸನ್ನು ದೇವರಲ್ಲಿ ನೆಲೆಗೊಳಿಸಿಕೊಂಡರೆ ಉಳಿದೆಲ್ಲ ಮಾಯೆಯಿಂದ ಪಾರಾದಂತೆ , ದೇವನಲ್ಲಿ ಮನವನ್ನು ಅಥವಾ ಆತ್ಮವನ್ನು ಲೀನಗೊಳಿಸಿಕೊಂಡವನು ಭವವನ್ನು ಜಯಿಸಿದಂತೆ ಎಂಬುದು ಮಹಾದೇವಿಯಕ್ಕನ ಅಭಿಪ್ರಾಯವಾಗಿದೆ . ಅವಳು ಸ್ವತಃ ಚೆನ್ನಮಲ್ಲಿಕಾರ್ಜುನನಲ್ಲಿ ಮನಸ್ಸನ್ನು ನೆಲೆಗೊಳಿಸಿ ಭವವನ್ನು ಜಯಿಸಿದವಳು .

ಆದ್ದರಿಂದ ಹುಟ್ಟು – ಸಾವನ್ನು ಗೆಲ್ಲಲು ಪರಮಾತ್ಮನಲ್ಲಿ ಮನವನ್ನು ಲೀನಗೊಳಿಸುವುದೇ ಸುಲಭ ಮಾರ್ಗವೆಂದು ಸ್ವಾನುಭವದಿಂದ ವಿವರಿಸಿದ್ದಾಳೆ .

ಕನ್ನಡ ವಚನಗಳು | Vachanagalu in Kannada Notes Best No1 Notes

ಬದುಕು ಸಾರ್ಥಕವಾಗಬೇಕಾದರೆ ಯಾವ ಅಂಶಗಳು ಇರಬೇಕೆಂದು ಅಕ್ಕಮಹಾದೇವಿ ಹೇಳುತ್ತಾಳೆ ?

ಅಕ್ಕಮಹಾದೇವಿಯು ಬದುಕಿನ ಸಾರ್ಥಕತೆಯನ್ನು ತನ್ನ ವಚನವೊಂದರಲ್ಲಿ ಸೊಗಸಾಗಿ ವಿವರಿಸಿರುವಳು . ಅವಳ ಅಭಿಪ್ರಾಯದಂತೆ ಗುರುಹಿರಿಯರನ್ನು ನೋಡುವುದೇ ಕಣ್ಣಿಗೆ ಭೂಷಣ . ಹಿಂದಿನವರ ಸಂಗೀತವನ್ನು ಕೇಳುವುದು ಕಿವಿಗೆ ಅಲಂಕಾರ .

ನಮ್ಮ ಮಾತು ಮೌಲ್ಯಯುತವೆನಿಸಿಕೊಳ್ಳಬೇಕಾದರೆ ಸದಾ ಸತ್ಯವನ್ನೇ ನುಡಿಯಬೇಕು , ಸುಳ್ಳಾಡಬಾರದು . ಇನ್ನೊಬ್ಬರೊಂದಿಗೆ ಸಂಭಾಷಿಸುವಾಗ ಸದ್ಭಕ್ತರ ನುಡಿಗಳನ್ನು ಉಲ್ಲೇಖಿಸಬೇಕು , ಚರ್ಚಿಸಬೇಕು . ಹಾಗೆಯೇ ನಾವು ಮಾಡುವ ದಾನ ಶ್ರೇಷ್ಠವೆನಿಸಿಕೊಳ್ಳಬೇಕಾದರೆ ಸತ್ಪಾತ್ರರಿಗೆ , ಅರ್ಹರಿಗೆ ದಾನ ಮಾಡಬೇಕು .

ಅದು ಕೊಡುವ ಕೈಗೆ ಭೂಷಣ . ಶಿವಶರಣರ ಸಮೂಹದೊಡನೆ ಜೀವಿಸುವುದರಿಂದ ಜೀವನಕ್ಕೆ ಅರ್ಥ ಲಭಿಸುತ್ತದೆ . ಈ ರೀತಿಯಲ್ಲದವನ ಬದುಕಿನಿಂದ ಯಾವ ಉಪಯೋಗವೂ ಇಲ್ಲ . ಬದುಕು ಸಾರ್ಥಕಗೊಳ್ಳಬೇಕಾದರೆ ಈ ಮೇಲೆ ಹೇಳಿದ ರೀತಿಯಲ್ಲಿ ಬದುಕನ್ನು ನಡೆಸುವುದು ಅವಶ್ಯ ಎಂಬುದು ಅಕ್ಕಮಹಾದೇವಿಯ ಅಭಿಪ್ರಾಯವಾಗಿದೆ .

ಕನ್ನಡ ವಚನಗಳು | Vachanagalu in Kannada Notes Best No1 Notes

Download PDF Book Click Here

ಇತರೆ ಪ್ರಮುಖ ಮಾಹಿತಿ

Leave a Reply

Your email address will not be published. Required fields are marked *