Akhanda Karnataka Notes in Kannada । ಅಖಂಡ ಕರ್ನಾಟಕ ಪದ್ಯ notes

Akhanda Karnataka Notes in Kannada । ಅಖಂಡ ಕರ್ನಾಟಕ ಪದ್ಯ notes

Akhanda Karnataka Notes in Kannada, ಅಖಂಡ ಕರ್ನಾಟಕ ಪದ್ಯ notes ಸಾರಾಂಶ, akhanda karnataka poem summary and Pdf, Notes, 1st PUC Kannada

Akhanda Karnataka Notes in Kannada

ಅಖಂಡ ಕರ್ನಾಟಕವನ್ನು ಹರಸುತ್ತಿರುವವರು ಯಾರು ?

ಅಖಂಡ ಕರ್ನಾಟಕವನ್ನು ಹರಸುತ್ತಿರುವವರು ದೇವ ಗಾಂಧಿ

ಕನ್ನಡದ ರಾಷ್ಟ್ರಕವಿಗಳು ಯಾರು?

ಮಂಜೇಶ್ವರ ಗೋವಿಂದ ಪೈ

ಕವಿ ಪರಿಚಯ :

ಕುವೆಂಪು ಕವಿ

  • ಬಹುಶ್ರುತ ಪ್ರತಿಭೆಯ ಕವಿ ಕುವೆಂಪು ಕನ್ನಡ ಕಾವ್ಯಾರಾಮದ ಕೋಗಿಲೆ ಎನಿಸಿದವರು .
  • ಪೂರ್ಣ ಹೆಸರು : ಡಾ . ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ
  • ಜನನ : 29 ನೇ ಡಿಸೆಂಬರ್ 1904
  • ಮರಣ : 10 ನೇ ನವಂಬರ್ 1994

ಸಾಹಿತ್ಯ ಕೃತಿಗಳು:

  • ಪಕ್ಷಿಕಾಶಿ
  • ಕೊಳಲು
  • ಅಗ್ನಿಹಂಸ
  • ಅನುತ್ತರಾ
  • ನವಿಲು
  • ಪ್ರೇಮ ಕಾಶ್ಮೀರ
  • ಚಂದ್ರಮಂಚಕೆ ಬಾ ಚಕೋರಿ

ನಾಟಕಗಳು

  • ಬೆರಳ್ ಗೆ ಕೊರಳ್
  • ನನ್ನ ಗೋಪಾಲ
  • ಯಮನ ಸೋಲು
  • ಸ್ಮಶಾನ ಕುರುಕ್ಷೇತ್ರಂ
  • ಮಹಾರಾತ್ರಿ

ವಿಚಾರ ಕೃತಿಗಳು

  • ದೌಪದಿಯ ಶ್ರೀಮುಡಿ
  • ರಸೋವೈಸಃ
  • ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ

ಕಾದಂಬರಿ

  • ಕಾನೂರು ಹೆಗ್ಗಡತಿ
  • ಮಲೆಗಳಲ್ಲಿ ಮದುಮಗಳು

ಮಹಾಕಾವ್ಯ

  • ಶ್ರೀರಾಮಾಯಣ ದರ್ಶನಂ

ವೃತ್ತಿ ಜೀವನ :

ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರೂ , ಕುಲಪತಿಗಳೂ ಆಗಿ ಸೇವೆ ಸಲ್ಲಿಸಿದ್ದಾರೆ

ಗೌರವ ಪುರಸ್ಕಾರಗಳು

  • ಭಾರತೀಯ ಜ್ಞಾನಪೀಠ ಪ್ರಶಸ್ತಿ
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ಪದ್ಮವಿಭೂಷಣ ಪ್ರಶಸ್ತಿ
  • ಪಂಪ ಪ್ರಶಸ್ತಿ
  • ಕರ್ನಾಟಕ ರತ್ನ ಪ್ರಶಸ್ತಿ

1957 ರಲ್ಲಿ ಧಾರವಾಡದಲ್ಲಿ ಜರುಗಿದ 29 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಸಂದಿದೆ .

ಪದ್ಯ


ಅಖಂಡ ಕರ್ಣಾಟಕ :

ಅಲ್ತೂ ನಮ್ಮ ಕೂಗಾಟದ ರಾಜಕೀಯ ನಾಟಕ !

ಹರಸುತಿಹನು ದೇವ ಗಾಂಧಿ

ಮಂತ್ರಿಸಿಹುದು ಋಷಿಯ ನಾಂದಿ

ತನಗೆ ತಾನೆ ಋತಸ್ಯಂದಿ

ಅವಂಧ್ಯೆ ಕವಿಯ ಕಲ್ಪನ

ಒರ್ವನಾದೊಡೋರ್ವನು

ಶಕ್ತಿ ಸರ್ವನಲ್ಪನ ?

ಹಿಂದದೊಂದು ಹಿರಿಯ ಕನಸು

ಇಂದು ಕೋಟಿ ಕೋಟಿ ಮನಸು

ಕೂಡಿ ಮೂಡಿ ನಿಂದ ನನಸು !

ತಡೆವುದೇನೋ ನಿನ್ನ ಕಿನಿಸು

ಒಣರುವಲ್ಪ ಜಲ್ಪನೆ ?
ಭುವನ ವಂದ್ಯೆ , ಕೇಳ್ , ಅವಂಧ್ಯೆ

ಕವಿಯ ವಿಂಧ್ಯ ಕಲ್ಪನೆ !


ಅಲ್ತೂ ನಮ್ಮ ಬೂಟಾಟದ ರಾಜಕೀಯ ನಾಟಕ

ಇಂದು ಬಂದು ನಾಳೆ ಸಂದು

ಹೋಹ ಸಚಿವ ಮಂಡಲ

ರಚಿಸುವೊಂದು ಕೃತಕವ ಲ್ತೊ

ಸಿರಿಗನ್ನಡ ಸರಸ್ವತಿಯ

ವಜ್ರಕರ್ಣ ಕುಂಡಲ !


ಅಲ್ತೂ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ !

ನೃಪತುಂಗನೆ ಚಕ್ರವರ್ತಿ !

ಪಂಪನಲ್ಲಿ ಮುಖ್ಯಮಂತ್ರಿ !

ರನ್ನ ಜನ್ನ ನಾಗವರ್ಮಾ

ರಾಘವಾಂಕ ಹರಿಹರ

ಬಸವೇಶ್ವರ ನಾರಣಪ್ಪ

ಸರ್ವಜ್ಞ ಷಡಕ್ಷರ :

ಸರಸ್ವತಿಯೆ ರಚಿಸಿದೊಂದು

ನಿತ್ಯ ಸಚಿವ ಮಂಡಲ

ತನಗೆ ರುಚಿರ ಕುಂಡಲ !


ಅಲ್ತೂ ನಮ್ಮ ಕೀರಿಶನಿಯ ರಾಜಕೀಯ ನಾಟಕ !

ಬರಿಯ ಹೊಟ್ಟೆ ಬಟ್ಟೆಗಲ್ಲೊ

ಪಕ್ಷ ಜಾತಿ ಕಲಹಕಲ್ಲೊ

ಹಮ್ಮುಬಿಮ್ಮುಸೊಮ್ಮಿಗ ಲ್ತೊ

ಬಣ್ಣ ಚಿಟ್ಟೆ ಬಾಳಿಗ ಲ್ತೊ

ಜೋಳವಾಳಿ ಕೂಳಿಗಲ್ಲೊ

ದರ್ಪ ಸರ್ಪ ಕಾರ್ಕೋಟಕ

ಸ್ವಾರ್ಥ ಫಣಾ ಕ್ರೀಡೆಗಲ್ತೊ

ರಾಜಕೀಯ ಪೇಟಕ ,

ಅಖಂಡ ಕರ್ಣಾಟಕ !


ಸರಸ್ವತಿಯೆ ರಚಿಸಿದೊಂದು ರಾಜಕೀಯ ತ್ರೋಟಕ

ಮೆರೆಯಲಾತ್ಮಸಂಸ್ಕೃತಿ

ಬೆಳಗೆ ಜೀವ ದೀಧಿತಿ

ಪರಮಾತ್ಮನ ಚರಣದೀಪ್ತಿ

ಶರಣ ಹೃದಯದಲಿ ಹೊತ್ತಿ

ಉಸಿರುಸಿರಿನ ಹಣತೆ ಬತ್ತಿ

ಉರಿಯಲೆಂದು ತಣ್ಣಗೆ

ಬಾಳ ಸೊಡರ್‌ಗುಡಿಯನೆತ್ತಿ

ತನ್ನ ಮುಡಿಯ ಬಾನಿಗೆತ್ತಿ

ಸೊಗಸಲೆಂದು ರಸಾಸ್ಪೊರ್ರ್ತಿ

ಭಗವಂತನ ಕಣ್ಣಿಗೆ

ಹಾಡುತಿಹೆನು ಕಂಡ ನಾನು :
ದಿಟ್ಟಿಗೇಡೋ ? ಹುಟ್ಟು ಕುರುಡೋ ?

ಬುದ್ದಿ ಬರಡೋ ? ಬೇರೆ ಹುರುಡೋ ?

ಮೆಳ್ಳಗಣ್ಣ , ಕಾಣೆ ನೀನು ?

ಹೇಳು ! ತಪ್ಪು ನನ್ನದೇನು ?


ಕರ್ನಾಟಕ ಎಂಬುದೇನು

ಹೆಸರೆ ಬರಿಯ ಮಣ್ಣಿಗೆ ?

ಮಂತ್ರ ಕಣಾ ! ಶಕ್ತಿ ಕಣಾ !

ತಾಯಿ ಕಣಾ ! ದೇವಿ ಕಣಾ !

ಬೆಂಕಿ ಕಣಾ ! ಸಿಡಿಲು ಕಣಾ !

ಕಾವ ಕೊಲುವ ಒಲವ ಬಲವ

ಪಡೆದ ಚಲದ ಚಂಡಿ ಕಣಾ

ಋಷಿಯ ಕಾಣ್ವ ಕಣ್ಣಿಗೆ

ವಿರೋಧಿಗಾಸ್ಫೋಟಕ

ಕಂಡ ಕವಿಗಖಂಡ ದೇವಿ ಕಣಾ ಕರ್ಣಾಟಕ

ಸರಸ್ವತಿಯೆ ರಚಿಸಿದೊಂದು ರಾಜಕೀಯ ತ್ರೋಟಕ

ವಿರೋಧಿಗಾಸ್ಫೋಟಕ ,

ಅಖಂಡ ಕರ್ಣಾಟಕ

ಅಲ್ಲೋ ನಾವು ನರಿಪೊಂದು ರಾಜಕೀಯ ನಾಟಕ !

ಅಖಂಡ ಕರ್ಣಾಟಕ !

ಅಖಂಡ ಕರ್ಣಾಟಕ !

ಜಯ್ ಜಯ್ ಜಯ್ ಅಖಂಡ ಕರ್ಣಾಟಕ !

ಒಂದು ವಾಕ್ಯದಲ್ಲಿ ಉತ್ತರಿಸಿ


ಅಖಂಡ ಕರ್ನಾಟಕವನ್ನು ಹರಸುತ್ತಿರುವವರು ಯಾರು ?

ಅಖಂಡ ಕರ್ನಾಟಕವನ್ನು ಹರಸುತ್ತಿರುವವರು ದೇವ ಗಾಂಧಿ

ಇಂದು ಬಂದು ನಾಳೆ ಹೋಗುವುದು ಯಾವುದು ?

ಇಂದು ಒಂದು ನಾಳೆ ಹೋಗುವುದು ರಾಜಕೀಯದ ಮಂತ್ರಿ ಮಂಡಲ

ಸಿರಿಗನ್ನಡವನ್ನು ಯಾವುದಕ್ಕೆ ಹೋಲಿಸಲಾಗಿದೆ ?

ಸಿರಿಗನ್ನಡವನ್ನು ಸರಸ್ವತಿಯ ಪಜಕರ್ಣಕುಂಡಲಕ್ಕೆ ಹೋಲಿಸಲಾಗಿದೆ .

ಅಖಂಡ ಕರ್ನಾಟಕದ ಚಕ್ರವರ್ತಿ ಯಾರು ?

ನೃಪತುಂಗನು ಅಖಂಡ ಕರ್ನಾಟಕದ ಚಕ್ರವರ್ತಿಯಾಗಿದ್ದಾನೆ .

ಅಖಂಡ ಕರ್ನಾಟಕದ ಮುಖ್ಯಮಂತ್ರಿ ಯಾರು ?

ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆದಿಕವಿ ಪಂಪ ,

ಸರಸ್ವತಿಯು ಯಾವ ಸಂಸ್ಕೃತಿಯನ್ನು ಮೆರೆಯಲು ಕರ್ನಾಟಕವನ್ನು ರಚಿಸಿದ್ದಾಳೆ ?

ಸರಸ್ವತಿಯು ಆತ್ಮಸಂಸ್ಕೃತಿಯನ್ನು ಮರೆಯಲು ಕರ್ನಾಟಕವನ್ನು ರಚಿಸಿದ್ದಾಳೆ .

ಕರ್ನಾಟಕವು ಯಾರ ಹೃದಯಗಳಲ್ಲಿ ಹೊತ್ತಿರುವ ದೀಪವಾಗಿದೆ ?

ಕರ್ನಾಟಕವು ಶರಣರ ಹೃದಯಗಳಲ್ಲಿ ಹೊತ್ತಿರುವ ದೀಪವಾಗಿದೆ .

ಚಲದ ಚಂಡಿ ಯಾರು ?

ಕನ್ನಡ ತಾಯಿಯು ಚಲದ ಚಂಡಿಯೆನಿಸಿದ್ದಾಳೆ .

ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ

ಅಖಂಡ ಕರ್ನಾಟಕ ಬೂಟಾಟದ ರಾಜಕೀಯ ನಾಟಕವಲ್ಲವೇ ?

ಸರಸ್ವತಿಯು ರಚಿಸಿರುವ ಅಖಂಡ ಕರ್ನಾಟಕವು ಶಾಶ್ವತವಾದುದು . ಅದರಲ್ಲಿ ಇಂದು ಬಂದು ನಾಳೆ ಹೋಗುವ ಸಚಿವ ಮಂಡಲವಿಲ್ಲ . ಅದು ಸರಸ್ವತಿಯ ವಜ್ರಕರ್ಣ ಕು ೦ ಡಲವಾಗಿದೆ , ಆದ್ದರಿಂದ ಅದು ರಾಜಕೀಯದ ಬೂಟಾಟದ ನಾಟಕವಲ್ಲ ,

ಸರಸ್ವತಿಯ ಸಚಿವ ಮಂಡಲದ ಸದಸ್ಯರು ಯಾರು ?

ಸರಸ್ವತಿಯ ಸಚಿವ ಮಂಡಲದಲ್ಲಿ ಪಂಪನು ಮುಖ್ಯಮಂತ್ರಿಯಾಗಿದ್ದಾನೆ . ರನ್ನ , ಜನ್ನ , ನಾಗವರ್ಮ , ರಾಘವಾಂಕ , ಹರಿಹರ , ಬಸವೇಶ್ವರ , ನಾರಣಪ್ಪ , ಸರ್ವಜ್ಞ , ಷಡಕ್ಷರರೆಂಬ ಮಹಾಕವಿಗಳು ಸಚಿವಮಂಡಲದ ಉಳಿದ ಸದಸ್ಯರಾಗಿದ್ದಾರೆ .


ಪರಮಾತ್ಮನ ಚರಣದೀಪ್ತಿ ಎಲ್ಲಿ ಮತ್ತು ಹೇಗೆ ಉರಿಯಬೇಕೆಂದು ಕವಿ ಹೇಳಿದ್ದಾರೆ ?

ಪರಮಾತ್ಮನ ಚರಣದೀಪ್ತಿಯು ಶರಣರ ಹೃದಯದಲ್ಲಿ ಹೊತ್ತಿ ಉಸಿರುಸಿರಿನ ಹಣತೆಯೆಂಬ ಬತ್ತಿಯು ತಣ್ಣಗೆ ಉರಿಯಲೆಂದು ಕವಿ ಹೇಳಿದ್ದಾರೆ .

ಮೆಳ್ಳೆಗಣ್ಣನಿಗೆ ಕವಿ ಕೇಳುವ ಪ್ರಶ್ನೆಗಳು ಯಾವುವು ?

ಅಖಂಡ ಕರ್ಣಾಟಕವೆಂಬುದು ಪರಮಾತ್ಮನ ಚರಣ ದೀಪ್ತಿಯಾಗಿರುವುದನ್ನು ಕಂಡ ಕವಿಯು ಮೆಳ್ಳೆಗಣ್ಣನಿಗೆ ” ನಿನಗೆ ಕಣ್ಣು ಕಾಣದೆ ? ಹುಟ್ಟು ಕುರುಡನೋ ? ಬುದ್ದಿಯು ಬರಡೋ ? ಹುರುಡೋ ? ನಿನ್ನದು ಮೆಳ್ಳೆಗಣ್ಣಾದ್ದರಿಂದ ನನಗೆ ಕಾಣುತ್ತಿರುವುದು ನಿನಗೆ ಕಾಣುತ್ತಿಲ್ಲ . ಇದು ನನ್ನ ತಪ್ಪೇನು ? ‘ ಎಂದು ಪ್ರಶ್ನಿಸಿದ್ದಾರೆ .

ಐದಾರು ವಾಕ್ಯಗಳಲ್ಲಿ ಉತ್ತರಿಸಿ

ಕುವೆಂಪು ಅವರು ‘ ಕೂಗಾಟದ ರಾಜಕೀಯ ನಾಟಕ ‘ ಎಂದು ಹೇಳಿರುವ ಹಿನ್ನೆಲೆ ಏನು ?

ಕುವೆಂಪು ಅವರು ಇಂದಿನ ರಾಜಕಾರಣವನ್ನು ಕೂಗಾಟದ ರಾಜಕೀಯ ನಾಟಕ ‘ ಎಂದಿದ್ದಾರೆ . ಇದಕ್ಕೆ ಕಾರಣವೇನೆಂದರೆ , ಇಂದಿನ ರಾಜಕಾರಣಿಗಳು , ಅವರ ಪಕ್ಷ , ಸಚಿವ ಸಂಪುಟ ಎಲ್ಲವೂ ಅಶಾಶ್ವತವಾದುದು .

ಇಂದು ಒಂದು ನಾಳೆ ಹೋಗು ವಂತಹದ್ದು , ಪಕ್ಷಗಳು ನಾಡಿನ ಅಭಿವೃದ್ಧಿಯನ್ನು ಮರೆತು ಪರಸ್ಪರ ಕಚ್ಚಾಟದಲ್ಲಿ ತೊಡಗಿರುತ್ತವೆ . ಅಧಿಕಾರದಲ್ಲಿ ಉಳಿಯಲು ಮತೀಯ ಭಾವನೆಗಳನ್ನು ಜಾತಿಕುಲಗಳನ್ನು ಇಂದಿನ ರಾಜಕಾರಣಿಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ . ಸ್ವಜನಪಕ್ಷಪಾತ ಮಾಡುತ್ತಾರೆ , ಅಹಂಕಾರ , ಹಮ್ಮು ಬಿಮ್ಮುಗಳನ್ನು ಪ್ರದರ್ಶಿಸುತ್ತಾರೆ .

ಅಲ್ಲದೆ ಕೀರ್ತಿ ಶನಿಯ ಬೆನ್ನುಹತ್ತಿರುವ ಬಣ್ಣದ ಚಿಟ್ಟೆಗಳಿವರು . ಅನ್ನದ ಋಣ ತೀರಿಸಬೇಕೆಂಬ ನಿಷ್ಠೆಯಿಲ್ಲದವರು , ಸ್ವಾರ್ಥಿಗಳು , ಹೀಗಾಗಿ ಇಂದಿನ ರಾಜಕಾರಣಿಗಳದ್ದು ಕೂಗಾಟದ ರಾಜಕೀಯ ನಾಟಕವೆಂದು ಕವಿ ಕುವೆಂಪು ಟೀಕಿಸಿದ್ದಾರೆ .

ಸರಸ್ವತಿಯ ಸಚಿವ ಮಂಡಲವನ್ನು ಕುರಿತು ಬರೆಯಿರಿ

ಕುವೆಂಪು ಅವರು ಅಖಂಡ ಕರ್ನಾಟಕವನ್ನು ಸರಸ್ವತಿಯೇ ರಚಿಸಿರುವ ನಿತ್ಯ ಸಚಿವ ಮಂಡಲವೆಂದಿದ್ದಾರೆ . ಅದು ಇಂದು ಬಂದು ನಾಳೆ ಹೋಗುವಂತಹದಲ್ಲ . ನೃಪತುಂಗನು ಈ ಸಚಿವ ಮಂಡಲದ ಚಿರ ಚಕ್ರವರ್ತಿಯನಿಸಿದ್ದರೆ , ಪಂಪನು ಇಲ್ಲಿ ಮುಖ್ಯಮಂತ್ರಿಯನಿಸಿರುವನು .

ಮಹಾಕವಿಗಳಾದ ರನ್ನ , ಜನ್ನ , ನಾಗವರ್ಮ , ಹರಿಹರ , ರಾಘವಾಂಕ , ಬಸವೇಶ್ವರ , ನಾರಣಪ್ಪ , ಸರ್ವಜ್ಞ , ಷಡಕ್ಷರಿಯಂತಹವರು ಈ ಸಚಿವ ಮಂಡಲದ ನಿತ್ಯ ಸಚಿವರಾಗಿದ್ದಾರೆ . ಇದನ್ನು ಸ್ವತಃ ಸರಸ್ವತಿಯೇ ತನ್ನ ಕಾಂತಿಯ ಕುಂಡಲವೆಂಬಂತೆ ಧರಿಸಿದ್ದಾಳೆಂದು ಕವಿ ಹೇಳಿದ್ದಾರೆ . ಈ ಸಚಿವ ಮಂಡಲವು ಇಂದಿನ ರಾಜಕಾರಣದಂತೆ ನಾಲ್ಕು ದಿನದ ರಾಜಕೀಯ ನಾಟಕದಂತಲ್ಲವೆಂದಿದ್ದಾರೆ .

ಅಖಂಡ ಕರ್ನಾಟಕವು ಬರೀ ರಾಜಕೀಯ ನಾಟಕವಲ್ಲ , ಏಕೆ ?

ಅಖಂಡ ಕರ್ನಾಟಕವು ಬರೀ ರಾಜಕೀಯ ನಾಟಕವಲ್ಲ . ಅದು ಸರಸ್ವತಿಯು ರಚಿಸಿರುವ ಆರಾಜಕೀಯ ರೂಪಕ ( ತೋಟಕ ) , ಅದರೊಳಗೆ ಆತ್ಮಸಂಸ್ಕೃತಿಯು ಮರೆಯುತ್ತಿರಬೇಕು .

ಅದರಲ್ಲಿ ಜೀವನ ದೀಧಿತಿ ಬೆಳಗಬೇಕು . ಪರಮಾತ್ಮನ ಚರಣ ದೀಪ್ತಿ ಶರಣ ಹೃದಯಗಳಲ್ಲಿ ಹೊತ್ತಿರುತ್ತದೆ . ಉಸುರುಸಿರಿನ ಬತ್ತಿಯ ಹಣತೆಯು ತಣ್ಣಗೆ ಉರಿಯುತ್ತದೆ , ರಸಸ್ಪೂರ್ತಿಯು ಭಗವಂತನ ಕಣ್ಣಾಗಬೇಕು . ಇಲ್ಲಿ ಸಿರಿಗನ್ನಡವು ಸರಸ್ವತಿಯ ವಪ್ರಕರ್ಣ ಕುಂಡಲವೆನಿಸಿದೆ . ಅದೊಂದು ಆನಂದ ಕವಿಯ ಕಲ್ಪನೆ ಯಾಗಿದೆ .

ಕರ್ಣಾಟಕವು ಅಲ್ಲಿ ಮಂತ್ರ , ಶಕ್ತಿ , ತಾಯಿ , ದೇವಿ , ಸಿಡಿಲು , ಬೆಂಕಿ ಎಲ್ಲವೂ ಆಗಿದೆ . ಆದ್ದರಿ ೦ ದ ಈ ಶಾಶ್ವತತೆಯು ಅಶಾಶ್ವತವಾದ ರಾಜಕೀಯ ನಾಟಕವಲ್ಲ ಎಂದಿದ್ದಾರೆ ಕವಿ ಕುವೆಂಪು .

ಅಖಂಡ ಕರ್ನಾಟಕ ಪದ್ಯ notes

ರಾಜಕೀಯ ಶಕ್ತಿಯ ಮೇಳೆಸುತ್ತಿರುವ ಇಂದಿನ ಸಂದರ್ಭದಲ್ಲಿ ನಾಡನ್ನು ಒಂದು ಸಾಂಸ್ಕೃತಿಕ ಅಸ್ತಿತ್ವವಾಗಿ ಕಲ್ಪಿಸಲು ಈ ಕವನ ಹೇಗೆ ಪೂರಕವಾಗಿದೆ ?

ಕವಿ ಕುವೆಂಪು ಅವರು ರಚಿಸಿರುವ ಅಖಂಡ ಕರ್ಣಾಟಕ’ವೆಂಬ ಕವಿತೆಯು ಇಂದಿನ ಸಂದರ್ಭದಲ್ಲಿ ಮಾತ್ರವಲ್ಲ , ಸಾರ್ವಕಾಲಿಕವಾಗಿ ಈ ನಾಡನ್ನು ಆಳುವವರಿಗೆ ಸಾಂಸ್ಕೃತಿಕ ಧರ್ಮವನ್ನು ಬೋಧಿಸುವಂತಹದ್ದು , ಇಂದಿನ ದಿನಗಳಲ್ಲಿ ರಾಜಕೀಯ ಪಕ್ಷವೇ ನಾಡನ್ನು ಆಳುವ ಪ್ರತಿನಿಧಿಸುವ ಬಲವಾಗಿದೆ . ಆಳುವವರಿಗೆ ನಮ್ಮ ಸಾಹಿತ್ಯ – ಸಂಸ್ಕೃತಿ – ಪರಂಪರೆಗಳ

Akhanda Karnataka Poem Summary in Kannada

ಅರಿವಿಲ್ಲದಿದ್ದರೆ ಈ ನಾಡನ್ನು ಅಖಂಡವಾಗಿ ಕಟ್ಟಲಾಗದು . ಮೌಲ್ಯಗಳೇ ಕಣ್ಮರೆಯಾಗಿ , ಜಾಕಿ ಲೆಕ್ಕಾಚಾರ , ಸ್ವಜನಪಕ್ಷಪಾತ ಅಧಿಕಾರದಾಹ , ಕೀರ್ತಿಯ ವಾಂಛಲ್ಯಗಳೇ ಬುನಾದಿಯಾಗಿರುವ ಇಂದಿನ ಸಂದರ್ಭದಲ್ಲಿ ಕುವೆಂಪು ಅವರು ಹೇಳಿರುವ ಸಂಸ್ಕೃತಿಯ ಆತ್ಮವನ್ನು ಕಾಣುವ ಒಳಗಣ್ಣು ಆಳುವವರಿಗೆ ಇರಬೇಕಾಗುತ್ತದೆ .

ಎಲ್ಲ ದೃಷ್ಟಿಯಿಂದಲೂ ಕುವೆಂಪು ಅವರ ಕಿವಿಮಾತ ಪೂರಕವೇ , ಇಲ್ಲದಿದ್ದರೆ ಕವಿಯೇ ಹೇಳಿರುವಂತೆ ಕೂಗಾಟದ ಬೂಟಾಟಿಕೆಯ ನಾಟಕವನಿಸುತ್ತದೆ .

ಕರ್ನಾಟಕ ಎಂಬುದು ಬರೀ ಮಣ್ಣಿಗೆ ಹೆಸರಲ್ಲ ಎಂಬುದನ್ನು ಕವಿ ಹೇಗೆ ಹೇಳಿದ್ದಾರೆ ?

ಕುವೆಂಪು ಅವರು ‘ ಕರ್ನಾಟಕ ಎಂದರೆ ಕೇವಲ ಮಣ್ಣಿಗಿರುವ ಹೆಸರಲ್ಲ ಎಂದಿದ್ದಾರೆ . ಅವರು ಹೇಳಿರುವಂತೆ ಕರ್ಣಾಟಕ ಎಂಬುದು ಒಂದು ಮಾತ್ರ , ಅದೊಂದು ಶಕ್ತಿ , ನಮ್ಮೆಲ್ಲರಿಗೂ ತಾಯಿ ಇದ್ದಂತೆ , ನಮ್ಮೆಲ್ಲರ ದೇವಿಯೂ ಕನ್ನಡವೇ ಪ್ರೀತಿಯಿಂದ ಒಲವನ್ನು ಊಡುತ್ತಾಳೆ .

ಬಲವನ್ನು ನೀಡಿ ರಕ್ಷಿಸುತ್ತಾಳೆ , ಇದೆಲ್ಲಾ ನಿಷ್ಠೆ – ಗೌರವಗಳನ್ನು ತೋರುವವರಿಗೆ ಆದರೆ ದ್ರೋಹಿಗಳ ಪಾಲಿಗೆ ಅವಳು ಬೆಂಕಿ , ಸಿಡಿಲುಗಳಂತೆ ಆಸ್ಫೋಟಿಸುವವಳು , ಚಲದ ಚಂಡಿಯಂತಹವಳು ಕವಿಯ ಕಣ್ಣಿಗೆ ಅಖಂಡ ದೇವಿ ಸ್ವರೂಪಳು , ನಾವು ಇಂದು ಕರ್ನಾಟಕ ‘ ನಮ್ಮದೆಂದು ಗಡಿರೇಖೆಗಳನ್ನು ಹಾಕಿಕೊಂಡು ನರ್ತಿಸುತ್ತೇವೆ .

ಈ ಅರ್ಥದ ನಾಡಲ್ಲ ಭೌತಿಕವಲ್ಲದ ಆಭೌತಿಕವಾದ ಸಾಂಸ್ಕೃತಿಕ ಬಲ , ಒಗ್ಗಟ್ಟುಗಳೇ ಕನ್ನಡ ಕರ್ಣಾಟಕಗಳು , ಎರಡೂ ಬೇರೆ ಬೇರೆಯಲ್ಲ ಎಂದು ಕವಿ ತಾವು ಕಂಡ ಕಾಣೆಯನ್ನು ತುಂಬು ಅಭಿಮಾನದಿಂದ ನುಡಿದಿದ್ದಾರೆ .

ಪಿ ಯುಸಿ ಗೆ ಸಂಬಂದಿಸಿದ ಕನ್ನಡ ಇತರೆ ಪಠ್ಯದ ಪ್ರಶ್ನೋತ್ತರಗಳ ಲಿಂಕ್

ಚತುರನ ಚಾತುರ್ಯ

ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ

ಕದಡಿದ ಸಲಿಲಂ ತಿಳಿವಂದದೆ

ನಿರಾಕರಣೆ

ಇನ್ನು ಹೆಚ್ಚಿನ ಪ್ರಬಂಧ ಓದಿ :

ಭೂ ಮಾಲಿನ್ಯ ಕುರಿತು ಪ್ರಬಂಧ
ಆರ್ಟಿಕಲ್ 370 ಕುರಿತು ಪ್ರಬಂಧ
ರೈತರ ಆತ್ಮಹತ್ಯೆ ಕುರಿತು ಪ್ರಬಂಧ
ಜಲ ಮಾಲಿನ್ಯ ಬಗ್ಗೆ ಪ್ರಬಂಧ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *