Kannada Letter Writing, ಕನ್ನಡ ಪತ್ರಲೇಖನಗಳು, kannada patra lekhana galu, kannada patralekhana in kannada, kannada letter writing format, pdf,gk, letter writing format in kannada
Kannada Letter Writing
ಈ ಲೇಖನದಲ್ಲಿ ಪತ್ರಲೇಖನವನ್ನು ಪಬರೆಯುವ ವಿಧಾನದ ಕುರಿತು ಕೆಲವು ಪತ್ರ ಲೇಖನವನ್ನು ನೀಡಲಾಗಿದೆ.
kannada language kannada letter writing format
( ಕುಡಿಯುವ ನೀರಿನ ವ್ಯವಸ್ಥೆ ಕುರಿತು ) ಕುಡಿಯುವ ನೀರಿಗೆ ಸಂಬಂಧಿಸಿ ಸರಿಯಾದ ವ್ಯವಸ್ಥೆ ಮಾಡಬೇಕೆಂದು ವಿಜ್ಞಾಪಿ ನಗರಸಭೆಯ ಮುಖ್ಯಾಧಿಕಾರಿಗಳಿಗೆ ಪತ್ರ
ಯ . ರ . ವ .
ಚನ್ನಗಿರಿ
ನಗರಸಭಾ ಅಧ್ಯಕ್ಷರು ,
ಚನ್ನಗಿರಿ .
ಮಾನ್ಯರೇ ,
ಕಳೆದ ಎರಡು ವರ್ಷಗಳಿಂದ ಮಳೆಯಿಲ್ಲದ ಪರಿಣಾಮವಾಗಿ ನಮ್ಮ ಭಾಗದ ಜನರಿಗೆ ಅತೀವ ತೊಂದರೆಯಾಗಿದೆ . ನಮ್ಮ ಹಳ್ಳಿಯ ಜನರಂತೂ ತತ್ತರಿಸಿ ಹೋಗಿದ್ದಾರೆ . ಇದ್ದ ಕೆರೆಯು ಬತ್ತಿ ಹೋಗಿದೆ . ನೀರಿನ ತೊಂದರೆಯಾಗಿದೆ . ಒಂದು ಕೊಡ ನೀರಿಗಾಗಿ ಪರದಾಡುವ ಪ್ರಸಂಗ ಬಂದಿದೆ .
ಹತ್ತು ಸಾವಿರ ಜನಸಂಖ್ಯೆ ಇರುವ ನಮ್ಮ ಹಳ್ಳಿಯನ್ನು ರಾಜಕಾರಣಿಗಳು ಮರೆತಿದ್ದಾರೆ . ನಮಗೆ ಇದು ತುಂಬ ವಿಷಾದನೀಯ , ನಮಗೆ ಒಂದು ಶಾಶ್ವತ ನೀರಿನ ವ್ಯವಸ್ಥೆ ಮಾಡುವುದು ಅತ್ಯವಶ್ಯವಾಗಿದೆ . ಹತ್ತಿರದಲ್ಲಿದ್ದ ದೊಡ್ಡ ನಗರದಿಂದ ನೀರನ್ನು ಪಡೆದು , ಒಂದು ದೊಡ್ಡ ನೀರಿನ ಟ್ಯಾಂಕ್ ನಿರ್ಮಿಸಬೇಕು . ನಳದಿಂದ ನಿತ್ಯ ನೀರಿನ ಸರಬರಾಜು ಮಾಡಬೇಕು ಅಲ್ಲಿಯವರೆಗೆ ಕೊಳವೆ ಭಾವಿ ಹಾಕಿಸಿ ನೀರಿನ ಸರಬರಾಜು ಮಾಡಬೇಕಾಗಿ ವಿನಂತಿ.
ನಮ್ಮ ಈ ಮನವಿಯನ್ನು ತಾವು ಓದಿ ಅದನ್ನು ಕಾರ್ಯರೂಪದಲ್ಲಿ ತರುವಿರೆಂದು ನಂಬಿರುವೆ .
ಚನ್ನಗಿರಿ ತಮ್ಮ ವಿಶ್ವಾಸಿಕ ,
10-6-2012 ಯ . ರ . ವ .
kannada letter writing format
ವೈಯಕ್ತಿಕ ಪತ್ರ ( ತಂದೆಗೆ ಮಗನ ಪತ್ರ )
ನೀವು ಬಿ . ಚಂದ್ರಶೇಖರನೆಂದು ತಿಳಿದು ನೀವು ಕೈಗೊಳ್ಳಲಿರುವ ಶಾಲಾ ಪ್ರವಾಸಕ್ಕಾಗಿ ಹಣ ಕಳಿಸುವಂತೆ ಪ್ರಾರ್ಥಿಸಿ ನಿಮ್ಮ ತಂದೆಗೆ ಪತ್ರ ಬರೆಯಿರಿ .
ಬಿ ಚಂದ್ರಶೇಖರ
ರಾಜನಗರ
2-9-2012
ತೀರ್ಥರೂಪ ತಂದೆಯವರಿಗೆ
ನಿಮ್ಮ ಚಿರಂಜೀವ ಅ.ಬ.ಕ. ಮಾಡುವ ವಂದನೆಗಳು .
ಇಲ್ಲಿ ನನ್ನ ಅಭ್ಯಾಸ ಚೆನ್ನಾಗಿ ನಡೆದಿದೆ . ಪರೀಕ್ಷೆಯ ನಂತರದ ಬಿಡುವಿನಲ್ಲಿ ನಮ್ಮ ಶಾಲೆಯ ವತಿಯಿಂದ ಬಾದಾಮಿ , ಐಹೊಳೆ , ಪಟ್ಟದಕಲ್ಲು , ಶಿವಯೋಗ ಮಂದಿರ ಮುಂತಾದ ಸ್ಥಳಗಳಿಗೆ ಪ್ರವಾಸವನ್ನು ಏರ್ಪಡಿಸಿರುವವು . ಅದಕ್ಕೆ ತಗಲುವ ವೆಚ್ಚ ಕೇವಲ ರೂಪಾಯಿ 200 / – . ಈ ಪ್ರವಾಸವು ಶೈಕ್ಷಣಿಕ ಪ್ರವಾಸವಿದ್ದು ನನಗೂ ಹೋಗುವ ಬಯಕೆ .
ಕಾರಣ ಪತ್ರ ತಲುಪಿದ ಕೂಡಲೆ ಹಣವನ್ನು ಕಳುಹಿಸಿ ಕೊಡಲು ವಿನಂತಿ . ಇದರೊಂದಿಗೆ ತಮ್ಮ ಆಶೀರ್ವಾದವೂ ಬೇಕು . ಮಾತೋಶ್ರೀ ತಾಯಿಯವರಿಗೆ ನನ್ನ ನಮಸ್ಕಾರಗಳು . ಉತ್ತರ ಬರೆಯಿರಿ .
ತಮ್ಮ ಪ್ರೀತಿಯ
ಗೆ- ಚಂದ್ರು
ಶ್ರೀ ಬಸವರಾಜ ಕೆ .
ಮೈಸೂರು – ಬೆಂಗಳೂರು ರೋಡ ,
39 , ದ್ವಿತೀಯ ಕ್ರಾಸ್ , ರಾಜ್ ಲೇಔಟ್ , ಬೆಂಗಳೂರು -54 .
Kannada Letter Writing
ಒಂದು ಅರ್ಜಿ
ನಿಮ್ಮ ಹಳ್ಳಿಯಲ್ಲಿ ಜನ ಮುಗಳ ಅಂಗಡಿಯನ್ನು ಪ್ರಾರಂಭಿಸಲು ಸಂಬಂಧಿಸಿದ ಅಧಿಕಾರಿಗಳನ್ನು ಉದ್ದೇಶಿಸಿ ಅರ್ಜಿ ಬರೆಯಿರಿ.
ಮಾನ್ಯ ಜಿಲ್ಲಾಧಿಕಾರಿಗಳು
ಧಾರವಾಡ ಜಿಲ್ಲೆ ಧಾರವಾಡ
ಯ . ರ . ವ .
10-6-2012
ವಿಷಯ : ಪತರ ವಸ್ತುಗಳ ನ್ಯಾಯಬೆಲೆ ಅಂಗಡಿ ಪ್ರಾರಂಭಿಸಲು ಅರ್ಜಿ
ಯ . ರ . ವ .
ಸುರಪುರ
10-6-2012
ಮಾನ್ಯರೇ ,
ಕಳಗೆ ಸಹಿ ಮಾಡಿದ ನಾನು ಯ.ರ.ವ. ಸುರಪುರದ ನಿವಾಸಿ , ಮಹತ್ವದ ವಿಷಯವೊಂದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ . ನಮ್ಮ ಗ್ರಾಮದ ಜನಸಂಖ್ಯೆ ಹದಿನೈದು ಸಾವಿರ . ಆದರೂ ಇಲ್ಲಿ ಪಡಿತರ ವಸ್ತುಗಳ ನ್ಯಾಯಬೆಲೆ ಅಂಗಡಿ ಇಲ್ಲ . ಸದ್ಯ ನಾವು ನಮ್ಮೂರಿಗೆ ಸಮೀಪವಿರುವ ನರಸಾಪುರಕ್ಕೆ ವಾರಕ್ಕೊಂದು ಸಲ ಹೋಗಿ ಪಡಿತರ ವಸ್ತುಗಳನ್ನು ತರುತ್ತಿದ್ದೇವೆ . ಇದರಿಂದ ವಿಪರೀತ ಖರ್ಚು ಬರುತ್ತದೆ ಹಾಗೂ ಅನಾನುಕೂಲವೂ ಆಗುತ್ತದೆ . ನಗರವಾಸಿಗಳಾದ ಶ್ರೀಮಂತರಿಗೂ ಸಹ ಪಡಿತರ ವಸ್ತುಗಳನ್ನು ನ್ಯಾಯಬೆಲೆಯಲ್ಲಿ ಒದಗಿಸಲಾಗುತ್ತದೆ . ಆದರೆ ಹಳ್ಳಿಯಲ್ಲಿಯ ಬಡವರು ಈ ಅವಕಾಶದಿಂದ ವಂಚಿತರಾಗಿದ್ದಾರೆ .
ಪರಮ ದಯಾಳುಗಳಾದ ತಾವು ಈ ವಿಷಯವನ್ನು ಪರಾಮರ್ಶಿಸಬೇಕು . ನಮ್ಮ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯೊಂದನ್ನು ಆದಷ್ಟು ಬೇಗ ಮಂಜೂರು ಮಾಡಬೇಕಾಗಿ ವಿನಂತಿ ,
ಸುರಪುರ ತಮ್ಮ ವಿಧೇಯ
10-6-2012 ಯ . ರ . ವ
FAQ
ಪತ್ರಲೇಖನ ಎಂದರೇನು?
ನಮ್ಮ ಎದುರಿಗೆ ಇರುವವರ ಜೊತೆ ಸಂಭಾಷಣೆ ನಡೆಸಿದಂತೆ ದೂರದಲ್ಲಿರುವ (ಬೇರೆಡೆಯಲ್ಲಿ ವಾಸಿಸುತ್ತಿರುವ)ವ್ಯಕ್ತಿಗಳ ಜೊತೆ ಮಾತುಕತೆಗೆ ,ಪರಸ್ಪರ ವಿಚಾರ ವಿನಿಮಯಕ್ಕೆ ಬಳಕೆಯಾಗುವ ಪರಿಣಾಮಕಾರಿ ಸಾಧನ ಪತ್ರ
ಇತರೆ ಲಿಂಕ್ :