ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ । Krishi Sanskriti Mattu Jagatikarana

ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ । Krishi Sanskriti Mattu Jagatikarana

ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ, Krishi Sanskriti Mattu Jagatikarana Questions and Answers Pdf, Notes, Summary, 1st PUC Kannada Prabandha, ಪ್ರತಮ ಪಿ.ಯು.ಸಿ ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ ಕನ್ನಡ ನೋಟ್ಸ್ ಪ್ರಶ್ನೊತ್ತರಗಳು, 1st Puc Krushi Samskruthi Mattu Jagatikarana Kannada Notes Summary Question Answer Mcq Pdf Download in Kannada Medium Karnataka State Syllabus Kseeb Solutions For Class 11 Kannada Chapter 8 Notes 1st Puc Kannada 8th Lesson Notes essay

ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ

ಲೇಖಕರ ಪರಿಚಯ

ಸಿ.ಎಚ್ . ಹನುಮಂತರಾಯ

ಸ್ಥಳ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಪಲ್ಲಾಪುರ ತಾಲೂಕಿನ ಚಿಕ್ಕಬೆಳವಂಗಲದ ರೈತ ಕುಟುಂಬದಲ್ಲಿ ಜನಿಸಿದರು

ಕೃತಿ: ವಕೀಲರೊಬ್ಬರ ವಗೈರೆಗಳು

ಪ್ರಶಸ್ತಿ :ಸುವರ್ಣ ಕರ್ನಾಟಕ ರಾಜ್ಯೋತ್ಸವ ‘ ಪ್ರಶಸ್ತಿಯನ್ನಿತ್ತು ಗೌರವಿಸಿದೆ

ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ । Krishi Sanskriti Mattu Jagatikarana
ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ । Krishi Sanskriti Mattu Jagatikarana

ವಾಕ್ಯದಲ್ಲಿ ಉತ್ತರಿಸಿ

ಲೇಖಕರು ಸಿಪಾಯಿ ದಂಗೆಯನ್ನು ಏನೆಂದು ಕರೆದಿದ್ದಾರೆ ?

ಲೇಖಕರು ಸಿಪಾಯಿ ದಂಗೆಯನ್ನು ರೈತ ದಂಗೆಯೆಂದೇ ಕರೆದಿದ್ದಾರೆ .

ರೈತರು ಯಾವ ತೆರಿಗೆಯನ್ನು ಪಾವತಿಸಬೇಕಾಯಿತು ?

ರೈತರು ಜಮೀನ್ದಾರಿ ಪದ್ಧತಿಯ ಕಾನೂನಿನಂತೆ ಹಣದ ರೂಪದ ತೆರಿಗೆಯನ್ನು ಪಾವತಿಸಬೇಕಾಯಿತು .

 ಬ್ರಿಟಿಷ್ ಸರಕಾರಕ್ಕೆ ತೆರಿಗೆ ಕಟ್ಟಬಾರದೆಂದು ಯಾರು ಹೇಳಿದರು ?

ಬ್ರಿಟಿಷ್ ಸರಕಾರಕ್ಕೆ ತೆರಿಗೆ ಕಟ್ಟಬಾರದೆಂದು ಮಹಾತ್ಮಗಾಂಧಿಯವರು ಹೇಳಿದರು .

 ರೈತರ ಬದಲಿಗೆ ಸ್ವಾತಂತ್ರ್ಯವು ಯಾರ ಕೈಗೆ ಸಿಕ್ಕಿತು ?

ಸ್ವಾತಂತ್ರ್ಯವು ರೈತರಿಗೆ ಸಿಗುವ ಬದಲು ಬಂಡವಾಳಶಾಹಿಗಳ ಕೈಗೆ ಸಿಕ್ಕಿತು .

ಶ್ರೀಮಂತ ರೈತರ ಉದಯಕ್ಕೆ ಯಾವುದು ಸಹಾಯಕವಾಯಿತು ?

 ‘ ಹಸಿರುಕ್ರಾಂತಿ’ಯು ಶ್ರೀಮಂತ ರೈತರ ಉದಯಕ್ಕೆ ಕಾರಣವಾಯಿತು .

ದೇಶಗಳಲ್ಲಿ ಯಾವ ರೀತಿಯ ಚಳುವಳಿ ಹುಟ್ಟಿಕೊಂಡವು ?

 ರೈತ ಪರವಾದ ಚಳವಳಿ , ಹೋರಾಟಗಳು ಹುಟ್ಟಿಕೊಂಡವು ಮತ್ತು ದೇಶೀಯ ವಿಮೋಚನಾ ಚಳವಳಿಗಳು ಹುಟ್ಟಿ ಕೊಂಡವು .

ಜಂಕ್‌ಫುಡ್‌ ಹೋಟೆಲ್‌ಗಳೆಂದು ಹೀಯಾಳಿಸಿದವರು ಯಾರು ?

ಅಮೆರಿಕನ್ನರು ಜಂಕ್‌ಫುಡ್‌ ಹೋಟೆಲ್ಲುಗಳೆಂದು ಹೀಯಾಳಿಸಿದರು .

ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ । Krishi Sanskriti Mattu Jagatikarana
ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ । Krishi Sanskriti Mattu Jagatikarana

2- 3 ವಾಕ್ಯದಲ್ಲಿ ಉತ್ತರಿಸಿ

ರೈತರನ್ನು ಶೋಷಣೆ ಮಾಡಿದವರು ಯಾರು ?

ರೈತರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದ ಸಾಹುಕಾರ ವರ್ಗವು ರೈತರಿಗೆ ನೀಡಿದ ಸಾಲಕ್ಕೆ ಸಿಕ್ಕಾಪಟ್ಟೆ ಬಡ್ಡಿ ಹಾಕಿ ರೈತರನ್ನು ಶೋಷಣೆ ಮಾಡಿತು .

ರೈತ ಚಳುವಳಿಗಳು ಎಲ್ಲೆಲ್ಲಿ ನಡೆದವು ?

ಕರ್ನಾಟಕದಲ್ಲಿ ರೈತ ಚಳುವಳಿಗಳು ಕಾಗೋಡು , ದಾಂಡೇಲಿ , ಹಳಿಯಾಳ , ನರಗುಂದ ಮತ್ತು ಶಿವಮೊಗ್ಗದಲ್ಲಿ ನಡೆದವು .

 ಸಾಲ ಕೇಳಲು ಹೋದ ಬಡರಾಷ್ಟ್ರಗಳ ಮೇಲೆ ವಿಧಿಸಿದ ನಿರ್ಬಂಧಗಳಾವುವು ?

ಸಾಲ ಕೇಳಲು ಹೋದ ಬಡರಾಷ್ಟ್ರಗಳ ಮೇಲೆ ಮಹಿಳೆ ಮತ್ತು ಶಿಶುಕಲ್ಯಾಣ , ಶಿಕ್ಷಣ , ಆರೋಗ್ಯ , ಸಮಾಜ ಕಲ್ಯಾಣಗಳಂಥ ಯೋಜನೆಗಳಿಗಾಗಿ ಹಣ ವ್ಯಯಿಸಬಾರದೆನ್ನುವ ನಿರ್ಬಂಧಗಳನ್ನು ಹೇರಲಾಯಿತು .

ಕೃಷಿ ಜಮೀನನ್ನು ಯಾರು ಖರೀದಿಸುವಂತಿಲ್ಲ ?

ನಮ್ಮ ಕರ್ನಾಟಕ ರಾಜ್ಯ ಭೂಸುಧಾರಣಾ ಕಾಯ್ದೆಯ ಪ್ರಕಾರ ರೈತ ಅಥವಾ ರೈತ ಕೂಲಿಕಾರರಲ್ಲದವರು ಕೃಷಿ ಜಮೀನುಗಳನ್ನು ಖರೀದಿಸುವಂತಿಲ್ಲ .

ರಾಸಾಯನಿಕಗಳನ್ನು ತಿಂದು ಬೆಳೆಯುವ ಪ್ರಾಣಿಗಳಿಗೆ ಯಾವ ರೋಗಗಳು ಬರುತ್ತವೆ ?

ರಾಸಾಯನಿಕಗಳನ್ನು ತಿನ್ನುವುದರಿಂದ ಪ್ರಾಣಿಗಳು ಅಕಾಲಿಕವಾಗಿ ಬಾತುಕೊಂಡು ಕೊಬ್ಬಿ ಬೆಳೆದು ಕುರಿಗಳೆಲ್ಲಾ ಗೂಳಿಗಳಂತೆ ಕಂಡವು . ಅವುಗಳಲ್ಲಿ ರೋಗ ನಿರೋಧಕ ಶಕ್ತಿಯೇ ಇರದೆ , ಗುರುತಿಸಲಾಗದ ವಿಚಿತ್ರ ರೋಗಗಳಿಗೆ ಬಲಿಯಾಗಿ ಸತ್ತುಹೋದವು .

ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ । Krishi Sanskriti Mattu Jagatikarana
ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ । Krishi Sanskriti Mattu Jagatikarana
5-6  ವಾಕ್ಯಗಳಲ್ಲಿ ಉತ್ತರಿಸಿ

ಸಿಪಾಯಿ ದಂಗೆಯನ್ನು ರೈತರ ದಂಗೆಯಂದು ಲೇಖಕರು ಏಕೆ ಕರೆದಿದ್ದಾರೆ ?

ಲೇಖಕರು 1857 ರ ಸಿಪಾಯಿ ದಂಗೆಯನ್ನು ರೈತರ ದಂಗೆಯೆಂದೇ ಕರೆಯಲು ಬಯಸುತ್ತಾರೆ . ಇದಕ್ಕೆ ಅವರು ನೀಡಿರುವ ಕಾರಣವೆಂದರೆ ಸಿಪಾಯಿದಂಗೆ ಸ್ಫೋಟಗೊಳ್ಳುವುದಕ್ಕೆ ಕ್ರಾಂತಿಕಾರಕ ವಾತಾವರಣವನ್ನು ರೈತರು ತಮ್ಮ ಚಳುವಳಿಗಳ ಮೂಲಕ ಸೃಷ್ಟಿ ಮಾಡಿದರೆಂಬ ಸಂಗತಿ .

ಅಲ್ಲದೆ ಸಿಪಾಯಿದಂಗೆಯಲ್ಲಿ ಒಂದೂವರೆ ಲಕ್ಷ ಭಾರತೀಯರು ಕೊಲ್ಲಲ್ಪಟ್ಟರು . ಅವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನ ರೈತಲೇ ಇದ್ದರು . ಅಲ್ಲದೆ ಗಾಂಧೀಜಿಯ ಕರೆಗೆ ಓಗೊಟ್ಟ ರೈತರ ಸ್ವಾತಂತ್ರ್ಯ ಚಳವಳಿಯು ಹಳ್ಳಿಹಳ್ಳಿಗೆ ವ್ಯಾಪಿಸಲು ಸಾಧ್ಯವಾಯಿತು – ಈ ಎಲ್ಲ ಕಾರಣಗಳಿಂದ ಲೇಖಕರು ಇದನ್ನು ರೈತರ ದಂಗೆಯೆಂದೇ ಕರೆಯಲು ಅಪೇಕ್ಷೆಪಟ್ಟಿದ್ದಾರೆ .

ಹತ್ತೊಂಬತ್ತನೆಯ ಶತಮಾನದಲ್ಲುಂಟಾದ ಬರದ ಪರಿಣಾಮಗಳೇನು ?

ಹತ್ತೊಂಬತ್ತನೆಯ ಶತಮಾನದಲ್ಲಿ ಉಂಟಾದ ಭೀಕರ ಪರಿಣಾಮಗಳು ಹೃದಯ ಕಲಕುವಂತಿದೆ . ರೈತರು ಎರೆಮಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಂಡರೆಂಬ ಸುದ್ದಿಗಳು ಹರಡಿದವು , ಸತ್ತವರ ಶವಸಂಸ್ಕಾರ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಯಿತು .

ನಾಯಿ – ನರಿಗಳು ಶವವನ್ನು ತಿನ್ನಲಾರಂಭಿಸಿದವು . ಎಲ್ಲಿ ನೋಡಿದರಲ್ಲಿ ಮನುಷ್ಯರ ಅಸ್ಥಿಪಂಜರಗಳು ಬಂದವು .

ರೈತ ಚಳುವಳಿಗಳ ಬಗ್ಗೆ ಬರೆಯಿರಿ?

 ಎಪ್ಪತ್ತರ ದಶಕದಲ್ಲಿ ಭುಗಿಲೆದ್ದ ರೈತ ಚಳುವಳಿಗಳು ಮಧ್ಯಮ ಮತ್ತು ಶ್ರೀಮಂತ ರೈತರ ಬೇಡಿಕೆಗಳನ್ನು ಪ್ರಧಾನ ವಾಗಿರಿಸಿಕೊಂಡ ರೈತ ಹೋರಾಟಗಳಾಗಿದ್ದವು , ಬಡ ರೈತರು ಗಮನಕ್ಕೆ ಬರಲೇ ಇಲ್ಲ . ಈ ಬಗೆಯ ಚಳುವಳಿಗಳು ಸರಕಾರಗಳನ್ನು ನಡುಗಿಸತೊಡಗಿದವು .

ಕರ್ನಾಟಕದಲ್ಲಿ ಕಾಗೋಡು ರೈತ ಹೋರಾಟವು ಅಭೂತಪೂರ್ವ ನೆಲೆಗಟ್ಟನ್ನು ಒದಗಿಸಿಕೊಟ್ಟಿತು . ದಾಂಡೇಲಿ , ಹಳಿಯಾಳಗಳಲ್ಲಿ ರೈತ ಹೋರಾಟವು ನಡೆಯಿತು . ನರಗುಂದ ಮತ್ತು ಶಿವಮೊಗ್ಗ ರೈತ ಚಳುವಳಿಗಳು ನಡೆದವು . ಶಿವಮೊಗ್ಗ ರೈತ ಚಳವಳಿಯ ನಂತರ ರೈತ ಸಂಘಟನೆಗಳು ಒಡೆದು ಹೋಳಾಯಿತೆಂದು ಲೇಖಕರು ಹೇಳಿದ್ದಾರೆ .

ಭೂ ಸುಧಾರಣಾ ಕಾಯ್ದೆ ಎಂದರೇನು ? ಅದರ ಪರಿಣಾಮಗಳೇನು ?

 ಕೃಷಿಕ್ಷೇತ್ರದಲ್ಲಿನ ವಿವಿಧ ಸಾಂಸ್ಥಿಕ ಅಂಶಗಳಲ್ಲಿ ಬದಲಾವಣೆ ತರಲು ಸರ್ಕಾರ ಯತ್ನಿಸುವುದನ್ನು ‘ ಭೂ ಸುಧಾರಣೆ ‘ ಎನ್ನಲಾಗಿದೆ .

ಒಕ್ಕಲುತನದ ಸಮಸ್ಯೆಗಳನ್ನು ನಿವಾರಿಸಿ , ಕೃಷಿ ಪ್ರಗತಿಗೆ ಶ್ರಮಿಸುವುದು ಭೂ ಸುಧಾರಣೆಯ ಮುಖ್ಯ ಉದ್ದೇಶ . ಭೂ ಒಡೆತನ , ಭೂ ಒಡೆಯರು ಮತ್ತು ಸರ್ಕಾರಕ್ಕೆ ಇರಬೇಕಾದ ಸಂಬಂಧ , ಗೇಣಿದಾರರ ಹಿತರಕ್ಷಣೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಕೃಷಿ ವ್ಯವಸ್ಥೆಯಲ್ಲಿ ತರಲಾಗುವ ಯೋಜಿತ ಮತ್ತು ಕಾನೂನುಬದ್ಧ ಮಾರ್ಪಾಟುಗಳೇ ಭೂ ಸುಧಾರಣಾ ಕಾಲದ’ಗಳು .

FAQ

ಲೇಖಕರು ಸಿಪಾಯಿ ದಂಗೆಯನ್ನು ಏನೆಂದು ಕರೆದಿದ್ದಾರೆ ?

ಲೇಖಕರು ಸಿಪಾಯಿ ದಂಗೆಯನ್ನು ರೈತ ದಂಗೆಯೆಂದೇ ಕರೆದಿದ್ದಾರೆ .

ರೈತರು ಯಾವ ತೆರಿಗೆಯನ್ನು ಪಾವತಿಸಬೇಕಾಯಿತು ?

ರೈತರು ಜಮೀನ್ದಾರಿ ಪದ್ಧತಿಯ ಕಾನೂನಿನಂತೆ ಹಣದ ರೂಪದ ತೆರಿಗೆಯನ್ನು ಪಾವತಿಸಬೇಕಾಯಿತು .

 ರೈತರ ಬದಲಿಗೆ ಸ್ವಾತಂತ್ರ್ಯವು ಯಾರ ಕೈಗೆ ಸಿಕ್ಕಿತು ?

ಸ್ವಾತಂತ್ರ್ಯವು ರೈತರಿಗೆ ಸಿಗುವ ಬದಲು ಬಂಡವಾಳಶಾಹಿಗಳ ಕೈಗೆ ಸಿಕ್ಕಿತು .

ಇತರೆ ವಿಷಯಗಳನ್ನು ಓದಿರಿ

ಡೌನ್ಲೋಡ್ ಪಿಡಿಎಫ್ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *