Magu Mattu Hannugalu Kannada Notes | ಮಗು ಮತ್ತು ಹಣ್ಣುಗಳು ಸಾರಾಂಶ

Magu Mattu Hannugalu Kannada Notes | ಮಗು ಮತ್ತು ಹಣ್ಣುಗಳು ಸಾರಾಂಶ

Magu Mattu Hannugalu Kannada Notes, ಮಗು ಮತ್ತು ಹಣ್ಣುಗಳು ಸಾರಾಂಶ, magu mattu hannugalu question answer Pdf, Notes, Summary, 1st PUC Kannada

Magu Mattu Hannugalu Kannada Notes

ಕವಿ ಪರಿಚಯ

ಎಚ್.ಎಸ್ . ಶಿವಪ್ರಕಾಶ್

ವಿದ್ಯಾಭ್ಯಾಸ : ಬೆಂಗಳೂರು ವಿ.ವಿ.ಯಿಂದ ಇಂಗ್ಲಿಷ್ ಎಂ.ಎ. ಪದವಿ

ವೃತ್ತಿ : ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕಲೆ ಮತ್ತು ಸೌಂದರ್ಯ ‘ ವಿಭಾಗದ ಪ್ರಾಧ್ಯಾಪಕರಾಗಿದ್ದರು . ‘

ಕವಿತಾ ಸಂಕಲನ :

  • ಅಣುಕ್ಷಣ ಚರಿತೆ
  • ನವಿಲು ನಾಗರ
  • ಮಳೆ ಬಿದ್ದ ನೆಲದಲ್ಲಿ
  • ಮಳೆಯ ಮಂಟಪ
  • ಸೂರ್ಯಜಲ

ನಾಟಕಗಳು :

  • ಮಹಾಚೈತ್ರ
  • ಮಂಟೆಸ್ವಾಮಿ ಕಥೆ
  • ಸುಲ್ತಾನ್ ಟಿಪ್ಪು
  • ಮಾದಾರಿ ಮಾದಯ್ಯ
  • ಶಿಲಿಪ್ಪದಿಗಾರಂ

ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರಗಳಿಗೆ ಭಾಜನರಾಗಿರುವ ಶ್ರೀಯುತರು ಈಗ ಬರ್ಲಿನ್‌ನಲ್ಲಿರುವ ‘ ರವೀಂದ್ರನಾಥ ಟ್ಯಾಗೋರ್ ಕೇಂದ್ರ’ದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವರು.


ಮಗು ಮತ್ತು ಹಣ್ಣುಗಳು

ಮಗುವು ಯಾವುದರ ಹಾಗೆ ಬಾಗಬೇಕು ?

ಮಗುವು ಬಾಳೆಯ ಹಣ್ಣಿನ ಹಾಗೆ ಕೊಂಚ ಬಾಗಬೇಕು

ಅರಳಿಸಿದ ದಾಳಿಂಬೆ ಯಾವ ರೀತಿ ಕಾಣುತ್ತದೆ ?

ದಳವಳ ಕೊಯ್ದು ಅರಳಿಸಿದ ದಾಳಿಂಬೆಯು ಥಳಥಳ ಕೆಂಡ ಬಣ್ಣ ಮಣಿ ಮಣಿಯೂ ತನಿರಸದ ಹನಿ ಹನಿಯಂತ ಕಾಣುತ್ತದೆ .

ಹಣ್ಣಿನಂಗಡಿ ಮುಂದೆ ಕಣ್ಣರಳಿಸುವ ಮಗು
ಇಲ್ಲಿ ಈ ತಿರುವಿನಲ್ಲಿ ಥಟ್ಟನವತರಿಸಿದ ಕಪ್ಪು ಲಾರಿಯ ಹಾಗೆ
ಗಾಳಿ ಕೀಟಲೆ ಉಗುರೊ
ತುಂಟರೆಸೆಯುವ ಕಲ್ಲೊ ಕಾಯಿಯಲ್ಲೇ ನಿನ್ನ ಕೆಡವದಿರಲಿ
ಹಣ್ಣಿನಂಗಡಿಯಾಗು ನೀನೂನು
ಗಿರವಿಯಂಗಡಿ ಗುಜರಿಗಳ ಧೂಳು ಹಬ್ಬಿದ
ಊರ ಮಾರುಕಟ್ಟೆಯ ನಡುವೆ
ಹಣ್ಣಾಗಬೇಕು ಮಗು .
ಮೈಯೆಲ್ಲ ಮಾಗಿ ಹಣ್ಣಿನ ಸುಕ್ಕು ಬರುವವರೆಗೆ
ಪಕ್ವತನ ಬಿರಿದ ಬಾಳೆಹಣ್ಣಿದೆಯಲ್ಲ
ಅದರ ಹಾಗೇ ಕೊಂಚ ಬಾಗಬೇಕು

ಕೊಬ್ಬಿದರೆ ಚಕೋತನೆಯ ಹಾಗೆ
ಕುಗ್ಗಿದರೆ ನಿಂಬೆಹಣ್ಣಿನ ಹಾಗೆ
ಹುಳಿಗಟ್ಟುವುದು ನಿನ್ನೊಳಗೆ
ಸರಿಗಾತ್ರವಾಗಿ ಸಮನಿಸಲಿ ನಿನ್ನತನ
ಕಿತ್ತಲೆಯ ಹಾಗೆ , ಮೋಸಂಬಿ ಹಾಗೆ
ರಸಪೂರಿ ಮಾವಿನ ಹಣ್ಣಿನಂತೆ .
ಅಂಜೂರದಂತೆ ಅಪರೂಪವಾಗು ಜನರ ಕಣ್ಣಿಗೆ
ಕಂಡರೆ ಕಾಣು ಕಲ್ಲಂಗಡಿಯಾಗಿ
ಬೇಸಿಗೆ ಕಮರಿರುವ ಕಣ್ಣುಗಳಿಗೆ ,
ದಳದಳ ಕೊಯ್ದು ಅರಳಿಸಿದ ದಾಳಿಂಬೆಯೊಳಗೆ
ಥಳಥಳ ಕೆಂಡ ಬಣ್ಣ ಮಣಿ ಮಣಿ
ಹನಿ ಹನಿ ತನಿರಸದ ಖನಿಯಾಗು
ಹಬ್ಬಿಕೋ ದ್ರಾಕ್ಷಿ ಬಳ್ಳಿಯ ಹಾಗೆ
ಆಯುಷ್ಯ , ಚಪ್ಪರದ ಉದ್ದಗಲ ;
ತಬ್ಬಿಕೋ ಬಿಡಬೇಡ ;
ಹಣ್ಣು ತೊಡಿಸಲು ನಿನಗೆ
ತಾನೆ ಮಣ್ಣಾಗುತ – ಬರಲು ತೋಟಗಾತಿ

ಬೆಳೆಯ ರಾಕೆಟ್ಟುಯನ ಹೊರಡದಿರು ಸೇಬು ಹಣ್ಣಿನ ಜೊತೆಗೆ

ಎಲ್ಲರಿಗೂ ದಕ್ಕುವ ಎಲಚಿಯಾಗು.

ಒಂದು ವಾಕ್ಯದಲ್ಲಿ ಉತ್ತರಿಸಿ


ಮಗು ಕಣ್ಣನ್ನು ಎಲ್ಲಿ ಅರಳಿಸುತ್ತದೆ ?
ಮಗುವು ಹಣ್ಣಿನಂಗಡಿಯ ಮುಂದೆ ಕಣ್ಣರಳಿಸುತ್ತದೆ


ತಿರುವಿನಲ್ಲಿ ಅವತರಿಸುವ ವಾಹನ ಯಾವುದು ?
ಬಾರಿಯು ತಿರುವಿನಲ್ಲಿ ಅವತರಿಸುವ ವಾಹನವಾಗಿದೆ .


ಮಗುವು ಯಾವುದರ ಹಾಗೆ ಬಾಗಬೇಕು ?
ಮಗುವು ಬಾಳೆಯ ಹಣ್ಣಿನ ಹಾಗೆ ಕೊಂಚ ಬಾಗಬೇಕು


ಯಾವ ಹಣ್ಣಿನಂತೆ ಮಗುವು ಕೊಬ್ಬಬಾರದು ?
ಮಗುವು ಚಕೋತ ಹಣ್ಣಿನಂತೆ ಕೊಬ್ಬಬಾರದು .


ಅವ್ಯದ ಕಣ್ಣಿಗೆ ಯಾವ ಹಣ್ಣಿನಂತೆ ಮಗು ಆಪರೂಪವಾಗಬೇಕು ?
ಅನ್ನದ ಕಣ್ಣಿಗೆ ಮಗುವು ಅಂಜೂರದ ಹಣ್ಣಿನಂತೆ ಅಪರೂಪವಾಗಬೇಕು .


ಆಯುಷ್ಯದ ಚಪ್ಪರಕ್ಕೆ ಮಗು ಹೇಗೆ ಹಬ್ಬಿಕೊಳ್ಳಬೇಕು ?
ಆಯುಷ್ಯದ ಚಪ್ಪರದ ಉದ್ದಗಲಕ್ಕೂ ಮಗುವು ದ್ರಾಕ್ಷಿಯ ಬಳ್ಳಿಯಂತೆ ಹಬ್ಬಿಕೊಳ್ಳಬೇಕು .


ಬೆಲೆಯ ರಾಕೆಟ್ಟು ಯಾನದಲ್ಲಿ ಹೊರಟ ಹಣ್ಣು ಯಾವುದು ?
ಬೆಲೆಯ ರಾಕೆಟ್ಟು ಯಾನದಲ್ಲಿ ಹೊರಟ ಹಣ್ಣು ಸೇಬು .

ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ

ಮಗು ಬದುಕಿನಲ್ಲಿ ಯಾವ ಯಾವ ತೊಂದರೆಗಳಿಗೆ ಒಳಗಾಗಬಾರದು ?
ಮಗುವುಬದುಕಿನ ತಿರುವಿನಲ್ಲಿ ಥಟ್ಟನೆ ಅವತರಿಸಿದ ಕಪ್ಪು ಲಾರಿಯಂತಹ ಕೀಟಲೆ ಗಾಳಿಗೋ , ತುಂಟರೆಸೆಯುವ ಕಲ್ಲಿನ ಹೊಡೆತಕ್ಕೆ ಸಿಲುಕಿ ಕಾಯಿಯಲ್ಲೇ ನೆಲಕ್ಕೆ ಬೀಳಬಾರದು .


ಮಗುವು ಹಣ್ಣಿನಂಗಡಿಯಂತಾಗಬೇಕಾದುದು ಎಲ್ಲಿ ?
ಮಗುವುಹಣ್ಣಿನಂಗಡಿಯಂತಾಗಬೇಕಾಗಿರುವುದು ಗಿರವಿ ಅಂಗಡಿ , ಗುಜರಿಗಳ ಧೂಳು ಹಬ್ಬಿರುವ ಊರ ಮಾರುಕಟ್ಟೆಯ


ಮಗುವಿನಲ್ಲಿ ಸಮನಿಸಬೇಕಾದ ಗುಣಗಳು ಯಾವುವು ?
ಮಗುವಿನಲ್ಲಿ ಹುಳಿ ಮತ್ತು ಸಿಹಿ ಸಮನಿಸಿರುವ ಕಿತ್ತಲೆ , ಮೋಸಂಬಿ ಮತ್ತು ಮಾವಿನ ಹಣ್ಣಿನ ಹಾಗೆ ಗುಣಗಳಿರಬೇಕು .


ಅರಳಿಸಿದ ದಾಳಿಂಬೆ ಯಾವ ರೀತಿ ಕಾಣುತ್ತದೆ ?
ದಳವಳ ಕೊಯ್ದು ಅರಳಿಸಿದ ದಾಳಿಂಬೆಯು ಥಳಥಳ ಕೆಂಡ ಬಣ್ಣ ಮಣಿ ಮಣಿಯೂ ತನಿರಸದ ಹನಿ ಹನಿಯಂತ ಕಾಣುತ್ತದೆ .

ಮಗು ಮತ್ತು ಹಣ್ಣುಗಳು ಸಾರಾಂಶ

ಐದಾರು ವಾಕ್ಯಗಳಲ್ಲಿ ಉತ್ತರಿಸಿ

ಮಗು ಹಣ್ಣುಗಳಿಂದ ಕಲಿಯಬೇಕಾದ ಗುಣಗಳು ಯಾವುವು ? ವಿವರಿಸಿ .


ಮಗುವು ಹಣ್ಣಿನಂಗಡಿಯಂತಾಗಿ ಬಗೆಬಗೆಯ ಹಣ್ಣುಗಳ ಗುಣವನ್ನು ರೂಢಿಸಿಕೊಂಡು ಪಕ್ವಗೊಳ್ಳಬೇಕು . ಬಾಳೆಯ ಹಣ್ಣಿನಂತ ಬಾಗುವುದನ್ನು ಕಲಿಯಬೇಕು . ಚಕೋತ , ನಿಂಬೆಗಳಂತೆ ಹುಳಿಗಟ್ಟಿಉಬ್ಬಿ – ಕುಗ್ಗಬಾರದು . ಕಿತ್ತಲೆ , ಮೋಸಂಬಿ , ರಸಪೂರಿ ಮಾವಿನಂತೆ ಹುಳಿ – ಸಿಹಿಗಳು ಸರಿಗಾತ್ರದಲ್ಲಿ ಮಗುವಿನೊಳಗೆ ಸಮನಿಸಿರಬೇಕು .

ಅಲ್ಲದೆ ಮಗುವು ಜನರ ಕಣ್ಣಿಗೆ ಅಂಜೂರದಂತೆ ಅಪರೂಪದ ವ್ಯಕ್ತಿತ್ವ ಹೊಂದಿರಬೇಕು , ಕಲ್ಲಂಗಡಿಯಂತೆ ಬೆಂದ ಮನಕ್ಕೆ ತಂಪೆರೆಯಬೇಕು , ದಾಳಿಂಬೆಯಂತೆ ತನಿರಸದ ಖನಿಯಾಗಬೇಕು , ಸುಖವಿರಲಿ , ಕಷ್ಟ ಬರಲಿ ಸಿಹಿ – ಹುಳಿ ದ್ರಾಕ್ಷಿಯಂತೆ ಆಯುಷ್ಯದ ಚಪ್ಪರಕ್ಕೆ ದಟ್ಟವಾಗಿ ಹಬ್ಬಿಕೊಳ್ಳುವುದನ್ನು ಕಲಿಯಬೇಕು . ಕೈಗೆಟುಕದ ಸೇಬಿನ ಬೆಲೆಯಂತಾಗದ ಎಲ್ಲರಿಗೂ ದಕ್ಕುವ ಒದಗುವ ಎಲಚಿ ಹಣ್ಣಿನಂತೆ ಮಗುವು ಬಾಳಬೇಕು .

ಈ ರೀತಿಯಲ್ಲಿ ಬೇರೆ ಬೇರೆ ಹಣ್ಣುಗಳ ವಿಭಿನ್ನ ಬಗೆಯ ರುಚಿ , ಮಾಗುವಿಕೆ , ಲಭ್ಯತೆ ಹಾಗೂ ಅಪರೂಪತೆಗಳ ಅಂಶಗಳನ್ನು ವಿವರಿಸಲಾಗಿದೆ.

ಮಗುವಿನ ವಿಕಸನದ ಗುಣಗಳನ್ನಾಗಿ ಕವಿ ನಿರೂಪಿಸಿದ್ದಾರೆ.


ಮಗುವಿನ ವ್ಯಕ್ತಿತ್ವಕ್ಕೂ ಹಾಗೂ ಹಣ್ಣುಗಳಿಗೂ ಕವಿ ಹೇಗೆ ಸಂಬಂಧಗಳನ್ನು ಕಲ್ಪಿಸಿದ್ದಾನೆ ? ವಿವರಿಸಿ . “
ಮಗು ಮತ್ತು ಹಣ್ಣುಗಳು ‘ ಎಂಬ ಕವಿತೆಯಲ್ಲಿ ಮಗುವಿನ ವ್ಯಕ್ತಿತ್ವಕ್ಕೂ ಮತ್ತು ಹಣ್ಣುಗಳ ಗುಣ – ರುಚಿಗಳಿಗೂ ಸಂಬಂಧ ಕಲ್ಪಿಸಿ ಆ ನೆಲೆಯಲ್ಲಿ ಮಗುವಿನ ವ್ಯಕ್ತಿತ್ವವು ವಿಕಸನಗೊಳ್ಳಬೇಕೆಂದು ಕವಿಯು ಆಶಿಸಿದ್ದಾರೆ , ಬಾಳೆಹಣ್ಣಿನ ಬಾಗುವಿಕೆ ಕಿತ್ತಲೆ – ಮೂಸಂಬಿ ರಸಪೂರಿ ಹಣ್ಣುಗಳ ಹುಳಿ – ಸಿಹಿ ಸಮಸೂತ್ರವನ್ನು ಮಗುವು ಕಲಿಯಲೆಂದಿದ್ದಾರೆ .

ಅಲ್ಲದೆ ಕಲ್ಲಂಗಡಿ , ಅಂಜೂರ , ದಾಳಿಂಬೆ , ದ್ರಾಕ್ಷಿಗಳ ಗುಣವೂ ಮಗುವಿನ ವ್ಯಕ್ತಿತ್ವವನ್ನು ತುಂಬಬೇಕು . ಮಗುವಿನ ವ್ಯಕ್ತಿತ್ವ ಸೇಬಿನ ಬೆಲೆಯಂತೆ ಗಗನಮುಖಿ ಯಾಗದೆ , ಎಲ್ಲರಿಗೂ ದಕ್ಕುವ ಎಲಚಿಯಂತೆ ಬಾಳಬೇಕೆಂದು ಹೇಳಿರುವ ಕವಿಯು ಮಗುವನ್ನು ಹಣ್ಣಿನಂಗಡಿಯ ೦ ತಾಗ ಬೇಕೆ ೦ ದಿದ್ದಾರೆ .

ಹಣ್ಣುಗಳ ವಿವಿಧ ಗುಣಗಳು ಮಗುವಿನ ವ್ಯಕ್ತಿತ್ವದಲ್ಲಿ ಮೇಲೆಸಿದ ಮೌಲ್ಯವಾಗಬೇಕೆಂಬುದು ಕವಿಯ ಆಶಯ ವಾಗಿದೆ .
ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ

ಇತರೆ ನೋಟ್ಸ್ ಲಿಂಕ್

ಎಂದಿಗೆ notes

ಅಖಂಡ ಕರ್ನಾಟಕ ಪದ್ಯ

ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ

Leave a Reply

Your email address will not be published. Required fields are marked *