ಜ್ಯೋತಿಷ್ಯವು ಅರ್ಥಪೂರ್ಣವೋ? ಅರ್ಥರಹಿತವೋ? | Jyothishya Artha Purnavo

ಜ್ಯೋತಿಷ್ಯವು ಅರ್ಥಪೂರ್ಣವೋ? ಅರ್ಥರಹಿತವೋ? | Jyothishya Artha Purnavo

jyothishya artha purnavo , ಜ್ಯೋತಿಷ್ಯವು ಅರ್ಥಪೂರ್ಣವೋ? ಅರ್ಥರಹಿತವೋ?,Jyotishya Artharahitavo? 1st PUC kannada notes, Pdf, Summary, ಪ್ರಥಮ ಪಿ.ಯು.ಸಿ ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 1st Puc Jyothishya Arthapurnavo Artharahitavo? Kannada Notes Question Answer Summary Mcq Pdf Download in Kannada Medium Karnataka State Syllabus Kseeb Solutions For Class 11 Kannada Chapter 3 Notes 1st Puc Kannada 3rd Chapter Notes Pdf jyothishya kannada notes
Chapter 18

jyothishya artha purnavo

ಕವಿ ಪರಿಚಯ

ಡಾ । ಎಚ್ . ನರಸಿಂಹಯ್ಯ

ಜನನ : 1930

ಸ್ಥಳ : ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ‘ ಹೊಸೂರು ‘ ಎಂಬ ಹಳ್ಳಿಯಲ್ಲಿ ಜನಿಸಿದರು .

ಆತ್ಮಕಥನ : ‘ ಹೋರಾಟದ ಹಾದಿ ‘

ನಿಧನ :2004

ಒಂದು ವಾಕ್ಯದಲ್ಲಿ ಉತ್ತರಿಸಿ : Jyothishya Artha Purnavo

ಜ್ಯೋತಿಷ್ಯದ ಉಗಮವು ಎಲ್ಲಿ ಕಂಡುಬರುತ್ತದೆ ?

 ಪ್ರಾಚೀನ ಜ್ಯೋತಿಷ್ಯದ ಉಗಮವು ಖಗೋಳಶಾಸ್ತ್ರದಲ್ಲಿ ಕಂಡುಬರುತ್ತದೆ .

ಯಾವುದು ಹಾಸ್ಯಾಸ್ಪದ ಸಂಗತಿ ?

ಮನುಷ್ಯನ ಎಲ್ಲ ಗುಣಗಳನ್ನು ಗ್ರಹಗಳಿಗೆ ಆರೋಪಿಸುವುದು ಹಾಸ್ಯಾಸ್ಪದ ಸಂಗತಿಯಾಗಿದೆ . ಜಾತಕಗಳನ್ನು ಹೇಗೆ ಬರೆಯಲಾಗುತ್ತದೆ ? ವ್ಯಕ್ತಿ ಹುಟ್ಟಿದಾಗ ಕಂಡುಬರುವ ಗ್ರಹಗತಿಗಳ ಆಧಾರದಿಂದ ಜಾತಕಗಳನ್ನು ಬರೆಯಲಾಗುತ್ತದೆ .

ಜ್ಯೋತಿಷಿಗಳ ಭವಿಷ್ಯವಾಣಿ ಓದಲು ಹೇಗಿರುತ್ತದೆ ?  

ಜ್ಯೋತಿಷಿಗಳ ಭವಿಷ್ಯವಾಣಿ ಓದಲು ತಮಾಷೆಯಾಗಿರುತ್ತದೆ

ಜನ ನಿರಾಶೆ , ಸಮಸ್ಯೆಗಳಲ್ಲಿದ್ದಾಗ ಯಾವುದರ ಮೊರೆ ಹೋಗುತ್ತಾರೆ ?

ಮೂಢನಂಬಿಕೆಗಳು ವಾಯು , ಜಲಮಾಲಿನ್ಯಕ್ಕಿಂತ ಹೆಚ್ಚು ಅಪಾಯಕಾರಿ .

ಜ್ಯೋತಿಷ್ಯ ಮುಗ್ಧ ಜನರನ್ನು ಹೇಗೆ ಶೋಷಿಸುತ್ತದೆ ?

 ಜ್ಯೋತಿಷ್ಯ ಮುಗ್ಧ ಜನರನ್ನು ಭಯದಲ್ಲಿರಿಸಿ , ಅವರ ಸುಲಿಗೆಗೆ ಕಾರಣವಾಗುತ್ತದೆ .

ವಾಯು , ಜಲಮಾಲಿನ್ಯಕ್ಕಿಂತ ಯಾವುದು ಹೆಚ್ಚು ಅಪಾಯಕಾರಿಯಾಗಿರುತ್ತದೆ ?

ಮೂಢನಂಬಿಕೆಗಳು ವಾಯು , ಜಲಮಾಲಿನ್ಯಕ್ಕಿಂತ ಹೆಚ್ಚು ಅಪಾಯಕಾರಿ .

Jyothishya Artha Purnavo

ಪ್ರಥಮ ಪಿಯುಸಿ ಕನ್ನಡ ಜ್ಯೋತಿಷ್ಯ-ಅರ್ಥಪೂರ್ಣವೋ ಅರ್ಥರಹಿತವೋ? | Jyothishya Artha Purnavo
ಪ್ರಥಮ ಪಿಯುಸಿ ಕನ್ನಡ ಜ್ಯೋತಿಷ್ಯ-ಅರ್ಥಪೂರ್ಣವೋ ಅರ್ಥರಹಿತವೋ? | Jyothishya Artha Purnavo

ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ :

ವಿಜ್ಞಾನದ ಸಿದ್ಧಾಂತಗಳು ಹೇಗೆ ರೂಪುಗೊಳ್ಳುತ್ತವೆ ?

ವಿಜ್ಞಾನದ ಎಲ್ಲ ಸಿದ್ಧಾಂತಗಳು , ನಿಯಮಗಳು ಹೊಸ ಸಂಶೋಧನೆಯ ಬೆಳಕಿನಲ್ಲಿ ಪುನರ್‌ರಚಿತವಾಗುತ್ತವೆ . ವಸ್ತುನಿಷ್ಠತೆ , ಪುನರಾವೃತ್ತಿಯ ಸಾಮರ್ಥ್ಯ , ದೃಢತೆ , ವಿಶ್ವಮಾನ್ಯತೆ – ಈ ಎಲ್ಲಾ ಅಂಶಗಳ ಮೇಲೆ ವಿಜ್ಞಾನದ ಸಿದ್ಧಾಂತಗಳು ರೂಪುಗೊಳ್ಳ ಬೇಕಿದೆ .

2ಜ್ಯೋತಿಷ್ಯದ ಪ್ರಕಾರ ಗ್ರಹಗಳನ್ನು ?ಅವುಗಳು ಯಾವುವು ?

 ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಿವೆ . ಸೂರ್ಯ , ಚಂದ್ರ , ರಾಹು , ಕೇತು , ಬುಧ , ಶುಕ್ರ , ಮಂಗಳ , ಗುರು ಮತ್ತು ಶನಿಗಳೇ ಈ ನವಗ್ರಹಗಳು ,

ರಾಹುಕಾಲ , ಗುಳಿಕಕಾಲ ಮತ್ತು ಯಮಗಂಡಕಾಲಗಳ ಬಗ್ಗೆ ಲೇಖಕರ ಅಭಿಪ್ರಾಯವೇನು ?

ಜ್ಯೋತಿಷ್ಯವು ರಾಹುಕಾಲ , ಗುಳಿಕಕಾಲ , ಯಮಗಂಡಕಾಲ , – ಈ ಮೂರು ಅಂಶಗಳನ್ನು ಆಡಿಭಾಯವಾಗಿ ಹೊಂದಿದೆ . ಆದರೆ ಜ್ಯೋತಿಷಿ ಹೇಳುವ ನವಗ್ರಹಗಳಲ್ಲಿ ರಾಹು , ಕೇತುಗಳು ಅಸ್ತಿತ್ವದಲ್ಲಿಯೇ ಇಲ್ಲದಿರುವಾಗ ರಾಹುಕಾಲ , ಗುಳಿಕಕಾಲ , ಯಮಗಂಡ ಕಾಲಗಳಿಗೆ ಸಹಜವಾಗಿಯೇ ಯಾವ ಅರ್ಥವೂ ಇಲ್ಲವೆಂಬುದು ಲೇಖಕರ ಅಭಿಪ್ರಾಯವಾಗಿದೆ .

ಬುದ್ಧನು ‘ ವಿನಯ ಪಿಟಿಕಾ ‘ ಗ್ರಂಥದಲ್ಲಿ ಯಾರಿಂದ ದೂರವಿರಬೇಕೆಂದು ಎಚ್ಚರಿಸಿದ್ದಾನ ?

ನಡೆಸುತ್ತಾರೋ ಅವರಿಂದ ದೂರವಿರಬೇಕು ‘ ಎಂದು ಎಚ್ಚರಿಸಿದ್ದಾನೆ . ಬುದ್ದನು ತನ್ನ ವಿನಯ ಪಿಟಿಕಾ ‘ ಎಂಬ ಗ್ರಂಥದಲ್ಲಿ ” ಯಾರು ನಕ್ಷತ್ರಗಳ ಲೆಕ್ಕಾಚಾರದಂತಹ ತಂತ್ರಗಳಿಂದ ಜೀವನ

ಪ್ರಥಮ ಪಿಯುಸಿ ಕನ್ನಡ ಜ್ಯೋತಿಷ್ಯ-ಅರ್ಥಪೂರ್ಣವೋ ಅರ್ಥರಹಿತವೋ? | Jyothishya Artha Purnavo
1st PUC Kannada Jyothishya Arthapurnavo Artharahitavo? Notes

 ಐದಾರು ವಾಕ್ಯಗಳಲ್ಲಿ ಉತ್ತರಿಸಿ :

ಪ್ರಕೃತಿಯ ಘಟನೆಗಳು ಆದಿ ಮಾನವನ ಮನಸ್ಸಿನ ಮೇಲೆ ಉಂಟುಮಾಡಿದ ಪರಿಣಾಮಗಳೇನು ?

ಪ್ರಕೃತಿಯ ಘಟನೆಗಳು ಆದಿ ಮಾನವನಿಗೆ ಭಯ – ಭಕ್ತಿಯನ್ನುಂಟು ಮಾಡಿದ್ದು ಅವನ ಬಹುಪಾಲು ನಂಬಿಕೆಗಳು ಈ ಹಿನ್ನೆಲೆಯಲ್ಲಿಯೇ ರೂಪುಗೊಂಡಿರಬೇಕೆಂದು ಎಚ್ .

ನರಸಿಂಹಯ್ಯನವರು ಅಭಿಪ್ರಾಯಪಟ್ಟಿದ್ದಾರೆ . ಅವರು ಹೇಳಿರುವಂತೆ ಮಿಂಚು – ಗುಡುಗುಗಳು ಅವನಿಗೆ ಸಾಕಷ್ಟು ಭಯವನ್ನು ಉಂಟುಮಾಡಿರಬೇಕು . ಮಧ್ಯಾಹ್ನದಲ್ಲಿ ಗ್ರಹಣಗಳು ನಡೆದು , ಕತ್ತಲು ಮುಸುಕಿದಾಗ ಧೈರ್ಯಶಾಲಿಯನಿಸಿದವನಲ್ಲೂ ನಡುಕ ಉಂಟಾಗಿರಬಹುದು .

ಭೂಕಂಪವು ಅವನಲ್ಲಿ ದಿಗಿಲನ್ನು ತಂದಿರಬಹುದು . ಕನಸು , ರೋಗ , ಸಾವು ಇವೆಲ್ಲವೂ ಅವನಿಗೆ ರಹಸ್ಯವಾಗಿ ತೋರಿರಬಹುದೆಂದು ಲೇಖಕರು ಹೇಳಿದ್ದಾರೆ .

 ಜ್ಯೋತಿಷ್ಯ ಏಕೆ ವಿಜ್ಞಾನವಾಗಲಾರದು ? ವಿವರಿಸಿ ,

ಯಾವುದೇ ಒಂದು ವಿಷಯವು ವಿಜ್ಞಾನವೆನಿಸಿಕೊಳ್ಳಬೇಕಾದರೆ ಅದು ವಸ್ತುನಿಷ್ಠತೆ , ಪುನರಾವೃತ್ತಿಯ ಸಾಮರ್ಥ್ಯ , ದೃಢತೆ , ನಿಖರತೆ , ವಿಶ್ವಮಾನ್ಯತೆ – ಈ ಎಲ್ಲ ರೀತಿಯ ಅಂಶಗಳನ್ನು ತೃಪ್ತಿಪಡಿಸಬೇಕಾಗುತ್ತದೆ .

ಜ್ಯೋತಿಷ್ಯವು ಅರ್ಥಪೂರ್ಣವೋ? ಅರ್ಥರಹಿತವೋ?

ಆದರೆ ಜ್ಯೋತಿಷ್ಯ ಹೇಳುವ ನವಗ್ರಹಗಳಲ್ಲಿ ರಾಹು , ಕೇತುಗಳು , ಅಸ್ತಿತ್ವದಲ್ಲೇ ಇಲ್ಲ . ಸೂರ್ಯ – ಚಂದ್ರರೂ ಗ್ರಹಗಳಲ್ಲ . ಅಲ್ಲದೆ ಭೂಮಿಯಿಂದ ಮಿಲಿಯನ್‌ಗಟ್ಟಲೆ ದೂರದಲ್ಲಿರುವ ಗ್ರಹಗಳು ಮನುಷ್ಯನ ನಡೆವಳಿಕೆಯ ಮೇಲೆ ಪ್ರಭಾವ ಬೀರುತ್ತದೆಂಬುದೂ ಹಾಸ್ಯಾಸ್ಪದ ಜ್ಯೋತಿಷ್ಯವು ರಾಹುಕಾಲ , ಗುಳಿಕಕಾಲ , ಯಮಗಂಡ ಕಾಲಗಳನ್ನೂ ಅಡಿಪಾಯವಾಗಿರಿಸಿಕೊಂಡಿದೆ .

ಅಸ್ತಿತ್ವದಲ್ಲೇ ಇರದ ರಾಹು – ಕೇತುಗಳಿಂದಾಗಿ ರಾಹುಕಾಲ ಮುಂತಾದವುಗಳಿಗೆ ಸಹಜವಾಗಿಯೇ ಯಾವ ಅರ್ಥವೂ ಇಲ್ಲ . ಗ್ರಹಗಳ ಗತಿಯನ್ನು ಆಧರಿಸಿ ಜ್ಯೋತಿಷಿಗಳು ರಚಿಸುವ ಜಾತಕಗಳೂ ಸಹ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಇರುತ್ತವೆ . ನಿಖರತೆ ಇಲ್ಲದ ಈ ಬಗೆಯ ಜ್ಯೋತಿಷ್ಯವನ್ನು ವಿಜ್ಞಾನವನ್ನಲು ಸಾಧ್ಯವಿಲ್ಲ ಎನ್ನಬಹುದು .

ಸ್ವಾಮಿ ವಿವೇಕಾನಂದರು ಜ್ಯೋತಿಷ್ಯದ ಬಗ್ಗೆ ತಾಳಿರುವ ಅಭಿಪ್ರಾಯವೇನು ?

ಮನುಷ್ಯನ ಭವಿಷ್ಯದ ನಿರ್ಣಯಕ್ಕೆ ಅವನೇ ಕಾರಣ ಹೊರತು ಜ್ಯೋತಿಷ್ಯವಲ್ಲ ಎಂದು ದೃಢವಾಗಿ ನಂಬಿದ್ದ ಸ್ವಾಮಿ ವಿವೇಕಾನಂದರು ಜ್ಯೋತಿಷ್ಯದ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ . ಅವರ ಮಾತಿನಲ್ಲಿ ಹೇಳುವುದಾದರೆ ” ನಕ್ಷತ್ರಗಳ ಪ್ರಭಾವ   

ನನ್ನ ಮೇಲೆ ಆಗುವುದಾದರೆ ಆಗಲಿ , ಅದು ನನ್ನ ಜೀವನದ ಮೇಲೆ ಪ್ರಭಾವ ಬೀರಿದರೆ ಅದಕ್ಕೆ ಯಾವ ಬೆಲೆಯೂ ಇಲ್ಲ . ಜ್ಯೋತಿಷ್ಯ ಮತ್ತು ಇತರ ಸಂಗತಿಗಳು ಸಾಮಾನ್ಯವಾಗಿ ದುರ್ಬಲ ಮನಸ್ಸಿನ ಗುರುತುಗಳು , ಇಂತಹವುಗಳು ಬದುಕಿನಲ್ಲಿ ಪ್ರಾಮುಖ್ಯ ಪಡೆದುಕೊಂಡ ಕೂಡಲೇ ವೈದ್ಯರನ್ನು ಕಂಡು ಉತ್ತಮ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು .

ಇದು ವಿವೇಕಾನಂದರು ಜ್ಯೋತಿಷ್ಯದ ಬಗ್ಗೆ ತಾಳಿರುವ ಅಭಿಪ್ರಾಯವಾಗಿದೆ .

ಶಿಕ್ಷಣದ ಮುಖ್ಯ ಉದ್ದೇಶ ಏನಾಗಬೇಕು ?

ಶಿಕ್ಷಣದ ಮುಖ್ಯ ಉದ್ದೇಶ ಸಮಾಜದ ಸುಧಾರಣೆ ಎಂಬುದು ಸರ್ವವಿಧಿತ ಆದ್ದರಿಂದ ಅಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಯಾವುದೇ ಶಿಕ್ಷಣ ಕ್ರಮದ ಮುಖ್ಯ ಉದ್ದೇಶವಾಗಬೇಕು .

ಪ್ರಶ್ನಿಸದ , ಪರಿಶೀಲಿಸದ ಯಾವುದನ್ನೂ ಒಪ್ಪಿಕೊಳ್ಳಬಾರದೆಂಬುದನ್ನು ಶಿಕ್ಷಣ ಹೇಳಿಕೊಡಬೇಕು , ಭಗವದ್ಗೀತೆ , ಬೈಬಲ್ ಅಥವಾ ಖುರಾನ್ ಆಗಿರಲಿ ಅವು ನಮ್ಮ ವೈಜ್ಞಾನಿಕ ಆಲೋಚನೆಗಳನ್ನು ತೃಪ್ತಿಪಡಿಸಬೇಕು – ಈ ದಿಸೆಯಲ್ಲಿ ಶಿಕ್ಷಣ ನೀಡಬೇಕೆಂದು ಡಾ ಏಚ್ಚೆನ್ ಹೇಳಿದ್ದಾರೆ .

ಜ್ಯೋತಿಷ್ಯವು ಅರ್ಥಪೂರ್ಣವೋ ಆರ್ಥರಹಿತವೋ ? ವಿಶ್ಲೇಷಿಸಿ .

ವೈಜ್ಞಾನಿಕ ವಿಚಾರಗಳನ್ನು ಸಂತೃಪ್ತಗೊಳಿಸದ ಜ್ಯೋತಿಷ್ಯವು ಎಂದೂ ವಿಜ್ಞಾನದಂತೆ ಅರ್ಥಪೂರ್ಣವೆನಿಸದು . ಅರ್ಥರಹಿತವಾದುದೆಂಬುದಕ್ಕೆ ಹಲವು ಪುರಾವೆಗಳನ್ನು ಒದಗಿಸಬಹುದು .

ಉದಾಹರಣೆಗೆ , ಅಸ್ತಿತ್ವದಲ್ಲಿರದ ರಾಹು – ಕೇತುಗಳನ್ನು ಜ್ಯೋತಿಷ್ಯವು ಗ್ರಹಗಳೆನ್ನುವುದು , ಸೂರ್ಯ ಒಂದು ನಕ್ಷತ್ರ , ಚಂದ್ರ ಭೂಮಿಯ ಉಪಗ್ರಹ ಆದರೂ ನವಗ್ರಹಗಳಲ್ಲಿ ಇವುಗಳಿಗೆ ಸ್ಥಾನವುಂಟು . ರಾಹುಕಾಲವೂ ಅರ್ಥಹೀನವೇ , ಏಕೆಂದರೆ ರಾಹು ಅಸ್ತಿತ್ವದಲ್ಲಿಲ್ಲ . ಇದಲ್ಲದೆ ಜ್ಯೋತಿಷಿಗಳು ಜಾತಕ ನೋಡಿ ಮಾಡಿಸಿದ ಮದುವೆಗಳು ಮುರಿದು ಬಿದ್ದಿವೆ .

Jyothishya Artha Purnavo

ಭೂಕಂಪ – ಚಂಡಮಾರುತಗಳಿಗೆ ಬಲಿಯಾಗುವ ಸಾವಿರಾರು ಜನರ ಜಾತಕ ಒಂದೇ ರೀತಿಯಾಗಿರಲು ಸಾಧ್ಯವಿಲ್ಲ . ಇಬ್ಬರು ಜ್ಯೋತಿಷಿಗಳ ನಡುವಿನ ಜಾತಕ ಫಲದಲ್ಲಿ ಸಾಮ್ಯತೆಯೇ ಇರದೆ ತಮಾಷೆ ಎನಿಸುತ್ತದೆ . ಈ ಮುಂತಾದ ಕಾರಣಗಳಿಂದಾಗಿ ಜ್ಯೋತಿಷ್ಯ ಅರ್ಥರಹಿತವನ್ನಬಹುದು .

Jyothishya Artha Purnavo

ಪ್ರಥಮ ಪಿಯುಸಿ ಕನ್ನಡ ಜ್ಯೋತಿಷ್ಯ-ಅರ್ಥಪೂರ್ಣವೋ ಅರ್ಥರಹಿತವೋ? | Jyothishya Artha Purnavo
ಪ್ರಥಮ ಪಿಯುಸಿ ಕನ್ನಡ ಜ್ಯೋತಿಷ್ಯ-ಅರ್ಥಪೂರ್ಣವೋ ಅರ್ಥರಹಿತವೋ? | Jyothishya Artha Purnavo

ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

“ ರೈಲು ಹೊರಡಲು ಜ್ಯೋತಿಷ್ಯದ ಅನುಮತಿಯನ್ನು ಯಾರೂ ಕೇಳುವುದಿಲ್ಲ . ”

ಡಾ || ಎಚ್ . ನರಸಿಂಹಯ್ಯನವರು ಬರೆದಿರುವ ‘ ತೆರೆದ ಮನ ‘ ಕೃತಿಯಿಂದ ಆಯ್ದುಕೊಳ್ಳಲಾದ ‘ ಜ್ಯೋತಿಷ್ಯ – ಅರ್ಥಪೂರ್ಣವೋ ಅರ್ಥರಹಿತವೋ ? ‘ ಎಂಬ ವೈಚಾರಿಕ ಲೇಖನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ

ನರಸಿಂಹಯ್ಯನವರು ಜ್ಯೋತಿಷ್ಯವು ರಾಹುಕಾಲ , ಗುಳಿಕಕಾಲ ಮತ್ತು ಯಮಗಂಡಕಾಲಗಳನ್ನು ಅಡಿಪಾಯ ವಾಗಿರಿಸಿಕೊಂಡಿರುವುದನ್ನು ವಿಶ್ಲೇಷಿಸುತ್ತಾ , ಜ್ಯೋತಿಷ್ಯವು ರಾಹುಕಾಲದಲ್ಲಿ ಮದುವೆ , ಪ್ರಯಾಣವನ್ನು ನಿಷೇಧಿಸಿದೆ .

ಆದರೆ ವಾಸ್ತವವಾಗಿ ಎಷ್ಟೋ ವಿಮಾನಗಳು , ನೂರಾರು ರೈಲುಗಳು ರಾಹುಕಾಲದಲ್ಲಿಯೇ ನಿತ್ಯವೂ ಓಡಾಡುತ್ತಿವೆ .

ಅವುಗಳು ರಾಹುಕಾಲವನ್ನು ಕಾಯುವುದಿಲ್ಲ . ಅದೇ ರೀತಿ ರೈಲು ಹೊರಡಲು ಜ್ಯೋತಿಷ್ಯದ ಅನುಮತಿಯನ್ನು ಯಾರೂ ಕೇಳುವುದಿಲ್ಲ ಎಂದು ಹೇಳಿ , ಜ್ಯೋತಿಷ್ಯದ ಅಸ್ತಿತ್ವವನ್ನು ನಿರಾಕರಿಸಿರುವ ಸಂದರ್ಭವಿದಾಗಿದೆ .

 2 ) “ ಶೇ 90 ಕ್ಕೂ ಹೆಚ್ಚು ಜನರ ಮದುವೆಗಳು ಯಾವುದೇ ಜಾತಕವಿಲ್ಲದೆ ನಡೆಯುತ್ತವೆ .

” ಡಾ || ಎಚ್ . ನರಸಿಂಹಯ್ಯನವರ ‘ ಜ್ಯೋತಿಷ್ಯ – ಅರ್ಥಪೂರ್ಣವೋ ಅರ್ಥರಹಿತವೋ ? ‘ ಎಂಬ ಲೇಖನದಿಂದ ಈ ಲೇಖಕರು ಈ ಮೇಲಿನ ಮಾತನ್ನಾಡಿದ್ದಾರೆ . ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ .

ಜಾತಕದ ಆಧಾರದ ಮೇಲೆ ಮದುವೆಗಳು ಫಲಿಸುತ್ತವೆಂಬುದನ್ನು ನಿರಾಕರಿಸುತ್ತಾ ಜಾತಕವನ್ನು ಆಧರಿಸಿ ನಡೆದ ಎಷ್ಟೋ ಮದುವೆಗಳು ವಿಫಲವಾಗಿರುವುದನ್ನು ಉದಾಹರಿಸುವ ಲೇಖಕರು , ಮದುವೆಗಳು ವಧು – ವರರ ಗುಣಸ್ವಭಾವಕ್ಕಿಂತ ಅವರ ಜಾತಕವನ್ನೇ ನಂಬಿ ಮಾಡುವ ಮನುಷ್ಯರ ನಂಬಿಕೆಯನ್ನು ವಿಡಂಬಿಸಿದ್ದಾರೆ .

ಜಾತಕ ಸೂಚಿಸುವುದಕ್ಕಿಂತ ಮೊದಲೇ ವಿಧವೆ – ವಿಧುರರಾದ ಉದಾಹರಣೆಗಳಿವೆ .

ಅಲ್ಲದೆ , ಜಗತ್ತಿನಲ್ಲಿಯೇ ಶೇಕಡ ತೊಂಬತ್ತಕ್ಕೂ ಎಚ್ . ನರಸಿಂಹಯ್ಯನವರು . ಹೆಚ್ಚು ಜನರ ಮದುವೆ ಯಾವುದೇ ಜಾತಕಗಳಿಲ್ಲದೆ ನಡೆದಿವೆ . ಅವರು ಸುಖವಾಗಿಯೂ ಇದ್ದಾರೆ ಎಂದು ಹೇಳಿದ್ದಾರೆ ಲೇಖಕ

“ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ , ”

ಡಾ | ಎಚ್ . ನರಸಿಂಹಯ್ಯನವರು ಬರೆದಿರುವ ‘ ಜ್ಯೋತಿಷ್ಯ- ಅರ್ಥಪೂರ್ಣವೋ ಅರ್ಥರಹಿತವೋ ? ‘ ಎ ೦ ಬ ವೈಚಾರಿಕ ಲೇಖನದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದಾಗಿದೆ . ದಿನಪತ್ರಿಕೆಗಳಲ್ಲಿ ನಾವು ನೋಡುವ ಜ್ಯೋತಿಷಿಗಳ ದಿನಭವಿಷ್ಯವನ್ನು ಉಲ್ಲೇಖಿಸುತ್ತಾ ಲೇಖಕರು ” ಅವು ಓದಲು ತಮಾಷೆಯಾಗಿರುತ್ತದೆ .

ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ನಿಖರತೆ ಇರುವುದಿಲ್ಲ ‘ ಎಂದು ಅಭಿಪ್ರಾಯಪಡುತ್ತಾರೆ . ಏಕೆಂದರೆ ಅವು ಒಂದಕ್ಕಿಂತ ಹೆಚ್ಚು ಅರ್ಥವನ್ನು ಕೊಡುತ್ತಿರುತ್ತದೆ .

ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಇಬ್ಬರು ಜ್ಯೋತಿಷಿಗಳ ಭವಿಷ್ಯವು ಏಕವಾಗಿರದೆ ಭಿನ್ನವಾಗಿದ್ದು , ಕೇವಲ ಊಹೆಗಳಿಂದ ಕೂಡಿರುತ್ತವೆಂದು ಲೇಖಕರು ಹೇಳಿದ್ದಾರೆ .

“ ಜ್ಯೋತಿಷ್ಯ ಒಂದು ವಾಣಿಜ್ಯವಾಗಿದೆ . ”

ಡಾ || ಎಚ್ . ನರಸಿಂಹಯ್ಯನವರು ರಚಿಸಿರುವ ‘ ಜ್ಯೋತಿಷ್ಯ – ಅರ್ಥಪೂರ್ಣವೋ ಅರ್ಥರಹಿತವೋ ? ‘ ಎಂಬ ವಿಚಾರಪೂರ್ಣ ಲೇಖನದಲ್ಲಿ ಲೇಖಕರೇ ಈ ಮೇಲಿನ ಮಾತನ್ನು ಆಡಿದ್ದಾರೆ .

ಜ್ಯೋತಿಷ್ಯವು ವಿಧಿವಾದವನ್ನು ಸಮರ್ಥಿಸುತ್ತದೆ . ಇದನ್ನು ನಂಬುವ ಜನರು ನಿರಾಶೆಯಲ್ಲಿದ್ದಾಗ , ತೊಂದರೆ – ಸಮಸ್ಯೆ ಗಳಲ್ಲಿದ್ದಾಗ ಜ್ಯೋತಿಷಿಗಳ ಮೊರೆಹೋಗುತ್ತಾರೆ .

Jyothishya Artha Purnavo

ಗ್ರಹಗಳ ಅನಿಷ್ಟ ಗತಿಯಿಂದ ಉಂಟಾಗುವ ಘೋರ ಪರಿಣಾಮಗಳನ್ನು ಜನರಿಗೆ ವಿವರಿಸಿ ಹೇಳುವ ಜ್ಯೋತಿಷಿಗಳು ಅಮಂಗಳ ನಿವಾರಣೆಗಾಗಿ ಶಾಂತಿ – ಹೋಮ ಮಾಡಿಸಲು ಜನರಿಂದ ಸಾವಿರಾರುಗಟ್ಟಲೆ ಹಣ ಕೀಳುತ್ತಾರೆ . ಹೀಗೆ ಸಮಸ್ಯೆಗಳನ್ನು ಎದುರಿಸುವ ಜನರನ್ನು ಶೋಷಿಸಿ ಜೇಬುತುಂಬಿಸಿಕೊಳ್ಳುವ ಜ್ಯೋತಿಷಿಗಳಿಂದಾಗಿ ಜ್ಯೋತಿಷ್ಯವು ಒಂದು ವಾಣಿಜ್ಯವಾಗಿವೆ .

1st PUC kannada notes, Pdf, Summary, Chapter 18

ಜ್ಯೋತಿಷಿಗಳಿಗೆ ಇದು ಬದುಕುವ ಮಾರ್ಗವಾಗಿದೆ ಎಂದು ನರಸಿಂಹಯ್ಯನವರು ವಿವರಿಸಿದ್ದಾರೆ .

“ ಸಮಾಜದ ಸುಧಾರಣೆ ಶಿಕ್ಷಣದ ಒಂದು ಉದ್ದೇಶ .

ಡಾ || ಎಚ್ . ನರಸಿಂಹಯ್ಯನವರು ಬರೆದಿರುವ ‘ ಜ್ಯೋತಿಷ್ಯ – ಅರ್ಥಪೂರ್ಣವೋ ಅರ್ಥರಹಿತವೋ ? ‘ ಎಂಬ ಲೇಖನದ ಅಂತ್ಯಭಾಗದಲ್ಲಿ ಲೇಖಕರೇ ಈ ಮೇಲಿನ ಮಾತನ್ನು ಆಡಿದ್ದಾರೆ .

ಜ್ಯೋತಿಷ್ಯವನ್ನು ಅವೈಜ್ಞಾನಿಕವೆಂದು ತೀರ್ಮಾನಿಸಿದ ಎಚ್ . ನರಸಿಂಹಯ್ಯನವರು ಶಿಕ್ಷಣವು ಅಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕೆಂದು ಅಪೇಕ್ಷೆಪಟ್ಟಿದ್ದಾರೆ . ಯಾವುದನ್ನೂ ಪ್ರಶ್ನಿಸದ , ಪರಿಶೀಲಿಸದ ಒಪ್ಪಿಕೊಳ್ಳಬಾರದು .

ಇದು ಶಿಕ್ಷಣದ ಮೂಲಕ ಒದಗಬೇಕು . ಸಮಾಜ ಸುಧಾರಣೆಯನ್ನೇ ಮುಖ್ಯ ಆಶಯವಾಗುಳ್ಳ ಶಿಕ್ಷಣವು     

ಅವಿದ್ಯಾವಂತ ಮೂಢನಂಬಿಕೆಯುಳ್ಳವನನ್ನು ವಿದ್ಯಾವಂತ ಮೂಢನಂಬಿಕೆಯುಳ್ಳವನನ್ನಾಗಿ ಪರಿವರ್ತಿಸುವಂತಾಗಬಾರದು ಎಂಬುದು ಲೇಖಕರ ಆಶಯವಾಗಿದೆ .

ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಮೂಲಕ ಶಿಕ್ಷಣವು ಸಮಾಜವನ್ನು ಸುಧಾರಣೆ ಮಾಡಬೇಕೆಂಬ ಅಪೇಕ್ಷೆಯನ್ನು ಲೇಖಕರು ವ್ಯಕ್ತಪಡಿಸಿದ್ದಾರೆ .

ಇತರೆ ಪ್ರಮುಖ ವಿಷಯಗಳ ಲಿಂಕ್

ಗಾಂಧಿ ಪಾಠದ ನೋಟ್ಸ್

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

ಹಲುಬಿದಳ್ ಕಲ್ಮರಂ ಕರಗುವಂತೆ notes

1 thoughts on “ಜ್ಯೋತಿಷ್ಯವು ಅರ್ಥಪೂರ್ಣವೋ? ಅರ್ಥರಹಿತವೋ? | Jyothishya Artha Purnavo

Leave a Reply

Your email address will not be published. Required fields are marked *