ಶಿಶು ಮಕ್ಕಳಿಗೊಲಿದ ಮಾದೇವ ಪ್ರಥಮ ಪಿಯುಸಿ ನೋಟ್ಸ್ | Shishu Makkaligolida Mahadeva Kannada Notes

ಶಿಶು ಮಕ್ಕಳಿಗೊಲಿದ ಮಾದೇವ ಪ್ರಥಮ ಪಿಯುಸಿ ನೋಟ್ಸ್ | Shishu Makkaligolida Mahadeva Kannada Notes

Shishu Makkaligolida Mahadeva Kannada Notes, Download Chapter 6 ಶಿಶು ಮಕ್ಕಳಿಗೊಲಿದ ಮಾದೇವ Questions and Answers Pdf, Notes, Summary, ಪ್ರಥಮ ಪಿ.ಯು.ಸಿ ಶಿಶು ಮಕ್ಕಳಿಗೊಲಿದ ಮಾದೇವ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st Puc Shishu Makkaligolida Madeva Kannada Notes Question Answer Summary Mcq Pdf Download in Kannada Medium Karnataka State Syllabus , Kseeb Solutions For Class 11 Kannada Poem 6 Notes 1st Puc Kannada 6th Poem Notes Shishu Makkaligolida Madeva Kannada Notes Pdf ಸಿಸು ಮಕ್ಕಳಿಗೊಲಿದ ಮಾದೇವ ಸಾರಾಂಶ Shishu Makkaligolida Madeva Question Answer Pdf

Shishu Makkaligolida Mahadeva Kannada Notes

ಕವಿ ಪರಿಚಯ
ಪಿ. ಕೆ. ರಾಜಶೇಖರ್ ಅವರು ಕನ್ನಡದ ಜಾನಪದ ವಿದ್ವಾಂಸರಲ್ಲಿ ಪ್ರಮುಖರು.
ತಂದೆ : ಡಿ. ಕೆಂಪೇಗೌಡ
ತಾಯಿ : ಪುಟ್ಟಮ್ಮ
ಕೃತಿ: ಸುಮಾರು ೮೫ಕ್ಕೂ ಕವಿತೆ, ಭಾಷಾಶಾಸ್ತ್ರ, ಜಾನಪದ, ಮಕ್ಕಳ ಸಾಹಿತ್ಯ, ಜೀವನಚರಿತ್ರೆ, ಅನುವಾದ, ಸಂಪಾದಿತ ಕೃತಿ ಮುಂತಾದುವುಗಳನ್ನು ರಚಿಸಿದ್ದಾರೆ.
ಸೇವೆ : ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶ್ರೇಷ್ಠ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಕಟಣೆ: ಸಂಶೋಧಕರಾಗಿರುವಾಗಲೇ 1500 ಪುಟಗಳ ಬೃಹತ್ಗಾತ್ರದ “ಮಲೆಯ ಮಹದೇಶ್ವರ ಜನಪದ ಮಹಾಕಾವ್ಯ”ವನ್ನು ವಕ್ತೃಗಳಿಂದ ಸಂಗ್ರಹಿಸಿ ಪ್ರಕಟಿಸಿ, ಈ ಮೇರುಕೃತಿಯ ಜನಪ್ರಿಯತೆಗೆ ಕಾರಣಕರ್ತೃವಾಗಿದ್ದಾರೆ.

ಸಂಗ್ರಹಣೆ: ನೂರಾರು ಗೀತೆ , ನಾಟಕ , ಒಗಟು , ಗಾದೆಗಳ ಸಂಗ್ರಹವನ್ನು ಮಾಡಿರುವರು .ಅವರು ಸಂಗ್ರಹಿಸಿರುವ ‘ ಮಲೆಯ ಮಾದೇಶ್ವರ ಎಂಬ ಮಹಾಕಾವ್ಯದಿಂದ ‘ ಶಿಶು ಮಕ್ಕಳಿಗೊಲಿದ ಮಾದೇವ ಎಂಬ ಪ್ರಸ್ತುತ ಭಾಗವನ್ನು ಆಯ್ದುಕೊಳ್ಳಲಾಗಿದೆ .

Shishu Makkaligolida Madeva Question Answer Pdf

ಶಿಶು ಮಕ್ಕಳಿಗೊಲಿದ ಮಾದೇವ ಪ್ರಥಮ ಪಿಯುಸಿ ನೋಟ್ಸ್ | Shishu Makkaligolida Mahadeva Kannada Notes
ಶಿಶು ಮಕ್ಕಳಿಗೊಲಿದ ಮಾದೇವ ಪ್ರಥಮ ಪಿಯುಸಿ ನೋಟ್ಸ್ | Shishu Makkaligolida Mahadeva Kannada Notes

ಒಂದು ವಾಕ್ಯದಲ್ಲಿ ಉತ್ತರಿಸಿ

1st PUC Kannada Notes Shishu Makkaligolida Mahadeva

ಮಾದೇವ ಎಲ್ಲಿ ಒದಗಿದ್ದಾನೆ ?
ಮಾದೇವನು ಮೂಡಾಲ ಮಲೆಯಲ್ಲಿ ಯೋಗದಲ್ಲಿ ಒರಗಿದ್ದಾನೆ .

ಯಾರ ಮಕ್ಕಳನ್ನು ಮಾದೇವ ದತ್ತುವಾಗಿ ಪಡೆದನು ?
ಸತ್ಯವಂತೆ ಸಂಕಷ್ಟ ಮಕ್ಕಳನ್ನು ಮಾದೇವ ದತ್ತುವಾಗಿ ಪಡೆದನು .

ತಿಮಕ್ಕಳು ಹೂ ತರಲು ಎಲ್ಲಿಗೆ ಹೋಗಿದ್ದರು ?

ಶಿಶುಮಕ್ಕಳು ಹೂ ತರಲು ಕಡ್ಡಿಹಳ್ಳಕ್ಕೆ ಹೋಗಿದ್ದರು .

ಮಾದೇವ ಮಕ್ಕಳ ಸತ್ಯ ನೋಡಲು ಏನು ಮಾಡಬೇಕೆನ್ನುತ್ತಾನೆ ?
ಮಾಯದಂತಹ ಮಳೆ ಸುರಿಸಿ ಮಕ್ಕಳ ಸತ್ಯವನ್ನು ಪರೀಕ್ಷಿಸಬೇಕೆಂದರು .
ಮಾದೇಶ್ವರರು ಮಳೆಯನ್ನು ಕಳುಹಿಸು ಎಂದು ಯಾರನ್ನು ಕೇಳುತ್ತಾರೆ ?
ಮಾದೇಶ್ವರರು ಮಳೆಯನ್ನು ಕಳುಹಿಸಲು ದೇವೇಂದ್ರನನ್ನು ಕೇಳಿದರು .

ವಾಯುದೇವನನ್ನು ಎಂತಹ ಸುಂಟರಗಾಳಿ ಕಳುಹಿಸು ಎಂದು ಮಾದೇವ ಕೇಳುತ್ತಾನೆ ?

ಮಾದೇವ ವಾಯುದೇವನನ್ನು ಜಗತ್ತನ್ನೆಲ್ಲಾ ಬುಗುರಿಯಂತೆ ಗರಗರನೆ ತಿರುಗಿಸುವಂತಹ ಸುಂಟರಗಾಳಿಯ ಕಳುಹಿಸಬೇಕೆಂದು ಕೇಳಿದನು .

ಗಂಗೆ ಸುರಿಯುವ ರಭಸಕ್ಕೆ ಏನೇನು ಒಂದಾದವು ?

ಗಂಗೆ ಸುರಿಯುವ ರಭಸಕ್ಕೆ ಆಕಾಶ – ಭೂಮಿಗಳು ಒಂದಾದವು .

ಗಂಗಮ್ಮ ಏನನ್ನು ಹೊತ್ತುಕೊಂಡು ಹೋದಳು ?

ಗಂಗಮ್ಮ ಮದ್ದಾನೆಗಳ ಹಿಂಡನ್ನೇ ಹೊತ್ತುಕೊಂಡು ಹೋದಳು .

ನೀರಿನ ಸುಳಿಗೆ ಸಿಲುಕಿದ ಮಾದೇವ ಹೇಗೆ ತಿರುಗಿದನು ?
ನೀರಿನ ಸುಳಿಗೆ ಸಿಲುಕಿದ ಮಾದೇವ ಗರಗರನೆ ತಿರುಗಿದನು .

ಕಾರೆಂಬೊ ಕತ್ತಲಲ್ಲಿ ಎಂತಹ ಮಳೆ ಬಂತು ?

ಕಾರೆಂಬೊ ಕತ್ತಲಲ್ಲಿ ಬೋರೆಂಬೊ ಮಳೆಯು ಬಂದಿತು .

ಮಾದೇವ ಯಾವುದಕ್ಕೆ ಒಲಿದನು ?
ಮಾದೇವ ಮಕ್ಕಳ ಪ್ರೇಮಕ್ಕೆ ಒಲಿದನು .

ನಂಬದವರ ಮನದಲ್ಲಿ ಮಾದೇವ ಹೇಗಿರುತ್ತಾನೆ ?
ನಂಬಿದವರ ಮನದಲ್ಲಿ ಮಾದೇವ ತುಂಬಿ ತುಳುಕಾಡುತ್ತಾನೆ .

ಶಿಶು ಮಕ್ಕಳಿಗೊಲಿದ ಮಾದೇವ ಪ್ರಥಮ ಪಿಯುಸಿ ನೋಟ್ಸ್ | Shishu Makkaligolida Mahadeva Kannada Notes
ಶಿಶು ಮಕ್ಕಳಿಗೊಲಿದ ಮಾದೇವ ಪ್ರಥಮ ಪಿಯುಸಿ ನೋಟ್ಸ್ | Shishu Makkaligolida Mahadeva Kannada Notes

2-3 ವಾಕ್ಯಗಳಲ್ಲಿ ಉತ್ತರಿಸಿ

ಮಾದೇವನ ಶಿಶುಮಕ್ಕಳ ಹೆಸರೇನು ?
ಬ್ಯಾಡರ ಕನ್ನಯ್ಯ , ಕಾರಯ್ಯ ಮತ್ತು ಬಿಲ್ಲಯ್ಯ ಎಂಬುವು ಮಾದೇವನ ಶಿಶುಮಕ್ಕಳ ಹೆಸರಾಗಿದ್ದವು .

ಸಿಡಿಲು – ಗುಡುಗುಗಳನ್ನು ಕಳುಹಿಸು ಎಂದು ಮಾದೇವ ಯಾರನ್ನು ಕೇಳುತ್ತಾನೆ ?
ಮಾದೇವನು ಗುಡುಗಾಜಮ್ಮನನ್ನು ಕರೆದು ಗುಡುಗನ್ನು ಕಳಿಸುವಂತೆ ಹೇಳಿದನು . ಅವಳ ಮಗನಾದ ಬೊಮ್ಮರಾಯಪ್ಪ ನನ್ನು ಕರೆದು ಭಯಂಕರವಾದ ಸಿಡಿಲನ್ನು ಕಳಿಸಲು ಹೇಳಿದನು .

Shishu Makkaligolida Mahadeva Kannada Notes

ಮಳೆಯನ್ನು ನೋಡಿ ಕನ್ನಯ್ಯ ತನ್ನೊಳಗೆ ಏನೆಂದುಕೊಳ್ಳುತ್ತಾನೆ ?
ಮಾಯದಂತಹ ಮಳೆಗೆ ದೊಡ್ಡ ಅಪ್ಪಾನ ಮುಳುಗೋದ ಮೇಲೆ ನಾವು ಬಾಳಬಹುದೇ ಮಾದೇವ ? ಎಂದು ಮಳೆಯನ್ನು ಕಂಡ ಕನ್ನಯ್ಯ ಮನದೊಳಗೆ ಯೋಚಿಸುವನು . ಮಳೆಯ ಕಾರಣ ತಿಳಿಯದು , ಆದರೆ ಈ ಕೆಟ್ಟಗಂಗೆಯು ನಮ್ಮನ್ನು ಬಿಡುವುದಿಲ್ಲ ನಿಂದವನು ಯೋಚಿಸಿದನು .

ಶಿಶು ಮಕ್ಕಳು ಬಾಯಿ ಬಾಯಿ ಏಕೆ ಬಡಿದುಕೊಳ್ಳುತ್ತಾರೆ ?
ಮಾಯದಂತಹ ಮಳೆಯ ಪರಿಣಾಮ , ಪ್ರವಾಹದ ರೂಪದಲ್ಲಿ ಬಂದ ಹುಚ್ಚು ಗಂಗಮ್ಮ ಮಾದೇಶ್ವರನ ಗುಡಿಯನ್ನು ಮುಳುಗಿಸಿದ್ದನ್ನು ಕಂಡು ಶಿಶು ಮಕ್ಕಳು ಬಾಯಿ ಬಾಯಿ ಬಡಿದುಕೊಂಡರು
ಬಲಿಯ ಕಲ್ಲನ್ನು ಕನ್ನಯ್ಯ ಬಲವಾಗಿ ಹಿಡಿದುಕೊಳ್ಳುವುದು ಏಕೆ ?
ಸುಳಿಯಲ್ಲಿ ಸಿಕ್ಕಿ ಗಿರಗಿರನೆ ಸುತ್ತುವ ಮಾದೇವನನ್ನು ಕಂಡು ಕನ್ನಯ್ಯ ಈ ಗಂಗೆಯು ನನ್ನಪ್ಪ ಮಾದೇವನನ್ನು ಎಳೆದಂತೆ ನನ್ನನ್ನೂ ಎಳೆದೊಯ್ಯಬಹುದೆಂದು ಯೋಚಿಸಿ , ಬಲಿಯ ಕಲ್ಲನ್ನು ಬಲವಾಗಿ ತಬ್ಬಿಕೊಂಡನು .

ಶಿಶುಮಕ್ಕಳು ನಾವು ಸತ್ತರೂ ಚಿಂತಿಲ್ಲ ಎನ್ನಲು ಕಾರಣವೇನು ?
ಸುಳಿಗೆ ಸಿಲುಕಿ ಗಿರಗಿರನೆ ತಿರುಗುತ್ತಿರುವ ಮಾದೇಶ್ವರನನ್ನು ಹಿಡಿದುಕೊಳ್ಳುವಾಗ ನಾವು ಸತ್ತರೂ ಚಿಂತೆಯಿಲ್ಲ ಎಂದು ಶಿಶುಮಕ್ಕಳು ಹೇಳಿದರು . ಅವರಿಗೆ ತಮ್ಮ ಪ್ರಾಣಕ್ಕಿಂತಲೂ ಮಾದೇಶ್ವರನನ್ನು ಕಾಪಾಡುವುದು ಮುಖ್ಯವೆನಿಸಿತು .

ಮಾದೇವ ತನ್ನ ಶಿಶು ಮಕ್ಕಳಿಗೆ ಏನೇನು ನೀಡಿ ಸಲಹಿದನು ?
ಮಾದೇವ ತನ್ನ ಶಿಶುಮಕ್ಕಳಿಗೆ ಹಾಲು , ಬೆಣ್ಣೆ , ತುಪ್ಪ ಸಕ್ಕರೆಗಳನ್ನು ನೀಡಿ ಸಲಹಿದನು .

ಶಿಶುಮಕ್ಕಳ ಪ್ರೇಮಕ್ಕೆ ಮಾದೇವ ಹೇಗೆ ಒಲಿದನು ? ಶಿಶುಮಕ್ಕಳ ಪ್ರೇಮಕ್ಕೆ ಸೋತ ಮಾದೇವ ಶಿಶುಮಕ್ಕಳನ್ನು ತಮ್ಮ ಎಡಬಲದಲ್ಲಿ ತಬ್ಬಿಕೊಳ್ಳುವನು . ಅವರನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಗುಡಿಗೆ ಬಂದನು .

ಶಿಶು ಮಕ್ಕಳಿಗೊಲಿದ ಮಾದೇವ ಪ್ರಥಮ ಪಿಯುಸಿ ನೋಟ್ಸ್ | Shishu Makkaligolida Mahadeva Kannada Notes
ಶಿಶು ಮಕ್ಕಳಿಗೊಲಿದ ಮಾದೇವ ಪ್ರಥಮ ಪಿಯುಸಿ ನೋಟ್ಸ್ | Shishu Makkaligolida Mahadeva Kannada Notes

FAQ

ಮಾದೇವ ಎಲ್ಲಿ ಒದಗಿದ್ದಾನೆ ?

ಮಾದೇವನು ಮೂಡಾಲ ಮಲೆಯಲ್ಲಿ ಯೋಗದಲ್ಲಿ ಒರಗಿದ್ದಾನೆ .

ಯಾರ ಮಕ್ಕಳನ್ನು ಮಾದೇವ ದತ್ತುವಾಗಿ ಪಡೆದನು ?

ಸತ್ಯವಂತೆ ಸಂಕಷ್ಟ ಮಕ್ಕಳನ್ನು ಮಾದೇವ ದತ್ತುವಾಗಿ ಪಡೆದನು.

ಇತರೆ ವಿಷಯಗಳನ್ನು ಓದಿರಿ

Leave a Reply

Your email address will not be published. Required fields are marked *