2024 ಕದಡಿದ ಸಲಿಲಂ ತಿಳಿವಂದದೆ ಕನ್ನಡ ನೋಟ್ಸ್‌ | 2nd PUC Kannada Kadadida Salilam Tilivandade Notes

ಕದಡಿದ ಸಲಿಲಂ ತಿಳಿವಂದದೆ notes | 2nd puc kannada notes 1st chapter

ಕದಡಿದ ಸಲಿಲಂ ತಿಳಿವಂದದೆ Notes , ಕದಡಿದ ಸಲಿಲಂ ತಿಳಿವಂದದೆ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು 2nd puc kannada 1st chapter Kadadida Salilam Tilivandade poem question answer Notes pdf 2022 in kannada, ಕದಡಿದ ಸಲಿಲಂ ತಿಳಿವಂದದೆ ಕನ್ನಡ ನೋಟ್ಸ್‌ 2 PUC Kadadida Salilam Tilivandade Kannada Notes.

ಕದಡಿದ ಸಲಿಲಂ ತಿಳಿವಂದದೆ Notes

Kadadida Salilam Tilivandade Kannada Question Answer Free Notes | ಕದಡಿದ ಸಲಿಲಂ ತಿಳಿವಂದದೆ Notes
Kadadida Salilam Tilivandade Kannada Question Answer Free Notes | ಕದಡಿದ ಸಲಿಲಂ ತಿಳಿವಂದದೆ Notes

ಒಂದು ಅಂಕದ ಪ್ರಶ್ನೆಗಳು kadadida salilam tilivandade summary in kannada

ರಾವಣನು ಯಾವ ರೀತಿ ಚಲಿಸದೆ ಇದ್ದನು ?

ರಾವಣನು ಧ್ರುವಮಂಡಲದಂತೆ ಚಲಿಸದೆ ಇದ್ದನು .

ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು ?

ಬಹುರೂಪಿಣಿ ವಿದ್ಯೆ ಎಂಬ ದೇವತೆಯು ರಾವಣನ ಎದುರು ಪ್ರತ್ಯಕ್ಷವಾಯಿತು .

ಯಾರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು ?

ವಿದ್ಯಾದೇವತೆಯು ರಾಮಲಕ್ಷ್ಮಣರನ್ನು ತಾನು ಕೊಲ್ಲುವುದಿಲ್ಲವೆಂದು ಹೇಳಿತು .

ಮಯತನೂಜೆ ಎಂದರೆ ಯಾರು ?

ಮಯನ ಮಗಳಾದ ಮಂಡೋದರಿಯನ್ನು ‘ ಮಯತನೂಜೆ ‘ ಎನ್ನುವರು .

ರಾವಣನು ಮಹಾಪೂಜೆಯನ್ನು ಎಲ್ಲಿ ಸಲ್ಲಿಸಿದನು ?

ರಾವಣನು ಶಾಂತಿಜಿನಭವನದೊಳಗೆ ಮಹಾಪೂಜೆಯನ್ನು ಸಲ್ಲಿಸಿದನು .

ಸೀತೆಯನ್ನು ರಾವಣ ಎಲ್ಲಿರಿಸಿದ್ದನು ?

ರಾವಣನು ಪ್ರಮದವನದಲ್ಲಿ ಸೀತೆಯನ್ನು ಇರಿಸಿದ್ದನು .

ರಾವಣನ ಆಗಮನವನ್ನು ಸೀತೆಗೆ ತೋರಿದವರು ಯಾರು ?

ಪ್ರಮದವನದಲ್ಲಿದ್ದ ರಾಕ್ಷಸ ಸ್ತ್ರೀಯರು ಸೀತೆಗೆ ರಾವಣನ ಆಗಮನವನ್ನು ತೋರಿದರು .

ಸೀತೆ ಯಾವುದನ್ನು ಹುಲ್ಲಿಗೆ ಸಮಾನವೆಂದು ಭಾವಿಸಿದಳು ?

ಸೀತೆಯು ರಾವಣನ ರೂಪವನ್ನು ಹುಲ್ಲಿಗೆ ಸಮಾನವೆಂದು ಭಾವಿಸಿದಳು .

ಸೀತೆ ರಾವಣನನ್ನು ಏನೆಂದು ಬೇಡಿಕೊಂಡಳು ?

ಸೀತೆಯು “ ಶ್ರೀರಾಮನ ಆಯುಃಪ್ರಾಣ ಇರುವವರೆಗೂ ಇತ್ತ ದೆಂದು ” ರಾವಣನನ್ನು ಬೇಡಿದಳು .

ರಾವಣನಿಗೆ ಯಾರ ಬಗ್ಗೆ ವೈರಾಗ್ಯ ಮೂಡಿತು ?

ಸೀತೆಯ ಬಗ್ಗೆ ರಾವಣನಿಗೆ ವೈರಾಗ್ಯ ಮೂಡಿತು .

ವಿಭೀಷಣ ಯಾರು ?

ವಿಭೀಷಣ ರಾವಣನ ಕಿರಿಯ ಸಹೋದರ .

ಸೌಮಿತ್ರಿ ಎಂದರೆ ಯಾರು ?

ಸುಮಿತ್ರೆಯ ಮಗನಾದ ಲಕ್ಷ್ಮಣನನ್ನೇ ಸೌಮಿತ್ರಿ ಎನ್ನುವರು .

ಯಾವಾಗ ಸೀತೆಯನ್ನು ರಾಮನಿಗೆ ಕೊಡುವೆನೆಂದು ರಾವಣನು ಯೋಚಿಸುತ್ತಾನೆ ?

ಯುದ್ಧದಲ್ಲಿ ಶ್ರೀರಾಮನನ್ನು ಸೆರೆಹಿಡಿದು ತಂದು ಆನಂತರ ಅವನಿಗೆ ಸೀತೆ ಯನ್ನು ಕೊಡುವೆನೆಂದು ರಾವಣ ಯೋಚಿಸುತ್ತಾನೆ.

Kadadida Salilam Tilivandade Kannada Question Answer Free Notes | ಕದಡಿದ ಸಲಿಲಂ ತಿಳಿವಂದದೆ Notes
Kadadida Salilam Tilivandade Kannada Question Answer Free Notes | ಕದಡಿದ ಸಲಿಲಂ ತಿಳಿವಂದದೆ Notes

2nd puc kannada kadadida salilam tilivandade notes

ಎರಡು ಅಂಕಗಳ ಪ್ರಶ್ನೆಗಳು ಕದಡಿದ ಸಲಿಲಂ ತಿಳಿವಂದದೆ Notes Kannada

ಬಹುರೂಪಿಣಿ ವಿದ್ಯೆಯು ರಾವಣನಿಗೆ ಏನೆಂದು ಆಶ್ವಾಸನೆಯಿತ್ತಿತು ?

ಬಹುರೂಪಿಣಿ ವಿದ್ಯೆಯು “ ಚಕ್ರಧಾರಿಯಾದ ಲಕ್ಷ್ಮಣ ಹಾಗೂ ಚರಮದೇಹ ಧಾರಿಯಾದ ರಾಮಸ್ವಾಮಿ ಇವರಿಬ್ಬರನ್ನುಳಿದು ಮಿಕ್ಕೆಲ್ಲರನ್ನು ನಾಶಗೊಳಿಸುತ್ತೇನೆ ” ಎಂದು ಆಶ್ವಾಸನೆಯಿತ್ತಿತು .

ರಾವಣ ತನ್ನ ಅಂತಃಪುರದ ಸ್ತ್ರೀಯರನ್ನು ಹೇಗೆ ಸಂತೈಸಿದನು ?

ರಾವಣನು “ ಮಂಡೋದರಿ ಮತ್ತು ಇತರ ಸ್ತ್ರೀಯರಿಗೆ ಭಂಗವನ್ನು ಮಾಡಿದ ಅಂಗದಾದಿಗಳನ್ನು ಭೂಭಂಗ ಮಾತ್ರದಲ್ಲಿ ಸೆರೆಗೈದು ತರುತ್ತೇನೆ ” ಎಂದು ತನ್ನ ಅಂತಃಪುರದ ಸ್ತ್ರೀಯರನ್ನು ಸಂತೈಸಿದನು .

ಸೀತೆಯ ತಲ್ಲಣಕ್ಕೆ ಕಾರಣವೇನು ?

ರಾವಣನ ಆಗಮನದ ಸುದ್ದಿ ತಿಳಿದ ಸೀತೆಯು , ರಾಮ – ಲಕ್ಷ್ಮಣರಿಗೆ ಸಂಬಂಧಿಸಿ ದಂತೆ ಇನ್ನೇನು ಕೆಟ್ಟವಾರ್ತೆಯನ್ನು ಕೇಳಬೇಕಾಗಿದೆಯೋ ಎಂದು ತಲ್ಲಣಗೊಂಡಳು .

ರಾವಣನು ಸೊಕ್ಕಿನಿಂದ ಸೀತೆಯನ್ನುದ್ದೇಶಿಸಿ ಆಡಿದ ಮಾತುಗಳಾವುವು ?

ರಾವಣನು ಸೀತೆಯನ್ನುದ್ದೇಶಿಸಿ “ ಬಹುರೂಪಿಣಿ ವಿದ್ಯೆಯು ವಶವಾಗಿರುವುದ ರಿಂದ ತನಗೆ ಸಮಬಲರಾದವರು ಮೂರುಲೋಕದಲ್ಲಿ ಯಾರೂ ಇಲ್ಲ . ಯುದ್ಧದಲ್ಲಿ ತನಗೆ ಅಸಾಧ್ಯವಾದ ಪ್ರತಿಪಕ್ಷವಿಲ್ಲ . ಇನ್ನಾದರೂ ಸೀತೆ ರಾಮ ವ್ಯಾಮೋಹವನ್ನು ಬಿಟ್ಟು , ತನಗೆ ಒಲಿದು ಸಾಮ್ರಾಜ್ಯ ಸುಖವನ್ನು ಅನುಭವಿಸಬೇಕೆಂದು ” ಸೊಕ್ಕಿನಿಂದ ನುಡಿದನು .

ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿದ ಸಂದರ್ಭವನ್ನು ವಿವರಿಸಿ ,

ಸೀತೆಯು ರಾವಣನ ಕಣ್ಣೆದುರಲ್ಲೇ ಮೂರ್ಛತಪ್ಪಿ ನೆಲಕ್ಕೆ ಒರಗಿದಾಗ ರಾವಣನಿಗೆ ಸೀತೆಯಲ್ಲಿ ವೈರಾಗ್ಯ ಮೂಡಿತು . ಕದಡಿಹೋದ ನೀರು ತನಗೆ ತಾನೆ ತಿಳಿಯಾಗುವಂತೆ , ರಾವಣನಲ್ಲಿ ಸೀತೆಯ ಮೇಲಿನ ವ್ಯಾಮೋಹ ದೂರಾಗಿ ವೈರಾಗ್ಯ ಮೂಡಿತು .

ರಾವಣನು ತನ್ನ ಆಪ್ತರನ್ನು ಕುರಿತು ಏನೆಂದು ಹೇಳಿದನು ?

ರಾವಣನು ತನ್ನ ಆಪ್ತರಿಗೆ “ ತನ್ನ ನಿಶ್ಚಲಗುಣದಿಂದ ಸೀತೆಯು ನನ್ನ ಬಗ್ಗೆ ಗಮನಹರಿಸಲಿಲ್ಲ . ನನ್ನ ದಿವ್ಯಭೂಷಣ ವಸನಗಳನ್ನಾಗಲೀ , ಖೇಚರ ರಾಜ್ಯವನ್ನಾಗಲೀ ಬಯಸದೆ ಅವನ್ನು ತೃಣ ಸಮಾನವಾಗಿ ಕಂಡಳು . ಹೀಗಾಗಿ ಪೌರುಷಪ್ರಣಯಿಯಾದ ನಾನು ಪಾಪಗೈದು ಇವಳನ್ನು ಬಯಸುತ್ತೇನೆಯೇ ? ” ಎಂದು ಹೇಳಿದನು .

ಈಗಲೇ ಸೀತೆಯನ್ನು ರಾಮನಿಗೊಪ್ಪಿಸಲು ರಾವಣ ಬಯಸಲಿಲ್ಲವೇಕೆ ?

ಈಗಲೇ ಸೀತೆಯನ್ನು ರಾವಣನಿಗೊಪ್ಪಿಸಿಬಿಟ್ಟರೆ , ಇದುವರೆಗೆ ತಾನು ತೋರಿದ ಕಡುಮ – ಕಟ್ಟಾಯ ಬೀರಬಿರುದುಗಳು ವ್ಯರ್ಥಗೊಳ್ಳುತ್ತವೆ . ಹಾಗಾಗಬಾರದೆಂದು ರಾವಣನು ಬಯಸಿದನು .

ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ ?

ರಾವಣನು ಅಂತಿಮವಾಗಿ ಎರಡೂ ಕಡೆಯ ಸೇನೆಗಳು ತನ್ನ ತೋಳಲವನ್ನು ಕಂಡು ಹೊಗಳುವಂತೆ ಯುದ್ಧಗೈದು , ಸೌಮಿತ್ರಿ ರಾಘವರನ್ನು ವಿರಥರನ್ನಾಗಿಸಿ ಸೆರೆಗೈದು ತಂದು ಆನಂತರ ಸೀತೆಯನ್ನು ರಾಮನಿಗೆ ಒಪ್ಪಿಸುತ್ತೇನೆ ಎಂಬ ನಿರ್ಧಾರಕ್ಕೆ ಬಂದನು .

Kadadida Salilam Tilivandade Kannada Question Answer Free Notes | ಕದಡಿದ ಸಲಿಲಂ ತಿಳಿವಂದದೆ Notes
Kadadida Salilam Tilivandade Kannada Question Answer Free Notes | ಕದಡಿದ ಸಲಿಲಂ ತಿಳಿವಂದದೆ Notes

4 ಅಂಕಗಳ ಪಶ್ನೆಗಳು ಕದಡಿದ ಸಲಿಲಂ ತಿಳಿವಂದದೆ Notes KSEEB

೧. ರಾವಣನು ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಂಡ ಸಂದರ್ಭವನ್ನು ವಿವರವಾಗಿ ಬರೆಯಿರಿ

ರಾವಣನು ಶಾಂತಿಜಿನಭವನದೊಳಗೆ ಬಹುರೂಪಿಣೀ ವಿದ್ಯೆಯನ್ನು ಒಲಿಸಿ ಕೊಳ್ಳಲು ಧ್ಯಾನ ಮಾಡುತ್ತಿದ್ದಾಗ ಅಂಗದಾದಿಗಳು ಅವನ ಅಂತಃಪುರಕ್ಕೆ ಬಂದು ಮಂಡೋದರಿ ಮತ್ತಿತರ ಸ್ತ್ರೀಯರಿಗೆ ಅನೇಕ ಬಗೆಯ ತೊಂದರೆ ನೀಡಿದರು .

ರಕ್ಷಣೆಗಾಗಿ ಅಂತಃಮರದ ಸ್ತ್ರೀಯರು ಕಿರುಚಿದರೂ ರಾವಣನು ಧ್ರುವಮಂಡಲದಂತೆ ಚಲಿಸದೆ ಚಿತ್ತನಿರೋಧಗೈದು , ಬಹುರೂಪಿಣೀ ವಿದ್ಯೆಯನ್ನು ಕೈವಶಮಾಡಿಕೊಂಡನು . ಮುಂಗಾರಿನ ಸಿಡಿಲಿನಂತೆ ಪ್ರತ್ಯಕ್ಷವಾದ ದೇವತೆಯು ರಾವಣನೆದುರು ಪ್ರತ್ಯಕ್ಷವಾಗಿ ಯಮನ ನಾಲಗೆಯೇ ನುಡಿಯುತ್ತಿರುವಂತೆ ‘ ಬೆಸಸು ಬೆಸಸು ‘ ಎಂದು ಕೇಳಿತು .

ರಾವಣನ ಮನೋಭಿಲಾಶೆಯನ್ನು ಅರಿತ ಅನಂತರ “ ಚಕ್ರಧಾರಿಯಾದ ಲಕ್ಷಣ ಹಾಗೂ ಚರುಮದೇಹಧಾರಿಯಾದ ರಾಮಸ್ವಾಮಿ ಇವರಿಬ್ಬರನ್ನು ಉಳಿದು ಮಿಕ್ಕೆಲ್ಲರನ್ನು ನಾಶಗೊಳಿಸುತ್ತೇನೆ ‘ ಎಂದು ಆಶ್ವಾಸನೆಯಿತ್ತಿತು . ಆಗ ರಾವಣನು “ ಮಿಕ್ಕೆಲ್ಲರ ಸಾವಿನಿಂದ ನನಗೇನು ಪ್ರಯೋಜನ ? ” ಎನ್ನುತ್ತಾ ದೇವತೆಗೆ ನಮಸ್ಕರಿಸಿ , ಶಾಂತಿಜಿನಭವನವನ್ನು ಮೂರುಭಾರಿ ಪ್ರದಕ್ಷಿಣೆ ಬಂದು ಅಲ್ಲಿಂದ ಹೊರಬರುವನು .

ರಾಮ – ಲಕ್ಷ್ಮಣರನ್ನು ತಾನು ಕೊಲ್ಲಲಾಗದೆಂದು ದೇವತೆ ಹೇಳಿದ ನಂತರವೂ ರಾವಣ ಯುದ್ಧ ಸನ್ನದನಾಗುವುದು ಅವನ ವಿನಾಶಬುದ್ಧಿಮತ್ತೆಯನ್ನು ಸಂಕೇತಿಸಿದಂತಿದೆ .

೨. ಪ್ರಮದವನದಲ್ಲಿ ರಾವಣ – ಸೀತೆಯರ ನಡುವೆ ನಡೆದ ಸಂಭಾಷಣೆಯನ್ನು ವಿವರಿಸಿ

ಪ್ರಮದವನಕ್ಕೆ ಬಂದ ರಾವಣನನ್ನು ನೋಡಿದ ಸೀತೆಗೆ ಅವನ ರೂಪವು ತೃಣಸಮಾನವೆನಿಸಿತು . ರಾಮ – ಲಕ್ಷ್ಮಣರ ಬಗ್ಗೆ ಏನು ಕೆಟ್ಟ ಸುದ್ದಿ ತಂದಿರುವನೋ

ಎಂದಾಕೆ ತಲ್ಲಣಗೊಂಡಳು . ಅವಳ ಸಮೀಪಕ್ಕೆ ಬಂದ ರಾವಣನು “ ಬಹುರೂಪಿಣಿ ವಿದ್ಯೆಯು ನನಗೆ ಸಿದ್ಧಿಸಿದೆ . ಆದ್ದರಿಂದ ಈಗ ನನಗೆ ಅಸಾಧ್ಯವಾದ ಕೆಲಸವಾವುದೂ ಇಲ್ಲ . ಹಾಗಾಗಿ ನೀನು ರಾಮನ ಗೊಡವೆ ಬಿಟ್ಟು ನನ್ನನ್ನು ಒಪ್ಪಿಕೊಂಡು , ಸಾಮಾಜ್ಯ ಸುಖವನ್ನು ಅನುಭವಿಸು ” ಎಂದು ಸೊಕ್ಕಿನಿಂದ ನುಡಿದನು , ವಿಹ್ವಲಚಿತ್ತೆಯಾದ ಸೀತೆಯು , “ ನನ್ನ ಮೇಲೆ ಕರುಣೆ ತೋರುವುದಾದರೆ ದಶಕಂದರನೇ , ರಘುತನೂಜನ ಆಯುಸ್ಸು ಇರುವವರೆಗೂ ಈ ಕಡೆ ಸುಳಿಯಬೇಡ ” ಎಂದು ಹೇಳಿ , ಮೂರ್ಛತಪ್ಪಿ ಧರೆಗುರುಳಿದಳು . ಇವನ್ನು ಕಂಡ ರಾವಣನಿಗೆ ಸೀತೆಯ ಬಗ್ಗೆ ವ್ಯಾಮೋಹ ದೂರಾಗಿ , ಅನುಕಂಪ ಮೂಡಿತು .

ರಾವಣನ ಮನಃಪರಿವರ್ತನೆಯ ಸಂದರ್ಭವನ್ನು ಕವಿ ಹೇಗೆ ಚಿತ್ರಿಸಿದ್ದಾನೆ ? ವಿವರಿಸಿ ,

ರಾವಣನ ಮನಃಪರಿವರ್ತನೆಯು ಈ ಕಾವ್ಯಭಾಗದ ಅತ್ಯಂತ ಪ್ರಮುಖ ಘಟ್ಟವೆನ್ನಬಹುದು . ಸೀತೆಯು ಮೂರ್ಛತಪ್ಪಿ ನೆಲಕ್ಕುರುಳಿದಾಗ , ಅದನ್ನು ಕಂಡ ರಾವಣನಿಗೆ ಅವಳ ಬಗ್ಗೆ ಅನುಕಂಪ ಮೂಡಿತು .

ಮಾತ್ರವಲ್ಲ , ಸೀತೆಯ ಈ ಸ್ಥಿತಿಗೆ ತಾನೇ ಕಾರಣವೆಂದು ತನ್ನನ್ನು ತಾನೇ ಹಳಿದುಕೊಂಡನು . ಕದಡಿಹೋಗಿ ಬಗ್ಗಡಗೊಂಡಿದ್ದ ನೀರು ತನಗೆ ತಾನೇ ತಿಳಿಯಾಗಿ ನಿರ್ಮಲಗೊಳ್ಳುವಂತೆ ರಾವಣನ ಮನಸ್ಪೂ ತಿಳಿಯಾಯಿತು . ಸೀತೆಯ ಬಗೆಗೆ ಅವನಲ್ಲಿ ವೈರಾಗ್ಯ ಮೂಡಿತು . ರಾವಣನು ತನ್ನ ಉದಾತ್ತಗುಣವನ್ನು ತೋರಿದನು .

ತನಗೆ ಹತ್ತಿದ ಸಂಧ್ಯಾರಾಗವನ್ನು ಸೂರ್ಯನು ಕಳೆದುಕೊಳ್ಳುವಂತೆ , ರಾವಣನಲ್ಲಿ ಮೂಡಿದ ಕಾರುಣ್ಯರಸವು ಸೀತೆಯ ಮೇಲಿನ ಅನುರಕ್ತಿಯನ್ನು ತೊಳೆದು ಬಿಟ್ಟಿತೆಂದು ಹೇಳಿರುವ ಕವಿಯು ರಾವಣನ ಮನಃಪರಿವರ್ತನೆಯ ಸಂದರ್ಭವನ್ನು ಸೊಗಸಾಗಿ ಚಿತ್ರಿಸಿದ್ದಾನೆನ್ನಬಹುದು .

ಕದಡಿದ ಸಲಿಲಂ ತಿಳಿವಂದದೆ Notes Karnataka

೪. ರಾವಣನಲ್ಲಿ ಕಂಡುಬರುವ ಪಶ್ಚಾತ್ತಾಪವನ್ನು ಕವಿ ಹೇಗೆ ನಿರೂಪಿಸಿದ್ದಾನೆ ?

ಸೀತೆಯ ಬಗ್ಗೆ ರಾವಣನಲ್ಲಿ ವ್ಯಾಮೋಹ ಅಳಿದು ಕರುಣೆ ಅನುಕಂಪಗಳು ನೆಲೆಸಿದ ಮೇಲೆ ರಾವಣನ ಮನಸ್ಸು ಪರಿವರ್ತನೆಗೊಂಡು ತಾನು ಮಾಡಿದ ಸೀತಾಪಹರಣದಂತಹ ಅಕಾರ್ಯಕ್ಕಾಗಿ ಪಶ್ಚಾತ್ತಾಪ ಹೊಂದುವುದನ್ನು ಕವಿಯು ಇಲ್ಲಿ ಸೊಗಸಾಗಿ ಚಿತ್ರಿಸಿದ್ದಾನೆ .

ಪ್ರಾಣಪ್ರಿಯರಾದ ರಾಮ – ಸೀತೆಯರನ್ನು ಕರ್ಮ ವಶದ ನವದಿಂದ ಕಾಮಮೋಹಿತನಾದ ತಾನು ಅಗಲಿಸಿದೆ ಎಂದು ಆತ ಯೋಚಿಸುತ್ತಾನೆ . ಅಲ್ಲದೆ , ಅವಿವೇಕಿಯಾದ ತನ್ನಿಂದ ಕುಲದ ಪೆಂಪು ಅಳಿಯಿತೆಂದು ಪರಿತಾಪಗೊಳ್ಳು ತಾನೆ . ಕಾಮಪೀಡಿತನಾಗಿ ರಾಮನಿಂದ ಸೀತೆಯನ್ನು ಬೇರ್ಪಡಿಸಿ ಅವಳಿಗೆ ದುಃಖ ವನ್ನುಂಟುಮಾಡಿದೆನೆಂದು ಪರಿತಪಿಸುತ್ತಾನೆ .

ಕದಡಿದ ಸಲಿಲಂ ತಿಳಿವಂದದೆ notes

ತನ್ನ ಈ ಕೆಲಸದಿಂದಾಗಿ ದುರ್ಯಶಪಟಹರವ ಎಲ್ಲೆಡೆ ತುಂಬಿಕೊಂಡಿತಲ್ಲ ಎಂಬ ಪಶ್ಚಾತ್ತಾಪ ಅವನನ್ನು ಸುಡುತ್ತದೆ . ವಿಭೀಷಣ ಹಿತವನ್ನೇ ನುಡಿದರೂ ಅದಕ್ಕೆ ಕಿವಿಗೊಡದೆ , ವಿನಯವಂತನಾದ ಅವನನ್ನು ಗದರಿಸಿ ದೂರಸರಿಸಿದ ದುರ್ವ್ಯಸ ತಾನು ಎಂಬ ಪಾಪಪ್ರಜ್ಞೆಯಲ್ಲಿ ರಾವಣ ನರಳುವುದನ್ನು ನಾವು ಗಮನಿಸಬಹುದಾಗಿದೆ .

ಕದಡಿದ ಸಲಿಲಂ ತಿಳಿವಂದದೆ ‘ ಕಾವ್ಯಭಾಗದಲ್ಲಿ ಕಂಡುಬರುವ ರಾವಣನ ವ್ಯಕ್ತಿತ್ವವನ್ನು ವಿಮರ್ಶಿಸಿ ,

ನಿಮ್ಮ ಮಾತುಗಳಲ್ಲಿ ಉತ್ತರಿಸಿರಿ . ಪ್ರಸ್ತುತ ಕಾವ್ಯಭಾಗದಲ್ಲಿ ರಾವಣನು ಆರಂಭದಲ್ಲಿ ರಾಮ – ಲಕ್ಷ್ಮಣರ ವಿರುದ್ಧದ ಯುದ್ಧದಲ್ಲಿ ಗೆಲುವನ್ನು ಹೊಂದಲು ಬಹುರೂಪಿಣೀ ವಿದ್ಯೆಯನ್ನು ಒಲಿಸಿಕೊಳ್ಳುವು ದನ್ನು ನೋಡುತ್ತೇವೆ .

ರಾಮ – ಲಕ್ಷ್ಮಣರನ್ನು ತಾನು ಕೊಲ್ಲಲಾಗದೆಂದು ವಿದ್ಯಾದೇವತೆ ಹೇಳಿದ ನಂತರವೂ ಯುದ್ಧೋತ್ಸಾಹದಿಂದ ವರ್ತಿಸುವ ರಾವಣನ ವ್ಯಕ್ತಿತ್ವದ ಚಿತ್ರಣ ಈ ಭಾಗದಲ್ಲಿದೆ . ಸೀತೆಯಿದ್ದ ಪ್ರಮದವನಕ್ಕೆ ಬಂದಾಗಲೂ ಆತ ಸೀತೆಗೆ ರಾಮನನ್ನು ಮರೆತು ತನ್ನ ಸಾಮ್ರಾಜ್ಯ ಸುಖವನ್ನನುಭವಿಸಿಕೊಂಡಿರಬೇಕೆಂದೇ ಹೇಳುತ್ತಾನೆ .

ಬಹುರೂಪಿಣಿ ವಿದ್ಯೆಯ ಬಲವಿರುವುದರಿಂದ ಮೂರುಲೋಕದಲ್ಲಿಯೇ ತನಗೆ ಸರಿಸಾಟ ಯಾದ ವೀರರಿಲ್ಲ , ಪ್ರತಿಪಕ್ಷವಿಲ್ಲವೆಂದು ಆತ ಬೀಗುತ್ತಾನೆ . ಆದರೆ ಸೀತೆ ಮೂರ್ಛಗೆ ಸಂದಾಗ ಮಾತ್ರ ವ್ಯಾಮೋಹ ದೂರಾಗಿ , ಅವಳ ವಿಚಾರದಲ್ಲಿ ಅನುಕಂಪ – ಕರುಣೆಗಳು ಉಕ್ಕಿಹರಿಯುತ್ತವೆ .

ಅವನ ಉದಾತ್ತಗುಣ ಅನಾವರಣಗೊಂಡಿರುವುದು ಈ ಸಂದರ್ಭ ದಲ್ಲಿಯೇ , ತನ್ನ ತಪ್ಪಿಗಾಗಿ ಪಶ್ಚಾತ್ತಾಪದಿಂದ ಬೇಗುದಿಗೊಳ್ಳುವ ರಾವಣನ ವ್ಯಕ್ತಿತ್ವವನ್ನು ಇಲ್ಲಿ ಕವಿ ಸುಂದರವಾಗಿ ಚಿತ್ರಿಸಿದ್ದಾನೆ .

ಸೀತೆಯನ್ನು ರಾಮನಿಗೊಪ್ಪಿಸುವ ನಿರ್ಧಾರಕ್ಕೆ ಬರುವನಾದರೂ ತಕ್ಷಣವೇ ಒಪ್ಪಿಸದೆ ಯುದ್ಧದಲ್ಲಿ ರಾಮ – ಲಕ್ಷ್ಮಣರನ್ನು ಸೆರೆಹಿಡಿದು ತಂದು ವಿರಥರನ್ನಾಗಿಸಿ , ಆನಂತರವೇ ಸೀತೆಯನ್ನು ಒಪ್ಪಿಸಬೇಕೆಂದು ಆತ ಯೋಚಿಸುವಲ್ಲಿ ಅವನ ಸಾಹಸಪ್ರಿಯ ಶೌರ್ಯದ ವ್ಯಕ್ತಿತ್ವವನ್ನು ನಾವು ಮನಗಾಣಬಹುದು

FAQ

ರಾವಣನು ಯಾವ ರೀತಿ ಚಲಿಸದೆ ಇದ್ದನು ?

ರಾವಣನು ಧ್ರುವಮಂಡಲದಂತೆ ಚಲಿಸದೆ ಇದ್ದನು .

ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು ?

ಬಹುರೂಪಿಣಿ ವಿದ್ಯೆ ಎಂಬ ದೇವತೆಯು ರಾವಣನ ಎದುರು ಪ್ರತ್ಯಕ್ಷವಾಯಿತು .

ಇತರೆ ಪ್ರಮುಖ ವಿಷಯಗಳು

One thought on “2024 ಕದಡಿದ ಸಲಿಲಂ ತಿಳಿವಂದದೆ ಕನ್ನಡ ನೋಟ್ಸ್‌ | 2nd PUC Kannada Kadadida Salilam Tilivandade Notes

Leave a Reply

Your email address will not be published. Required fields are marked *