ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು 1st PUC | Shastri Mastara Mattavara Makkalu Notes

ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು 1st PUC | Shastri Mastara Mattavara Makkalu Notes

shastri mastara mattavara makkalu notes, ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು, Shastri Mastharu Mathavara Makkalu, Pdf, Summary, ಪ್ರಥಮ ಪಿ.ಯು.ಸಿ ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 1st PUC Shastri mastara Mattavara Makkalu Kannada Notes Summary Question Answer Guide Mcq Pdf Download in Kannada Medium Karnataka State Syllabus , Kseeb Solutions For Class 11 Kannada Chapter 4 Notes 1st Puc Kannada 4th Lesson Notes Pdf
1st PUC Kannada

Shastri Mastara Mattavara Makkalu Notes

Spardhavani Telegram

ಲೇಖಕರ ಪರಿಚಯ

ಡಾ ।। ಚೆನ್ನಣ್ಣ ವಾಲೀಕಾರ

ಜನನ : 1942

ಸ್ಥಳ : ರಾಯಚೂರು ಜಿಲ್ಲೆಯ ‘ ಶಂಕರವಾಡೆ

ಮಹಾಪ್ರಬಂಧ

“ ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ “

ಕಾದಂಬರಿಗಳು

  • ಒಂದು ಹೆಣ್ಣಿನ ಒಳಜಗತ್ತು
  • ಗ್ರಾಮಭಾರತ
ಕವಿತಾ ಸಂಕಲನ
  • ಪ್ಯಾಂಥರ್ ಪದ್ಯಗಳು
  • ಬಂಡೆದ್ದ ದಲಿತರ ಬೀದಿ ಹಾಡುಗಳು

ಸಂಶೋಧನಾ ಗ್ರಂಥ

  • ಜಾನಪದ ಲೋಕ
  • ಕರ್ನಾಟಕದ ದೇವದಾಸಿಯರ ಸಮಸ್ಯೆಗಳು
ಪ್ರಶಸ್ತಿಗಳು
  • ನಾಟಕ ಸಾಹಿತ್ಯ ಅಕಾಡೆಮಿ
  • ಜಾನಪದ ಅಕಾಡೆಮಿ
  • ಕರ್ನಾಟಕ ಸಾಹಿತ್ಯ ಅಕಾಡೆಮಿ
  • ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ .
ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು 1st PUC | Shastri Mastara Mattavara Makkalu Notes
ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು 1st PUC | Shastri Mastara Mattavara Makkalu Notes

ಒಂದು ವಾಕ್ಯದಲ್ಲಿ ಉತ್ತರಿಸಿ

ಸೇಂಗಾ ಮಾರುವವನ ದಿನದ ಸಂಪಾದನೆ ಎಷ್ಟು ?

ಸೇಂಗಾ ಮಾರುವವನ ದಿನದ ಸಂಪಾದನೆ ಐವತ್ತು ಅರವತ್ತು ರೂಪಾಯಿಗಳು .

ಗಾಡಿ ಶಹಾಬಾದಿಗೆ ಬಂದಾಗ ಸಮಯ ಎಷ್ಟಾಗಿತ್ತು ?

ಗಾಡಿ ಶಹಾಬಾದಿಗೆ ಬಂದಾಗ ರಾತ್ರಿ ಹನ್ನೆರಡು ಗಂಟೆಯಾಗಿತ್ತು .

ಶಾಪ್ತಿಮಾಸ್ತರರ ಹೆಂಡತಿಯ ಹೆಸರೇನು ?

ಶಾಸ್ತ್ರಿಮಾಸ್ತರರ ಹೆಂಡತಿಯ ಹೆಸರು ಅಂಬು ಎಂಬುದು .

ಮಾಸ್ತರರ ಅವಳಿ ಮಕ್ಕಳ ಸಾವು ಹೇಗಾಯಿತು ?

ಮಾಸ್ತರರ ಅವಳಿ ಮಕ್ಕಳು ಶಾಲೆಯಿಂದ ಬರುವಾಗ ಲಾರಿಯಡಿ ಸಿಕ್ಕಿ ಸತ್ತುಹೋದರು .

ಮಾಸ್ತರರಿಗೆ ಇನ್ನೂ ಎಷ್ಟು ವರ್ಷ ಸೇವೆ ಇತ್ತು ?

ಶಾಸ್ತ್ರಿಮಾಸ್ತರರಿಗೆ ಇನ್ನೂ ಹತ್ತು ವರ್ಷಗಳ ಕಾಲ ಸೇವಾವಧಿಯ ಅವಕಾಶವಿತ್ತು .

ಮಾಸ್ತರರು ಮನೆಯ ಮುಂದೆ ಬರೆಸಿ ಹಾಕಿದ ಬೋರ್ಡು ಯಾವುದು ?

” ಅನಾಥ ಬಾಲಕರಾಶ್ರಮ ” ಎಂಬ ಬೋರ್ಡನ್ನು ಮಾಸ್ತರರು ತಮ್ಮ ಮನೆಯ ಮುಂದೆ ಬರೆಸಿ ಹಾಕಿಸಿದರು .

ನಿರೂಪಕರನ್ನು ರೂಪಿಸಿದ ಶಿಲ್ಪಿ ಯಾರು ?

ಶಾಸ್ತ್ರಿಮಾಸ್ತರರೇ ನಿರೂಪಕರನ್ನು ರೂಪಿಸಿದ ಶಿಲ್ಪಿ

ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು 1st PUC | Shastri Mastara Mattavara Makkalu Notes
ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು 1st PUC | Shastri Mastara Mattavara Makkalu Notes

ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ

ಹಾವು ಓದಿದ ಹೈಸ್ಕೂಲ್ ನೆನಪು ಬಂದಾಗ ನಿರೂಪಕರಿಗೆ ಏನನ್ನಿಸಿತು ?

ರಾತ್ರಿ ಒಂದು ಗಂಟೆಯ ಹೊತ್ತಿನಲ್ಲಿ ನಿರೂಪಕರಿಗೆ ತಾವು ಓದಿದ ಹೈಸ್ಕೂಲಿನ ನೆನಪಾಯಿತು . ಐದು ನಿಮಿಷ ನಡೆದು ಹೋದರೆ ಅಲ್ಲಿನ ವಿಶಾಲ ವರಂಡಾದಲ್ಲಿ ಮಲಗಿದರಾಯಿತು ಎನಿಸಿತು . ಅಲ್ಲಿರುವ ಜನಾನನಿಗೆ ತಾವು ಆ ಶಾಲೆಯ ವಿದ್ಯಾರ್ಥಿ ಎಂದರೆ ಮಲಗಲು ಅವಕಾಶ ಕೊಡಬಹುದು ಎನಿಸಿತು .

ನಿರೂಪಕರ ಓರೆಕೋರೆಗಳನ್ನು ತಿದ್ದಿದ ಗುರುಗಳು ಯಾರು ?

ಸೂಡಿ , ಲಾಲ , ಶೆಟ್ಟಿ ಮತ್ತು ದೇಶಪಾಂಡೆ ಎಂಬ ಗುರುಗಳು ನಿರೂಪಕರ ಓಲೆ – ಕೋರೆಗಳನ್ನು ತಿದ್ದಿದ ಗುರುಗಳಾದರೆ , ಶಾಸ್ತ್ರಿಮಾಸ್ತರರು ನಿರೂಪಕರನ್ನು ಕೆತ್ತಿದ ಶಿಲ್ಪಿಯಾಗಿದ್ದರು .

ನಿರೂಪಕರ ತಂದೆ ಅವರನ್ನು ಯಾರು ಯಾರಿಂದ ಅಗಲಿಸಿ ಊರಿಗೆ ಕರೆತಂದರು ?

ಹಂಪಲು , ಬೋರುಳಗಳಿಂದ ಅಗಲಿಸಿ ಊರಿಗೆ ಎಳೆದುತಂದರು . ನಿರೂಪಕರನ್ನು ಅವರ ತಂದೆಯು ದನಗಳನ್ನು , ಗೆಳೆಯರನ್ನು ಪ್ರೀತಿಯ ಹೊಳೆ , ಹಳ್ಳ , ಗಿಡ , ಮರ , ಗುಡ್ಡ ಬೆಟ್ಟ , ಹೆಣ್ಣು

ಪ್ರೈಮರಿ ಶಾಲೆ ಸೇರಿದಾಗ ನಿರೂಪಕರನ್ನು ಅಂಬು ಹೇಗೆ ನೋಡಿಕೊಳ್ಳುತ್ತಿದ್ದರು ?

ಶಾಸ್ತ್ರಿಮಾಸ್ತರರ ಪತ್ನಿ ಅ ೦ ಬವ್ವ ನಿರೂಪಕರಿಗೆ ಸಂಜೆ ಮುಂಜಾನೆ ಸಿಹಿ ತಿಂಡಿ ತಿನಿಸುಗಳನ್ನು ಮಾಡಿದ ಅಡುಗೆಯನ್ನು ತಿನಿಸುತ್ತಾ ಇದ್ದರು . ಸಂತೆಗೆ ಹೋದಾಗ ನಿರೂಪಕರನ್ನೂ ಜೊತೆಗೆ ಕರೆದೊಯ್ದು ಹೋಟೆಲಿನಲ್ಲಿ ಹೊಟ್ಟೆ ತುಂಬ ತಿನಿಸುತ್ತಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು .

ಮಾಸ್ತರರ ಮಕ್ಕಳ ಶವಯಾತ್ರೆಗೆ ಜನ ಹೇಗೆ ಬಂದಿತ್ತು ?

ಶಾಸ್ತ್ರಿಮಾಸ್ತರರ ಅವಳಿ ಮಕ್ಕಳು ಮತ್ತು ಅಂಬವ್ವನ ಶವಯಾತ್ರೆಗೆ ಶಾಲೆಗೆಶಾಲೆ , ಬಜಾರಿಗೆಬಜಾರೆ , ಊರಿಗೆ ಊರೇ ಓಡಿಬಂದಿತು . ಅದು ಶವಯಾತ್ರೆಯಂತಿರದೆ ದೇವರ ಜಾತ್ರೆಗೆ ಜನ ಸೇರಿದಂತೆ ಇತ್ತು .

ಅವಳಿ ಮಕ್ಕಳ ಸಾವಿನ ನಂತರ ಮಾಸ್ತರ ಮತ್ತು ಅಂಬವ್ವನ ಸ್ಥಿತಿ ಏನಾಯಿತು ?

ಮಕ್ಕಳ ಸಾವಿನ ಸುದ್ದಿ ಕೇಳಿದ ಅಂಬವ್ವ ಹೃದಯ ಒಡೆದು ಸತ್ತಳು , ಶಾಸ್ತ್ರಿ ಮಾಸ್ತರರು ಹುಚ್ಚರಾಗಿ ಹೋದರು . ಅವರ ಸ್ಥಿತಿಯು ಮೈಮೇಲೆ ಮುಗಿಲು ಹರಿದುಬಿದ್ದಂತೆ , ಸಿಡಿಲು ಎರಗಿದ೦ತಾಯಿತು .

ಮಾಸ್ತರರು ಬಾಡಿಗೆ ಮನೆಯನ್ನು ಹೇಗೆ ಖರೀದಿಸಿದ್ದರು ?

ನಿವೃತ್ತಿಗೆ ಅರ್ಜಿ ಸಲ್ಲಿಸಿದ ಮಾಸ್ತರರು ಹೆಂಡತಿ ಹೆಸರಲ್ಲಿ , ಮಕ್ಕಳ ಹೆಸರಿನಲ್ಲಿ ಇಟ್ಟಿದ್ದ ಜೀವವಿಮೆ , ಬ್ಯಾಂಕಿನ ಹಣವನ್ನು ಹಿಂತೆಗೆದರು . ಅದಕ್ಕೆ ನಿವೃತ್ತಿಯಿಂದ ಬಂದ ಹಣವನ್ನು ಸೇರಿಸಿ ತಾವು ಬಾಡಿಗೆಗಿದ್ದ ಮನೆಯನ್ನು ಖರೀದಿ ಮಾಡಿದರು .

ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು 1st PUC | Shastri Mastara Mattavara Makkalu Notes
ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು 1st PUC | Shastri Mastara Mattavara Makkalu Notes

05-06 ವಾಕ್ಯಗಳಲ್ಲಿ ಉತ್ತರಿಸಿ

ನಿರೂಪಕರ ಬಯಲು ಶಾಲೆಯ ಅನುಭವ ಮತ್ತು ನಂತರ ಶಾಲೆಯ ಅನುಭವಗಳು ಹೇಗಿದ್ದವು ?

ಹುಡುಗರನ್ನು ಕೂಡಿಕೊಂಡು ಬಯಲಿಗೆ ಹೋದರೆ ಅದು ಸ್ವರ್ಗ ಸಮಾನವನಿಸುತ್ತಿತ್ತು . ಹಳ್ಳ , ಕೊಳ್ಳ , ಕೆರೆ , ಬಾವಿ , ಗಿಡ ಮರ ಬಳ್ಳಿ ನಿರೂಪಕರ ಬಯಲು ಶಾಲೆಯ ಅನುಭವಗಳೂ ಅತ್ಯಂತ ಸಂತಸದಾಯಕವಾಗಿದ್ದಿತು . ದನಗಳನ್ನು , ದನಕಾಯುವ ಬೆಟ್ಟ , ಗುಡ್ಡ , ಹಣ್ಣು ಹಂಪಲು ಮುಂತಾದವುಗಳ ಸೊಗಸಿತ್ತು .

ಪೀಪಿ ಊದುತ್ತ ಕೃಷ್ಣನಂತ ಹುಡುಗಿಯರ ಜೊತೆ ಕಣ್ಣು ಮುಚ್ಚಾಲೆ , ಬಳಿ ಚಕಾರಾಟ , ಕೋಲಬಗುಳ್ಳಿ , ಲೋಡ ಲೋಡ ತಿಮ್ಮಯ್ಯ ಮುಂತಾದ ಆಟಗಳ ಹಿಗಿತ್ತು .

ದನಗಳನ್ನು ಎಲ್ಲೋ ಮೇಯಲು ಬಿಟ್ಟು ಇನ್ನೆಲ್ಲೋ ಆಡುತ್ತಾ ಸಂಜೆ ಹಾಡುತ್ತಾ ಕುಣಿಯುತ್ತಾ ಧನವಾಗಿ , ಹಕ್ಕಿಯಾಗಿ , ಮನೆಗೆ ಬರುವುದು ನಿತ್ಯ ಹಬ್ಬವಾಗಿತ್ತು .

ನಂತರ ಅಕ್ಷರದ ಶಾಲೆಯು ನಿರೂಪಕರಿಗೆ ನಾಲ್ಕು ಗೋಡೆಗಳ ಬಂದೀಖಾನೆ ಎನಿಸಿತು . ದನಕಾಯುವ ಬಯಲಶಾಲೆಯ ನೆನಪು ನಿರೂಪಕರನ್ನು ಬಲವಾಗಿ ಕಾಡಿದ್ದರಿಂದ ಅವರು ಅಕ್ಷರ ಕಲಿಯದ ಪ್ರತಿಭಟಿಸಿದರು . ಆದರೆ ಶಾಸ್ತ್ರಿಮಾಸ್ತರ ಮತ್ತು ಅಂಬವ್ವರ ಪ್ರೀತಿಯ ಕಡಲಲ್ಲಿ ಮಿಂದಾಗ ನಿರೂಪಕರಿಗೆ ಅಕ್ಷರಮಳೆ ಧಾರಾಕಾರವಾಗಿ ಸುರಿಯಿತು . ಕೇವಲ ಮೂರು ತಿಂಗಳಲ್ಲಿ ಅಕ್ಷರಗಳೆಲ್ಲವನ್ನು ಕಲಿತರು . ನಿಧಾನವಾಗಿ ಬಯಲು ಶಾಲೆಯ ನೆನಪು ದೂರಾಯಿತು . ಅಕ್ಷರದ ಹೊನಲು ಆಕರ್ಷಕವೆನಿಸಿತು .

ಮಾಸ್ತರರು ಮತ್ತು ಅಂಬವ್ವರ ಪ್ರೀತಿ ಕಡಲಲ್ಲಿ ಕತೆಗಾರರ ಬಾಲ್ಯ ಹೇಗೆ ಕಳೆಯಿತು ?

ಕತೆಗಾರರನ್ನು ಶಾಸ್ತ್ರಿ ಮಾಸ್ತರರು ಮತ್ತು ಅವರ ಧರ್ಮಪತ್ನಿ ಅಂಬವರು ತಮ್ಮ ಕರುಳಕುಡಿಯಂತೆಯೇ ನೋಡಿಕೊಂಡರು . ಅಕ್ಷರ ಕಲಿಯಲು ಒಪ್ಪದ ಕತೆಗಾರರನ್ನು ಅವರು ಎಂದೂ ಒತ್ತಾಯಮಾಡಲಿಲ್ಲ . ಶಾಸ್ತ್ರಿಮಾಸ್ತರರು ಭಾನುವಾರಗಳಂದು ಎಲ್ಲರನ್ನೂ ಸಿನಿಮಾಕ್ಕೆ ಕರೆದೊಯ್ಯುತ್ತಿದ್ದರು .

ಅಂಬಾ ಸಂಜೆ – ಮುಂಜಾನೆ ನಿರೂಪಕರಿಗೆ ಸಿಹಿಸಿಹಿಯಾದ ತಿಂಡಿಗಳನ್ನು ತಾವು ಮಾಡಿದ ಅಡುಗೆಯನ್ನು ಉಣ್ಣಿಸುತ್ತಿದ್ದರು . ತಾವು ಸಂತೆಗೆ ಹೋದಾಗ ಕತೆಗಾರರನ್ನೂ ಜೊತೆಗೆ ಕರೆದೊಯ್ದು ಹೋಟೆಲಿನಲ್ಲಿ ಹೊಟ್ಟೆ ತುಂಬ ತಿಂಡಿ ತಿನ್ನಿಸುತ್ತಿದ್ದರು , ದಂಪತಿಗಳಿಬ್ಬರೂ ಓದಲು ಒತ್ತಾಯ ಮಾಡದೆ , ಕತೆಗಾರರನ್ನು ಸುಮ್ಮನೆ ತಿರುಗಾಡಿಕೊಂಡಿರಲು ಬಿಟ್ಟಿದ್ದರು .

ಹೀಗೆ ಶಾಸ್ತ್ರಿಮಾಸ್ತರ ಅಂಬವರ ಪ್ರೀತಿಯ ಕಡಲಲ್ಲಿ ಮಿಂದ ಮೇಲೆ ಕತೆಗಾರರಿಗೆ ಎಷ್ಟು ದಿನ ಸುಮ್ಮನೆ ಕೂರುವುದು ? ಎನಿಸಿತು . ನಿಧಾನವಾಗಿ ಅವರು ಅಕ್ಷರದತ್ತ ವಾಲಿದರು . ಮುಂದೆಯು ಅವಳಿ ಮಕ್ಕಳನ್ನು ಪಡೆದರೂ ಮಾಸ್ತರ ದಂಪತಿಗಳು ಕತೆಗಾರರನ್ನು ತಮ್ಮ ಹಿರೀಮಗನಂತೆಯೇ ಪೊರೆದರು .

ಅವಳಿ ಮಕ್ಕಳ ಸಾವು ಮಾಸ್ತರರ ಬದುಕನ್ನೇ ಬದಲಾಯಿಸಿದ್ದು ಹೇಗೆ ? ವಿವರಿಸಿ ,

ಅವಳಿ ಮಕ್ಕಳು ಮತ್ತು ತಮ್ಮ ಹೆಂಡತಿ ಅಂಬವ್ವರನ್ನು ಒಟ್ಟಿಗೇ ಕಳೆದುಕೊಂಡ ಶಾಸ್ತ್ರಿಮಾಸ್ತರರಿಗೆ ಸಿಡಿಲೆರಗಿದಂತಾಯಿತು . ಅವರು ಹುಚ್ಚರಾಗಿ ಹೋದರು . ಆರು ತಿಂಗಳ ಕಾಲ ಹಾಸಿಗೆ ಹಿಡಿದು ಮಲಗಿಬಿಟ್ಟರು .

ಕೊನೆಗೆ ಈ ದುಃಖದಿಂದ ಹೊರಬರಲು ಅವರು ಯೋಚಿಸಿದರು . ಹೆಂಡತಿ ಮಕ್ಕಳ ಹೆಸರಲ್ಲಿದ್ದ ಜೀವವಿಮೆ ಮತ್ತು ಬ್ಯಾಂಕಿನ ಹಣವನ್ನು ಹಿಂತೆಗೆದುಕೊಂಡು , ಅದಕ್ಕೆ ತಮ್ಮ ನಿವೃತ್ತಿ ಹಣವನ್ನು ಕೂಡಿಸಿ , ತಾವು ಬಾಡಿಗೆಗಿದ್ದ ಮನೆಯನ್ನು ಖರೀದಿ ಮಾಡಿದರು . ಅದರಲ್ಲೇ ಅನಾಥ ಬಾಲಕರಾಶ್ರಮವನ್ನು ಆರಂಭಿಸಿದರು .

ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು

ಶಾಲೆಯಲ್ಲಿ ಓದಲು ಬರುವ ನಿರ್ಗತಿಕ , ಬಡವ , ಅನಾಥ ಮಕ್ಕಳಿಗೆ ಊಟ , ವಸತಿ , ಬಟ್ಟೆ ಪುಸ್ತಕಗಳ ಖರ್ಚನ್ನು ತಾವೇ ಭರಿಸಿದರು . ಹೀಗೆ ಮಾಸ್ತರರು ತಮ್ಮ ಮಡದಿ ಮಕ್ಕಳ ಸಾವಿನ ದುಃಖವನ್ನು ನೀಗಿಕೊಳ್ಳಲು ಅನಾಥ ಮಕ್ಕಳ ಸೇವೆ ಮಾಡತೊಡಗಿದರು . ಅದರಲ್ಲೇ ಸುಖವನ್ನು ಕಂಡು , ಬದುಕಿನ ಕಹಿಯನ್ನು ಸಿಹಿಯನ್ನಾಗಿಸಿಕೊಂಡು ಮಹಾತ್ಮರನಿಸಿದರು .

ಅನಾಥ ಬಾಲಕರಾಶ್ರಮ’ವನ್ನು ಶಾಸ್ತ್ರಿಮಾಸ್ತರರು ಹೇಗೆ ಪ್ರಾರಂಭಿಸಿದರು ? ಅದರ ಉದ್ದೇಶವೇನು ?

ಮನೆಯಲ್ಲಿ ನಡೆದ ದುರ್ಘಟನೆಯಿಂದ ಆಘಾತಕ್ಕೊಳಗಾದ ಶಾಸ್ತ್ರಿಮಾಸ್ತರರು ಆರು ತಿಂಗಳು ಶಾಲೆಗೆ ಹೋಗದೆ ಹಾಸಿಗೆ ಹಿಡಿದರು . ಕೊನೆಗೆ ಯೋಚಿಸಿ ನಿರ್ಧಾರಕ್ಕೆ ಬಂದ ಅವರು ಸ್ವಯಂ ನಿವೃತ್ತಿಗೆ ಅರ್ಜಿಸಲ್ಲಿಸಿದರು .

ಅವರ ಸೇವಾವಧಿ ಇನ್ನೂ ಹತ್ತು ವರ್ಷಗಳಿದ್ದವು , ಹೆಂಡತಿ ಮಕ್ಕಳ ಹೆಸರಲ್ಲಿದ್ದ ಬ್ಯಾಂಕು – ಜೀವವಿಮೆ ಹಣವನ್ನು ಹಿಂತೆಗೆದುಕೊಂಡು , ಅದಕ್ಕೆ ತಮ್ಮ ನಿವೃತ್ತಿಯ ಹಣವನ್ನು ಸೇರಿಸಿದರು . ಈ ಹಣದಲ್ಲಿ ತಾವಿದ್ದ ಮನೆಯನ್ನು ಖರೀದಿ ಮಾಡಿದರು .

ಅನಾಥ ಬಾಲಕರಾಶ್ರಮ ‘ ಎಂಬ ಬೋರ್ಡನ್ನು ಬರೆಸಿ , ನಗೆ ನೇತುಹಾಕಿ ಬಾಲಕರಾಶ್ರಮವನ್ನು ಆರಂಭಿಸಿದರು . ಶಾಲೆಗೆ ಬರುವ ನಿರ್ಗತಿಕರ , ಬಡವರ , ಅನಾಥ ಮಕ್ಕಳಿಗೆ ಉಚಿತವಾಗಿ ಬಟ್ಟೆ , ವಸತಿ , ಸೇಟು , ಪುಸ್ತಕಗಳನ್ನು ಒದಗಿಸಿ , ಅವರೆಲ್ಲರ ವಿದ್ಯಾಭ್ಯಾಸಕ್ಕೆ ನೆರವಾಗಬೇಕು , ಅನಾಥರು ವಿದ್ಯಾವಂತರಾಗಬೇಕೆಂಬ ಉದ್ದೇಶವು ಮಾಸ್ತರದಾಗಿತ್ತು , ತಮ್ಮ ಬದುಕಿನ ಕಹಿಯನ್ನು ಮರೆಯಲು ಮಾಸ್ತರರು ಅನಾಥ ಮಕ್ಕಳ ಸೇವೆ ಮಾಡಲು ಉದ್ದೇಶಿಸಿದರು .

ಬದಲಾದ ಶಹಾಬಾದನ್ನು ಲೇಖಕರು ಹೇಗೆ ನಿರೂಪಿಸಿದ್ದಾರೆ ?

ನಿರೂಪಕರು ಚಿಕ್ಕವರಾಗಿದ್ದಾಗ ಶಹಾಬಾದು ಈಗಿನಂತಿರಲಿಲ್ಲ . ನಿರೂಪಕರು ಗಮನಿಸಿದಂತೆ ಶಹಾಬಾದು ತುಂಬ ಬದಲಾಗಿತ್ತು . ಎಸಿಸಿ ಸಿಮೆಂಟ್ ಕಂಪೆನಿ ಮತ್ತು ಎಬಿಎಲ್ ಕಂಪೆನಿಗಳು ಕಾಲಿಟ್ಟಿದ್ದು , ಆ ಕಂಪೆನಿಗಳಲ್ಲಿ ಕೆಲಸ ಮಾಡುವ ಜನರಿಂದ ಶಹಾಬಾದು ಗಿಜಿಗುಡುತ್ತಿತ್ತು .

ಮೊದಲಿನ ಪ್ರಶಾಂತತೆ ಕಂಡುಬರಲಿಲ್ಲ . ಮೊದಲು ಚಿಕ್ಕದಾಗಿದ್ದರು ನಾಲ್ಕು ದಿಕ್ಕಿಗೂ ಒಂದೊಂದು ಮೈಲಿವರೆಗೆ ಬೆಳೆದಿತ್ತು . ನೀರು ತುಂಬುತ್ತಿರುವ , ಶೌಚಾಲಯಕ್ಕೆ ಹೋಗುತ್ತಿರುವ , ಕೆಲಸಕ್ಕಾಗಿ ಹೊರಟಿರುವ , ಊರಿಗೆ ಹೋಗು

ತರಕಾರಿ ತರುತ್ತಿರುವ , ಹೋಟೆಲು – ಅಂಗಡಿಗಳನ್ನು ತೆರೆಯುವ ಜನರಿಂದ ಊರು ತುಂಬಿಹೋಗಿದ್ದನ್ನು ಲೇಖಕರು ವಿವರವಾಗಿ ನಿರೂಪಿಸಿದ್ದಾರೆ . ಕಾಲ ಬದಲಾದಂತೆ ಊರೂ ಬದಲಾಗುತ್ತಿರುವುದನ್ನು ನಿರೂಪಕರು ಗಮನಿಸಿ , ಚಿತ್ರಿಸಿದ್ದಾರೆ .

ಶಾಸ್ತ್ರಿಮಾಸ್ತರರ ವ್ಯಕ್ತಿತ್ವವನ್ನು ನಿರೂಪಿಸಿ .

ಡಾ . ಚೆನ್ನಣ್ಣ ವಾಲೀಕಾರರು ಬರೆದಿರುವ ‘ ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು ‘ ಎಂಬ ಸಣ್ಣಕಥೆಯಲ್ಲಿ ಬರುವ ಶಾಸ್ತ್ರಿಮಾಸ್ತರರು ಒಬ್ಬ ಆದರ್ಶ ಗುರುಗಳೆನಿಸಿದ್ದಾರೆ . ಮಕ್ಕಳನ್ನು ಅಕ್ಷರ ಸಂಪರ್ಕಕ್ಕೆ ಕರೆತಂದು ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕೆ ೦ ಬ ಮಹದಾಸೆ ಅವರದಾಗಿತ್ತು .

ದನಕಾಯುತ್ತಿದ್ದ ನಿರೂಪಕರನ್ನು ಕಡೆದು ಕೆತ್ತಿ ನಿಲ್ಲಿಸಿದ ಶಿಲ್ಪಿ ಅವರು . ಅಕ್ಷರದಿಂದ ವಂಚಿತರಾದ ಮಕ್ಕಳಿಗೆ ಹೆತ್ತವರ ವಾತ್ಸಲ್ಯ ತೋರಿಸಿ , ಓದಿಸಿದ ಮಹಾಪುರುಷ ಶಾಸ್ತ್ರಿಮಾಸ್ತರರು , ಹೆಂಡತಿ ಮಕ್ಕಳ ಸಾವಿನ ದುಃಖವನ್ನು ಮರೆಯಲು ‘ ಅನಾಥ ಬಾಲಕರಾಶ್ರಮ’ವನ್ನು ಆರಂಭಿಸಿ , ತಮ್ಮ ತನು ಮನ ಧನಗಳೊಂದಿಗೆ ನಿರ್ಗತಿಕ , ಬಡಮಕ್ಕಳ ಸೇವೆ ಮಾಡಿದ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು .

ಬದುಕಿನಲ್ಲಿ ಬಂದೆರಗುವ ಆಘಾತಕಾರಿ ಕಹಿಯನ್ನು ಸೇವೆಯ ಮೂಲಕ ಸಿಹಿಯನ್ನಾಗಿ ಪರಿವರ್ತಿಸಿಕೊಂಡ ಶಾಸ್ತ್ರಿಮಾಸ್ತರರ ಆದರ್ಶದ ನಿಲುವು ಅನುಕರಣೀಯವಾಗಿದೆ ಎನ್ನಬಹುದು .

ಇತರೆ ವಿಷಯಗಳನ್ನು ಓದಿರಿ

ಡೌನ್ಲೋಡ್ ಪಿಡಿಎಫ್ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *