1st Puc ಬುದ್ಧ ಬಿಸಿಲೂರಿನವನು ಕನ್ನಡ ನೋಟ್ಸ್ | Buddha Bisilurinavanu Kannada Notes

Buddha Bisilurinavanu Kannada Notes । ಬುದ್ಧ ಬಿಸಿಲೂರಿನವನು ನೋಟ್ಸ್

buddha bisilurinavanu kannada notes, ಬುದ್ಧ ಬಿಸಿಲೂರಿನವನು ನೋಟ್ಸ್, Questions and Answers Pdf, Notes, Summary, ಪ್ರಥಮ ಪಿ.ಯು.ಸಿ ಬುದ್ಧ ಬಿಸಿಲೂರಿನವನು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st Puc Buddha Bisilurinavanu Kannada Notes Question Answer Summary Mcq Pdf Download in Kannada Medim Karnataka State Syllabus , Kseeb Solutions For Class 11 Kannada Chapter 5 Notes 1st Puc Kannada 5th Lesson Notes Buddha Bisilurinavanu Summary in Kannada Buddha Bisilurinavanu Notes in Kannada 1st PUC Kannada Textbook Answers

Buddha Bisilurinavanu Kannada Notes

ಕವಿ ಪರಿಚಯ :

ನಾಗತಿಹಳ್ಳಿ ಚಂದ್ರಶೇಖರ್

ಜನನ : 1958 ಆಗಸ್ಟ್ 15


ಸ್ಥಳ : ನಾಗತಿಹಳ್ಳಿ, ಮಂಡ್ಯ ಜಿಲ್ಲೆ, ಕರ್ನಾಟಕ


ಉದ್ಯೋಗ : ಬರಹಗಾರ,ಪ್ರಕಾಶಕ ,ನಿರ್ಮಾಪಕ, ನಿರ್ದೇಶಕ

Spouse(s) : ಶೋಭಾ


ಮಕ್ಕಳು : ಸಿಹಿ ನಾಗತಿಹಳ್ಳಿ , ಕನಸು ನಾಗತಿಹಳ್ಳಿ

ಕಥಾಸಂಕಲನ

  • ಮಲೆನಾಡಿನ ಹುಡುಗಿ
  • ಬಯಲು ಸೀಮೆ ಹುಡುಗ
  • ಬಾ ನಲ್ಲೆ ಮಧುಚಂದ್ರಕೆ

ಕಾದಂಬರಿ

ವಲಸೆ ಹಕ್ಕಿಯ ಹಾಡು

ಪ್ರವಾಸ ಕಥನ
  • ಅಯನ
  • ನನ್ನ ಗ್ರಹಿಕೆಯ ಈಜಿಪ್ಟ್
  • ನನ್ನ ಗ್ರಹಿಕೆಯ ನೇಪಾಳ

ಜನಪ್ರಿಯ ಚಿತ್ರಗಳು

  • ಅಮೆರಿಕಾ ಅಮೆರಿಕಾ
  • ಬಾ ನಲ್ಲೆ ಮಧುಚಂದ್ರಕೆ
  • ಪ್ಯಾರಿಸ್ ಪ್ರಣಯ
  • ಉಂಡೂ ಹೋದ ಕೊಂಡೂ ಹೋದ
  • ಒಲವೆ ಜೀವನ ಲೆಕ್ಕಾಚಾರ
  • ಮಾತಾಡ್ ಮಾತಾಡ್ ಮಲ್ಲಿಗೆ
ಪ್ರಶಸ್ತಿಗಳು
  • ರಾಜ್ಯ ಪ್ರಶಸ್ತಿ
  • ಫಿಲ್‌ಫೇರ್ ಪ್ರಶಸ್ತಿ

Buddha Bisilurinavanu Kannada Notes

1st Puc ಬುದ್ಧ ಬಿಸಿಲೂರಿನವನು ಕನ್ನಡ ನೋಟ್ಸ್ | Buddha Bisilurinavanu Kannada Notes
1st Puc ಬುದ್ಧ ಬಿಸಿಲೂರಿನವನು ಕನ್ನಡ ನೋಟ್ಸ್ | Buddha Bisilurinavanu Kannada Notes

ಒಂದು ವಾಕ್ಯದಲ್ಲಿ ಉತ್ತರಿಸಿ Buddha Bisilurinavanu Kannada Notes

 ಗೌತಮ ಜನಿಸಿದ್ದು ಎಲ್ಲಿ ?

ಲುಂಬಿನಿ ಉದ್ಯಾನವನದಲ್ಲಿ ಗೌತಮ ಬುದ್ಧನು ಜನಿಸಿದನು .

ಬುದ್ಧನಿಗೆ ಜ್ಞಾನೋದಯವಾದ ದಿನ ಯಾವುದು ?

ಬುದ್ಧನಿಗೆ ವೈಶಾಖ ಪೂರ್ಣಿಮೆಯಂದು ಜ್ಞಾನೋದಯವಾಯಿತು .

ನೇಪಾಳದ ವಿಮಾನ ಹೇಗಿತ್ತು ?

ನೇಪಾಳದ ವಿಮಾನಗಳು ನಮ್ಮ ಹಳೆಯ ಮೆಟಡಾರ್‌ಗಳಿಗೆ ರೆಕ್ಕೆ ಜೋಡಿಸಿದಂತಿದ್ದವು .

ಮಾಯಾದೇವಿ ದೇವಾಲಯ ಹೇಗಿತ್ತು ?

 ಮಾಯಾದೇವಿ ದೇವಾಲಯದ ಶ್ವೇತವರ್ಣದಿಂದ ಕೂಡಿ ಚೌಕಾಕಾರದಲ್ಲಿತ್ತು . ಆಶೋಕ ಸ್ತಂಭ ಎಲ್ಲಿದೆ ? ಆಶೋಕ ಸ್ತಂಭವು ಮಾಯಾದೇವಿ ದೇವಾಲಯದ ಬಳಿಯಿರುವ ಉದ್ಯಾನದಲ್ಲಿದೆ .

ಯಾವ ಪ್ರವಾಸಾನುಭವದಲ್ಲಿ ಲುಂಬಿನಿಯ ಬಗೆಗೆ ವಿವರಗಳಿವೆ ?

ಚೀನಾ ಯಾತ್ರಿಕನಾದ ಹುಯನ್‌ತ್ಸಾಂಗ್‌ನ ಪ್ರವಾಸಾನುಭವದಲ್ಲಿ ಲುಂಬಿನಿಯ ಬಗೆಗೆ ವಿವರಗಳಿವೆ .

 ಕಪಿಲವಸ್ತುವಿನ ಇಂದಿನ ಹೆಸರೇನು ?

 ಕಪಿಲವಸ್ತುವಿನ ಇಂದಿನ ಹೆಸರು ಲಾರ್‌ಕೋಟ್ ಎಂಬುದು .

ಅರಮನೆಯ ಗಾರ್ಡು ಲೇಖಕರನ್ನು ಏನೆಂದು ಕೇಳಿದನು ?

ಅರಮನೆಯ ಗಾರ್ಡು ‘ ‘ ಕಾಫಿಗೇನಾದ್ರೂ ಕೊಡಿ ‘ ಎಂದು ಲೇಖಕರನ್ನು ಕೇಳಿದನು .

ಲೇಖಕರ ಮನಸ್ಸಿನಲ್ಲಿ ಗಾಢವಾಗಿ ಅಷ್ಟೊತ್ತಿದ್ದು ಯಾವುದು ?

ಗೌತಮನಿಲ್ಲದ ಅರಮನೆ ಮತ್ತು ತಾವೇ ಕಟ್ಟಿಕೊಂಡ ಕಲ್ಪನೆಯ ಅರಮನೆಗಳು ಲೇಖಕರ ಮನಸ್ಸಿನಲ್ಲಿ ಗಾಢವಾಗಿ ಉಳಿದವು .

1st Puc ಬುದ್ಧ ಬಿಸಿಲೂರಿನವನು ಕನ್ನಡ ನೋಟ್ಸ್ | Buddha Bisilurinavanu Kannada Notes
1st Puc ಬುದ್ಧ ಬಿಸಿಲೂರಿನವನು ಕನ್ನಡ ನೋಟ್ಸ್ | Buddha Bisilurinavanu Kannada Notes

2-3 ವಾಕ್ಯದಲ್ಲಿ ಉತ್ತರಿಸಿ : Buddha Bisilurinavanu Kannada Notes

ಮಹಾನ್ ವ್ಯಕ್ತಿಗಳ ದರ್ಶನ ಅರ್ಥವಾಗುವುದು ಹೇಗೆ ?

ಮಹಾನ್ ವ್ಯಕ್ತಿಗಳ ದರ್ಶನವನ್ನು ಆಶಯವನ್ನು ಅರ್ಥಮಾಡಿಕೊಳ್ಳಲು ಅವರ ಕೃತಿಗಳು ನೆರವಾಗುತ್ತವೆ .

ನೇಪಾಳದ ವೈಮಾನಿಕ ಸಾರಿಗೆ ವ್ಯವಸ್ಥೆ ಹೇಗಿದೆ ?

ನೇಪಾಳಿ ಸರ್ಕಾರ ಅಲ್ಲಿನ ಪುಟ್ಟ ಪುಟ್ಟ ಊರುಗಳಲ್ಲಿ ವಿಮಾನ ನಿಲ್ದಾಣವನ್ನು ಸ್ಥಾಪಿಸಿ ಇಪ್ಪತ್ತೈದು ಜನ ಕೂರಬಹುದಾದ ವಿಮಾನಗಳನ್ನು ಹಾರಲು ಬಿಟ್ಟಿವೆ .

ವಿಮಾನ ದರ ಶ್ರೀಸಾಮಾನ್ಯನ ಕೈಗೆಟುಕುವಂತಿದ್ದು ಗಂಟೆಗೊಮ್ಮೆ ಟ್ಯಾಕ್ಸಿಗಳಂತೆ ಸಂಚರಿಸುತ್ತವೆ . ನೇಪಾಳದಂತಹ ಪುಟ್ಟ ದೇಶದಲ್ಲಿ ಸುಮಾರು ೩೦ ಕ್ಕೂ ಹೆಚ್ಚು ವಿಮಾನ ಸಂಪರ್ಕಗಳಿವೆ . ಇದೊಂದು ಉತ್ತಮ ವ್ಯವಸ್ಥೆಯಾಗಿದೆ .

ಗೌತಮನ ಮನೋಲೋಕವನ್ನು ನಿರಂತರವಾಗಿ ವಹಿಸಿದ ಪ್ರಶ್ನೆಗಳು ಯಾವುವು ?

ಗೌತಮನ ಮನೋಲೋಕವನ್ನು ನಿರಂತರವಾಗಿ ದಹಿಸುತ್ತಿದ್ದ ಪ್ರಶ್ನೆಗಳಿವು , ಬದುಕು ಎಂದರೇನು ? ಅದರ ಉದ್ದೇಶ ವೇನು ? ರೋಗ , ಮುತ್ತು , ಮರಣಗಳನ್ನು ಗೆಲ್ಲುವುದು ಸಾಧ್ಯವೆ ? ಮನುಷ್ಯನ ಸಂಕಟಗಳ ಮೂಲ ಯಾವುದು ? – ಈ ಎಲ್ಲ ಪ್ರಶ್ನೆಗಳೂ ಅವನನ್ನು ಸುಡುತ್ತಿದ್ದವು .

1st Puc ಬುದ್ಧ ಬಿಸಿಲೂರಿನವನು ಕನ್ನಡ ನೋಟ್ಸ್ | Buddha Bisilurinavanu Kannada Notes
1st Puc ಬುದ್ಧ ಬಿಸಿಲೂರಿನವನು ಕನ್ನಡ ನೋಟ್ಸ್ | Buddha Bisilurinavanu Kannada Notes

05-06ವಾಕ್ಯಗಳಲ್ಲಿ ಉತ್ತರಿಸಿ : Buddha Bisilurinavanu Kannada Notes

ಲುಂಬಿನಿ ಪಯಣದ ಅನುಭವಗಳೇನು ?

 ಲುಂಬಿನಿಯನ್ನು ತಲುಪಲು ಬಹುದೂರದ ರಸ್ತೆಯಣ ಮಾಡಬೇಕು . ಗುಡ್ಡಗಾಡನ್ನು ಇಳಿದು , ಬಟಾಬಯಲನ್ನು ಹಿಡಿದು ಸಾಗಲು ಗಂಟೆಗಟ್ಟಲೆ ಸಮಯ ಬೇಕು , ಏಕೆಂದರೆ ಅದು ಬರೀ ಬೆಟ್ಟಗಳ ತಪ್ಪಲು , ನೇಪಾಳ ಸರ್ಕಾರ ವಿಮಾನದ ವ್ಯವಸ್ಥೆ ಯನ್ನೂ ಕಲ್ಪಿಸಿದೆ . ಹಿಮಪರ್ವತಗಳನ್ನು ತಂಪುಗಾಳೆಯನ್ನೂ ಮರೆತು ರಣಬಿಸಿಲಿಗೆ ಒಡ್ಡಿಕೊಂಡಾಗ ಸಿಗುವುದು ಲುಂಬಿನಿ . ಭಾರತದ ಗಡಿಯತ್ತ ಇರುವ ಪುಟ್ಟ ಗ್ರಾಮವದು .

ಲೇಖಕರು ಲುಂಬಿನಿ ಶಿಖರಾಗ್ರದಲ್ಲಿರುವ ತಂಪಾದ ಊರೆಂದು ಭಾವಿಸಿದ್ದರಂತೆ . ಅಲ್ಲಿಗೆ ಬಂದ ಮೇಲಷ್ಟೇ ಅವರಿಗೆ ಬುದ್ಧ ಬಿಸಿಲೂರಿನವನು ಎಂದು ತಿಳಿದುದು – ಹೀಗೆ ಲುಂಬಿನಿಯ ಪಯಣ ಸುಖಕರ ವಂದೇನೂ ಅನ್ನಿಸಲಿಲ್ಲವೆಂದೂ ಲೇಖಕರು ಹೇಳಿದ್ದಾರೆ .

ಸೌತಮನ ಮನಸ್ಸಿನ ಉರಿ ಯಾವ ಬಗೆಯದೆಂದು ಲೇಖಕರು ಊಹಿಸಿದ್ದಾರೆ ?

 ಗೌತಮನು ಹುಟ್ಟಿದ್ದು ವೈಶಾಖ ಪೂರ್ಣಿಮೆಯಂದು , ಅವನಿಗೆ ಜ್ಞಾನೋದಯವಾದುದೂ ವೈಶಾಖ ಪೂರ್ಣಿಮೆಯಂದ ಇಲ್ಲಿ ಶಾಖವೆಂಬುದು ಒಂದು ಸಂಕೇತವೆಂದು ಲೇಖಕರು ಊಹಿಸುತ್ತಾರೆ .

ಏಕೆಂದರೆ ತಮನ ಮನಸ್ಸನ್ನು ನಿರಂತರವಾಗಿ ದಹಿಸುತ್ತಿದ್ದ ಪ್ರಶ್ನೆಗಳು ಅನೇಕವಿದ್ದು , ಬದುಕು – ಆದರ ಅರ್ಥ , ರೋಗ , ಮುಪ್ಪು , ಮರಣಗಳ ರಹಸ್ಯ ಮನುಷ್ಯನ ಸಂಕಟಗಳ ಮೂಲ – ಮುಂತಾದವು ಬುದ್ಧನ ಮನಸ್ಸನ್ನು ನಿರಂತರವಾಗಿ ದಹಿಸುತ್ತಿದ್ದವು .

ಅವನಿಗೆ ಮುಂದೆ ತಾನು ರಾಜನಾದರೆ ಈ ಪ್ರಶ್ನೆಗಳಿಗೆ ಉತ್ತರ ದೊರೆಯಲಾರದೆನಿಸಿತು . ಆದ್ದರಿಂದ ಬುದ್ಧ ಏಕಾಂತದ , ಸಂನ್ಯಾಸದ ದಾರಿಯನ್ನು ಹುಡುಕಿಕೊಂಡನೆಂದು ಲೇಖಕರು ಊಹಿಸಿದ್ದಾರೆ .

ಮಾಯಾದೇವಿ ದೇವಾಲಯದ ಪರಿಸರ ಹೇಗಿತ್ತು ?

 ಮಾಯಾದೇವಿಯ ದೇವಾಲಯ ಶ್ವೇತವರ್ಣದಿಂದ ಕೂಡಿದ್ದು ಚೌಕಾಕಾರದಲ್ಲಿ ನಿಂತಿರುವುದು , ಅಲ್ಲಿನ ಪರಿಸರ ತುಂಬಾ ಶುಭ್ರವಾಗಿರುವುದು . ಅಲ್ಲಿ ಆರಾಧನೆ , ಅರ್ಚನೆ , ಆಚರಣೆಗಳ ಕಂದಾಚಾರವಿಲ್ಲ . ಇಚ್ಛೆ ಇದ್ದವರು ತ 0 ಪು ಹಾಸಿನ ಮೇಲೆ ಕುಳಿತು ಧ್ಯಾನಿಸಲು ಅವಕಾಶವಿದೆ .

ಇಲ್ಲಿನ ಕೇಂದ್ರ ಭಾಗದಲ್ಲಿ ಗೌತಮನು ಜನಿಸಿದ ಜಾಗವೆಂದು ಒಂದು ಕಲ್ಲನ್ನಿರಿಸಿದ್ದಾರೆ , ಅದು ಹಸಿರು ಬಣ್ಣದಿಂದ ಕೂಡಿ ಪಾಚಿಗಟ್ಟಿದಂತೆ ಕಾಣುತ್ತಿತ್ತೆಂದು ಲೇಖಕರು ವರ್ಣಿಸಿದ್ದಾರೆ . ಗೌತಮನ ಜನನಕ್ಕೆ ಈ ಕಲ್ಲು ಸಾಕ್ಷಿ ಯಾಗಿತ್ತೋ ಇಲ್ಲವೋ , ಆದರೆ ಚರಿತ್ರೆ ಪುರಾಣಗಳು ಸಂಧಿಸುವ ಅಮೂರ್ತ ಸಂಕೇತದಂತೆ ಆ ಶಿಲೆ ಕಾಣಿಸಿತೆಂದು ಲೇಖಕರು ವಿವರಿಸಿದ್ದಾರೆ .

ಲೇಖಕರ ಕುಟುಂಬದವರೂ ಸೇರಿದಂತೆ ಅನೇಕರು ಅಲ್ಲಿ ಕುಳಿತು ಧ್ಯಾನಿಸುತ್ತಿದ್ದರಂತೆ . ಒಟ್ಟಿನಲ್ಲಿ ಮಾಯಾದೇವಿ ದೇವಾಲಯ ಅತ್ಯಂತ ಸುಂದರವಾಗಿತ್ತೆಂದು ಲೇಖಕರು ಹೇಳಿದ್ದಾರೆ .

ಕಪಿಲವಸ್ತುವಿನಲ್ಲಿ ಲೇಖಕರ ನಿರಾಸೆಗೆ ಕಾರಣವೇನು ?

 ಲೇಖಕರು ” ಕಪಿಲವಸ್ತುವಿನಿಂದ ಹೊರಟು ಅನೇಕಾನೇಕ ಪ್ರಾಚೀನ ಸ್ಮಾರಕಗಳನ್ನು ನೋಡುತ್ತ ಹೋದರೂ ಗಾಢವಾಗಿ ಅಷ್ಟೊತ್ತಿದ್ದು ಗೌತಮ ಇಲ್ಲದ ಅರಮನೆ ಮತ್ತು ಅವರೇ ಕಟ್ಟಿಕೊಂಡ ಕಲ್ಪನೆಯ ಅರಮನೆ ಮಾತ್ರ . ಬೌದ್ಧ ಧರ್ಮವು ಪ್ರಚಲಿತವಾಗಿರುವ ಎಲ್ಲ ದೇಶಗಳೂ ಲುಂಬಿನಿಯಲ್ಲಿ ಪೈಪೋಟಿಯಿಂದ ಅದ್ದೂರಿಯಾದ ವರ್ಣರಂಜಿತ ಮೊನಾಸ್ತ್ರಿಗಳನ್ನು ನಿರ್ಮಿಸಿವೆ .

ಸೈಕಲ್ ರಿಕ್ಷಾ ಏರಿ ಇವನ್ನೆಲ್ಲ ಸುತ್ತಿ ಬಂದವು . ಆದರೆ ಹೃದಯಕ್ಕೆ ನಾಟಿದ್ದು ಗೌತಮ ಇಲ್ಲದ ಅರಮನೆಯ ಕತೆ ಹೇಳುವ ಉದ್ಯಾನವನ ಮಾತ್ರ . ನಮ್ಮ ಎದೆಯ ನಿಧಿಯಂತೆ ಪೋಷಿಸಿಕೊಂಡಿದ್ದ ಸುವರ್ಣ ಅಕಾರಗಳು ದೊಪ್ಪನೆ ಕುಸಿದು ಬಿದ್ದು ಘೋರ ನಿರಾಶೆಯಾಗಿ , ಆದರೆ ಆ ನಿರಾಶೆಯಲ್ಲಿಯೇ ಅದೇ ತಾಣದಲ್ಲಿ ನಮ್ಮದೇ ಆದ ಸುವರ್ಣ ಶಿಲ್ಪವನ್ನು ಕ್ಷಣಾರ್ಧದಲ್ಲಿ ಕಲ್ಪಿಸಿಕೊಳ್ಳುವ ಸ್ಪೋಪಜ್ಞ ಸೋಜಿಗವನ್ನು ಕಪಿಲವನ್ನು ಕಟ್ಟಿಕೊಟ್ಟಿತು ‘ ‘ ಎಂದಿದ್ದಾರೆ .

ಬುದ್ಧ ಬಿಸಿಲೂರಿನವನು ನೋಟ್ಸ್

 ಇಟ್ಟಿಗೆ ಕಟ್ಟಡಗಳ ಮೇಲೆ ಲೇಖಕರು ಏನೇನು ಚರ್ಚಿಸಿದರು ?

ಲೇಖಕರು ಮತ್ತು ಅವರ ಮಡದಿ – ಮಕ್ಕಳು ಎಲ್ಲರೂ ಇಟ್ಟಿಗೆ ಕಟ್ಟಡಗಳ ಮೇಲೆ ನಿಂತು ಇಲ್ಲದ ಅರಮನೆಯನ್ನು ಕಲ್ಪಿಸಿಕೊಂಡು ಗೌತಮನ ಜೀವನದ ಅನೇಕ ವಿಷಯವನ್ನು ಚರ್ಚಿಸಿದರು .

ಆ ಜಾಗದಲ್ಲಿ ಗೌತಮನು ಆಟವಾಡಿರಬಹುದು , ಇಲ್ಲಿ ಊಟ ಮಾಡಿರಬಹುದು , ಇಲ್ಲಿ ಪಟ್ಟಾಭಿಷೇಕವಾಗಿರಬಹುದು , ಈ ಜಾಗವು ಗೌತಮ – ಯಶೋಧರೆಯರ ಕೋಣೆ ಇದ್ದಿರಬಹುದು . ರಾಹುಲನ ಗೆಳೆಯರು ಅಲ್ಲಿ ಆಡಿರಬಹುದು , ಮಾಯಾದೇವಿಯು ಈ ಗವಾಕ್ಷಿಯಿಂದ ಮಗನನ್ನು ಕೂಗಿರಬಹುದು ,

ಇದೇ ತಿರುವಿ ನಲ್ಲಿ ಗೌತಮ ನಗರದರ್ಶನದಲ್ಲಿ ಮುಪ್ಪಿನ ಮುದುಕನನ್ನು , ಹಣ್ಣು ಹಣ್ಣು ರೋಗಿಯನ್ನು ಶವಯಾತ್ರೆಯನ್ನು ಕಂಡಿರಬಹುದು , ಮಧ್ಯರಾತ್ರಿಯಲ್ಲಿ ಗೌತಮನು ಈ ಬಾಗಿಲಿನಿಂದಲೇ ಹೊರಗೆ ನಡೆದಿರಬಹುದು – ಹೀಗೆ ಅನೇಕ ವಿಚಾರಗಳನ್ನು ಅವರೆಲ್ಲ ಚರ್ಚಿಸಿದರು .

ಕಪಿಲವಸ್ತುವಿನ ಉದ್ಯಾನವನದ ಬಗ್ಗೆ ಲೇಖಕರು ನೀಡುವ ವಿವರಗಳನ್ನು ಸಂಗ್ರಹಿಸಿರಿ ,

 ಲೇಖಕರ ಕುಟುಂಬವು ಲುಂಬಿನಿಯನ್ನು ನೋಡಿಯಾದ ಮೇಲೆ ಕಪಿಲವಸ್ತುವಿಗೆ ಬಂದಿತು . ಅದನ್ನು ಇಂದು ಲಾರ್‌ಕೋಟ್ ಎನ್ನುವರೆಂದು ಲೇಖಕರು ಹೇಳಿದ್ದಾರೆ .

ಅಲ್ಲಿ ಲುಂಬಿನಿಯಲ್ಲಿದ್ದಂತಹುದೇ ಒಂದು ಉದ್ಯಾನವನ್ನು ನಿರ್ಮಿಸಿದ್ದರು . ಈ ಉದ್ಯಾನದಲ್ಲಿಯೇ ಬುದ್ಧನ ತಂದೆ ಶುದ್ಧೋದನನ ಅರಮನೆಯಿದ್ದಿತೆಂದು ತಿಳಿದು ಲೇಖಕರು ಪುಳಕಗೊಂಡರು . ಗೌತಮನು ಬಾಲ್ಯ ಮತ್ತು ಯೌವನಗಳನ್ನು ಕಳೆದ ಸ್ಥಳವಿದು . ಅದೊಂದು ಅಪೂರ್ವ ಜಾಗವಾಗಿತ್ತು .

ಗೌತಮ ಬುದ್ಧನಾಗುವ ಮೊದಲು , ಸಿದ್ದಿಯ ಅರ್ಥ ಗಳಿಸಿ ಸಿದ್ಧಾರ್ಥನಾಗುವ ಮೊದಲು ಇಪ್ಪತ್ತೊಂದು ವರ್ಷಗಳ ಕಾಲ ರಾಜಕುಮಾರನಾಗಿದ್ದ ಪರಿಸರ ಈ ಉದ್ಯಾನವೆಂದು ಲೇಖಕರು ವರ್ಣಿಸಿದ್ದಾರೆ .

ಅಲ್ಲಿ ಬಿದ್ದಿದ್ದ ಇಟ್ಟಿಗೆಯ ಅರೆಬರ ಆಕೃತಿ , ವಿನ್ಯಾಸಗಳಲ್ಲಿ ಸಾವಿರಾರು ವರ್ಷಗಳ ಕತೆಯನ್ನು ಹೇಳುತ್ತವೆಂದಿದ್ದಾರೆ . – ಹೀಗೆ ಕಪಿಲವಸ್ತುವಿನ ಉದ್ಯಾನವನದ ಪರಿಸರವು ಅನೇಕ ನೆನಪುಗಳನ್ನು – ಊಹೆಗಳನ್ನು ಕಲ್ಪನೆಗಳನ್ನು ಹೊಮ್ಮಿಸುವಂಥದ್ದಾಗಿದ್ದಿತು .

1st Puc ಬುದ್ಧ ಬಿಸಿಲೂರಿನವನು ಕನ್ನಡ ನೋಟ್ಸ್ | Buddha Bisilurinavanu Kannada Notes
1st Puc ಬುದ್ಧ ಬಿಸಿಲೂರಿನವನು ಕನ್ನಡ ನೋಟ್ಸ್ | Buddha Bisilurinavanu Kannada Notes

ಸಂದರ್ಭಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

 “ ಬಿಸಿಲೇ ಗೌತಮನನ್ನು ಸಂನ್ಯಾಸಕ್ಕೆ ದೂಡಿರಬೇಕು .

” ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರು ಬರೆದಿರುವ ‘ ಬುದ್ಧ ಬಿಸಿಲೂರಿನವನು ‘ ಎಂಬ ಸೊಗಸಾದ ಪ್ರವಾಸಕಥನದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಲೇಖಕರು ಮತ್ತವರ ಕುಟುಂಬ ಲುಂಬಿನಿಯು ಯಾವುದೋ ಶಿಖರಾಗ್ರದ ತಂಪು ಪ್ರದೇಶದಲ್ಲಿರಬಹುದೆಂದು ಭಾವಿಸಿದ್ದರು .

ಆದರೆ ಅಲ್ಲಿಗೆ ಹೋದಾಗ ಬುದ್ಧ ಬಿಸಿಲೂರಿನವನೆಂಬುದು ಅರ್ಥವಾಯಿತು . ಈ ಬಿಸಿಲಿನಲ್ಲಿ ಬುದ್ಧ ಬೆಳದಿಂಗಳಂತೆ

ಆವತರಿಸಿರಬಹುದೆಂದು ಚಿ ೦ ತಿಸಿದರಂತೆ ಲೇಖಕರ ಮಗಳಾದ ಸಿಹಿಪಟ್ಟಿಯು ಅಲ್ಲಿನ ಬಿಸಿಲಿನ ಝಳವನ್ನು ಅನುಭವಿಸುತ್ತಾ ‘ ಈ ಬಿಸಿಲೇ ಗೌತಮನನ್ನು ಸನ್ಯಾಸಕ್ಕೆ ದೂಡಿರಬೇಕು ‘ ಎಂದಳಂತೆ , ಲೇಖಕರಿಗೂ ಅದು ನಿಜವಿರಬಹುದನ್ನಿಸಿತಂತೆ . ಲುಂಬಿನಿಯ ಬಿಸಿಲಿಗೆ ಲೇಖಕ ಮತ್ತು ಅವರ ಮಗಳು ಪ್ರತಿಕ್ರಿಯಿಸಿದ ಬಗೆ ಇದಾಗಿದೆ .

ಇನ್ನು ಮುಂದೆ ಅನಗತ್ಯವಾಗಿ ಕೋಪಿಸಿಕೊಳ್ಳುವುದಿಲ್ಲ .

” ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ ಬುದ್ಧ ಪಿಸಿಲೂರಿನವನು ‘ ಎಂಬ ಪ್ರವಾಸಕಥನದಿಂದಾಯ್ದುಕೊಂಡಿರುವ ವಾಕ್ಯವಿದು ,

ಲೇಖಕರು ಮಾಯಾದೇವಿಯ ದೇವಾಲಯದಲ್ಲಿ ಈ ಮೇಲಿನಂತೆ ಶಪಥಗೈದರು . ಲೇಖಕರ ಮಗಳಾದ ಕನಸು ಪುಟ್ಟಿಯು ಗೌತಮ ಜನಿಸಿದ ಈ ಪವಿತ್ರವಾದ ಜಾಗದಲ್ಲಿ ಯಾವುದಾದರೊಂದು ದೌರ್ಬಲ್ಯವನ್ನು ದುರ್ಗುಣವನ್ನು ಬಿಟ್ಟು ಬಿಡುವುದು ಒಳ್ಳೆಯದು , ಏನಾದರೂ ಶಪಥ ಮಾಡೆಂದು ಒತ್ತಾಯಿಸಿದಾಗ ಲೇಖಕರು ಜಾಗರೂಕತೆಯಿಂದ ಇನ್ನು ಮುಂದೆ ಅನಗತ್ಯವಾಗಿ ಕೋಪಿಸಿಕೊಳ್ಳುವುದಿಲ್ಲ ‘ ಎಂದು ಶಪಥ ಮಾಡಿದರಂತೆ .

Buddha Bisilurinavanu Kannada Notes

ಮಗಳು ‘ ಅನಗತ್ಯ ‘ ಎಂಬ ಪದವನ್ನು ಸೇರಿಸುವ ಅಗತ್ಯವಿರಲಿಲ್ಲ ಎಂದು ಆಕ್ಷೇಪಿಸಿದಳು . ಮಗಳ ಒತ್ತಾಯಕ್ಕೆ ಈ ಶಪಥ ಮಾಡಿದರೂ ಕೆಟ್ಟದನ್ನು ತ್ಯಜಿಸಲು , ಒಳ್ಳೆಯದನ್ನು ಮಾಡಲು ಎಲ್ಲಾ ಸ್ಥಳವೂ ಸೂಕ್ತವೆಂದು ಲೇಖಕರು ಅರ್ಥಪೂರ್ಣವಾಗಿ ನುಡಿದಿದ್ದಾರೆ .

ಗವಾಕ್ಷಿಯಿಂದ ಮಗನನ್ನು ಕೂಗಿರಬಹುದು .

 ” ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ ಬುದ್ಧ ಬಿಸಿಲೂರಿನವನು ‘ ಎಂಬ ಪ್ರವಾಸಕಥನದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸುತ್ತೇವೆ .

ಲೇಖಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ಲುಂಬಿನಿಯಿಂದ ಇಪ್ಪತ್ತೇಳು ಕಿಲೋಮೀಟರ್ ದೂರದಲ್ಲಿದ್ದ ಕಪಿಲವಸ್ತುವಿಗೆ ಭೇಟಿಯಿತ್ತರು . ಅಲ್ಲಿನ ಉದ್ಯಾನವನದಲ್ಲಿ ಶುದ್ಧೋದನನ ಅರಮನೆ ಇದ್ದಿತಂತೆ .

ಅಲ್ಲಿದ್ದದ್ದು ಅರಬರ ಇಟ್ಟಿಗೆಗಳ ಕಟ್ಟಡ ಮಾತ್ರ .ಅಲ್ಲಿಗೆ ಹೋದ ಲೇಖಕರು ಇಲ್ಲದ ಅರಮನೆಯನ್ನು ಊಹಿಸಿಕೊಂಡು ಇಲ್ಲೇ ಗೌತಮನು ಆಟವಾಡಿರಬಹುದು .

ಈ ಕಿಟಕಿಯಿಂದ ಮಾಯಾದೇವಿ ತನ್ನ ಮಗನನ್ನು ಕೂಗಿ ಕರೆದಿರಬಹುದು – ಎಂದೆಲ್ಲಾ ಊಹಿಸಿಕೊಂಡ ಸಂದರ್ಭದಲ್ಲಿ ಈ ಮೇಲಿನ ವಾಕ್ಯವನ್ನು ಬರೆದಿದ್ದಾರೆ .

  ‘ ಬುದ್ಧನೇ ಇಲ್ಲದ ಅರಮನೆಗೊಬ್ಬ ಗಾರ್ಡು !!

 ಶ್ರೀ ನಾಗತಿಹಳ್ಳಿ ಚಂದ್ರಶೇಖರ್ ಅವರು ಬರೆದಿರುವ ‘ ಬುಡ್ಡ ಬಿಸಿಲೂರಿನವನು ‘ ಎಂಬ ಪ್ರವಾಸಕಥನದಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ .

 ಕಪಿಲವಸ್ತುವಿನಲ್ಲಿದ್ದ ಉದ್ಯಾನವನದಲ್ಲಿ ಶುದ್ಧೋದನನ ಅರಮನೆಯಿದ್ದ ಜಾಗವನ್ನು ಲೇಖಕರು ಸಂದರ್ಶಿಸಿದರು . ಅರೆಬರೆ ಇಟ್ಟಿಗೆಯ ಕಟ್ಟಡಗಳಲ್ಲಿ ಇಲ್ಲದ ಅರಮನೆಯನ್ನು ಕಟ್ಟಿಕೊಂಡು ಕಲ್ಪನಾಲೋಕದಲ್ಲಿ ವಿಹರಿಸುತ್ತಾ ಹೊರಬರುತ್ತಿರು ವಾಗ ‘ ಕಾಫಿಗೆ ದುಡ್ಡು ಕೊಡಿ ‘ ಎಂಬ ಆಗುಂತಕ ಧ್ವನಿಯನ್ನು ಕೇಳಿ ಲೇಖಕರು ವಾಸ್ತವಕ್ಕಿಳಿದರು .

ನೋಡಿದರೆ ಒಬ್ಬ ಸೆಕ್ಯೂರಿಟಿ ಗಾರ್ಡು ! ಬುದ್ಧನೇ ಇಲ್ಲದ ಆರಮನೆಗೊಬ್ಬ ಗಾರ್ಡು ಎಂದು ಲೇಖಕರಿಗೆ ತಮಾಷೆ ಎನಿಸಿತು .ಅವನೊಡ್ಡಿದ ರಿಜಿಸ್ಟರ್‌ನಲ್ಲಿ ವಿವರ ಬರೆದು ಅಲ್ಲಿಂದ ಹಿಂದಿರುಗಿದರು .

 ಗೌತಮ ಜನಿಸಿದ್ದು ಎಲ್ಲಿ ?

ಲುಂಬಿನಿ ಉದ್ಯಾನವನದಲ್ಲಿ ಗೌತಮ ಬುದ್ಧನು ಜನಿಸಿದನು .

ಬುದ್ಧನಿಗೆ ಜ್ಞಾನೋದಯವಾದ ದಿನ ಯಾವುದು ?

ಬುದ್ಧನಿಗೆ ವೈಶಾಖ ಪೂರ್ಣಿಮೆಯಂದು ಜ್ಞಾನೋದಯವಾಯಿತು .

ಸಿದ್ಧಾರ್ಥನ ಮಗನ ಹೆಸರು

ರಾಜ ಶುದ್ಧೋದನ

ಇತರೆ ಪ್ರಮುಖ ವಿಷಯಗಳ ಮಾಹಿತಿ ಲಿಂಕ್

ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು

ಜ್ಯೋತಿಷ್ಯವು ಅರ್ಥಪೂರ್ಣವೋ? ಅರ್ಥರಹಿತವೋ?

ಗಾಂಧಿ ಪಾಠದ ನೋಟ್ಸ್

Leave a Reply

Your email address will not be published. Required fields are marked *