nirakarane kannada lesson notes |ನಿರಾಕರಣೆ ಗದ್ಯ ನೋಟ್ಸ್

nirakarane kannada lesson notes |ನಿರಾಕರಣೆ ಗದ್ಯ ನೋಟ್ಸ್

Nirakarane Kannada Lesson Notes, ನಿರಾಕರಣೆ ಗದ್ಯ ನೋಟ್ಸ್, nirakarane lesson with Questions and Answers Pdf, Summary, 1st PUC Kannada Textbook

nirakarane kannada lesson notes

ಲೇಖಕಿಯ ಪರಿಚಯ

ವೀಣಾ ಶಾಂತೇಶ್ವರ

ಜನನ : ೧೯೪೫ ರಲ್ಲಿ ಜನಿಸಿದರು .

ಕಥಾ ಸಂಕಲ : ಕುರಿಗಾಹಿ ಬಿಲ್ಲೇಸುರ

ಕನ್ನಡಕ್ಕೆ ಅನುವಾದಗೊಂಡ ಕೃತಿ :

ಹಿಂದಿಯ ಲೇಖಕ ಆಸ್ತೇಯರ ಕಾದಂಬರಿ

ನದೀ ದ್ವೀಪಗಳು

ನದೀ ದ್ವೀಪಗಳು ಕನ್ನಡಕ್ಕೆ ಅನುವಾದಗೊಂಡ ಕೃತಿ

ಕಥಾಸಂಕಲನಗಳು :

  • ಕೊನೆಯದಾರಿ
  • ಕವಲು
  • ಹಸಿವು
  • ಬಿಡುಗಡೆ

ಪ್ರಶಸ್ತಿ ಗಳು :

  • ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
  • ಅನುಪಮ ಪ್ರಶಸ್ತಿ
  • ದಾನಚಿಂತಾಮಣಿ
  • ಅತ್ತಿಮಬ್ಬೆ ಪ್ರಶಸ್ತಿ
  • ಕಾತ್ಯಾಯಿನಿ ಸಮ್ಮಾನ್

ಅಭಿನಂದನಾ ಗ್ರಂಥ : ನಿರ್ದಿಂಗತ

ಒಂದು ವಾಕ್ಯದಲ್ಲಿ ಉತ್ತರಿಸಿ

ರಕ್ಷಾ ಕರಂಡವು ಯಾರ ಕೈಯಿಂದ ಕೆಳಗೆ ಬಿದ್ದಿತು ?

ರಕ್ಷಾ ಕರಂಡವು ಭರತಕುಮಾರನ ಮುಂಗೈಯಿಂದ ಕೆಳಗೆ ಬಿದ್ದಿತು .

ಭರತನ ತಂದೆಯ ಹೆಸರೇನು ?

ಭರತನ ತಂದೆಯ ಹೆಸರು ದುಷ್ಯಂತ ಮಹಾರಾಜ

ಶಕುಂತಲೆಯ ತಾಯಿಯ ಹೆಸರೇನು ?

ಶಕುಂತಲೆಯ ತಾಯಿಯ ಹೆಸರು ಮೇನಕೆ

ಯಾರ ಶ್ರೇಯಸ್ಸಿಗಾಗಿ ಶಕುಂತಲೆ ಅರಮನೆಗೆ ಬಂದಿದ್ದಾಳೆ ?

ತನ್ನ ಮಗನಾದ ಭರತಕುಮಾರನ ಶ್ರೇಯಸ್ಸಿಗಾಗಿ ಶಕುಂತಲೆ ಅರಮನೆಗೆ ಬಂದಿದ್ದಾಳೆ .

ಶಕುಂತಲೆಯ ಅಂತಃಪುರದಿಂದ ದುಷ್ಯಂತ ಹೊರ ನಡೆದದ್ದು ಹೇಗೆ ?

ದುಷ್ಕಂತ ಮಹಾರಾಜನು ಭಾರವಾದ ಹೆಜ್ಜೆಗಳನ್ನಿಡುತ್ತಾ ಶಕುಂತಲೆಯ ಅಂತಃಪುರದಿಂದ ಹೊರ ನಡೆದನು .

ಭರತನ ತಂದೆಯ ಹೆಸರೇನು ?

ಭರತನ ತಂದೆಯ ಹೆಸರು ದುಷ್ಯಂತ ಮಹಾರಾಜ

ಶಕುಂತಲೆಯ ತಾಯಿಯ ಹೆಸರೇನು ?

ಶಕುಂತಲೆಯ ತಾಯಿಯ ಹೆಸರು ಮೇನಕೆ

2 – 3 ವಾಕ್ಯಗಳಲ್ಲಿ ಉತ್ತರಿಸಿ

ಆರ್ಯಪುತ್ರ ಬಂದಿದ್ದಾನೆ ಎಂದಾಗ ಶಕುಂತಲೆಯ ಪ್ರತಿಕ್ರಿಯೆ ಏನು ?

ಶಕುಂತಲೆಗೆ ಆಶ್ಚರ್ಯವಾಗುವುದು . ” ಹೌದೆ ? ನಿಜವಾಗಿಯೂ ಆರ್ಯಪುತ್ರ ನನ್ನನ್ನು ಕಾಣಲು , ತನ್ನೊಂದಿಗೆ ಕರೆದೊಯ್ಯಲು ಬಂದಿರುವನೇ ದುಷ್ಕಂತ ? ‘ ‘ ಎಂಬ ಪ್ರಶ್ನೆಗಳ ಸರಮಾಲೆಯೇ ಅವಳಲ್ಲಿ ಮೂಡಿತು .

ಅಪರಾಜಿತಾ ಬಳ್ಳಿಯ ಗುಣ ಯಾವುದು ?

ಅಪರಾಜಿತಾ ಬಳ್ಳಿಯನ್ನು ಭರತಕುಮಾರನ ಜಾತಕರ್ಮ ಸಮಯದಲ್ಲಿ ಪೂಜ್ಯರಾದ ಮಾರೀಚರು ಕೈಗೆ ಕಟ್ಟಿ ತಂದೆ – ತಾಯಿಯ ವಿನ : ಯಾರಾದರೂ ಅದನ್ನು ಮುಟ್ಟಿದರೆ ಅದು ಹಾವಾಗಿ ಮುಟ್ಟಿದವರನ್ನು ಕಚ್ಚುತ್ತಿತ್ತು.

ಶಕುಂತಲೆ ತನ್ನ ಬದುಕು ಏನಾಗಿದೆ ಎಂದು ಯೋಚಿಸುತ್ತಾರೆ ?

ಶಕುಂತಲೆಯು ತನ್ನ ಬದುಕು ಒಂದು ಅಗ್ನಿಕುಂಡವಾಗಿದೆ , ಬೆಂಗಾಡಾಗಿದೆ . ದಾವಾನಲವಾಗಿದೆ , ಬತ್ತಿ ಹೋದ ಸಮುದ್ರ ವಾಗಿದೆ ಎಂದು ಯೋಚಿಸಿದಳು .

ಶಕುಂತರ ಕಂಚಿನ ಧ್ವನಿಯಿಂದ ದುಷ್ಕಂತನಿಗೆ ಹೇಳಿದ್ದೇನು ?

ನನ್ನ ಮನಸ್ಸನ್ನು ಶಾಂತಗೊಳಿಸುವುದಿಲ್ಲವೆ ? ಎಂದ ದುಷ್ಕಂತನಿಗೆ ನಿಲ್ಲು ಮಹಾರಾಜ ‘ ಎಂದು ಕಂಚಿನ ಕಂಠದಲ್ಲಿ ನುಡಿದಳು.

ಅರಮನೆಗೆ ಯಾವ ಕಾರಣಕ್ಕಾಗಿ ಬಂದಿದ್ದೇನೆಂದು ಶಕುಂತಲೆ ಹೇಳುತ್ತಾರೆ ?

ಶಕುಂತಲೆ ‘ ಮಹಾರಾಜ , ನಾನು ಅರಮನೆಗೆ ಬಂದಿರುವುದು ಕುಮಾರನ ಭರತನ ಶ್ರೇಯಸ್ಸಿಗಾಗಿ ಮಾತ್ರ ಆತನ ವಿದ್ಯಾಭ್ಯಾಸ , ಸರಿಯಾಗಿ ತರಬೇತಿ ನಡೆಯಬೇಕು ಎಂಬ ಹಂಬಲದಿಂದ ನಿನ್ನ ನಂತರ ಅವನು ಈ ಸಾಮ್ರಾಜ್ಯದ ಕೀರ್ತಿಯನ್ನು ಎಲ್ಲ ಕಡೆ ಹರಡುವಂತೆ ನೋಡಿಕೊಳ್ಳಬೇಕಲ್ಲ . ಅವನನ್ನು ಹಾಗೆ ಬೆಳೆಸುವ ಜವಾಬ್ದಾರಿ ನಮ್ಮಿಬ್ಬರದಲ್ಲವೆ ? ‘ ‘ ಎಂದು ದುಷ್ಟಂತನಿಗೆ ಹೇಳಿದಳು .

ದುಷ್ಯಂತ ರಾಜನು ಶಕುಂತಲೆಯ ಅಂತಃಪುರದಿಂದ ಹೊರ ನಡೆದಾಗ ಆತನ ಮನಸ್ಥಿತಿ ಹೇಗಿತ್ತು ?

ದುಷ್ಕಂತ ರಾಜನು ಶಕುಂತಲೆಯ ಅಂತಃಪುರದಿಂದ ಹೊರ ನಡೆದಾಗ ಅವನ ಮನಸ್ಸನ್ನು ದುಃಖವೆಂಬ ಕತ್ತಲೆ ಆವರಿಸಿತ್ತು . ಭಾರವಾದ ಹೆಜ್ಜೆಗಳನ್ನಿಡುತ್ತಾ ನಿರಾಸೆ , ಪಶ್ಚಾತ್ತಾಪದ ಮನಸ್ಥಿತಿಯಲ್ಲಿ ಆತನಿದ್ದನು .

5-6 ವಾಕ್ಯಗಳಲ್ಲಿ ಉತ್ತರಿಸಿ

ಶಕುಂತಲೆ ತನ್ನ ಬದುಕನ್ನು ಅರ್ಥೈಸಿಕೊಂಡದ್ದು ಹೇಗೆ ? ತಿಳಿಸಿ .

ತನ್ನನ್ನು ಪ್ರೀತಿಸಿ ತಿರಸ್ಕರಿಸಿದ ದುಷ್ಕಂತ ಮಹಾರಾಜನಿಗಾಗಿ ನಿರೀಕ್ಷೆಯ ನೋವಲ್ಲಿ ನಲುಗುತ್ತಿರುವ ಬದುಕು ತನ್ನದೆಂದು ಶಕುರಿತಲೆ ಯೋಚಿಸುತ್ತಾಳೆ .

ಹಲವು ವರ್ಷಗಳಿಂದ ರಾತ್ರಿ ಹಗಲೆನ್ನದೆ ಅವಮಾನದ ಅಗ್ನಿಯಲ್ಲಿ ಬೇಯುತ್ತಿರುವ , ಬದುಕು ತನ್ನದೆಂದು ಯೋಚಿಸುತ್ತಾಳೆ ಅವಳಲ್ಲಿ ತುಂಬಿರುವುದು ಬರಿ ನೋವಿನ ನೆನಪುಗಳು ಮಳೆ ಸುರಿಯುತ್ತಿರುವ ಅದೆಷ್ಟು ರಾತ್ರಿ ಗಳನ್ನು ತಾನು ಆತನ ನೆನಪಿನಲ್ಲಿ ಕಣ್ಣೀರು ಸುರಿಸುತ್ತಾ ಕಳೆದೆ ? ಆತನ ವ್ಯರ್ಥ ನಿರೀಕ್ಷೆಯಲ್ಲಿ ಸಂಕಟಪಡುತ್ತಾ ಕಳೆದೆ ? ಇಡೀ ತನ್ನ ಜೀವನವೇ ಆತನಿಗಾಗಿ ಕಾಯುವಿಕೆಯಾಗಿ ಹೋಯಿತು .

ತನ್ನ ಬದುಕು ಒಂದು ಅಗ್ನಿಕುಂಡವಾಗಿದೆ , ಬೆಂಗಾಡಾಗಿದೆ . ರಾಮನಲ ವಾಗಿದೆ , ಬತ್ತಿಹೋದ ಸಮುದ್ರವಾಗಿದೆ ಎಂದು ಅರ್ಥೈಸಿರುವಳು .

ದುಷ್ಯಂತ ಮತ್ತು ಶಕುಂತಲೆ ನಡುವೆ ಅಂತಃಪುರದಲ್ಲಿ ನಡೆದ ಮಾತುಗಳನ್ನು ವಿವರಿಸಿ

ಶಕುಂತಲೆಯ ಅಂತಃಪುರಕ್ಕೆ ಬಂದ ದುಷ್ಯಂತ ಮಹಾರಾಜನ ” ದೇವಿ , ನಾನಿಂದು ಪರಮಸುಖಿ ! ‘ ಎಂದಾಗ ಶಕುಂತಲೆ ಏನನ್ನೂ ಹೇಳದೆ ಸುಮ್ಮನಿದ್ದಳು . ದುಷ್ಕಂತನೇ ಮುಂದುವರೆದು ” ವರ್ಷಗಳ ಕಾಲ ತಪಿಸಿರುವ ನನ್ನ ಮನಸ್ಸನ್ನು ಶಾಂತ ಗೊಳಿಸುವುದಿಲ್ಲವೇ ? ಇನ್ನೂ ಏನು ಯೋಚಿಸುತ್ತಿರುವೆ ? ಎಂದು ನಯವಾಗಿ ನುಡಿದಾಗ , ಶಕುಂತಲೆ ಕಂಚಿನ ಕಂಠದಲ್ಲಿ ನಿಲ್ಲು ಮಹಾರಾಜ ‘ ಎಂದಳು .

ಮತ್ತು ಭರತಕುಮಾರನ ಶ್ರೇಯಸ್ಸಿಗಾಗಿ ಮಾತ್ರ ತಾಯಿಯ ಕರ್ತವ್ಯ ನಿರ್ವಹಿಸಲು ತಾಸು ಅರಮನೆಗೆ ಬಂದಿರುವುದಾಗಿ ಹೇಳಿದಳು . ಅವಳ ಮಾತುಗಳಿಂದ ಆಘಾತಗೊಂಡ ದುಷ್ಯಂತ ನೀನಿನ್ನೂ ನನ್ನನ್ನು ಕ್ಷಮಿಸಲಿಲ್ಲವೆ ? ‘ ಎಂದು ಕೇಳಿದಾಗ ಶಕುಂತಲೆಯು ಒಬ್ಬರನ್ನೊಬ್ಬರು ಒಪ್ಪಿಕೊಳ್ಳುವ ಸಂದರ್ಭದಲ್ಲಿ ಮಾತ್ರ ಕ್ಷಮೆಗೆ ಅರ್ಥವಿದೆ ಮಹಾರಾಜ . ಆದರೂ ನಿನ್ನ ಮನಸ್ಸಿಗೆ ಸಮಾಧಾನವಾಗುವಂತಿದ್ದರೆ ಇದೋ , ನಿನ್ನನ್ನು ಕ್ಷಮಿಸಿದ್ದೇನೆ ‘ ಎಂದಳು .

ಇದೇನು ನನಗೆ ಶಿಕ್ಷೆ ಕೊಡಬೇಕೆಂದು ನಿರ್ಧರಿಸಿರುವೆಯಾ ? ” ಎಂಬ ದುಷ್ಯಂತನ ಪ್ರಶ್ನೆಗೆ ಶಕುಂತಲೆ ತಾನು ಶಿಕ್ಷೆ ಕೊಡುವನ್ನು ಕಠಿಣ ಮನಸ್ಸಿನವಳಲ್ಲ ನಂದಳು , ಉಂಗುರ ಕಳೆದುಹೋದುದಕ್ಕೆ ತನಗೆ ಮರವಾಯಿತೆಂದು ದುಷ್ಕಂತ ಸಮರ್ಥಿಸಿಕೊಳ್ಳಲು ಯತ್ನಿಸಿದನು . ಅದಕ್ಕೆ ಶಕುಂತಲೆಯು ” ಉಂಗುರವು ಕಳೆದುಹೋಯಿತೆಂಬ ಕ್ಷುಲ್ಲಕ ನಪದಿಂದ ಒಬ್ಬ ಗಂಡಸು ಹೆಣ್ಣನ್ನು ದೂರ ಮಾಡುವುದಾದರೆ ಆ ಪ್ರೀತಿಗೆ ಅರ್ಥವಿಲ್ಲ .

ನಿರಾಕರಣೆ ಗದ್ಯ ನೋಟ್ಸ್

ಅಂಥವನನ್ನು ಕೂಡಲು ನನ್ನ ಆತ್ಮ ಸಮಾನ ಒಪ್ಪುವುದಿಲ್ಲ . ಹೆಣ್ಣಾಗಿ ನಾನು ಆತ್ಮಸಾಕ್ಷಿಗೆ ವಿರುದ್ಧವಾಗಿ ವರ್ತಿಸಲಾರ . ಪ್ರಾಪ್ತನಾದ ನಿನಗೆ ಹೆಚ್ಚಿಗೆ ಹೇಳಲಾರೆ ಎಂದು ತನ್ನ ಅಂತಿಮ ನಿರ್ಧಾರವನ್ನು ತಿಳಿಸಿದಳು . ದುಷ್ಕಂತ ನಿರ್ವಾಹ ವಿಲ್ಲದೆ ಅಲ್ಲಿಂದ ಹೊರಡಬೇಕಾಯಿತು .

ದುಷ್ಯಂತನನ್ನು ನಿರಾಕರಿಸಲು ಶಕುಂತಲೆ ಕೊಡುವ ಕಾರಣಗಳೇನು ? ತಿರಸಿ

ಪತಿ ಎಂತಹವನೇ ಇರಲಿ , ಆತನನ್ನು ತಿರಸ್ಕರಿಸುವ ಹೀನ ವಿಚಾರ ಆರ್ಯಗೆ ಬರಬಾರದೆಂದು ತಿಳಿದಿದ್ದರೂ ಶಕುಂತಲೆ ದುಷ್ಕಂತನನ್ನು ತಿರಸ್ಕರಿಸುತ್ತಾಳೆ . ತನ್ನನ್ನು ನಿರಾಕರಿಸಿದ ಅಪಮಾನ , ನೋವು ನಿರೀಕ್ಷೆಗಳಲ್ಲಿ ಬೇಯುವಂತೆ ಮಾಡಿದ ದುಷ್ಯಂತನನ್ನು ಕ್ಷಮಿಸುವುದಕ್ಕಿಂತ ಧಿಕ್ಕರಿಸುವುದೇ ಸೂಕ್ತವೆಂದು ತೋರುತ್ತದೆ .

ಆತ ಘಾಸಿಗೊಳಿಸಿದ ಅಂತರಾಳದ ಒಳಗು ಮತ್ತೆ ಚೇತರಿಸಿಕೊಳ್ಳದು . ಆತ್ಮಸಮಾನಕ್ಕೆ ಮಾಯಲಾರದ ಗಾಯವಾಗಿರುವುದರಿಂದ ದುಷ್ಯಂತನಲ್ಲಿ ಮೊದಲಿನ ಪ್ರೀತಿ ಚಿಗುರಲಾರದು .

ದುಷ್ಯಂತ ತನ್ನನ್ನು ಒಪ್ಪಿಕೊಂಡಿರುವಂತೆ ತಾನು ಅವನನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ . ಉಂಗುರ ಕಳೆಯಿತೆಂಬ ಕ್ಷುಲ್ಲಕ ಕಾರಣಕ್ಕಾಗಿ ತನ್ನನ್ನು ದೂರ ಮಾಡಿದ ದುಷ್ಕಂತನ ಪ್ರೀತಿ ಅರ್ಥವಿಲ್ಲದ್ದೆಂದು ಶಕುಂತಲೆಯು ಮುಷ್ಕಂತನನ್ನು ತಿರಸ್ಕರಿಸುತ್ತಾಳೆ.

ನಿರಾಕರಣೆ ಕತೆಯಲ್ಲಿ ಬರುವ ಶಕುಂತಲೆಯ ವ್ಯಕ್ತಿತ್ವವನ್ನು ವಿವರಿಸಿ ,

ನಿರಾಕರಣೆ ಕತೆಯಲ್ಲಿ ಬರುವ ಶಕುಂತಲೆಯು ಸ್ತ್ರೀ ಸಮುದಾಯದ ಅತ್ಮಗೌರವವನ್ನು ಕಾಯುವ ಪುರುಷನ ಅವಕಾಶವಾದಿ ತನವನ್ನು ಧಿಕ್ಕರಿಸುವ ದಿಟ್ಟ ವ್ಯಕ್ತಿತ್ವವನ್ನು ಹೊಂದಿದ ಹೆಣ್ಣಾಗಿದ್ದಾಳೆ . ತನ್ನನ್ನು ಅವಮಾನಿಸಿದ ತನ್ನ ಒಳಗಿನ ಕೋಮಲ ಸುಂದರ ಭಾವನೆಗಳನ್ನು ಹೊಸಕಿಹಾಕಿದ , ಬದುಕನ್ನು ದಾವಾನಲ ಬತ್ತಿದ ಸಮುದ್ರವಾಗಿಸಿದ ಪುರುಷನನ್ನು ಒಪ್ಪಿಕೊಳ್ಳಬಾರದೆಂಬ ತಿಳಿವಳಿಕೆಯುಳ್ಳವಳಾಗಿದ್ದಾಳೆ .

ಪತಿ ಎಂತಹವನೇ ಇರಲಿ ಆತನನ್ನು ತಿರಸ್ಕರಿಸುವ ಹೀನ ವಿಚಾರ ಆರ್ಯಸ್ತ್ರೀಗೆ ಬರಬಾರದು ‘ ಎಂಬ ಸಂಗತಿಯನ್ನು ಮೀರಿಯೂ ಅವಳು ದುಷ್ಕಂತನನ್ನು ನಿರಾಕರಿಸುವ ದಿಟ್ಟತನ ತೋರುತ್ತಾಳೆ .

ದುಷ್ಕಂತನ ಸಮಯಸಾಧಕತನದ ಪ್ರೀತಿಗಿಂತ , ಹೆಣ್ಣಾಗಿ ತನ್ನ ಆತ್ಮಗೌರವ ಮುಖ್ಯ ಎಂದು ಯೋಚಿಸುವ , ಅದನ್ನು ಸ್ಪಷ್ಟವಾಗಿ ದುಷ್ಟಂತನಿಗೆ ಹೇಳಿ , ಅವನನ್ನು ತಿರಸ್ಕರಿಸುವ ದಿಟ್ಟ ವ್ಯಕ್ತಿತ್ವದ ಪಾತ್ರವಾಗಿ ಶಕುಂತಲೆ ‘ ನಿರಾಕರಣೆ ‘ ಕತೆಯಲ್ಲಿ ಚಿತ್ರಿತವಾಗಿದ್ದಾಳೆ .

ಪುರುಷ ಸಮಾಜದ ಬಗ್ಗೆ ಶಕುಂತಲೆಯ ನಿಲುವೇನು ?

ಶಕುಂತಲೆ ಹೆಣ್ಣಿಗೆ ಮಾತ್ರ ನೋವು ಸಂಕಟ ಅಪಮಾನದ ಬದುಕನ್ನು ಪುರುಷ ಸಮಾಜ ಕಲ್ಪಿಸಿದೆಯೆಂದು ಯೋಚಿಸು ತಾಳೆ . ಪುರುಷನಿಗೆ ತಾನು ಮಾಡಿದ ತಪ್ಪಿನಿಂದ ಸುಲಭವಾಗಿ ಪಾರಾಗಲು ನೂರು ದಾರಿಗಳಿವೆ .

ತನ್ನ ಅನುಚಿತ ವರ್ತನೆಯಿಂದ ಬೇರೆಯವರಿಗೆ ಆಗುವ ನೋವಿನ ಹೊಣೆಯಿಂದ ತಪ್ಪಿಸಿಕೊಳ್ಳಲು ಪುರುಷನಿಗೆ ನೂರು ಮಾರ್ಗಗಳಿವೆ .

ಪುರುಷ ತಪ್ಪು ಮಾಡಿದ್ದಾನೆಂದರೆ ಸಮಾಜ ಅದನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ . ಲಜ್ಜೆಗೇಡಿತನದ ಬದುಕು ಪುರುಷ ಸಮಾಜದ್ದೆಂದು ಶಕುಂತಲೆ ಯೋಚಿಸುವಳಲ್ಲದೆ ಅತ್ಯಾಭಿಮಾನವಿರುವ ಪ್ರತಿ ಹೆಣ್ಣೂ ಇಂತಹ ಪುರುಷನನ್ನು ಧಿಕ್ಕರಿಸಬೇಕೆಂಬ ಎಲುವನ್ನು ತಾಳಿದ್ದಾಳೆ.

ಇತರೆ ವಿಷಯಗಳ ಮಾಹಿತಿ ಲಿಂಕ್

ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು

ಬುದ್ಧ ಬಿಸಿಲೂರಿನವನು ನೋಟ್ಸ್

ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು

Leave a Reply

Your email address will not be published. Required fields are marked *