ಚತುರನ ಚಾತುರ್ಯ ಗದ್ಯ ಸಾರಾಂಶ | Chaturana Chaturya in Kannada Notes

1st Puc Kannada 9th Lesson Notes Pdf Chaturana Chaturya

ಚತುರನ ಚಾತುರ್ಯ ಗದ್ಯ ಸಾರಾಂಶ, Chaturana Chaturya in Kannada Notes & Questions and Answers Pdf, Notes, Summary, ಪ್ರಥಮ ಪಿ.ಯು.ಸಿ ಚತುರನ ಚಾತುರ್ಯ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st Puc Chaturana Chaturya Kannada Notes Question Answer Summary Guide Pdf Download in Kannada Medium Karnataka State Syllabus, Kseeb Solutions For Class 11 Kannada Chapter 9 Notes 1st Puc Kannada 9th Lesson Notes Pdf Chaturana Chaturya in Kannada Notes 1st PUC Kannada Textbook Answers

ಚತುರನ ಚಾತುರ್ಯ ಗದ್ಯ ಸಾರಾಂಶ

ಕವಿ ಪರಿಚಯ
ಯಾದವ ಕವಿ ಜನನ : ದೊಡ್ಡಬಳ್ಳಾಪುರ

ಬಿರುದುಗಳು:

  • ಉಭಯಕವಿ ವಿಚಕ್ಷಣ
  • ಉಭಯ ಕವಿತಾವಿಶಾರದ

ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಕಾವ್ಯ ರಚನಾ ಕೌಶಲ್ಯವನ್ನು ಹೊಂದಿದ್ದನು ಎಂಬ ವಿಚಾರ ಇದರಿಂದ ತಿಳಿದುಬರುತ್ತದೆ. ಪ್ರಸ್ತುತ ‘ ಕಲಾವತೀ ಪರಿಣಯ ‘ ಗ್ರಂಥವನ್ನು ಈತ ರಚಿಸಿದ್ದಾನೆ.

ಈತನ ಕಾಲ ಕ್ರಿ.ಶ. 1800 ಆಗಿದ್ದರೂ ರಾಜನ ಆಸ್ಥಾನದಲ್ಲಿ ಆಶ್ರಯಪಡೆದವನಾಗಿದ್ದುದರಿಂದಲೂ ಕಾವ್ಯ ಭಾಷೆಯಲ್ಲಿ ಹಳಗನ್ನಡದ ಸೊಗಡು ಯಥೇಚ್ಛವಾಗಿ ಕಂಡುಬರುತ್ತದೆ.

ಚತುರನ ಚಾತುರ್ಯ ಗದ್ಯ ಸಾರಾಂಶ

ಚತುರನ ಚಾತುರ್ಯ ಗದ್ಯ ಸಾರಾಂಶ | Chaturana Chaturya in Kannada Notes
ಚತುರನ ಚಾತುರ್ಯ ಗದ್ಯ ಸಾರಾಂಶ | Chaturana Chaturya in Kannada Notes

ವಾಕ್ಯದಲ್ಲಿ ಉತ್ತರಿಸಿ ಚತುರನ ಚಾತುರ್ಯ ಗದ್ಯ ಸಾರಾಂಶ

ಹುಲಿ ಕಾಡಿನಲ್ಲಿ ಯಾರಿಗೆ ಎದುರಾಗಿ ಬಂದಿತು ?

 ಕಾಡಿನಲ್ಲಿ ಹುಲಿಯು ವಾಪಿತ / ಕ್ಷೌರಿಕನಿಗೆ ಎದುರಾಗಿ ಬಂದಿತು .

ಮಹೇಂದ್ರನು ಯಾವ ಯಜ್ಞವನ್ನು ಕೈಗೊಂಡಿದ್ದನು ?

 ಮಹೇಂದ್ರನು ವ್ಯಾಘ್ರಯಜ್ಞವನ್ನು ಕೈಗೊಂಡಿದ್ದನು ,

 ಹುಲಿ ಕನ್ನಡಿಯಲ್ಲಿ ಕಂಡಿದ್ದೇನು ?

 ಹುಲಿಯು ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬವನ್ನು ಕಂಡಿತು .

 ಹುಲಿಯು ನಾಪಿತನಿಗೆ ಏನನ್ನು ನೀಡುತ್ತೇನೆಂದಿತು ?

ಕಲಿಯು ನಾಪಿತನಿಗೆ ಮುತ್ತುರತ್ನ ಆಭರಣಗಳನ್ನು ನೀಡುತ್ತೇನೆಂದಿತು .

ನಾಪಿತನು ತಂದ ದ್ರವ್ಯದಲ್ಲಿ ವಿಪ್ರನಿಗೆ ಎಷ್ಟು ಕೊಟ್ಟನು ?

ನಾಪಿತನು ತಂದ ದ್ರವ್ಯದಲ್ಲಿ ಅರ್ಧಭಾಗವನ್ನು ವಿಪ್ರನಿಗೆ ಕೊಟ್ಟನು .

ಹುಲಿಯ ಹಿಂಡನ್ನು ಕಂಡು ಹೆದರಿದ ನಾಪಿತ ಮತ್ತು ವಿಪ್ರರು ಎಲ್ಲಿ ಅಡಗಿಕೊಂಡರು ?

 ಹುಲಿಯ ಹಿಂಡನ್ನು ಕಂಡು ಹೆದರಿದ ನಾಪಿತ ಮತ್ತು ವಿಪ್ರರು ಮರದ ಮೇಲೆ ಅಡಗಿಕೊಂಡರು .

ವಿಪ್ರನು ಮರದಿಂದ ಎಲ್ಲಿಗೆ ಬಿದ್ದನು ?

ವಿಪ್ರನು ಮರದಿಂದ ಹುಲಿಗಳ ಹಿಂಡಿನ ಮಧ್ಯೆ ಬಿದ್ದನು .

ನರಿಗೆ ಏಕೆ ಆಶ್ಚರ್ಯವುಂಟಾಯಿತು ?

ಭೀತಿಯಿಂದ ಮೈ ಮರೆತು ಹುಲಿಯು ಓಡುತ್ತಿರುವುದನ್ನು ಕಂಡು ನರಿಗೆ ಆಶ್ಚರ್ಯವಾಯಿತು .

 ಅರಣ್ಯ ಜಂತುಗಳಲ್ಲಿ ಬುದ್ಧಿಶಾಲಿಯಾದ ಪ್ರಾಣಿ ಯಾವುದು ?

ಅರಣ್ಯ ಜಂತುಗಳಲ್ಲಿ ಬುದ್ಧಿಶಾಲಿಯಾದ ಪ್ರಾಣಿ ನರಿ ,

 ನರಿಯು ಯಾವ ಹೊಡೆತಕ್ಕೆ ಪ್ರಾಣ ಬಿಟ್ಟಿತು ?

 ನರಿಯು ಪಾಪಿತನ ಕಲ್ಲಿನ ಹೊಡೆತಕ್ಕೆ ಸಿಕ್ಕು ಪ್ರಾಣಬಿಟ್ಟಿತು .

ಚತುರನ ಚಾತುರ್ಯ ಗದ್ಯ ಸಾರಾಂಶ

ಚತುರನ ಚಾತುರ್ಯ ಗದ್ಯ ಸಾರಾಂಶ | Chaturana Chaturya in Kannada Notes
ಚತುರನ ಚಾತುರ್ಯ ಗದ್ಯ ಸಾರಾಂಶ | Chaturana Chaturya in Kannada Notes

2-3  ವಾಕ್ಯಗಳಲ್ಲಿ ಉತ್ತರಿಸಿ ಚತುರನ ಚಾತುರ್ಯ ಗದ್ಯ ಸಾರಾಂಶ

 ಮಹಾದೇವನ ಉತ್ಸವಕ್ಕೆ ನಾಪಿತನು ತೆರಳಿದ ಉದ್ದೇಶವೇನು ?

 ಮಹಾದೇವನ ಉತ್ಸವದಲ್ಲಿ ತಾನು ವಾದ್ಯವನ್ನು ನುಡಿಸಿದರೆ ದೇವರ ಸೇವೆಯೂ , ಹಣ ಸಂಪಾದನೆಯೂ ಆಗುವುದೆಂದು ನಾಪಿತನು ಉತ್ಸವಕ್ಕೆ ತೆರಳಲು ಉದ್ದೇಶಿಸಿದನು .

ಹುಲಿಯ ಗುಹೆಯಲ್ಲಿ ಸ್ಥಾಪಿತ ಏನೇನನ್ನು ಕಂಡನು ?

ನಾಪಿತನು ಹುಲಿಯ ಗುಹೆಯಲ್ಲಿ ಮನುಷ್ಯರ ಆಸ್ಥಿಪಂಜರ ಹಾಗೂ ತಲೆಬುರುಡೆಗಳನ್ನು ಕಂಡನು . ಆ ಗುಹೆಯು ರಕ್ತದ ವಾಸನೆಯಿಂದ ಅಸಹ್ಯಕರವಾಗಿದ್ದು ಅಲ್ಲಿಯೇ ಮುತ್ತು ರತ್ನ , ಆಭರಣಗಳ ರಾಶಿಯನ್ನು ಕಂಡನು .

ಎರಡನೆಯ ಬಾರಿ ಮಹಾದೇವನ ಉತ್ಸವಕ್ಕೆ ನಾಪಿತ ತೆರಳಿದ್ದೇಕೆ ?

ಕ ವರ್ಷದ ಉತ್ಸವದಲ್ಲಿ ವಾದ್ಯನುಡಿಸಿ ದೇವರ ದರ್ಶನ ಪಡೆವ ತನ್ನ ಉದ್ದೇಶ ಈಡೇರದ ಕಷ್ಟಕ್ಕೀಡಾದುದರಿಂದ , ಈ ಬಾರಿಯಾದರೂ ಹೋಗಿ ದೇವರ ಸೇವೆ ಮಾಡಿ , ಮಹಾದೇವನ ದರ್ಶನ ಪಡೆದು ಬರಲು ನಾಪಿತನು ಎರಡನೇ ಭಾರಿ ತೆರಳಿದನು

ಕಾಡಿನಲ್ಲಿ ಹುಲಿಗಳೆಲ್ಲಾ ದಿಕ್ಕಾಪಾಲಾಗಿ ಏಕೆ ಓಡಿದವು ?

 ಗಂಧರ್ವರು ತಮ್ಮನ್ನು ಹಿಡಿದುಕೊಂಡು ಹೋಗಿ ಮಹೇಂದ್ರನ ವ್ಯಾಘ್ರಯಜ್ಞ’ದಲ್ಲಿ ಬಲಿಕೊಡಬಹುದೆಂದು ಯೋಚಿಸಿ ಹುಲಿಗಳೆಲ್ಲಾ ಭಯದಿಂದ ಕಾಡಿನಲ್ಲಿ ದಿಕ್ಕಾಪಾಲಾಗಿ ಓಡಿದವು

 ನರಿಯೊಡನೆ ಬರುತ್ತಿರುವ ಹುಲಿಯನ್ನು ಕಂಡ ನಾಪಿತನು ಏನೆಂದುಕೊಂಡನು ?

ನಾಪಿತನು ಹುಲಿಯನ್ನು ನೋಡಿ ಅರಣ್ಯ ಜಂತುಗಳಲ್ಲಿ ಮಹಾಬುದ್ಧಿಶಾಲಿಯಾದ ಈ ನರಿಯು , ಸರ್ವತ ಮಹಾಬಲವಾದ ಹುಲಿಯೊಡನೆ ಒಂದಾಗಿ ಬರುತ್ತಿದೆಯಲ್ಲಾ . ಇನ್ನು ನಾವು ಬದುಕುಳಿಯುವುದು ಹೇಗೆ ? ಶಿವ ಶಿವ ಎ೦ದುಕೊಂಡನು .

ನರಿಯನ್ನು ನಾತ ಹೇಗೆ ಗದರಿದನು ?

ನಾಪಿತನು ನರಿಯನ್ನು ಉದ್ದೇಶಿಸಿ ‘ ಎಲವೋ ರಂಡಾಪುತ್ರ ದುರ್ಜಂತುವೇ , ಮೂರು ದಿನದೊಳಗಾಗಿ ಐದು ಹುಲಿಗಳ ಹಿಡಿದು ತಂದು ಒಪ್ಪಿಸುವುದಾಗಿ ಶಪಥ ಮಾಡಿ ಹೋಗಿದ್ದವನು ,

ಈಗ ಐದು ದಿನಗಳಾದ ಮೇಲೆ ಒಂದೇ ಹುಲಿಯನ್ನು ಹಿಡಿದ ತಂದಿರುವೆಯಾ ? ” ಎಂದು ಗದರಿ , ಕಲ್ಲಿನಿಂದ ನರಿಗೆ ಹೊಡೆದನು .

ಚತುರನ ಚಾತುರ್ಯ ಗದ್ಯ ಸಾರಾಂಶ

ಚತುರನ ಚಾತುರ್ಯ ಗದ್ಯ ಸಾರಾಂಶ | Chaturana Chaturya in Kannada Notes
ಚತುರನ ಚಾತುರ್ಯ ಗದ್ಯ ಸಾರಾಂಶ | Chaturana Chaturya in Kannada Notes

5-6 ವಾಕ್ಯಗಳಲ್ಲಿ ಉತ್ತರಿಸಿ ಚತುರನ ಚಾತುರ್ಯ ಗದ್ಯ ಸಾರಾಂಶ

ಹುಲಿಯಿಂದ ಪಾರಾಗಲು ನಾಪಿತೆ ಕಲ್ಪಿಸಿದ ಕತೆ ಯಾವುದು ?

 ನಾಪಿತನು ಕಾಡಿನಲ್ಲಿ ಮಹಾದೇವನ ಉತ್ಸವಕ್ಕೆಂದು ತೆರಳುತ್ತಿರುವಾಗ ಭಯಂಕರ ಹುಲಿಯೊಂದು ಘರ್ಜಿಸುತ್ತಾ ಎದುರಾಯಿತು ಜೀವಭಯದಿಂದ ನಾಪಿತನು ಇನ್ನು ನನ್ನ ಹೆಂಡತಿ ಮಕ್ಕಳು ಅನಾಥರಾದಂತನ್ನಿಸಿ , ಉಪಾಯ ಮಾಡಿದನು .ಹಗ್ಗದಿಂದ ಹುಲಿಯನ್ನು ಬಂಧಿಸುವಂತೆ ನಟಿಸಿದನು .

ತನ್ನನ್ನು ಕಂಡು ಹೆದರದ ನಾಪಿತನನ್ನು ಕಂಡು ಹುಲಿಗೆ ಅಚ್ಚರಿಯಾಯಿತು . ಅದು ಅವನ ಧೈರ್ಯವನ್ನು ಪ್ರಶ್ನಿಸಲು , ಅವನು ಹೆದರಲು ತಾನು ಮನುಷ್ಯನಲ್ಲ , ಗಂಧರ್ವನೆಂದೂ ತಾನು ದೇವೇಂದ್ರನ ಸ್ವಾಘ್ರಯಜ್ಞಕ್ಕೆ ಹುಲಿ ಹಿಡಿಯಲು ಬಂದಿರುವೆನೆಂದು ಕತೆಯನ್ನು ಕಲ್ಪಿಸುವನು .

ಅಲ್ಲದೆ ನಿನ್ನೆ ಒಂದು ಹುಲಿ ಹಿಡಿದಾಗಿದೆಯೆಂದು ತನ್ನ ಬಳಿಯಿದ್ದ ಕನ್ನಡಿಯಲ್ಲಿ ಅದರದೇ ಪ್ರತಿಬಿಂಬವನ್ನು ತೋರಿಸುವನು . ಹುಲಿಯು ಜೀವ ಉಳಿಸಿದರೆ ಐಶ್ವರ್ಯ ಕೊಡುವುದಾಗಿ ಹೇಳಲು , ಅದನ್ನು ಪಡೆದ ನಾಪಿತನು ಮತ್ತೊಮ್ಮೆ ತಾಯ ಗರ್ಭದಿಂದ ಜನಿಸಿ ಬಂದನೆಂದು ಊರಿಗೆ ಮರಳಿದನು . 

 ಹುಲಿಯು ನಾಪಿತನಿಂದ ತಪ್ಪಿಸಿಕೊಂಡ ರೀತಿಯನ್ನು ನಿರೂಪಿಸಿ ,

 ನಾಪಿತನು ಹೇಳಿದ ಮಹೇಂದ್ರನ ವ್ಯಾಘ್ರಯಜ್ಞದ ಕಲ್ಪಿತ ಕಥೆಯನ್ನು ನಂಬಿದ ಹುಲಿಯು ಜೀವಭಯದಿಂದ ತಲ್ಲಣಿಸಿತು . ಅದು ನಾಪಿತನು ಮಹಾಶಕ್ತಿಶಾಲಿ ಗಂಧರ್ವನಿರಬೇಕೆಂದು ಯೋಚಿಸಿತು . ನಾಪಿತನ ಕನ್ನಡಿಯಲ್ಲಿ ಕಂಡದ್ದು ತನ್ನದೇ ಪ್ರತಿಬಿಂಬವೆಂದು ತಿಳಿಯದ ಹುಲಿಯು ನಾಪಿತನಿಗೆ “ ನಿನ್ನ ದಮ್ಮಯ್ಯಾ , ನನ್ನನ್ನು ಬದುಕಿಸು .

ನಾನು ಬಹುಮಂದಿ ಮನುಷ್ಯರನ್ನು ಕೊಂದು ತಿಂದಾದ ಮೇಲೆ ಅವರ ಆಭರಣಗಳನ್ನೆಲ್ಲಾ ನನ್ನ ಗುಹೆಯಲ್ಲಿ ಇಟ್ಟಿದ್ದೇನೆ .

ಅದನ್ನೆಲ್ಲಾ ನಿನಗೆ ಒಪ್ಪಿಸುತ್ತೇನೆ . ನನ್ನನ್ನು ಹಿಡಿದುಕೊಂಡು ಹೋಗಬೇಡ ‘ ಎಂದು ಬೇಡಿತು .ಮನುಷ್ಯನನ್ನು ತಿನ್ನುವ ಸಿಲುಕಿಕೊಂಡೆವಲ್ಲಾ ಎಂದು ಹುಲಿಯು ಪರಿತಪಿಸಿತು . ಮನುಷ್ಯನಿಗೆ ಆಭರಣದ ಆಸೆ ತೋರಿಸಿ , ತನ್ನ ಜೀವ ಉಳಿಸಿಕೊಂಡ ಹುಲಿಯ ನಡತೆ ಜೀವವುಳಿಸಿಕೊಳ್ಳಲು ಆಪತ್ಕಾಲದಲ್ಲಿ ಯೋಚಿಸುವ ರೀತಿ ಸರಿಯಾಗಿದೆ .

ವ್ಯಾಘ್ರಗಳ ಮಧ್ಯೆಬಿದ್ದ ವಿಪ್ರನನ್ನು ಉಳಿಸಿಕೊಳ್ಳಲು ನಾಪಿತನು ಮಾಡಿದ ಉಪಾಯವೇನು ?

ಚತುರನ ಚಾತುರ್ಯ ಗದ್ಯ ಸಾರಾಂಶ

ಹುಲಿಗಳ ಭೀಕರ ಘರ್ಜನೆಗೆ ಹೆದರಿದ ವಿಪ್ರನು ಹುಲಿಗಳ ಮಧ್ಯೆ ಬಿದ್ದುದನ್ನು ನೋಡಿದ ನಾಪಿತನಿಗೆ ಸರಿವಾಯಿತು . ಕ್ಷೌರಿಕನು ವಿಪ್ರನ ಬಗ್ಗೆ ಚಿಂತಿಸಿ ‘ ‘ ಅಯ್ಯೋ ಈ ಪಾಪಿಯು ಅನ್ಯಾಯವಾಗಿ ಜೀವ ಕಳೆದುಕೊಳ್ಳುವವಲ್ಲಾ , ಇದು ಒಂದು ಬಾರಿ ಪ್ರಯತ್ನ ಮಾಡಿ ನೋಡುತ್ತೇನೆ ” ಎಂದು ಯೋಚಿಸಿದನು . ಹುಲಿಗಳ ಮಧ್ಯೆ ಬಿದ್ದಿದ್ದ ವಿಪ್ರವನ್ನು ಉದ್ದೇಶಿಸಿ ಎ ಗಂಧರ್ವನೇ ನೀನು ಬಿದುದು ಒಳ್ಳೆಯದೇ ಆಯಿತು .

ಮೊದಲು ಆಗಡದ ಹಿರಿಯ ಹುಲಿಯನ್ನು ಹಿಡಿ ಹಿಡಿ ‘ ಎಂದು ಜೋರಾಗಿ ಕಿರುಚಿದಳು .ಸ್ವಲ್ಪ ಮೊದಲು ಗಂಧರ್ವರು ಹುಲಿ ಹಿಡಿಯಲು ಬಂದಿರುವರೆಂಬ ವಿಚಾರ ತಿಳಿದಿದ್ದ ಹುಲಿಗಳೆಲ್ಲಾ ಕ್ಷೌರಿಕನು ‘ ಹಿಡಿ ಹಿಡಿ ‘ ಎಂದು ಕೂಗಿಕೊಳ್ಳಲು ಹೆದರಿಹೋದವು

.ಅವೆಲ್ಲಾ ಕಂಗಾಲಾಗಿ ಕಾಡಿನಲ್ಲಿ ದಿಕ್ಕಾಪಾಲಾಗಿ ಓಡತೊಡಗಿದವು . ಆಗ ಕ್ಷೌರಿಕನು ಮರದಿಂದ ಇಳಿದು ಬಂದು ಮೂರ್ಛ ಹೋಗಿದ್ದ ವಿಪ್ರನನ್ನು ಎಚ್ಚರಿಸಿ , ಹುಲಿಗಳಿಂದ ಪಾರುಮಾಡಿದನು .

 ಪಲಾಯನ ಮಾಡುತ್ತಿದ್ದ ಹುಲಿಯನ್ನು ಸರಿ ಹೇಗೆ ಸಮಾಧಾನಪಡಿಸಿ ಹಿಂದಕ್ಕೆ ಕರೆತಂದಿತು ?

 ಹುಲಿಯು ಕಾಡಿನಲ್ಲಿ ಮೈ ಮರೆತು ಪಲಾಯನ ಮಾಡುತ್ತಿರುವುದನ್ನು ಒಂದು ನರಿಗೆ ತುಂಬಾ ಆಶ್ಚರ್ಯವಾಯಿತು . ಅದು ಹುಲಿಯನ್ನು ” ಎಲೈ ಹುಲಿಯ , ಕಾಡಿನ ಸಮಸ್ತ ಪ್ರಾಣಿಗಳೂ ನಿನ್ನನ್ನು ನೋಡಿ ಪಲಾಯನ ಮಾಡುವುವು , ನೀನು ಈ ರೀತಿ ಓಡುತ್ತಿರುವುದು ಪಲಾಯನ ಮಾಡುವುದೆ ? ‘ ‘ ಎಂದು ಕೇಳಿತಲ್ಲದೆ ಹುಲಿಯಿಂದ ಎಲ್ಲ ಕತೆಯನ್ನು ತಿಳಿದುಕೊಂಡಿತು . ನಂತರ ನರಿಯು ಹುಲಿಯನ್ನು ಸಮಾಧಾನಪಡಿಸುತ್ತಾ ನಿನ್ನನ್ನು ಹಿಡಿಯಲು ಬಂದವನು ಗಂಧರ್ವನಲ್ಲ .

ಆ ಮಾನವ ತುಂಬಾ ಚತುರತೆಯಿಂದ ಹೀಗೆ ಮಾಡಿದ್ದಾನೆ . ಮರದ ಮೇಲಿಂದ ಬಿದ್ದವನನ್ನು ರಕ್ಷಿಸಲು , ಮರದ ಮೇಲಿದ್ದ ಮತ್ತೊಬ್ಬನು ಚಮತ್ಕಾರದ ಮಾತುಗಳನ್ನಾಡಿದ್ದಾನೆ . ಅಷ್ಟಕ್ಕೆ ನೀನು ಹೆದರಿ ಓಡುವುದೆ ? ‘ ‘ ಎಂದಿತು .

ಹುಲಿಯ ಅಧೈರ್ಯವನ್ನು ನಿಂದಿಸುತ್ತಾ ನಿನ್ನ ಕೈಯಿಂದ ಆ ಅಧಮನಾದ ಮನುಷ್ಯನನ್ನು ಕೊಲ್ಲಿಸುತ್ತೇನೆ .ನಡೆ , ನಿನ್ನ ಆ ಜಾಗವನ್ನು ನನಗೆ ತೋರಿಸು ” ಎಂದಿತು . ಹುಲಿಯು ಪುನಃ ಅಧೈರ್ಯವನ್ನು ತೋರಿಸಿತು . ಆಗ ನರಿಯು ನಾನಾ ಬಗೆಯ ಉಪಾಯದಿಂದ ಹುಲಿಗೆ ಧೈರ್ಯ ನೀಡಿ , ತಾನು ಮುಂದೆ ಹೋಗುವುದಾಗಿಯೂ , ಹುಲಿಯು ತನ್ನನ್ನು ಹಿಂಬಾಲಿಸಬೇಕೆಂದೂ ಹೇಳಿ ಹುಲಿಯನ್ನು ನಾಪಿತನ ಬಳಿಗೆ , ಹಿಂದಕ್ಕೆ ಕರೆತಂದಿತು .

Chaturana Chaturya in Kannada Notes

 ಮೂರ್ಛ ಹೋದ ವಿಪ್ರನನ್ನು ನಾಪಿತನು ಹೇಗೆ ಸಂತೈಸುತ್ತಾನೆ ?

ಹುಲಿಗಳೆಲ್ಲಾ ಪಲಾಯನಗೈದ ಮೇಲೆ ನಾಪಿತನು ಮರದ ಮೇಲಿಂದ ಕೆಳಗಿಳಿದು ಮೂರ್ಛ ಹೋಗಿದ್ದ ವಿಪ್ರನನ್ನು ಆರೈಕೆ ಮಾಡಿ ಎಚ್ಚರಗೊಳಿಸಿದನು ಮತ್ತು ಅವನನ್ನು ಸಂತೈಸುತ್ತಾ “ ಅಯ್ಯಾ , ಮೊದಲೇ ಈ ದಾರಿಯು ಒಳ್ಳೆಯ ದಾರಿಯಲ್ಲ .ನೀವು ಬರಬೇಡಿ ಎಂದರೆ ಅದನ್ನು ಉಪೇಕ್ಷೆ ಮಾಡಿ ನನ್ನೊಡನೆ ಹೊರಟರಿ , ಕಾಡಿನಲ್ಲಿ ಸಾಗುವಾಗ ಸ್ವಲ್ಪವಾದರೂ ಧೈರ್ಯವಿರ ಬೇಡವೆ ? ಇಷ್ಟು ಧೈರ್ಯಗೆಟ್ಟರೆ ಮುಂದೇನು ಗತಿ ? ಶಿವಶಿವಾ ! ” ಎಂದನು .

ಜೊತೆಗೆ ವಿಪ್ರನು ಮೃದುವಾದ ಹುಲ್ಲು ಬೆಳೆದ ನೆಲದ ಮೇಲೆ ಬಿದ್ದುದರಿಂದಾಗಿ ಕೈ – ಕಾಲುಗಳು ಮುರಿದಿಲ್ಲ . ಅವು ಮುರಿಯದೆ ಚೆನ್ನಾಗಿರುವುದೇ ಪುಣ್ಯ ದೇವರ ಸೇವೆ ಮಾಡಿದ್ದು ಸಾಕು , ಇನ್ನು ಕ್ಷೇಮವಾಗಿ ಊರಿಗೆ ಹಿಂದಿರುಗಿ ಜೀವ ಉಳಿಸಿಕೊಳ್ಳೋಣ ಬನ್ನಿ ಎಂದು ಸಮಾಧಾನಪಡಿಸಿ ತನ್ನೊಂದಿಗೆ ಊರಿಗೆ ಕರೆದೊಯ್ಯಲು ಮುಂದಾದನು .

ಸಂದರ್ಭಸೂಚಿಸಿ , ಸ್ವಾರಸ್ಯವನ್ನು ವಿವರಿಸಿ

 “ ಪಪುತ್ರರನಾಥರಾದವರಿಗಿನ್ನೇನುಗತಿ . “

 ಯಾದವ ಕವಿಯು ರಚಿಸಿರುವ ‘ ಚತುರನ ಚಾತುರ್ಯ ‘ ಎಂಬ ಕಥೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ .ಮಹಾದೇವನ ಉತ್ಸವಕ್ಕೆ ತೆರಳಲು ನಾಪಿತನು ಕಾಡಿನಲ್ಲಿ ಬರುತ್ತಿರುವಾಗ ಅವನಿಗೆ ಎದುರಾಗಿ ಬಂದು ಹುಲಿಯೊಂದು ಭಯಂಕರವಾಗಿ ಘರ್ಜಿಸಿತು .

ಅದನ್ನು ಕಂಡು ತಾನು ಮೃತ್ಯುವಿನ ಬಾಗಿಲಿನಲ್ಲಿ ನಿಂತಿರುವೆನೆಂಬುದು ಕ್ಷೌರಿಕನಿಗೆ ಅರಿವಾಯಿತು .ಆಗ ಅವನು “ ನಾನು ಸತ್ತರೆ ನನ್ನ ಹೆಂಡತಿ ಮತ್ತು ಮಕ್ಕಳು ಅನಾಥರಾಗುವರು , ಇನ್ನೇನು ಗತಿ ? ‘ ಎಂದು ಮನದಲ್ಲಿ ಚಿಂತಿಸಿ , ಅದರಿಂದ ಪಾರಾಗುವುದು ಹೇಗೆಂದು ಯೋಚಿಸಿದ ಸಂದರ್ಭವಿದಾಗಿದೆ .

 “ ಇನ್ನು ಮೂರೊಂದು ದೊರೆಯ ತಾ ಕೃತಕೃತ್ಯನೆಂದು . ”

ಯಾದವ ಕವಿಯು ಬರೆದಿರುವ ‘ ಚತುರನ ಚಾತುರ್ಯ ‘ ಎಂಬ ಕಥೆಯಲ್ಲಿನ ಈ ಮೇಲಿನ ವಾಕ್ಯವನ್ನು ಕ್ಷೌರಿಕನ ಹುಲಿಯನ್ನುದ್ದೇಶಿಸಿ ಹೇಳುವನು .ಕ್ಷೌರಿಕನು ಹುಲಿಯ ಬಾಯಿಂದ ಪಾರಾಗಲು ತಾನು ಗಂಧರ್ವನೆಂದೂ , ದೇವೇಂದ್ರನ ಯಜ್ಞಕ್ಕೆ ಹುಲಿಗಳನ್ನು ಹಿಡಿಯಲು ಮಾನವ ರೂಪ ಧರಿಸಿರುವವನೆಂದೂ ಹೇಳಿದನು , ದೇವೇಂದ್ರನ ಯಜ್ಞಕ್ಕೆ ಈಗಾಗಲೇ ತೊಂಬತ್ನಾಲ್ಕು ಹುಲಿಗಳನ್ನು ಸೆರೆ ಹಿಡಿದು ಕೊಟ್ಟಾಗಿದೆ .

ನಿನ್ನ ಒಂದನ್ನು ಹಿಡಿದಾಯಿತು , ಈಗ ನೀನು ಸಿಕ್ಕಿರುವೆ . ಇನ್ನುಳಿದ ಮೂರು ಮತ್ತೊಂದು ( ನಾಲ್ಕು ಹುಲಿಗಳು ಸಿಕ್ಕರೆ , ತಾನು ಕೃತಕೃತ್ಯನಾದಂತೆ ಎಂದು ಹೇಳಿ ಹುಲಿಯನ್ನು ನಂಬಿಸಲು ಮಾಡುವ ಪ್ರಯತ್ನವಿದಾಗಿದೆ . ಅವನ ಮಾತನ್ನು ವ್ಯಾಘ್ರುವು ನ೦ಬುತ್ತದೆ . “

ಜನನಿಯುದರದಿಂ ಬಂದನೆಂದು ಜವಳಲ್ಲಿಂತರಲ್ಲ .

‘ ಚತುರನ ಚಾತುರ್ಯ ‘ ಎಂಬ ನಾಪಿತನ ಕತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಹುಲಿಯ ಬಾಯಿಂದ ಪಾಲಾದ ಕ್ಷೌರಿಕನು ಮನದಲ್ಲಿ ಈ ಮೇಲಿನಂತೆ ಚಿಂತಿಸಿದನು .

1st PUC Kannada

ಚತುರನಾದ ಕ್ಷೌರಿಕನು ಹುಲಿಗೆ ತಾನು ಗಂಧರ್ವನು , ದೇವೇಂದ್ರನ ಯಜ್ಞಕ್ಕೆ ಹುಲಿಯನ್ನು ಹಿಡಿಯಲು ಬಂದವನು . ಸಿಕ್ಕಿರುವ ನಿನ್ನನ್ನು ಸೆರೆಹಿಡಿಯುವುದಾಗಿ ಹೆದರಿಸಿದನು .ಹುಲಿಯು ತನ್ನ ಜೀವ ಉಳಿಸಿದರೆ ಮುತ್ತುರತ್ನಗಳನ್ನು ನೀಡುವುದಾಗಿ ವಿನಂತಿಸಿತು . ಅದರಂತೆ ತನ್ನ ಗುಹೆಗೆ ಕರೆದೊಯ್ದು ಕ್ಷೌರಿಕನಿಗೆ ಐಶ್ವರ್ಯವನ್ನು ಕೊಟ್ಟಿತು .

ಅದನ್ನೆಲ್ಲಾ ಗಂಟುಕಟ್ಟಿಕೊಂಡ ಕ್ಷೌರಿಕನು ಹುಲಿಗೆ ‘ ‘ ಇನ್ನಾದರೂ ಧರ್ಮದಿಂದ ಜೀವಿಸು , ಉಳಿದ ಗಂಧರ್ವರ ಕಣ್ಣಿಗೆ ಬೀಳಬೇಡ ‘ ಎಂದು ಕಿವಿಮಾತು ಹೇಳಿದವನೆ , ತನ್ನ ಜೀವ ಉಳಿದುದನ್ನು ನೆನೆದು ತಾನು ಮತ್ತೊಮ್ಮೆ ತಾಯಿಯ ಗರ್ಭದಿಂದ ಜನಿಸಿ ಬಂದೆನೆಂದು ಬಗೆದು , ವೇಗವಾಗಿ ಅಲ್ಲಿಂದ ತೆರಳಿ ತನ್ನ ಮನೆಯನ್ನು ಸೇರಿಕೊಂಡನು .

ಮೊದಲು ತನಗಂತಿತ್ತ ಇವನೆಂತು ತಂದನೋ ? “

ಯಾದವ ಕವಿಯು ರಚಿಸಿರುವ ಚತುರನ ಚಾತುರ್ಯ ‘ ಎಂಬ ಕತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ವಿಪ್ರನು ತನ್ನ ಮನದಲ್ಲಿ ಈ ಮೇಲಿನಂತೆ ಯೋಚಿಸಿದನು . ಕ್ಷೌರಿಕನು ಕಾಡಿನಲ್ಲಿ ಹುಲಿಯಿಂದ ಮುತ್ತು ರತ್ನಗಳನ್ನು ಪಡೆದು , ಜೀವವುಳಿಸಿಕೊಂಡು ಊರಿಗೆ ಹಿಂದಿರುಗಿದವನು , ತನಗೆ ಹುಲಿ ಕೊಟ್ಟಿದ್ದ ಐಶ್ವರ್ಯದಲ್ಲಿ ಅರ್ಧಭಾಗವನ್ನು ವಿಪ್ರನಿಗೆ ತಂದೊಪ್ಪಿಸಿದ್ದನು .

ಮಗದೊಮ್ಮೆ ಅವನು ಮಹದೇವನುತ್ಸವಕ್ಕೆ ವಿಪ್ರನ ಬಳಿ ಮುಹೂರ್ತ ಕೇಳಲು ಬಂದಾಗ , ವಿಪ್ರನು ಕ್ಷೌರಿಕನು ಪುನಃ ಐಶ್ವರ್ಯ ತರಲು ಹೋಗುತ್ತಿರುವನೆಂದೇ ಭಾವಿಸಿದನು . ಮೊದಲ ಬಾರಿ ಅಷ್ಟೊಂದು ಒಡವೆಗಳನ್ನು ತನಗೆ ಇತ್ತ ಈತ , ಅವುಗಳನ್ನು ಹೇಗೆ ತಂದಿರಬಹುದೆಂದು ಯೋಚಿಸಿದನು .

ಮರುದಿವಸ ತಾನೂ ಕ್ಷೌರಿಕನ ಜೊತೆ ತೆರಳಿ ಅದನ್ನು ಪರೀಕ್ಷಿಸಬೇಕೆಂದು ಮನಸ್ಸಿನಲ್ಲಿಯೇ ನಿರ್ಧಾರ ಮಾಡಿದನು .

ಎಲವೋ ಗಂಧರ್ವ , ನೀಂ ಧುಮುಕಿದುದು ಲೇಸಾಯ್ತು .

 ಯಾದವ ಕವಿಯು ರಚಿಸಿರುವ ಚತುರನ ಚಾತುರ್ಯ ‘ ಎಂಬ ಕಥೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ .ಕ್ಷೌರಿಕನು ಏಪ್ರವನ್ನು ಉದ್ದೇಶಿಸಿ ಈ ಮಾತನ್ನಾಡುವನು . ಕ್ಷೌರಿಕ ಮತ್ತು ವಿಪ್ರರು ನೂರಾರು ಹುಲಿಗಳನ್ನು ಕಂಡು ಬಳಿಯಲ್ಲಿದ್ದ ಮರವೇರಿ ಕುಳಿತುಕೊಳ್ಳುತ್ತಾರೆ .

ದಿವ್ಯಭೋಜನ ನಾದ ನಂತರ ನೂರಾರು ಹುಲಿಗಳು ಸಂತೋಷದಿಂದ ಒಟ್ಟಾಗಿ ಘರ್ಜಿಸಲು ಇಡೀ ಕಾಡೆಲ್ಲಾ ನಡುಗಿ ಹೋಗುತ್ತದೆ , ಭಯ ಮತ್ತು ಗಾಬರಿಗೊಂಡ ವಿಪ್ರನು ಆಯತಪ್ಪಿ ಹುಲಿಗಳ ಮಧ್ಯೆ ಬಿದ್ದುಬಿಟ್ಟನು .ಅಚಾತುರ್ಯದಿಂದಾದ ಈ ಘಟನೆಯನ್ನು ಚತುರನಾದ ಕ್ಷೌರಿಕನು ಉಪಾಯವಾಗಿ ತನ್ನ ಅನುಕೂಲಕ್ಕೆ ಬಳಿಸಿಕೊಂಡು , ನೆರೆದಿದ್ದ ಹುಲಿಗಳನ್ನೆದುರಿಸಲು ಎಲೈ ಗಂಧರ್ವನೇ , ನೀನು ಧುಮುಕಿದ್ದು ಒಳ್ಳೆಯದಾಯಿತು .ಆ ಹಿರಿಯ ಹುಲಿಯನ್ನು ಹಿಡಿ ‘ ‘ ಎಂದು ಆಜ್ಞಾಪಿಸುವನು .

ಇದನ್ನು ಕೇಳಿದ ಹುಲಿಗಳೆಲ್ಲವೂ ದಿಕ್ಕಾಪಾಲಾಗಿ ಓಡುವುವು , ಚತುರನಾದ ಕ್ಷೌರಿಕನು ತನ್ನ ಬುದ್ಧಿವಂತಿಕೆಯಿಂದ ಮತ್ತೊಮ್ಮೆ ತನ್ನ ಜೀವವನ್ನೂ ಜೊತೆಯಲ್ಲಿದ್ದ ವಿಪನ ಜೀವವನ್ನೂ ಉಳಿಸಿಕೊಳ್ಳುವ ಜಾಣೆಯನ್ನು ತೋರುವ ಸಂದರ್ಭವಿದು .

 “ ಇವೆರಡೊಂದಾಗಿ ನಡೆತಂದ ಬಳಿಕ ತಾವು ಉಳಿಯುವುದಂತು . “

 ‘ ಚತುರನ ಚಾತುರ್ಯ’ವೆಂಬ ಯಾದವ ಕವಿಯ ಸಣ್ಣಕಥೆಯಲ್ಲಿ ಈ ಮೇಲಿನ ವಾಕ್ಯವಿದೆ .ಕ್ಷೌರಿಕ ಮತ್ತು ವಿಪ್ರರಿಬ್ಬರೂ ಹುಲಿಗಳಿಂದ ಜೀವವುಳಿಸಿಕೊಂಡವೆಂದು ಊರಿಗೆ ಹಿಂತಿರುಗುತ್ತಿರುವಾಗ , ಪಲಾಯನ ಮಾಡುತ್ತಿದ್ದ ಹುಲಿಯೊಡಗೊಂಡು ನರಿಯೂ ಬರುವುದನ್ನು ಕಂಡರು .

ಮಹಾ ಚಾಣಾಕ್ಷನಾದ ನರಿ ಹಾಗೂ ಘೋರವ್ಯಾಘ್ರ ಗಳೆರಡೂ ಒಟ್ಟಾಗಿ ಬರುತ್ತಿರುವುದನ್ನು ನೋಡಿದ ಕ್ಷೌರಿಕ ಮತ್ತು ವಿಪ್ರದಿಬ್ಬರೂ ಇವೆರಡೂ ಒಂದಾಗಿ ನಡೆದು ಬರುವಾಗ ನಾವು ಬದುಕುಳಿಯುವುದು ಹೇಗೆ ? ‘ ಎಂದು ಚಿಂತಿಸಿದರು . ಆದರೆ ಕ್ಷೌರಿಕನು ಮತ್ತೊಮ್ಮೆ ತನ್ನ ಚತುರತೆಯಿಂದ ಪಾರಾಗುತ್ತಾನೆ .

ಚತುರನ ಚಾತುರ್ಯ ಗದ್ಯ ಸಾರಾಂಶ

ಚತುರನ ಚಾತುರ್ಯ ಗದ್ಯ ಸಾರಾಂಶ
ಚತುರನ ಚಾತುರ್ಯ ಗದ್ಯ ಸಾರಾಂಶ

ಹುಲಿ ಕಾಡಿನಲ್ಲಿ ಯಾರಿಗೆ ಎದುರಾಗಿ ಬಂದಿತು ?

 ಕಾಡಿನಲ್ಲಿ ಹುಲಿಯು ವಾಪಿತ / ಕ್ಷೌರಿಕನಿಗೆ ಎದುರಾಗಿ ಬಂದಿತು .

 ಹುಲಿ ಕನ್ನಡಿಯಲ್ಲಿ ಕಂಡಿದ್ದೇನು ?

 ಹುಲಿಯು ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬವನ್ನು ಕಂಡಿತು .

ಇತರೆ ಪ್ರಮುಖ ಮಾಹಿತಿ ಲಿಂಕ್

ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ

ಕದಡಿದ ಸಲಿಲಂ ತಿಳಿವಂದದೆ

Leave a Reply

Your email address will not be published. Required fields are marked *