10th ಹಸುರು ಪದ್ಯ ನೋಟ್ಸ್ | Hasuru Poem Notes In Kannada

10th ಹಸುರು ಪದ್ಯ ನೋಟ್ಸ್ | Hasuru Poem Notes In Kannada

hasuru poem notes in kannada, 10th ಹಸುರು ಪದ್ಯ ನೋಟ್ಸ್ ಪ್ರಶ್ನೆ ಉತ್ತರ , 10ನೇ ತರಗತಿ ಕನ್ನಡ ಹಸುರು ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 10th Standard Kannada Hasuru Hasuru Poem Notes Question Answer Summary Mcq Pdf Download in Kannada Medium Karnataka Kannada Medium 2023, Kseeb Solutions For Class 10 Kannada Poem 5 Notes Sslc Kannada 5th Poem Notes Hasuru Poem Notes in Kannada Hasuru Poem in Kannada Hasuru Kannada Poem Pdf 10th Kannada Poem Hasuru Summary ಹಸುರು ಪದ್ಯದ ಸಾರಾಂಶ Pdf 10th Kannada Hasuru Poem Notes,

Hasuru Poem Notes In Kannada

ಹಸುರು ಪದ್ಯದ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೆಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಇದು ವಿದ್ಯಾರ್ಥಿಗಳಿಗಾಗಿ ಸಂಪೂರ್ಣವಾಗಿ ಉಚಿತವಾಗಿದೆ.

ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

10th ಹಸುರು ಪದ್ಯ ನೋಟ್ಸ್ | Hasuru Poem Notes In Kannada
10th ಹಸುರು ಪದ್ಯ ನೋಟ್ಸ್ | Hasuru Poem Notes In Kannada

ಹಸುರು ‘ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ ?
ಹಸುರು ‘ ಕವನವು ಆಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯ ಹಚ್ಚ ಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ . .

ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ ?
ಕವಿಗೆ ಹುಲ್ಲಿನ ಹಾಸು ಮಕಮಲ್ಲಿನ ಹೊಸಪಚ್ಚೆಯ ಜಮಖಾನೆಯ ರೀತಿ ಕಂಡಿದೆ .

ಆಶ್ವಯುಜದ ಬತ್ತದ ಗದ್ದೆಯ ಬಣ್ಣಯಾವ ಹಸುರಿನಂತಿದೆ?
ಆಶ್ವಯುಜದ ಬತ್ತದ ಗದ್ದೆಯ ಬಣ್ಣ ಗಿಳಿಯ ಹಸುರಿನಂತಿದೆ .

ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ ?
ಕವಿಯು ನೋಡಿದ ಅಡಕೆಯ ತೋಟ ವನದಂಚಿನಲ್ಲಿದೆ

10th ಹಸುರು ಪದ್ಯ ನೋಟ್ಸ್ | Hasuru Poem Notes In Kannada
10th ಹಸುರು ಪದ್ಯ ನೋಟ್ಸ್ | Hasuru Poem Notes In Kannada

ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

ಕವಿಯಾತ್ಮವು ಹಸುರುಗಟ್ಟಲು ಕಾರಣವಾದ ಹಿನ್ನೆಲೆಯ ಅಂಶಗಳೇನು ?
ಕವಿಯಾತ್ಮವು ಹಸುರುಗಟ್ಟಲು ಆಶ್ವಯುಜ ಮಾಸದ ನವರಾತ್ರಿಯಲ್ಲಿ ವಿಶಾಲವಾದ ಶಾಮಲ ಕಡಲು ,
ಹಸುರಾಗಸ ; ಹಸುರು ಮುಗಿಲು ; ಹಸುರು ಗದ್ದೆಯ ಬಯಲು , ಹಸುರಿನ ಮಲೆ ; ಹಸುರು ಕಣಿವೆ : ಸಂಜೆಯ
ಬಿಸಿಲು , ಅಶ್ವಜದ ಶಾಲಿವನದ ಗಿಳಿಯ ಹಸುರು ಬಣ್ಣದ ನೋಟ ; ಕಾಡಂಚಿನಲ್ಲಿ ಫಲಭರಿತ ಅಡಕೆಯ ತೋಟ ;
ಹುಲ್ಲಿನ ಮಕಮಲ್ಲಿನ ಹೊಸಪಚ್ಚೆಯ ಜಮಖಾನೆ ಪಸರಿಸಿದಂತೆ ಭೂಮಿಯು ಹಸುರುಟ್ಟಿದ್ದು ಹೊಸ ಹೂವಿನ ಕಂಪು ; ತಂಗಾಳಿಯ ತಂಪು : ಹಕ್ಕಿಯ ಇಂಪಾದ ಗಾನ ; ಎತ್ತೆತ್ತ ನೋಡಿದರೂ ಹಸುರು ಹಸುರು . ಹಸರು .. ಈ ಇವೆಲ್ಲಾ ಕವಿಯಾತ್ಮವು ಹಸುರುಗಟ್ಟಲು ಕಾರಣವಾದ ಹಿನ್ನೆಲೆಯ ಅಂಶಗಳಾದವು .

ಹಸುರು ಸಕಲೇಂದ್ರಿಯಗಳನ್ನು ವ್ಯಾಪಿಸಿದೆ ಎಂಬುದನ್ನು ಕವಿಯು ಹೇಗೆ ವರ್ಣಿಸಿದ್ದಾರೆ ?
ಹಸುರಾದ ಭೂಮಿ , ಆಗಸ , ಮುಗಿಲು , ಗದ್ದೆಯ ಬಯಲು , ಮಲೆ , ಕಣಿವೆ , ಸಂಜೆಯ ಬಿಸಿಲು ಕಾಡಂಚಿನ
ಅಡಕೆಯ ತೋಟ ಇವೆಲ್ಲಾ ಕಣ್ಣಿಗೆ ಗೋಚರವಾದರೆ , ಹೂವಿನ ಕಂಪಿನ ಹಸುರು ಮೂಗಿಗೆ , ಎಲರಿನ ತಂಪಿನ ಸ್ಪರ್ಷ
ಚರ್ಮಕ್ಕೆ , ಹಕ್ಕಿಯ ಕೊರಲಿನ ಚಿಲಿಪಿಲಿ ಗಾನ ಕಿವಿಗೆ , ಶ್ಯಾಮಲ ಸಮುದ್ರದ ಹಸುರು ಕವಿಯಾತ್ಮಕ್ಕೆ ರಸಪಾನ ಮಾಡಿದಂತಾದುದು
ನಾಲಗೆಗೆ ಹೀಗೆ ಪ್ರಕೃತಿಯ ಹಸುರು ಸಕಲ ಇಂದ್ರಿಯಗಳನ್ನೂ ವ್ಯಾಪಿಸಿದೆ ಎಂಬುದನ್ನು ಕವಿ ಕುವೆಂಪು ಅವರು
ಅಭೂತಪೂರ್ಣವಾಗಿ ವರ್ಣಿಸಿದ್ದಾರೆ .

ಕವಿಗೆ ಯಾವ್ಯಾವುದರಲ್ಲಿ ಆಗಸದಿಂದ ಬಿಸಿಲವರೆಗೂ ಹಸುರು ಕಾಣುತ್ತಿದೆ ?

ಉ : ಕವಿಗೆ ನವರಾತ್ರಿಯಲ್ಲಿ , ಹಸುರಿನಿಂದ ಕಂಗೊಳಿಸುವ ಭೂಮಿಯಲ್ಲಿ , ನೀಲ ಸಮುದ್ರದಲ್ಲಿ
ಹಸುರಾದ ಕವಿಯ ಹೃದಯಕ್ಕೆ ಆಗಸ ಮುಗಿಲು , ಗದ್ದೆಯ ಬಯಲು , ಮಲೆ , ಕಣಿವೆ , ಸಂಜೆಯ ಬಿಸಿಲು
ಕಾಡಂಚಿನ ಅಡಕೆಯ ತೋಟ , ಹೂವಿನ ಕಂಪಿನಲ್ಲಿ , ಎಲರಿನ ತಂಪಿನಲ್ಲಿ ಹಕ್ಕಿಯ ಕೊರಲಿನಲ್ಲಿ ,
ಹೀಗೆ ಆಗಸದಿಂದ ಬಿಸಿಲವರೆಗೂ ಕವಿಗೆ ಹಸುರು ಕಾಣುತ್ತಿದೆ

10th ಹಸುರು ಪದ್ಯ ನೋಟ್ಸ್ | Hasuru Poem Notes In Kannada
10th ಹಸುರು ಪದ್ಯ ನೋಟ್ಸ್ | Hasuru Poem Notes In Kannada

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು -ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ:

ಕುರಿತು ನಿಮ್ಮ ಲಿ ‘ ಪ್ರಕೃತಿಯ ಹಸುರು ಜೀವ ಜಗತ್ತಿಗೆ ಎಷ್ಟು ಮುಖ್ಯ ಎಂಬುದನ್ನು ಬರೆಯಿರಿ.

ಪ್ರಕೃತಿಯಲ್ಲಿನ ಹಸುರು ಮನುಷ್ಯ ಮಾತ್ರನಿಗೆ ಸೀಮಿತವಾಗಿರದೆ ಇಡೀ ಜೀವ ಜಗತ್ತಿಗೆ ಬಹಳ ಮುಖ್ಯ ಎಂಬುದಾಗಿ ಕವಿ ತಮ್ಮ ಕವನ ಹಸುರಿನ ಮೂಲಕ ಹಸುರಿನ ವ್ಯಾಪಕತೆಯನ್ನು ವಿವರಿಸಿದ್ದಾರೆ. ಮನುಷ್ಯ-ಪ್ರಾಣಿ ಎಲ್ಲಾ ಜೀವಿಗಳಿಗೂ ಪುಕೃತಿಯಲ್ಲಿನ ಗಿಡಮರಗಳ, ಆಹಾರ ಸಸ್ಯಗಳ ಹಸಿರೇ ಉಸಿರಾಗಿರುತ್ತದೆ.
ಉದಾಹರಣೆಗೆ: ಆಡು, ದನ, ಹಸು ಮುಂತಾದವುಗಳಿಗೆಲ್ಲ ಮರದ ಹಸಿರೆಲೆ, ಭೂತಾಯಿಯ ಮೇಲೆ ಬೆಳೆಯುವ ಹುಲ್ಲು, ಸೊಪ್ಪು, ಮರಗಿಡಗಳ ಎಲೆಗಳೇ ಮುಖ್ಯ ಕಾರಣವಾಗಿರುತ್ತವೆ. ಇನ್ನು ಮನುಷ್ಯನು ಪರಕೃತಿಯ ಮೇಲಿನ ಎಲ್ಲಾ ಸಸ್ಯಗಳನ್ನು ಅವಲಂಬಿಸಿದ್ದಾನೆ. ಉದಾಹರಣೆಗೆ: ಗದ್ದೆಗಳಲ್ಲಿನ ಭತ್ತ, ಅಡಿಕೆ, ಹೂ, ಪ್ರತಿಯೊಂದು ಸಸ್ಯವನ್ನು ಮನುಷ್ಯನು ಅವಲಂಬಿತನಾಗುತ್ತಾನೆ.

ಬೆಟ್ಟವನ್ನು ಆವರಿಸುವ ಹಸುರು ಗಿಡ ಮರಗಳು ಮಾನವನ ಜೀವನದಲ್ಲಿ ಬಹಳ ಪ್ರಮುಖವಾದುದಾಗಿದೆ. ಮತ್ತೆ ಕೆಲವು ಮರಗಿಡಗಳು ಔಷಧ ರೂಪದಲ್ಲಿ ಆಹಾರ ರೂಪದಲ್ಲಿ ಮತ್ತೆ ಕೆಲವು ಬಟ್ಟೆಗಳ ರೂಪದಲ್ಲಿ ಹೊಂದಿರುತ್ತವೆ.

ಇನ್ನು ಮನುಷ್ಯನು ವಾಸಿಸುವ ಮನೆ, ಅದನ್ನು ಕಟ್ಟಲು ಉಪಯೋಗಿಸುವ ಬೆಲೆಬಾಳುವ ಮರಗಳನ್ನು ಉಪಯೋಗಿಸಿ ಮನೆಕಟ್ಟಲು ಹಾಗೂ ಪೀಠೋಪಕರಣಕ್ಕೆ ಉಪಯೋಗಿಸುತ್ತಿದ್ದಾನೆ.
ಹಸುರಿಲ್ಲದೆ ಮನುಷ್ಯ ಜೀವಿಸಲಾರ ಎಂಬುವಷ್ಟು ಮಟ್ಟಿಗೆ ಮನುಷ್ಯನು ಹಸುರನ್ನು ಅವಲಂಬಿಸಿದ್ದಾನೆ ಎಂದರೆ ಮನುಷ್ಯನ ಸಕಲೇಂದ್ರಿಗಳು ಪುಕೃತಿ ಹಸುರನ್ನು ವ್ಯಾಪಿಸಿದೆ ಎಂಬುದನ್ನು ಕವಿ ‘ಹಸುರು’ ಕವಿತೆಯಲ್ಲಿ ತಿಳಿಸಿಕೊಟ್ಟಿದ್ದಾರೆ.

ಹಸುರು’ ಕವನದ ರೀತ್ಯ ಎಲ್ಲೆಲ್ಲಿ ಹಸುರು ವ್ಯಾಪಿಸಿದೆ ಎಂಬುದನ್ನು ವಿವರಿಸಿ

ಹಸುರು ಕವನದ ರೀತ್ಯ ಪಕೃತಿಯಲ್ಲಿ ಎಲ್ಲೆಲ್ಲಿಯೂ ಅದರಲ್ಲಿಯೂ ಅಶ್ವಯಜಮಾಸದ ಈ ಪುಕೃತಿಯಲ್ಲಿ ಎಲ್ಲೆಲ್ಲೂ ಕಂಡುಬರುವ ದೃಶ್ಯವೆಂದರೆ ಹಸುರು. ಭೂ ತಾಯಿ ಹಸುರಿನ ನಯವಾದ ಮರಮಲ್ಲಿನ ಹೊದಿಕೆ ಹೊದ್ದಿದಂತೆ ಬತ್ತದ ಗದ್ದೆಗಳು ಗಿಳಿ ಹಸುರು ಬಣ್ಣಗಳಿಂದ ಕಂಗೊಳಿಸುತ್ತವೆ. ಸಸ್ಯ ಸಮೃದ್ಧಿಯ ಹಸುರು ಆಗಸ, ಮುಗಿಲು,, ಬಯಲು, ಸಂಜೆ, ಹೂ ಗಂಪಿನಲ್ಲಿ, ಹಕ್ಕಿಗಳ ದನಿಗಳಲ್ಲಿ ಹಾಗೂ ಕಡಲಿನವರೆಗೂ

ವ್ಯಾಪಿಸಿ ಕಡಲಿನಲ್ಲಿ ಪ್ರತಿಬಿಂಬಿಸುವ ಮಟ್ಟಿಗೆ ಹಸುರು ವ್ಯಾಪಿಸಿದೆ ಎಂಬುದನ್ನು ಕವಿ ತಮ್ಮ ಹಸುರು ಕವಿತೆಯಲ್ಲಿ ನಿರೂಪಿಸಿದ್ದಾರೆ. ಈ ಹಸುರಿನಲ್ಲಿ ತನ್ಮಯಕವಾಗಿರುವ ಕವಿಯ ತನುಮನಗಳನ್ನು ಆಕ್ರಮಿಸಿದೆ ಅಲ್ಲದೆ ಮನುಷ್ಯನ ಸಕಲೇಂದ್ರಿಯಗಳನ್ನು ಹಸುರಿನಿಂದ ಆವರಿಸಿರುವ ಬಗ್ಗೆ ಕವಿ ಹೇಳಿಕೊಂಡಿದ್ದಾರೆ. ಆತ್ಮ-ಪರಮಾತ್ಮನಲ್ಲಿ ಲೀನವಾದಂತೆ ಕವಿಯಲ್ಲಿನ ಮನಸ್ಸು ಪ್ರಕೃತಿಯ ಹಸುರಿನಲ್ಲಿ ಎಂಬುದಾಗಿ ಕವಿಯೇ ‘ಹಸುರು’ ಕವಿತೆಯಲ್ಲಿ ಹೇಳಿಕೊಂಡಿದ್ದಾರೆ.

10th ಹಸುರು ಪದ್ಯ ನೋಟ್ಸ್ | Hasuru Poem Notes In Kannada
10th ಹಸುರು ಪದ್ಯ ನೋಟ್ಸ್ | Hasuru Poem Notes In Kannada

ಪಂದರ್ಭ ಸಹಿತ ಶಾರಥ್ಯವನ್ನು ವಿವರಿಸಿ

ಹಸುರತ್ತಲ್, ಹಸುರಿತ್ತಲ್, ಹಸುರೆಲ್

ಪುಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ಕುವೆಂಪು – ೧೧ ರಚಿಸಿರುವ ‘ಹಸುರು’ ಎಂಬ ಕವನದಿಂದ ಆರಿಸಲಾಗಿದೆ. ಇದನ್ನು ‘ಪಕ್ಷಿಕಾಶಿ’ ಆರಿಸಲಾಗಿದೆ.

ಸಂದರ್ಭ: ಪುಕೃತಿಯಲ್ಲಿ ಕಲನದಿಂದ ಹಸುರೇ ಕಾಣುವುದನ್ನು ಕವಿ ವರ್ಣಿಸುತ್ತಾ ಕವಿ ಈ ಸಾಲುಗಳನ್ನು ಬರೆದಿದ್ದಾನೆ.

ಭಾವಾರ್ಥ: ಎಲ್ಲೆಲ್ಲೂ ನೋಡಿದರೂ ಹಸಿರು, ಅಲ್ಲಿಯೂ ಹಸಿರು, ಎಲ್ಲೆಲ್ಲಿಯೂ ಹಸಿರೇ ಹಸಿರು. ಅಂದರೆ ನಾವು ಎತ್ತ ನೋಡಿದರೂ ಅತ್ತ ಬರಿ ಹಸುರೇ ಕಾಣುವ ಈ ಪ್ರಕೃತಿಯಲ್ಲಿ ನಾವು ಹಸುರಾಗಿ ಸಮಾನಶರಾಗಿ ಬಿಟ್ಟಿದೇವೆ ಎಂದರೆ ತಪ್ಪಾಗಲಾರದು. ಕವಿಯು ತನ್ನ ಆತ್ಮವೂ ಕೂಡ ಹಸಿರಾಗಿ ಹೋಗಿದೆ ಎನ್ನುತ್ತಾ ಆಧ್ಯಾತ್ಮಕ ಭಾವನೆಯನ್ನು ಅದೈತತ್ವ ಇಲ್ಲಿ ಕವಿ ಪ್ರತಿಪಾದಿಸಿದ್ದಾರೆ..

ವಿಶೇಷತೆ: ಸರಳ ಭಾಷೆಯಲ್ಲಿ ಪುಕೃತಿ ಹಸಿರಿನ ವರ್ಣನೆಯಿದ್ದು ಅದು ಹೇಗೆ ಮಾನವನಲ್ಲಿ ಅವನ ಆತ್ಮದಲ್ಲಿ ವಿಲೀನವಾಗಿರುವುದನ್ನು ಕವಿ ತನ್ನ ಅನುಭವದೊಂದಿಗೆ ವ್ಯಕ್ತ ವ್ಯಕ್ತ ಪಡಿಸಿದ್ದಾರೆ ಪಡಿಸಿದ್ದಾರೆ
.

“ಬೇರೆ ಬಣ್ಣವನೆ ಕಾಣೆ”

ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ಕುವೆಂಪು ರವರು ರಚಿಸಿರುವ ‘ಹಸುರು’ ಎಂಬ ಕವನದಿಂದ ಆರಿಸಲಾಗಿದೆ. ಇದನ್ನು ‘ಪಕ್ಷಿಕಾಶಿ’ ಎಂಬ ಕವನಸಂಕಲನದಿಂದ ಆರಿಸಲಾಗಿದೆ.
ಸಂದರ್ಭ: ಕವಿ ಪ್ರಕೃತಿಯಲ್ಲಿ ಎತ್ತ ನೋಡಿದರೂ ಅವರಿಗೆ ಹಸಿರೇ ಕಾಣುತ್ತಿತ್ತು. ಈ ಸಂದರ್ಭದಲ್ಲಿ ಕವಿ ಪುಕೃತಿಯ ಸೊಬಗನ್ನು ಕಂಡು ವಿವರಿಸಿದ್ದಾರೆ.

ಭಾವಾರ್ಥ: ಕವಿಗೆ ಪುಕೃತಿಯಲ್ಲಿ ಎಲ್ಲೆಲ್ಲೂ ನೆಲ, ಜನ, ಮುಗಿಲು ಎಲ್ಲೆಡೆ ಬರಿ ಹಸಿರೇ ಕಂಗೊಳಿಸುತ್ತವೆ. ಅಂದರೆ ಮುಗಿಲೆತ್ತರಕ್ಕೆ ಬೆಳೆದ ಹಸಿರಿನಿಂದ ಕೂಡಿದ ಮರಗಳು, ಅದರ ತಡಿಯಲ್ಲಿರುವ ಜಲವೆಲ್ಲವು ಅವುಗಳ ಪ್ರತಿಬಿಂಬಗಳಿಂದ ಕೂಡಿದೆ. ಬೆಟ್ಟಗುಡ್ಡಗಳ ಕಣಿವೆಗಳು, ನೆಲ, ಎಲ್ಲವೂ ಹಸೂರಿನಿಂದ ಮುಚ್ಚಿ ಹೋಗಿವೆ. ಎಷ್ಟೇ ದೂರ ಹಾಯಿಸಿದರೂದ ಬರಿ ಹಸುರೇ ಕಂಗೊಳಿಸುವುದು.

ವಿಶೇಷತೆ: ಮಲೆನಾಡಿನ ಸೌಂದರ್ಯವನ್ನು ಕವಿ ತಮ್ಮ ನುಡಿಗಳಲ್ಲಿ ಸರಳ ಭಾಷೆ, ಸಂತೋಷಗಳಿಂದ ತುಂಬಿದೆ ಎಂಬುದಾಗಿ ವರ್ಣಿಸಿದ್ದಾರೆ.

‘ಹಸುರಾದುದು ಕವಿಯಾತಂ’

ಪುಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ಕುವೆಂಪು ರವರು ರಚಿಸಿರುವ ‘ಹಸುರು’ ಎಂಬ ಕವನದಿಂದ ಆರಿಸಲಾಗಿದೆ. ಇದನ್ನು ‘ಪಕ್ಷಿಕಾಶಿ’ ಎಂಬ ಕವನಸಂಕಲನದಿಂದ ಆರಿಸಲಾಗಿದೆ.

ಸಂದರ್ಭ: ಪುಕೃತಿಯಲ್ಲಿನ ಹಸುರು ಕಂಡು ಕವಿ ತಮಗಾದ ಸೌಂದರ್ಯಾನುಭವವನ್ನು ಇಲ್ಲಿ ವರ್ಣಿಸಿದ್ದಾರೆ.
ಭಾವಾರ್ಥ: ಅಶ್ವಯುಜದ ನವರಾತ್ರಿಯ ಸಂಭ್ರಮದಲ್ಲಿ ಭೂತಾಯಿ ನವರಾತ್ರಿಯಂತೆ ಕಂಗೊಳಿಸುತ್ತಿರುವುದನ್ನು ಕಂಡು ಕವಿ ತನ್ನ ಆತ್ಮವು ಕೂಡ ಹಸುರಿನಂತೆ ಮುದಗೊಂಡಿತು ಎಂಬುದಾಗಿ ಹೇಳಿದ್ದಾರೆ.
ವಿಶೇಷತೆ: ಕವಿ ಪಕೃತಿ ಸೌಂದರ್ಯವನ್ನು ಸರಳ, ಸಹಜ, ಸುಂದರ ಭಾಷೆಯಲ್ಲಿ ವ್ಯಕ್ತಪಡಿಸಿದ್ದಾರೆ.

‘ಹಸು ಹಸುರಿಳೆಯುಸಿರು’

ಪ್ರಸ್ತಾವನೆ: ಪ್ರಸ್ತುತ ಈ ವಾಕ್ಯವನ್ನು ಕುವೆಂಪು ರವರು ರಚಿಸಿರುವ ‘ಹಸುರು’ ಎಂಬ ಕವನದಿಂದ ಆರಿಸಲಾಗಿದೆ. ಇದನ್ನು ‘ಪಕ್ಷಿಕಾಶಿ’ ಎಂಬ ಕವನಸಂಕಲನದಿಂದ ಆರಿಸಲಾಗಿದೆ.

ಸಂದರ್ಭ: ಪುಕೃತಿಯಲ್ಲಿನ ಎಲ್ಲಾ ಹಸುರು ಭೂಮಿಯ ಮೇಲೆ ಜೀವಿಸುವ ಎಲ್ಲಾ ಜೀವಿಗಳ ಉಸರಾಗಿರುತ್ತದೆ ಎಂಬುದನ್ನು ಕವಿ ವರ್ಣಿಸುತ್ತಾ ಈ ಸಾಲುಗಳನ್ನು ರಚಿಸಿದ್ದಾರೆ.

ಭಾವಾರ್ಥ: ಹಸಿರಿನಿಂದ ಕೂಡಿದ ಆಹಾರ ಬೆಳೆಗಳು, ಹಸಿರಿನಿಂದ ಕೂಡಿದ ಮರಗಿಡಗಳು, ಎಲ್ಲವೂ ಈ ಭೂಮಿಯ ಮೇಲೆ ವಾಸ ಮಾಡುವ ರೀತಿಯ ಜೀವಿಗಳಿಗೆ ಅವಶ್ಯಕವಾಗಿ ಬೇಕೇ ಬೇಕು. ಹಸಿರು ಇಲ್ಲದೆ ಯಾವ ಜೀವಿಯೂ ಬದುಕಲಾರ. ಉಸಿರಾಡಲು, ಆಹಾರಕ್ಕಾಗಿ ಹಸುರು ಎಲ್ಲಾ ಜೀವಿಗಳಿಗೂ ಅನಿವಾರ್ಯ. ಹೀಗಾಗಿ ಜೀವಿಗಳಿಗೆ ಹಸಿರು, ಉಸಿರಾಗಿದೆ ಎಂಬುದು ಕವಿ ವರ್ಣಿಸಿದ್ದಾರೆ.

ವಿಶೇಷತೆ: ಸರಳ ಹಾಗೂ ಸಹಜ ಭಾಷೆಯಲ್ಲಿ ಹಸಿರು ನಮಗೆ ಪ್ರಾಣವಾಯು ಎಂಬುದನ್ನು ಪ್ರತಿಯೊಂದು ಜೀವಿಯೂ ತನ್ನ ಆಹಾರ ಮತ್ತಿತರ ಬೇಡಿಕೆಗಾಗಿ ಹೇಗೆ ಅವಲಂಬಿತನಾಗಿದ್ದಾನೆ ಎಂಬುದನ್ನು ಇಲ್ಲಿ ವರ್ಣಿಸಿದ್ದಾರೆ.

10th ಹಸುರು ಪದ್ಯ ನೋಟ್ಸ್ | Hasuru Poem Notes In Kannada
10th ಹಸುರು ಪದ್ಯ ನೋಟ್ಸ್ | Hasuru Poem Notes In Kannada

ಲೇಖಕರ ಪರಿಚಯ:

ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಮಲೆನಾಡ ಮಡಿಲಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುಪ್ಪಳಿಯವರು. ಜನನ 1904 ಡಿಸೆಂಬರ್ 29, ಮಹಾರಾಜಾ ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಕವಿಗಳಲಿ ದರು. ಆಧುನಿಕ ಕನ್ನಡ ಸಾಹಿತ್ಯದ ಕುಲಪತಿಗಳಾಗಿ ಕವಿಗಳಲ್ಲಿ ಅಗ್ರಗಣ್ಯರಾದ ಕುವೆಂಪು ಅವರು ಕನ್ನಡ ಸಾಹಿತ್ಯದ , ಪುಕಾರಗಳಲ್ಲಿಯೂ ಕೃತಿ ರಚಿಸಿದ್ದಾರೆ.


ಕೊಳಲು, ಪಾಂಚಜನ್ಯ, ಪೇಮಕಾಶ್ಮೀರ, ಪಕ್ಷಿಕಾಶಿ- ಕವನ ಸಂಕಲನಗಳು, ನನ್ನ ದೇವರು ಮತ್ತು ಇತರ ಕಥೆಗಳು, ಸಂನ್ಯಾಸಿ ಮತ್ತು ಇತರೆ ಕಥೆಗಳು – ಕಥಾಸಂಕಲನಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು – ಕಾದಂಬರಿಗಳು, ತಪೋನಂದನ, ರಸೋವೈಸಃ – ವಿಮರ್ಶಾ ಸಂಕಲನಗಳು, ಅಮಲನ ಕಥೆ, ಮೋಡಣ್ಣನ ತಮ್ಮ, ಬೊಮ್ಮನಹಳ್ಳಿ ಕಿಂದರಿಜೋಗಿ – ಮಕ್ಕಳ ಪುಸ್ತಕಗಳು, ಜಲಗಾರ, ಯಮನ

ಸೋಲು, ಬೆರಳೆ ಕೊರಳ್ – ನಾಟಕಗಳು, ನೆನಪಿನ ದೋಣಿಯಲ್ಲಿ ಆತ್ಮಕಥನ ಇವಲ್ಲದೆ ಮುಂತಾದ ಸುಮಾರು ಎಪ್ಪತ್ತು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಸಂಪತ್ತನ್ನು ಸಮೃದ್ಧಗೊಳಿಸಿದ್ದಾರೆ. ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 1968ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರಕಿದೆ.
ಧಾರವಾಡದಲ್ಲಿ ನಡೆದ 1957ರ ಮೂವತ್ತೊಂಬತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರಿಗೆ 1964ರಲ್ಲಿ ರಾಷ್ಟ್ರಕವಿ, 1988ರಲ್ಲಿ ಪಂಪ ಪ್ರಶಸ್ತಿ, 1991ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ. ಅಲ್ಲದೆ ಮೈಸೂರು, ಕರ್ನಾಟಕ, ಬೆಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಸಂದಿದೆ. 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದೆ.

ಸಂಬಂದಿಸಿದ ಇತರೆ ವಿಷಯಗಳು

ಪ್ರಬಂಧಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *