ಅನಾರೋಗ್ಯದ ಸಿಂಹ ಪದ್ಯದ ನೋಟ್ಸ್‌ | Anarogyada Simha Notes In Kannada

ಅನಾರೋಗ್ಯದ ಸಿಂಹ ಪದ್ಯದ ನೋಟ್ಸ್‌ | Anarogyada Simha Notes In Kannada

Anarogyada Simha Notes In Kannada, Anarogyada simha poem in kannada notes, Anarogyada simha kannada poem, Anarogyada simha kannada question answer, 3ನೇ ತರಗತಿ ಅನಾರೋಗ್ಯದ ಸಿಂಹ ಪದ್ಯದ ನೋಟ್ಸ್‌ , 3rd Standard Anarogyada Simha Poem Notes

Anarogyada Simha Notes In Kannada

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram

ಅನಾರೋಗ್ಯದ ಸಿಂಹ ಪದ್ಯದ ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.

ಅನಾರೋಗ್ಯದ ಸಿಂಹ ಪದ್ಯದ ನೋಟ್ಸ್‌ | Anarogyada Simha Notes In Kannada
ಅನಾರೋಗ್ಯದ ಸಿಂಹ ಪದ್ಯದ ನೋಟ್ಸ್‌ | Anarogyada Simha Notes In Kannada

ಒಂದು ಪದ / ವಾಕ್ಯದಲ್ಲಿ ಉತ್ತರಿಸು .

ಜಾಣವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು ?

ಜಾಣವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ‘ ಶೀತದಿ ಮೂಗು ಕಟ್ಟಿದೆ ಒಡೆಯ ವಾಸನೆ ಏನು ತಿಳಿಯದು ನನಗೆ ‘ ಎಂದು ಹೇಳಿತು .

ಈ ಪದ್ಯದ ನೀತಿಯೇನು ? ‘

ಉಪಾಯ ಬಲ್ಲವನಿಗೆ ಅಪಾಯವಿಲ್ಲ ‘ ಎಂಬ ಪದ್ಯದ ನೀತಿಯಾಗಿದೆ .

ಕಾಡಿನ ರಾಜ ಸಿಂಹಕ್ಕೆ ಏನಾಯಿತು ?

ಕಾಡಿನ ರಾಜ ಸಿಂಹಕ್ಕೆ ಅನ್ನವೂ ಸೇರದೆ , ನೀರೂ ಸೇರದೇ ಅನಾರೋಗ್ಯ ಉಂಟಾಯಿತು .

ಡಾ . ಹೈನಾ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು ?

ಡಾ.ಹೈನಾ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ‘ ಎಂತಹ ಸುವಾಸನೆ ನಿಮ್ಮ ಉಸಿರಲಿ ‘ ಎಂದು ಹೇಳಿತು .

ಡಾ . ಜೀಬ್ರಾ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು ?

ಡಾ . ಜೀಬ್ರಾ ಕಾಡಿನ ರಾಜ ಸಿಹವನ್ನು ಪರೀಕ್ಷಿಸಿ ‘ ದುರ್ವಾಸನೆಯ ಉಸಿರಿದೆ ‘ ಎಂದು ಹೇಳಿತು .

ಅನಾರೋಗ್ಯದ ಸಿಂಹ ಪದ್ಯದ ನೋಟ್ಸ್‌ | Anarogyada Simha Notes In Kannada
ಅನಾರೋಗ್ಯದ ಸಿಂಹ ಪದ್ಯದ ನೋಟ್ಸ್‌ | Anarogyada Simha Notes In Kannada

ಎರಡು , ಮೂರು ವಾಕ್ಯಗಳಲ್ಲಿ ಉತ್ತರಿಸಿ

ಜಾಣ ವೈದ್ಯ ನರಿ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಹೇಗೇ ಪರೀಕ್ಷಿಸಿತು ?

ವೈದ್ಯ ನರಿ ಚಕ್ರವರ್ತಿಯಾದ ಸಿಂಹವನ್ನು ಉಪಚರಿಸುತ್ತ ಬಾಯನ್ನು ತೆಗೆಯಲು ವಿನಂತಿಸಿತು . ಆಗ ಚಕ್ರವರ್ತಿಯಾದ ಸಿಂಹವು ಉಸಿರನು ಕುರಿತು ಏನು ಹೇಳುವಿರಿ ? ‘ ಎಂದು ಕೇಳುತ್ತಾ ತನ್ನ ಬಾಯನ್ನು ತೆರೆಯಿತು . ಆಗ ಬುದ್ಧಿವಂತ ನರಿಯು ‘ ಶೀತದ ಮೂಗು ಕಟ್ಟಿದೆ ಒಡೆಯ ವಾಸನೆ ಏನು ನನಗೆ ತಿಳಿಯದು ” ಎಂದು ತಕ್ಷಣ ಹೇಳುತ್ತಾ ಕ್ಷಮೆಯನ್ನು ಕೇಳಿತು . ಬುದ್ಧಿವಂತ ನರಿಯು ಸಿಂಹದ ಕೋಪಕ್ಕೆ ಬಲಿಯಾಗದೆ ಪಾರಾಯಿತು .

ಡಾ . ಜೀಬ್ರಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಹೇಗೆ ಪರೀಕ್ಷಿಸಿತು ? ಸಿಂಹವು ಏನು ಮಾಡಿತು ?

ಡಾ.ಜೀಬ್ರಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಬಾಯನ್ನು ತೆಗೆಯಲು ಹೇಳಿತು . ಸಿಂಹವು ಬಾಯನ್ನು ತೆರೆದು ತೋರಿಸಿದ ನಂತರ ‘ ದುರ್ವಾಸನೆಯ ಉಸಿರಿದೆ ‘ ಎಂದು ಹೇಳಿತು . ಆಗ ಸಿಂಹಕ್ಕೆ ಕೋಪವು ಬಂದು ಹೀಗೆ ಹೇಳಲು ಎಂಥ ಧೈರ್ಯ ನಿನಗೆ ಎಂದು ಗರ್ಜಿಸಿತು . ಸತ್ಯವನ್ನು ಹೇಳಿದ ವೈದ್ಯನನ್ನು ಬೈದು ಹೊರಗಡೆ ಓಡಿಸಿತು .

ಅನಾರೋಗ್ಯದ ಸಿಂಹ ಪದ್ಯದ ನೋಟ್ಸ್‌ | Anarogyada Simha Notes In Kannada
ಅನಾರೋಗ್ಯದ ಸಿಂಹ ಪದ್ಯದ ನೋಟ್ಸ್‌ | Anarogyada Simha Notes In Kannada

ಕಾಡಿನ ರಾಜ ಸಿಂಹವು ವ್ಯಥೆ ಪಡಲು ಕಾರಣವೇನು ?

ಕಾಡಿನ ರಾಜ ಸಿಂಹವು ವ್ಯಥೆಪಡಲು ಕಾರಣವೇನೆಂದರೆ – ಅದಕ್ಕೆ ಊಟಮಾಡಲು ಅನ್ನವು ಸೇರದಂತಾಯಿತು ಹಾಗೂ ನೀರೂ ಕೂಡ ಸೇರದಂತಾಯಿತು . ಹೀಗಾಗಿ ಸಿಂಹವು ಅನಾರೋಗ್ಯದಿಂದ ಬಹಳಷ್ಟು ನೋವು ಪಟ್ಟಿತು .

ಡಾ . ಹೈನಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಹೇಗೆ ಪರೀಕ್ಷಿಸಿತು? ಸಿಂಹವು ಏನು ಮಾಡಿತು ?

ಡಾ . ಹೈನಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹದ ನಾಡಿಯನ್ನು ಹಿಡಿದು ನೋಡಿ ಪರೀಕ್ಷಿಸಿತು . ನಂತರ ಸಿಂಹಕ್ಕೆ ಬಾಯಿಯನ್ನು ತೆರೆಯಲು ಹೇಳಿತು . ‘ ಎಂತಹ ಸುವಾಸನೆ ನಿಮ್ಮ ಉಸಿರಲಿ ‘ ಎನ್ನುತ್ತ ಅದರ ಮುಖವನ್ನು ನೋಡಿತು . ಆಗ ಸಿಂಹವು ಕೋಪಗೊಂಡು ನನ್ನ ಎದುರಿನಲ್ಲೇ ಪ್ರಶಂಸೆ ಮಾಡುತ್ತಿಯಾ ಎಂದು ಹೇಳುತ್ತದೆ . ಇರುವ ಸತ್ಯವ ಹೇಳಲು ಹೆದರಿದ ಡಾ . ಹೈನಾಳನ್ನು ಹೊರ ಹಾಕಿಸಿತು .

ಅನಾರೋಗ್ಯದ ಸಿಂಹ ಪದ್ಯದ ನೋಟ್ಸ್‌ | Anarogyada Simha Notes In Kannada
ಅನಾರೋಗ್ಯದ ಸಿಂಹ ಪದ್ಯದ ನೋಟ್ಸ್‌ | Anarogyada Simha Notes In Kannada

ಸಂಬಂದಿಸಿದ ಇತರೆ ವಿಷಯಗಳು

ಪ್ರಬಂಧಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *