Hetta Tayi Hotta Nadu Swargakintalu Migilu Gadegalu in Kannada । ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು ವಿವರಣೆ

Hetta Tayi Hotta Nadu Swargakintalu Migilu Gadegalu in Kannada । ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು ವಿವರಣೆ

Hetta Tayi Hotta Nadu Swargakintalu Migilu Gadegalu in Kannada, ಜನನಿ ಜನ್ಮಭೂಮಿ ಹಾಗು ಹೆತ್ತ ತಾಯಿ ಹೊತ್ತನಾಡು ಸ್ವರ್ಗಕ್ಕಿಂತಲೂ ಮಿಗಿಲುkannada gadegalu

Hetta Tayi Hotta Nadu Swargakintalu Migilu Gadegalu in Kannada

ಹೆತ್ತ ತಾಯಿ , ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು ಈ ಗಾದೆ ಅತ್ಯಂತ ಅರ್ಥಗರ್ಭಿತವಾಗಿದೆ . ಗಾದೆಗಳನ್ನು ಒಮ್ಮೆ ಅವಲೋಕಿಸಿದಾಗ , ಅವುಗಳಲ್ಲಿ ವಿಶೇಷತೆಗಳು ನಿಗೂಢವಾಗಿ ಅಡಗಿಕೊಂಡಿರುತ್ತವೆ .

ಸಾಮಾನ್ಯವಾಗಿ ಗಾದೆಗಳು ಜನಸಾಮಾನ್ಯರ ಆಡು ನುಡಿಗಳಲ್ಲಿ ಒಂದಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ .

ಅರ್ಥಸಹಿತ ಗಾದೆಗಳು 41 ರಾಮಾಯಣದ ಒಂದು ಪ್ರಸಂಗ ಈ ಗಾದೆಯ ನೆಪದಲ್ಲಿ ನೆನಪಿಗೆ ಬರುತ್ತದೆ .

ಶ್ರೀರಾಮನು ರಾವಣನನ್ನು ಕೊಂದು , ಲಂಕೆಯನ್ನು ಗೆದ್ದು ಅದನ್ನು ವಿಭೀಷಣನಿಗೆ ಮರಳಿ ಕೊಟ್ಟು ಪತ್ನಿ ಸೀತಾಮಾತೆಯೊಂದಿಗೆ ಆಯೋಧ್ಯೆಗೆ ಹೊರಟಾಗ- “ ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ” ಎಂಬ ವಾಕ್ಯವು ಮೇಲಿನ ಗಾದೆಯಲ್ಲಿ ಅಡಗಿರುವ ಅರ್ಥ .

ಹೆತ್ತ ತಾಯಿ , ಜನ್ಮ ಕೊಟ್ಟ ನಾಡು , ಸ್ವರ್ಗಕ್ಕಿಂತಲೂ ಶ್ರೇಷ್ಠವಾದುವು . ಅವುಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವೂ ಹೌದು ! ಹೆತ್ತ ತಾಯಿಯ ಮಡಿಲಲ್ಲಿ ದೊರೆಯುವ ಆನಂದ ಮತ್ತೆಲ್ಲೂ ಸಿಗಲಾರದು . ತಾಯಿಯಾದವಳು ಎಷ್ಟೇ ಕಷ್ಟ ಬಂದರೂ , ತೊಂದರೆಗಳು ಎದುರಾದರೂ ತನ್ನ ಸುಖವನ್ನು ಮರೆತು ಮಕ್ಕಳನ್ನು ಕಾಪಾಡುತ್ತಾಳೆ .

ಉತ್ತಮ ಹುದ್ದೆಗಳು ದೊರೆತರು ಸದಾ ತಾಯ್ಯಾಡಿನ ನೆನಪು ಮರುಕಳಿಸುತ್ತಿರುತ್ತದೆ . ಮಾತೃಭೂಮಿಯ ಕುರಿತಾದ ಗೌರವ , ಆದರಗಳು ಮನಸ್ಸನ್ನು ಬಾಧಿಸುತ್ತಿರುತ್ತದೆ .

ಒಟ್ಟಾರೆ ತಾಯಿ – ತಾಯ್ಯಾಡು ಇವೆರಡನ್ನು ರಕ್ಷಿಸುವುದು , ಗೌರವಿಸುವುದು ಎಲ್ಲರ ಕರ್ತವ್ಯವೂ ಹೌದು !

ಹೆತ್ತ ತಾಯಿ ಹೊತ್ತನಾಡು ಸ್ವರ್ಗಕ್ಕಿಂತಲೂ ಮಿಗಿಲು.. ಗಾದೆಯ ಸಾರಾಂಶ-02

ಗಾದೆ ವೇದಕ್ಕೆ ಸಮಾನ , ಗಾದೆ ಸುಳ್ಳಾದರೂ ವೇದ ಸುಳ್ಳಾಗುವುದಿಲ್ಲ . ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು .

ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ.ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ . ಇದು ವಾಲ್ಮೀಕಿ ಮೇಲಿನ ಹೇಳಿಕೆ .

ಇದನ್ನು ಓದಿ :- ಸಜಾತಿ ಮತ್ತು ವಿಜಾತಿ ಪದಗಳು

‘ ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ ‘ ರಾಮಾಯಣದಲ್ಲಿ ಬರುವ ಒಂದು ಮಾತು . ಇದರ ಅನುವಾದವೇ ಇದರಲ್ಲಿ ತಾಯಿ ಮತ್ತು ನಾಡಿನ ಮಹತ್ವ ಅಡಗಿದೆ .

ಹೆತ್ತ ತಾಯಿ ಹೊತ್ತ ನಾಡು ಎರಡು ಒಂದೇ ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿಯ ಮಡಿಲು ಸ್ವರ್ಗಕ್ಕಿಂತಲೂ ಮಿಗಿಲಾದ ಸುಖವನ್ನು ನೀಡುತ್ತದೆ ಎನ್ನುವುದು ಅನುಭವಿಗಳ ಹೇಳಿಕೆ .

ಅಂತೆಂಯೇ ಹೊತ್ತನಾಡು ನಮ್ಮನ್ನು ಜೀವನ ಪೂರ್ತಿ ತನ್ನ ಮಡಿಲಲ್ಲಿಟ್ಟು ಪೋಷಿಸುತ್ತದೆ .

ನಮ್ಮ ಜೀವನಕ್ಕೆ ಅಗತ್ಯವಾದಂತಹ ಅನ್ನ , ನೀರು , ಬಟ್ಟೆ , ವಸತಿ , ಹಾಗೂ ಇನ್ನಿತರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವಂತಹ ಜನ್ಮ ಭೂಮಿಯನ್ನು ತಾಯಿಗೆ ಹೋಲಿಸಿರುವುದು ಶ್ರೇಷ್ಠವಾಗಿದೆ .

ಮಕ್ಕಳ ಪಾಲನೆಗಾಗಿ ತಾಯಿ ತನ್ನ ಸುಖವನ್ನೆಲ್ಲ ಮರೆತು ಆಹಾರ ನಿದ್ರೆಗಳನ್ನು ತೊರೆದು ಮಗುವಿನ ಲಾಲನೆ ಪೋಷಣೆಗಳಲ್ಲಿಯೇ ಸುಖವನ್ನು ಕಾಣುತ್ತಾಳೆ .

ತಾಯಿಯಂತೆಯೇ ನಾವು ಹುಟ್ಟಿದ ನಾಡು ಕೂಡ ಆ ನೆಲದಲ್ಲಿ ಆಡುತ್ತೇವೆ . ಅಗೆಯುತ್ತೇವೆ . ಬೆಳೆಯನ್ನು ಬೆಳೆಯುತ್ತೇವೆ . ಬೆಳೆದುದನ್ನು ತಿಂದು ಬದುಕುತ್ತೇವೆ .

ತಾಯಿಯಂತೆ ನಾಡು ನಮ್ಮನ್ನು ಪೋಷಿಸುತ್ತದೆ . ಆದ್ದರಿಂದ ಜನ್ಮಭೂಮಿಯನ್ನು ಮರೆತವರು ತಾಯಿಯನ್ನು ಮರೆತಂತೆಯೇ ಸರಿ.ಆದುದರಿಂದ ಹೆತ್ತತಾಯಿ ಹೊತ್ತನಾಡಿನ ಋಣವನ್ನು ಮರೆಯದೇ ಅವರ ಹಿರಿಮೆಯನ್ನು ಎತ್ತಿಹಿಡಿಯಬೇಕಾದದ್ದು ಪ್ರತಿಯೊಬ್ಬನ ಆದ್ಯಕರ್ತವ್ಯವಾಗಿದೆ .

ಇತರೆ ವಿಷಯಗಳನ್ನು ಒಡಲುಇ ಕೆಳಗೆ ಕ್ಲಿಕ್ ಮಾಡಿ

ರಗಳೆ – ಕನ್ನಡ ವ್ಯಾಕರಣ

ಕನ್ನಡ ಭಾಮಿನಿ ಷಟ್ಪದಿ

ದ್ವಿಗುಸಮಾಸ

ಭಾರತಕ್ಕೆ ಯುರೋಪಿಯನ್ನರ ಆಗಮನ

ಸರ್ ಸಿ ವಿ ರಾಮನ್ ಜೀವನ ಚರಿತ್ರೆ

ಕುವೆಂಪು ಅವರ ಜೀವನ ಚರಿತ್ರೆ

1 thoughts on “Hetta Tayi Hotta Nadu Swargakintalu Migilu Gadegalu in Kannada । ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು ವಿವರಣೆ

Leave a Reply

Your email address will not be published. Required fields are marked *