ಕುವೆಂಪು ಜೀವನ ಚರಿತ್ರೆ (Biography) । Kuvempu In Kannada Information In Kannada

kuvempu in kannada । ಕುವೆಂಪು ಅವರ ಜೀವನ ಚರಿತ್ರೆ

kuvempu in kannada, ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ , B ಕೆ.ವಿ. ಪುಟ್ಟಪ್ಪ, kuvempu information and biography in Kannada, kavi parichaya, kuvempu information in kannada, ಕುವೆಂಪು ಅವರ ಜೀವನಚರಿತ್ರೆ ಕವಿ ಪರಿಚಯ, Kuvempu Information in Kannada Poet Kuvempu Parichaya in Kannada Information About Kuvempu in Kannada ಕುವೆಂಪು ಅವರ ಕವಿ ಪರಿಚಯ Kuvempu Stories in Kannada Kuvempu Books in kannada kuvempu biography in kannada

ಪರಿವಿಡಿ

Kuvempu In Kannada Information (ಕುವೆಂಪು ಅವರ ಜೀವನಚರಿತ್ರೆ)

ಈ ಲೇಖನದಲ್ಲಿ ರಾಷ್ಟ್ರಕವಿ ಕುವೆಂಪು (rashtrakavi kuvempu) ಅವರ ಜೀವನಚರಿತ್ರೆಯ (Dr Kuvempu Information in Kannada) ಬಗ್ಗೆ ಪ್ರಬಂಧವನ್ನು ಹಾಗು ಅದಕ್ಕೆ ಸಂಬಂದಿಸಿದ ಮಾಹಿತಿಯನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Kuvempu Information in Kannada (ರಾಷ್ಟ್ರಕವಿ ಕುವೆಂಪು ಅವರ ಜೀವನಚರಿತ್ರೆ)

ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ ‘ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.

Kuvempu Information In Kannada

kuvempu f1c52f33 b90f 433b 9f75 09d945186a3 resize 750
ಕನ್ನಡದ ಎರಡನೆಯ ರಾಷ್ಟ್ರಕವಿ

ಕುವೆಂಪು ಜೀವನಚರಿತ್ರೆ (Kuvempu Biography in Kannada)
ಕುವೆಂಪು ಪರಿಚಯ ಮತ್ತು ಶೈಕ್ಷಣಿಕ ಹಿನ್ನೆಲೆ

ಕುವೆಂಪು ರವರ ಪೂರ್ಣ ಹೆಸರು : (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ)

ತಂದೆ : ವೆಂಕಟಪ್ಪಗೌಡ

ತಾಯಿ : ಸೀತಮ್ಮ

ಜನನ : ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ 29-12-1904 ರಲ್ಲಿ ಜನಿಸಿದರು.

ವಿದ್ಯಾಭ್ಯಾಸ : 1916 ರಲ್ಲಿ ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸ

ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ 1929 ರಲ್ಲಿ ಎಂ.ಎ. ಪದವಿ ಗಳಿಸಿದರು.

kuvempu in kannada

1929ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ಪ್ರಿನ್ಸಿಪಾಲರಾಗಿ 1956ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ 1960ರಲ್ಲಿ ನಿವೃತ್ತರಾದರು.

ಕುವೆಂಪು (Kuvempu Parichaya in Kannada) ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದರು.

ಅವರು ಕನ್ನಡಕ್ಕೆ ನೀಡಿದ ಕೊಡುಗೆಗಳಿಗಾಗಿ ಕನ್ನಡದ ಸಾಹಿತ್ಯಗಳನ್ನು ರಚಿಸಿದ್ದಕ್ಕಾಗಿ ಅವರಿಗೆ ಅನೇಕ ಮನ್ನಣೆ ಪ್ರಶಸ್ತಿಗಳು ದೊರೆತವು.

Kuvempu Biography in Kannada

ಮೈಸೂರಿನಲ್ಲಿ ನಡೆದ 38ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾದರು.

ಧಾರವಾಡದಲ್ಲಿ 1975ರಲ್ಲಿ ನಡೆದ 39ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.

ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು.

ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿಯನ್ನೂ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದರು.

ಕುವೆಂಪು ಕವಿ ಪರಿಚಯ {kuvempu life history in kannada}

Kuvempu2
ಕುವೆಂಪು ಕವಿ ಪರಿಚಯ

ಗೌರವಗಳು ಮತ್ತು ಪ್ರಶಸ್ತಿಗಳು

1955 – ಶ್ರೀರಾಮಾಯಣ ದರ್ಶನಂ ಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1956 – ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ
1966 – ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ
1969 – ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ
1957 – ಧಾರವಾಡದಲ್ಲಿ ನಡೆದ 39 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡರು
1958 – ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ
1969 – ಭಾರತೀಯ ಜ್ಞಾನಪೀಠ ಪ್ರಶಸ್ತಿ
1991 – ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ
1992 – ಕರ್ನಾಟಕ ಸರ್ಕಾರದಿಂದ ಪಂಪಪ್ರಶಸ್ತಿ
1992 – ಕರ್ನಾಟಕ ರತ್ನ ಪ್ರಶಸ್ತಿ

kuvempu information in kannada

1985ರಲ್ಲಿ ಮೈಸೂರಿನಲ್ಲಿ ನಡೆದ ಮೊದಲನೇ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು.

ಅಪಾರ ಅನುಪಮ ಸಾಹಿತ್ಯ ರಚನೆ ಮಾಡಿದ್ದ ಕುವೆಂಪು ಅವರು, ಕವನ ಸಂಕಲನ, ಖಂಡಕಾವ್ಯ, ಮಹಾಕಾವ್ಯಗಳನ್ನು ರಚಿಸಿದರು.

ಅನುವಾದಿತ ಮತ್ತು ಸ್ವತಂತ್ರ ನಾಟಕಗಳನ್ನು ಬರೆದರು.

ಕಾದಂಬರಿ, ಕಥೆ, ಗದ್ಯಚಿತ್ರ. ಆತ್ಮಚರಿತ್ರೆ, ಭಾಷಾಂತರ ಗ್ರಂಥಗಳನ್ನು ರಚಿಸಿದರು.

ಮಾಸ್ತಿ ಜತೆ ಕರ್ಣಾಟಕ ಭಾರತ ಕಥಾಮಂಜರಿಯನ್ನು ಸಂಪಾದಿಸಿದ್ದಾರೆ.

kuvempu avara kavi parichaya kannada

kuvempu 1
ಕುವೆಂಪು ಪರಿಚಯ Parichaya

ಕುವೆಂಪು ಅವರ ಮೊದಲ ಕೃತಿ (kuvempu kavi kruti parichaya in kannada)

ಶ್ರೀರಾಮಯಣ ದರ್ಶನಂ

ಕುವೆಂಪು ಅವರ ಕೃತಿಗಳು ಕನ್ನಡದಲ್ಲಿ

ಕಬ್ಬಿಗನ ಕೈಬುಟ್ಟಿ

ಮಲೆಗಳಲ್ಲಿ ಮದುಮಗಳು

ಕಾನೂರು ಹೆಗ್ಗಡತಿ

ವಿಚಾರ ಕ್ರಾಂತಿಗೆ ಆಹ್ವಾನ

ಬೆರಳ್ಗೆ ಕೊರಳ್ಶೂ

ದ್ರತಪಸ್ವಿ

ಸ್ವಾಮಿ ವಿವೇಕಾನಂದ

ಚಿತ್ರಾಂಗದಾ

ಪಾಂಚಜನ್ಯ

ಬೊಮ್ಮನಹಳ್ಳ್ಳಿ ಕಿಂದರಿಜೋಗಿ

ಕೊಳಲು ಇತ್ಯಾದಿ.

ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದ ಕುವೆಂಪು ಅವರು 11-11-1994 ರಲ್ಲಿ ಮೈಸೂರಿನಲ್ಲಿ ನಿಧನರಾದರು.

Kuvempu Father And Mother Name In Kannada

ತಂದೆ : ವೆಂಕಟಪ್ಪಗೌಡ

ತಾಯಿ : ಸೀತಮ್ಮ


ಕುವೆಂಪು ಅವರ ನಾಟಕಗಳು

ನಾಟಕಗಳು
ಬಿರುಗಾಳಿ (1930)
ಮಹಾರಾತ್ರಿ (1931)
ಸ್ಮಶಾನ ಕುರುಕ್ಷೇತ್ರ (1931)
ಜಲಗಾರ (1931)
ರಕ್ತಾಕ್ಷಿ (1932)
ಶೂದ್ರ ತಪಸ್ವಿ (1944)
ಬೆರಳ್ಗೆ ಕೊರಳ್ (1947)
ಯಮನ ಸೇಲು
ಚಂದ್ರಹಾಸ
ಬಲಿದಾನ
ಕಾನೀನ (1974)

ಕುವೆಂಪು ಅವರ ಜನ್ಮಸ್ಥಳ (kuvempu born place in kannada)

ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ 29-12-1904 ರಲ್ಲಿ ಜನಿಸಿದರು.

ಕುವೆಂಪು ಅವರ ಕವನಗಳು

ಓ ನನ್ನ ಚೇತನ

ಓ ನನ್ನ ಚೇತನ ಆಗು ನೀ ಅನಿಕೇತನ

ರೂಪರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವ ದೀಟಿ || ಓ ನನ್ನ ||

ನೂರು ಮತದ ಹೊಟ್ಟತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ || ಓ ನನ್ನ ||

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು || ಓ ನನ್ನ ||

ಅನಂತ ತಾನನಂತವಾಗಿ
ಆಗುತಿಹನೆ ನಿತ್ಯಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು || ಓ ನನ್ನ ||

ಭಾರತ ತಪಸ್ವಿನಿ

ವೇದರುಶಿ ಭೂಮಿಯಲಿ ನಾಕನರಕಗಳಿಂದು

ಸಾವು ಬದುಕಿನ ಕಟ್ಟಕಡೆಯ ಹೋರಾಟದಲಿ

ಸಂದಿಸಿವೆ, ಮಾನವನೆಡೆಯ ಕಾಳಕೂಟದಲಿ

ಅಮೃತವನ ಹಾರೈಸಿ ಬಲಿರಕ್ತದಲಿ ಮಿಂದು

ಕಾಡಿಹೆವು ಕಣ್ಣೀರು ತುಂಬಿ, ನಾಗರಿಕತೆಯು

ನಾಗಿಣಿಯ ಪ್ರಗತಿನಾಮಕ ಫಣೆಯ ಮೇಲೆತ್ತಿ

ಚುಂಬಿಸಿಯೇ ಕೊಲ್ಲಲೆಳೆಸುತಿದೆ – ಹಿಂದಿನ ಬುತ್ತಿ

ಸವೆಯುತಿದೆ, ಇಂದಿನ ಮಹಾ ತಪಸ್ಸಿನ ಚಿತೆಯ

ರಕ್ತಮ ವಿಭೂತಿಯೊಳೆ ಮುಂದಿನ ನವೋದಯದ

ಧವಳಿಮ ಪಿನಾಕಾದಾರನೈಥಹನು, ಮತ್ತೊಮ್ಮೆ

ಭಾರತಾಂಬೆಯು ಜಗದ ಬೆಳಕಾಗುವಳು, ಹೆಮ್ಮೆ

ಗೌರವಗಳಿಂದ ಜನಗಣದ ಕಟು ನಿರ್ಧಯದ

ಲೋಭ ಬುದ್ಧಿಯ ಹೀನ ಕುಟಿಳತೆಯ ಸುರೆನೀಗಿ

ಮೆರೆವಳು ತಪಸ್ವಿನಿಯೆ ಚಕ್ರವರ್ತಿನಿಯಾಗಿ – ಕುವೆಂಪು

ಜಯ ಹೇ ಕರ್ನಾಟಕ ಮಾತೆ

ಜೈ ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಜೈ ಸುಂದರ ನದಿ ವನಗಳ ನಾಡೆ

ಜಯಹೇ ರಸ ಋಷಿಗಳ ಬೀಡೆ,

ಗಂಧದ ಚಂದದ ಹೊನ್ನಿನ ಗಣಿಯೇ,

ರಾಘವ ಮಧುಸೂಧನರವತರಿಸಿದ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ,

ಜನನಿ ಜೋಗುಳದ ವೇದದ ಘೋಷ

ಜನನಿಗೆ ಜೀವವು ನಿನ್ನಾವೇಶ

ಹಸುರಿನ ಗಿರಿಗಳಸಾಲೆ

ನಿನ್ನಯ ಕೊರಳಿನ ಮಾಲೆ

ಕಪಿಲ ಪತಂಜಸ ಗೌತಮ ಜಿನನುತ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ.

ಶಂಕರ ರಾಮಾನುಜ ವಿದ್ಯಾರಣ್ಯ

ಬಸವೇಶ್ವರ ಮಾಧ್ವರ ದಿವ್ಯಾರಣ್ಯ

ರನ್ನ ಷಡಕ್ಷರಿ ಪೊನ್ನ

ಪಂಪ ಲಕುಪತಿ ಜನ್ನ

ಕಬ್ಬಿಗ ನುಡಿಸಿದ ಮಂಗಳಧಾಮ

ಕವಿ ಕೋಗಿಲೆಗಳ ಪುಣ್ಯಾರಾಮ

ನಾನಕರಾಮಾನಂದ ಕಬೀರರ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ ಜೈ

ತೈಲಪ ಹೊಯ್ಸಲರಾಳಿದ ನಾಡೆ

ಡಂಕಣ ಜಕಣರ ನೆಚ್ಚಿನ ಬೀಡೆ

ಕೃಷ್ಣ ಶರಾವತಿ ತುಂಗಾ

ಕಾವೇರಿಯ ವರರಂಗ

ಚೈತನ್ಯ ಪರಮಹಂಸ ವೀವೆಕರ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಸರ್ವಜನಾಂಗದ ಶಾಂತಿಯ ತೋಟ

ರಸಿಕರ ಕಣಗಳ ಸೆಳೆಯುವ ನೋಟ

ಹಿಂದೂ ಚಸ್ತ ಮುಸಲ್ಮಾನ

ಪಾರಸಿಕ ಜೈನರ ಉದ್ಯಾನ

ಜನಕನ ಹೋಲುವ ದೊರೆಗಳ ಧಾಮ

ಗಾಯಕ ವೈಣಿಕರಾ ಧಾಮ

ಕನ್ನಡ ನುಡಿ ಕುಣಿದಾಡುತ ಗೇಹ

ಕನ್ನಡ ತಾಯಿಯ ಮಕ್ಕಳ ದೇಹ

ಭಾರತ ಜನನಿಯ ತನುಜಾತೆ|

ಕನ್ನಡಮ್ಮನ ಹರಕೆ

ಕನ್ನಡಕೆ ಹೋರಾಡು

ಕನ್ನಡದ ಕಂದ

ಕನ್ನಡವ ಕಾಪಾಡು

ನನ್ನ ಆನಂದ

ಜೋಗುಳದ ಹರಕೆಯಿದು

ಮರೆಯದಿರು, ಚಿನ್ನಾ

ಮರತೆಯಾದರೆ ಅಯ್ಯೋ

ಮರೆತಂತೆ ನನ್ನ

ಮೊಲೆಯ ಹಾಲೆಒಂತಂತೆ

ಸವಿಜೆನು ಬಾಯ್ದೆ

ತಾಯಿಯಪ್ಪುಗೆಯಂತೆ

ಬಾಳಸೊಗಸು ಮೆಯ್ಕೆ

ಗುರುವಿನೊಲ್ಲುದಿಯಂತೆ

ಶ್ರೇಯಸ್ಸು ಬಾಳೆ :

ತಾಯಿನುಡಿಗೆ ದುಡಿದು ಮಾಡಿ

ಇಹಪಾರಗಳೇಲ್‌ಗೆ

ದಮ್ಮಯ್ಯ ಕಂದಯ್ಯ

ಬೇಡುವೆನು ನಿನ್ನ,

ಕನ್ನಡಮ್ಮನ ಹರಕೆ,

ಮರೆಯದಿರು, ಚಿನ್ನಾ

ಮರತೆಯಾದರೆ ಅಯ್ಯೋ

ಮರೆತಂತೆ ನನ್ನ;

ಹೋರಾಡು ಕನ್ನಡಕೆ

ಕಲಿಯಾಗಿ, ರನ್ನಾ – ಕುವೆಂಪು

ನಡೆ ಮುಂದೆ ನಡೆ ಮುಂದೆ
ನಡೆ ಮುಂದೆ ನಡೆ ಮುಂದೆ

ನುಗ್ಗಿ ನಡೆ ಮುಂದೆ !

ಜಗ್ಗದಯೆ ಕುಗ್ಗದೆಯೆ

ಹಿಗ್ಗಿ ನಡೆ ಮುಂದೆ !

ಭಾರತ ಖಂಡದ ಹಿತವೇ

ನನ್ನ ಹಿತ ಎಂದು

ಭಾರತ ಮಾತೆಯ ಮತವೇ

ನನ್ನ ಮತ ಎಂದು

ಭಾರತಾಂಬೆಯ ಸುತರೆ

ಸೋದರರು ಎಂದು

ಭಾರತಾಂಬೆಯ ಮುಕ್ತಿ

ಮುಕ್ಕಿ ನನಗೆಂದು

ನಡೆ ಮುಂದೆ ನಡೆ ಮುಂದೆ

ನುಗ್ಗಿ ನಡೆ ಮುಂದೆ !

ಜಗ್ಗದಯೆ ಕುಗ್ಗದೆಯೆ

ಹಿಗ್ಗಿ ನಡೆ ಮುಂದೆ – ಕುವೆಂಪು

ಎಂದೆಂದಿಗೂ ನೀ ಕನ್ನಡವಾಗಿರು

ಎಲ್ಲಾದರೂ ಇರು, ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ
ಕಲ್ಪತರು!

ನೀ ಮೆಟ್ಟುವ ನೆಲ – ಅದೇ ಕರ್ನಾಟಕ
ನೀ ನೇರುವ ಮಾಲೆ – ಸಹ್ಯಾದ್ರಿ
ನೀ ಮುಟ್ಟುವ ಮರ – ಶ್ರೀಗಂಧದ ಮರ
ನೀ ಕುಡಿಯುವ ನೀರು – ಕಾವೇರಿ

ಪಂಪನನೋಡುವ ನಿನ್ನ ನಾಲಿಗೆ
ಕನ್ನಡವೇ ಸತ್ಯ ,
ಕುಮಾರವ್ಯಾಸನನಾಲಿಪ ಕಿವಿಯದು
ಕನ್ನಡವೇ ನಿತ್ಯ

ಹರಿಹರ ರಾಘವರಿಗೆ ಎರಗುವ ಮನ ,
ಹಾಳಾಗಿಹ ಹಂಪೆಗೆ ಕೊರಗುವ ಮನ ,
ಪೆಂಪಿನ ಬನವಾಸಿಗೆ ಕೊರಗುವ ಮನ ,
ಕಾ ಜಾನಕೆ ಗಿಣಿ ಕೋಗಿಲೆ ಇಂಪಿಗೆ ,
ಮಲ್ಲಿಗೆ ಸಂಪಗೆ ಕೇದಗೆ ಸೊಂಪಿಗೆ ,
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸ ರೋಮಾಂಚನಗೊಳುವಾತನ ಮನ
ಎಲ್ಲಿದ್ದರೆ ಏನ್ ? ಎಂತಿದ್ದರೆ ಏನ್ ?
ಎಂದೆಂದಿಗೂ ತಾನ್

ಕನ್ನಡವೇ ಸತ್ಯ !
ಕನ್ನಡವೇ ನಿತ್ಯ !
ಅನ್ಯವೆನಳದೆ ಮಿಥ್ಯಾ !

ಇನ್ನಷ್ಟು ಓದಿ…

ಕುವೆಂಪು ಅವರ ನುಡಿಮುತ್ತುಗಳು (Kuvempu Quotes In Kannada) ಕವನಗಳು

ಕುವೆಂಪು ಅವರ ನುಡಿಮುತ್ತುಗಳು
ಕುವೆಂಪು ಅವರ ನುಡಿಮುತ್ತುಗಳು
ಕುವೆಂಪು ಅವರ ನುಡಿಮುತ್ತುಗಳು
ಕುವೆಂಪು ಅವರ ನುಡಿಮುತ್ತುಗಳು
ಕುವೆಂಪು ಅವರ ನುಡಿಮುತ್ತುಗಳು
ಕುವೆಂಪು ಅವರ ನುಡಿಮುತ್ತುಗಳು
ಕುವೆಂಪು ಅವರ ನುಡಿಮುತ್ತುಗಳು
ಕುವೆಂಪು ಅವರ ನುಡಿಮುತ್ತುಗಳು

ಕುವೆಂಪು ಅವರ ಮಾಹಿತಿ ಜೀವನಚರಿತ್ರೆ

FAQ

ಕುವೆಂಪುರವರ ಪೂರ್ಣ ಹೆಸರೇನು?

ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ

ಕುವೆಂಪು ಅವರ ಆತ್ಮಕಥೆ ಯಾವುದು?

ನೆನಪಿನ ದೋಣಿಯಲ್ಲಿ

ಉಪಸಂಹಾರ

ಈ ಲೇಖನದಲ್ಲಿ ಕುವೆಂಪುರವರ ಜೀವನ ಸೇರಿದಂತೆ ಅವರ ಕೃತಿಗಳು ಮತ್ತು ಅವರ ಆತ್ಮ ಕಥನ ಸೇರಿದಂತೆ ಇತರೆ ಎಲ್ಲ ವಿಷಯಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ಹಾಗೆ ಶಾಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಬಂದ ಬರೆಯಲು ಉಪಯುಕ್ತ ಆಗುವ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ನೀವು ಇದರ ಸದುಪಯೋಗ ಪಡೆದುಕೊಂಡು ನಿಮ್ಮ ಗೆಳೆಯ ಗೆಳೆತಿಯರಿಗೆ ಶೇರ್ ಮಾಡುವ ಮೂಲಕ ನಮಗೆ ಇನ್ನಷ್ಟು ಉತ್ತಮ ಮಾಹಿತಿಯನ್ನು ಹೊತ್ತು ತರುವುದಕ್ಕೆ ಸಹಕಾರಿ ಆಗುತ್ತದೆ.

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

ಸಂವಿಧಾನದ 12 ಅನುಸೂಚಿಗಳು

ಒಂದು ರಾಷ್ಟ್ರ-ಒಂದು ಭಾಷೆ ಪ್ರಬಂಧ

ಸಂಧಿ ಪ್ರಕರಣ ಪ್ರಶ್ನೋತ್ತರಗಳು

Leave a Reply

Your email address will not be published. Required fields are marked *