ಮಗ್ಗದ ಸಾಹೇಬ ನೋಟ್ಸ್ | Maggada Saheba Kannada Notes

ಮಗ್ಗದ ಸಾಹೇಬ ನೋಟ್ಸ್ | Maggada Saheba Kannada Notes

Maggada Saheba Kannada Notes, magadha sahiba kannada Question and Answer, ಮಗ್ಗದ ಸಾಹೇಬ ಪಾಠ ಕನ್ನಡ ನೋಟ್ಸ್, Lesson, 8th Standard Kannada Notes

8th Standard Kannada Notes

೮ನೇ ತರಗತಿ ಕನ್ನಡ ಪಾಠಕ್ಕೆ ಸಂಬಂಧಿಸಿದಂತೆ ಎಲ್ಲ ಪಾಠದ ಪ್ರಶ್ನೋತ್ತರಗಳನ್ನು ನಮ್ಮ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಇತರ ವಿದ್ಯಾರ್ಥಿಗಳಿಗೂ ಶೇರ್ ಮಾಡಿ.

ಲೇಖಕರ ಪರಿಚಯ

ಲೇಖಕರು : ಬಾಗಲೋಡಿ ದೇವರಾಯ

ಕಾಲ : 1927-1985

ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ ಬಾಗಲೋಡಿ

ವೃತ್ತಿ : ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು . ಐ.ಎ.ಎಸ್ . ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವಿದೇಶಿ ಸೇವೆಗೆ ಆಯ್ಕೆಯಾಗಿದ್ದರು .

ಕೃತಿಗಳು : ಹುಚ್ಚುಮನಸ್ಸಿನ ಮುನಸೀಫ ಮತ್ತು ಇತರ ಕತೆಗಳು , ಆರಾಧನಾ , ರುದ್ರಪ್ಪನರುದ್ರ ಮತ್ತು ಇತರ ಕತೆಗಳು

ಸಾಧನೆ : ಮಾಸ್ತಿಯವರ ಸಮಕಾಲೀನರಾದ ಇವರು 26 ಕತೆಗಳನ್ನು ಬರೆದಿದ್ದಾರೆ . ರಾಯಭಾರಿಯಾಗಿ ಇಟಲಿ , ನೇಪಾಳ , ನೈಜೀರಿಯಾ , ಫಿಲಿಪೈನ್ಸ್ , ನ್ಯೂಜಿಲ್ಯಾಂಡ್ , ಬಳ್ಳೇರಿಯಾ ಮೊದಲಾದ ದೇಶಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ .

ಆಕರ ಗ್ರಂಥ : ಸಮಗ್ರ ಕತೆಗಳು

ಬಿಟ್ಟ ಸ್ಥಳ ತುಂಬಿರಿ

I. ಅಬ್ದುಲ್ ರಹೀಮನಿಗೆ ………………. ಎಂದು ಹೇಳಿದರೆ ಬಹು ಸಿಟ್ಟು ಬರುತ್ತಿತ್ತು

2. ಮನೆಯಲ್ಲಿ ……………….ಇದೆಯೋ ಇಲ್ಲವೋ ಎಂಬಂತಾಗಿದೆ

3. ಹುಡುಗನ ………………ಆಕಾಶಕ್ಕೇರಿತು

4. ಶಂಕರಪ್ಪ ಅವರು ……………ಹಿಂತೆರಳಿದರು

5. ನನಗೆ ಎರಡೇ ಮಕ್ಕಳು …………..ಪರಿಚಯ ನನಗಿಲ್ಲ

ಉತ್ತರಗಳು :

1. ಮಗ್ಗದ ಸಾಹೇಬ

2. ಊಟಕ್ಕೆ

3. ಉತ್ಸಾಹ

4. ಮುಖ ಬಾಡಿಸಿಕೊಂಡು

5. ಕಳರ

ಈ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1. ರಹೀಮ್ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು ?

ಉ . ರಹೀಮನು ಮಗ್ಗವನ್ನು ಮುಟ್ಟದೆ 20 ವರ್ಷಗಳಾಗಿತ್ತು .

2. ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿರುವ ಹಕ್ಕು ಯಾವುದು ?

ಉ . ದೇವಸ್ಥಾನದಲ್ಲಿ ರಥೋತ್ಸವದ ಸಮಯದಲ್ಲಿ ಹುಸೇನ್ ಸಾಹೇಬರ ಮನೆತನದ ಹಿರಿಯ ಪ್ರತಿನಿಧಿಗೆ ಎಲ್ಲರಿಗಿಂತಲೂ ಮುಂದಾಗಿ ಪ್ರಸಾದವನ್ನು ಪಡೆಯುವ ಹಕ್ಕಿದೆ .

3. ಅಬ್ದುಲ್ ರಹೀಮನ ಹಠವೇನು ?

ಉ . ಅಬ್ದುಲ್ ರಹೀಮರು ತಮ್ಮ 3 ಗಂಡು ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸಿ , ಸರಕಾರಿ ನೌಕರರನ್ನಾಗಿಸಬೇಕೆಂದು ಹಠ ತೊಟ್ಟಿದ್ದರು .

4. ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ಹೇಗೆ ನೆರವೇರಿಸಿದರು ?

ಉ . ಅಬ್ದುಲ್ ರಹೀಮರ ಮಕ್ಕಳಲ್ಲಿ ಒಬ್ಬನು ಸರಕಾರಿ ಕಚೇರಿಯಲ್ಲಿ ಗುಮಾಸ್ತನಾದನು ಇನ್ನೊಬ್ಬನು ಪೋಸ್ಟ್ ಮಾಸ್ತರನಾಗಿ ತಂದೆಯ ಆಸೆಯನ್ನು ನೆರವೇರಿಸಿದನು .

5.ರಹೀಮ ಮಗನನ್ನು ಶಾಲೆಯಿಂದ ಬಿಡಿಸಿದ್ದೇಕೆ ?

ಉ . ರಹೀಮನು ತನ್ನ ಮಗ ಕರೀಮನ ಮಗ್ಗದ ಹುಚ್ಚನ್ನು ಬಿಡಿಸಬೇಕೆಂದು ಶಾಲೆಯಿಂದ ಬಿಡಿಸಿಬಿಟ್ಟನು .

ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ .

1. ಹುಸೇನ್ ಸಾಹೇಬರ ವ್ಯಕ್ತಿತ್ವವನ್ನು ವಿವರಿಸಿರಿ .

ಉ . ಅಬ್ದುಲ್ ರಹೀಮ್ ಸಾಹೇಬರ ಪೂರ್ವಜರು ಸಾಹೇಬ್ ಬಹಾದ್ದೂರ್ ಮಗ್ಗದ ಹುಸೇನ್ ಸಾಹೇಬರು , ಇವರು ಪ್ರಸಿದ್ಧ ಮತ್ತು ಧನವಂತ ವ್ಯಕ್ತಿಯಾಗಿದ್ದರು . ಹುಸೇನ್ ಸಾಹೇಬರು ಮಸೀದಿ ಮಾತ್ರವಲ್ಲ ದೇವಸ್ಥಾನವನ್ನು ಕಟ್ಟಿಸಿದ್ದರು . ಇಂದಿಗೂ ಈ ದೇವಸ್ಥಾನದಲ್ಲಿ ರಥೋತ್ಸವದ ಸಂದರ್ಭದಲ್ಲಿ ಅವರ ಮನೆತನದ ಹಿರಿಯ ಪ್ರತಿನಿಧಿಗೆ ಎಲ್ಲರಿಗಿಂತಲೂ ಮುಂದಾಗಿ ಪ್ರಸಾದವನ್ನು ಪಡೆಯುವ ಹಕ್ಕಿದೆ .

2. ಲೇಖಕರ ಹುಟ್ಟೂರಿನಲ್ಲಿದ್ದ ಮುಸ್ಲಿಂ ಧಾರ್ಮಿಕ ಉತ್ಸವದ ಸಂಪ್ರದಾಯವೇನು ?

ಉ . ಲೇಖಕರ ಹುಟ್ಟೂರಿನ ಪಕ್ಕದಲ್ಲಿ ಮುಸಲ್ಮಾನರ ವಸತಿ ಇತ್ತು. ಅದರೊಳಗೆ ಒಂದು ಪವಿತ್ರ ಸ್ಥಾನವಿದೆ . ಅಲ್ಲಿ ಉರ್ಸ್ ‘ ಎಂಬ ಮುಸಲ್ಮಾನರ ಧಾರ್ಮಿಕ ಉತ್ಸವದ ಕಾಲದಲ್ಲಿ ಲೇಖಕರ ಮನೆತನದ ಒಬ್ಬ ಪ್ರತಿನಿಧಿ ಇದ್ದೇ ಇರಬೇಕು ಎಂಬ ಸಂಪ್ರದಾಯ ಇತ್ತು .

3. ಮಿಠಾಯಿ ಕೊಟ್ಟಿದ್ದಕ್ಕೆ ಅತಿಥಿಗಳ ಆಕ್ಷೇಪವೇನು ?

ಉ . ಬಾಗಲೋಡಿ ದೇವರಾಯರ ಮನೆಗೆ ಗಣೇಶ ಚಮರ್ಥಿ , ಕೃಷ್ಣಾಮಿಗಳ ಮರುದಿನ ಮುಸಲ್ಮಾನರ ಮುಖ್ಯಸ್ಥರು ಬಂದು ಭಕ್ಷ ಭೋಜಗಳನ್ನು ಸ್ವೀಕರಿಸುತ್ತಿದ್ದರು . ಲೇಖಕರ ತಾಯಿ ಕಾಯಿಲೆ ಬಿದ್ದ ಕಾರಣ ತಂದೆಯವರು ಇದ್ದುದರಿಂದ ಅಂಗಡಿಯಿಂದ ಲಡ್ಡುಗಳನ್ನು ತಂದು ಕೊಟ್ಟರು . ಅಂಗಡಿಯ ಮಿಠಾಯಿಯನ್ನು ಪ್ರಸಾದವೆಂದು ಕೊಡುವುದು ಸರಿಯ ? ಆದರ ಬದಲು ಮನೆಯಲ್ಲಿರುವ ಬೆಲ್ಲವನ್ನೂ ಕಲ್ಲುಸಕ್ಕರೆಯನ್ನೋ ಕೊಡಿರಿ ‘ಎಂದು ಹೇಳಿದರು .

4. ಕರೀಮನಿಗೆ ಶಾಲೆಯಲ್ಲಿ ಮಗ್ಗ ಕಲಿತುದರಿಂದ ಆದ ಪ್ರಯೋಜನವೇನು ?

ಉ . ಕರೀಮ್ ಮಗ್ಗದ ಕೆಲಸವನ್ನು ಮೀನು ನೀರಿನಲ್ಲಿ ಈಜುವಷ್ಟೇ ಸುಲಭವಾಗಿ ಕಲಿತು ಬಹು ನಿಪುಣನಾದನು . ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶಂಕರಪ್ಪ ಅವರು ಸ್ವಾಭಾವಿಕವಾಗಿಯೇ ಪ್ರಶಂಸೆ ಮಾಡಿ ಮೇಲಾಧಿಕಾರಿಗಳಿಗೆ ವರದಿ ಮಾಡಿದ್ದರು . ಸರಕಾರದಿಂದ ಹುಡುಗ
ಕರೀಮ್‌ನಿಗೆ ಒಂದು ಬೆಳ್ಳಿಯ ಪದಕವೂ ಒಂದು ನೂರು ರೂಪಾಯಿಯ ಬಹುಮಾನವೂ ಬಂದುಬಿಟ್ಟವು.

5. ಶಾಲಾ ವಾರ್ಷಿಕೋತ್ಸವದಂದು ಕರೀಮ ಮಾಡಿದ ಕೆಲಸವೇನು ?

ಉ . ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಳೆಯ ವಿದ್ಯಾರ್ಥಿಗಳ ಒಂದು ನಾಟಕವಿತ್ತು . ಅದರಲ್ಲಿ ಸ್ತ್ರೀ ಪಾತ್ರವಿತ್ತು . ಅದಕ್ಕೆಂದೇ ತಾಯಿಯಿಂದ ಗೌಪ್ಯವಾಗಿ ಹಳೆಯ ಕಾಲದ ಚಿನ್ನದ ಸರವನ್ನು ಅಲಂಕಾರಕ್ಕೆಂದು ತೆಗೆದುಕೊಂಡ ನಾಟಕ ಮುಗಿದ ಮೇಲೆ ಮನೆಗೆ ಬರದೆ ಎಲ್ಲೋ ಕಾಣೆಯಾಗಿ ಹೋದನು .

ಕೊಟ್ಟಿರುವ ಪ್ರಶ್ನೆಗಳಿಗೆ 4-5 ವಾಕ್ಯಗಳಲ್ಲಿ ಉತ್ತರಿಸಿ.

1.ನವೀನ ಶಿಕ್ಷಣದ ವೈಶಿಷ್ಟ್ಯತೆ ?
ಉತ್ತರ : ನವೀನ ಶಿಕ್ಷಣವು ಮಹಾತ್ಮಾಗಾಂಧೀಯವರ ಪ್ರೇರಣೆಯಿಂದ ಕೆಲವು ಶಾಲೆಗಳಲ್ಲಿ
ಪ್ರಾರಂಭವಾಯಿತು. ಈ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ತರಹದ ಔದ್ಯೋಗಿಕ ಶಿಕ್ಷಣವನ್ನು
ಕೊಡುವುದು, ಅವರಲ್ಲಿ ಹಸ್ತಕೌಶಲ್ಯವನ್ನು, ದೇಹಶ್ರಮದಲ್ಲಿ ಗೌರವ ಭಾವವನ್ನು ಉಂಟು ಮಾಡುವುದು
ಒಂದು ಭಾಗವಾಗಿತ್ತು.

ಕೆಲವರಿಗೆ ಬಡಗಿಯ ಕೆಲಸ, ಕೆಲವರಿಗೆ ಬೆತ್ತದ ಕುರ್ಚಿ ಕೆಲಸ ಇತ್ಯಾದಿ
ಸಾಮಗ್ರಿಗಳನ್ನು ಮಾಡುವ, ಕೆಲವರಿಗೆ ಕೃಷಿ, ಕೆಲವರಿಗೆ ಮಗ್ಗದ ಕೆಲಸವನ್ನುಕಲಿಸಲಾಗುತ್ತಿತ್ತು .

2. ಶಂಕರಪ್ಪ ಅವರು ರಹೀಮನ ಬಳಿಗೆ ಸಂಧಾನಕ್ಕಾಗಿ ಬಂದ ಪ್ರಸಂಗವನ್ನು ತಿಳಿಸಿ .

ಉ . ಮನೆ ಬಿಟ್ಟು ಹೋಗಿದ್ದ ಕರೀಮ ಬೆಳೆದು ಯುವಕನಾದ ಮೇಲೆ ಮನೆಗೆ ಬಂದನು . ತಂದೆ ಬಾಗಿಲು ತೆರೆಯಲಿಲ್ಲ . ನಿವೃತ್ತರಾಗಿದ್ದ ಶಂಕರಪ್ಪ ಗುರುಗಳನ್ನು ಸಂಧಾನಕ್ಕಾಗಿ ಕಳುಹಿಸಿದನು .

Maggada Saheba Kannada Notes

ಆದರೆ ಶಂಕರಪ್ಪನವರು ನಿವೇದಿಸಿದರೂ , ತರ್ಕಿಸಿದರೂ , ಚರ್ಚಿಸಿದರೂ ಪ್ರಯೋಜನವಾಗಲಿಲ್ಲ . ಒಂದು ಶಬ್ದವನ್ನು ಕೇಳುವ ತಾಳ್ಮೆ ರಹೀಮನಿಗಿರಲಿಲ್ಲ .

“ ನೀವು ಕಲಿಸಿದ ಪಾಠದಿಂದಲೇ ಇವನು ನಮ್ಮ ವಂಶದ ಕೀರ್ತಿಯನ್ನು ಮಣ್ಣು ಪಾಲು ಮಾಡಿದನು ” ಎಂದು ಸಿಡುಕಿದ . ಶಂಕರಪ್ಪ ಅವರು ಮುಖ ಬಾಡಿಸಿಕೊಂಡು ಹಿಂತೆರಳಿದರು .

ಈ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ 8-10 ವಾಕ್ಯಗಳಲ್ಲಿ ಉತ್ತರಿಸಿ.

1.ರಹೀಮನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಗಲು ಕಾರಣವೇನು?
ಉತ್ತರ : ಮಗ್ಗದ ಸಾಹೇಬ ಅಂದರೆ ಅಬ್ದುಲ್ ರಹೀಮ್ ಸಾಹೇಬ್. ಅವನು ಮಗ್ಗವನ್ನು ಮುಟ್ಟದೆ
ಇಪ್ಪತ್ತು ವರ್ಷಕ್ಕೂ ಹೆಚ್ಚಾಗಿದ್ದರೂ ಸಹ ಊರಿನ ಜನರು ಅವನನ್ನು ಮಗ್ಗದ ಸಾಹೇಬನೆಂದೇ
ಕರೆಯುತ್ತಿದ್ದರು. ಇದರಿಂದ ಅಬ್ದಲ್ ರಹೀಮ್‌ನಿಗೆ ಬಹು ಸಿಟ್ಟು ಬರುತ್ತಿತ್ತು.

“ಅನಿಷ್ಟ ಮಗ್ಗದ ಅಜ್ಜನ
ಕಾಲದಲ್ಲಿ ಬ್ರಿಟಿಷರು ಅಗ್ಗದ ವಿಲಾಯತಿ ಮಿಲ್ಲಿನ ಬಟ್ಟೆಗಳನ್ನು ನಮ್ಮ ದೇಶದಲ್ಲಿ ಹೇರಿಬಿಟ್ಟರು. ಒಂದು
ವರ್ಷದೊಳಗೇ ಕಳೇಬರಗಳಾಗಿ ಹರಕು ಚಿಂದಿಯಾಗುವುವು. ಬಣ್ಣವೋ ಒಂದೇ ತಿಂಗಳಲ್ಲಿ ವಿವರ್ಣವಾಗಿ
ಎರಡೇ ತಿಂಗಳಲ್ಲಿ ಮಾಯವಾಗುವುದು.

Maggada Saheba Kannada Notes

ಆದರೇನು? ಬಹು ಅಗ್ಗ. ಜನರಿಗೆ ಬೇಕಾದುದು ಅಗ್ಗದ ವಸ್ತು.
ಗುಣವನ್ನು ಯಾರು ಕೇಳುತ್ತಾರೆ? ಅಗ್ಗದ ಮಾಲಿನದೇ ಆಧಿಪತ್ಯವಾಯಿತು. ಮಗ್ಗದವರು ಭಿಕಾರಿಗಳಾದರು.
ಅವರ ಅನ್ನಕ್ಕೆ ಸಂಚಕಾರವಾಯಿತು. ಅದರಿಂದ ದ್ವೇಷ ಉಂಟಾಯಿತು

2.ರಹೀಮನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಗಲು ಕಾರಣವೇನು ?

ಉ . ರಹೀಮನ ಅಜ್ಜನ ಕಾಲದಲ್ಲಿ ಬ್ರಿಟಿಷರು ಅಗ್ಗದ ವಿಲಾಯತಿ ಮಿಲ್ಲಿನ ಬಟ್ಟೆಗಳನ್ನು ನಮ್ಮ ದೇಶದಲ್ಲಿ ಹೇರಿ ಬಿಟ್ಟರು . ಅವೇನೋ ನಿಜಕ್ಕೂ ನಿಕೃಷ್ಟ ವಸ್ತುಗಳು .

ಒಂದು ವರ್ಷದೊಳಗೇ ಕಳೇಬರಗಳಾಗಿ ಹರಿದು ಚಿಂದಿಯಾಗುವುವು , ಬಣ್ಣವೋ ಒಂದೇ ತಿಂಗಳಿನಲ್ಲಿ ವಿವರ್ಣವಾಗಿ ಎರಡೇ ತಿಂಗಳಲ್ಲಿ ಮಾಯವಾಗುವುದು . ಆದರೂ ಅಗ್ಗದ ಮಾಲನ್ನು ಎಲ್ಲರೂ ಕೊಂಡುಕೊಳ್ಳುತ್ತಾರೆ . ಮಗ್ಗದವರು ಭಿಕಾರಿಗಳಾದರು . ಅವರ ಅನ್ನಕ್ಕೆ ಸಂಚಕಾರವಾಯಿತು . ಆದ ಕಾರಣ ರಹೀಮನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಯಿತು .

ಸಂದರ್ಭಾನುಸಾರ ವಿವರಿಸಿರಿ

1. “ ಮಗ್ಗವಲ್ಲ ಕೊರಳಿಗೆ ಹಗ್ಗ ! ”

ಉ , ಈ ವಾಕ್ಯವನ್ನು ಬಾಗಲೋಡಿ ದೇವರಾಯರು ರಚಿಸಿರುವ ‘ ಮಗ್ಗದ ಸಾಹೇಬ ಎಂಬ ಗದ್ಯಪಾಠದಿಂದ ಆರಿಸಲಾಗಿದೆ . ಈ ಮಾತನ್ನು ಅಬ್ದುಲ್ ರಹೀಮನು ಹೇಳುತ್ತಾನೆ . ವಿಲಾಯತಿ ಮಿಲ್ಲಿನ ಬಟ್ಟೆಗಳು ಜನಪ್ರಿಯವಾದ ಮೇಲೆ ಕೈಮಗ್ಗದ ಬಟ್ಟೆಗಳನ್ನು ಯಾರೂ ಕೊಳ್ಳಲು ಮುಂದಾಗುತ್ತಿರಲಿಲ್ಲ . ಮಗ್ಗದವರು ಭಿಕಾರಿಗಳಾದರು . ಅವರ ಅನ್ನಕ್ಕೆ ಸಂಚಕಾರವಾಯಿತು . ಇದರಿಂದ ನಿರಾಸೆಗೊಂಡು ರೋಷದಿಂದ ಈ ಮಾತನ್ನಾಡುತ್ತಾರೆ .

2. ‘ ಕಳ್ಳನಾದವನು ಮನೆ ಬಿಟ್ಟು ಹೋದವನು ಮಗನೇ ಅಲ್ಲ . ”

ಉ . ಈ ವಾಕ್ಯವನ್ನು ಬಾಗಲೋಡಿ ದೇವರಾಯರು ರಚಿಸಿರುವ ‘ ಮಗ್ಗದ ಸಾಹೇಬ ‘ ಎಂಬ ಗದ್ಯಪಾಠದಿಂದ ಆರಿಸಲಾಗಿದೆ . ಈ ಮಾತನ್ನು ರಹೀಮನು ಹೇಳುತ್ತಾನೆ .

Maggada Saheba Kannada Notes

ಕರೀಮನು ನಾಟಕವಾಡುವುದಾಗಿ ಹೇಳಿ ತನ್ನ ತಾಯಿಯ ಚಿನ್ನದ ಸರವನ್ನು ತೆಗೆದುಕೊಂಡು ಮನೆ ಬಿಟ್ಟು ಓಡಿಹೋಗುತ್ತಾನೆ . ಇದನ್ನು ತಿಳಿದ ತಂದೆ ರಹೀಮನ ಮೈಯಲ್ಲಿ ಅಗ್ನಿ ಸಂಚಾರವಾಯಿತು . ಮಗನನ್ನು ಶಪಿಸುತ್ತಾ ಈ ಮಾತನ್ನು ಹೇಳಿದನು .

3. “ ನಿಮ್ಮ ಹಳೆಯ ಶಿಷ್ಯನಿಗೆ ಇದೊಂದು ಉಪಕಾರ ಮಾಡಿ , ”

ಈ , ಈ ವಾಕ್ಯವನ್ನು ಬಾಗಲೋಡಿ ದೇವರಾಯರು ರಚಿಸಿರುವ ‘ ಮಗ್ಗದ ಸಾಹೇಬ ‘ ಎಂಬ ಗದ್ಯ ಪಾಠದಿಂದ ಆರಿಸಲಾಗಿದೆ . ಈ ಮಾತನ್ನು ಕರೀಮನು ಮುಖ್ಯೋಪಾಧ್ಯಾಯರಾಗಿರುವ ಶಂಕರಪ್ಪನವರಿಗೆ ಹೇಳುತ್ತಾನೆ . ಮನೆ ಬಿಟ್ಟು ಹೋಗಿದ್ದ ಕರೀಮನು ಉನ್ನತ ಸಾಧನೆ ಮಾಡಿ ಮನೆಗೆ ಹಿಂದಿರುಗಿದನು . ಆದರೆ ಅವರ ತಂದೆ ರಹೀಮನು ಕರೀಮನನ್ನು ಮನೆಗೆ ಸೇರಿಸುವುದಿಲ್ಲ . ಆ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದ ಶ್ರೀ ಶಂಕರಪ್ಪನವರನ್ನು ವಿನಂತಿಸಿಕೊಳ್ಳುತ್ತಾ ಈ ಮಾತುಗಳನ್ನು ಹೇಳುತ್ತಾನೆ .

4 , “ ದೇವರು ದೊಡ್ಡವನು ದೇವರು ದಯಾಳು ”

ಉ , ಈ ವಾಕ್ಯವನ್ನು ಬಾಗಲೋಡಿ ದೇವರಾಯರು ರಚಿಸಿರುವ ‘ ಮಗ್ಗದ ಸಾಹೇಬ ‘ ಎಂಬ ಗದ್ಯ ಪಾಠದಿಂದ

ಆಯ್ಕೆ : ಈ ವಾಕ್ಯವನ್ನು ಭಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿಂದ

ಆಯ್ದ ‘ಮಗ್ಗದ ಸಾಹೇಬ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ

ಸಂದರ್ಭ : ‘ಪದ್ಮಭೂಷಣ’ ಅಂದರೆ ಸಾಹೇಬ್ ಬಹಾದ್ದೂರ್‌ಗಿಂತಲೂ ಮೇಲಿನ ಬಿರುದು. ಖಾನ್
ಸಾಹೇಬ್, ಖಾನ್ ಬಹಾದ್ದೂರ್, ದಿವಾನ್ ಬಹಾದ್ದೂರ್ ಇವೆಲ್ಲದರಿಂದಲೂ ಮೇಲೆ, ದೊಡ್ಡ ಬಿರುದು!”
ಎಂದು ಅಬ್ದುಲ್ ರಹೀಮನಿಗೆ ತಿಳಿದ ಮೇಲೆ ಕರೀಮ್ ನನ್ನ ಕರೀಮ್! ಸಾಹೇಬ್ ಬಹಾದ್ದೂರ್‌ಗಿಂತಲೂ
ಮೇಲಾದನೇ? ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ದೇವರ ಬಗ್ಗೆ ಇದ್ದ ನಂಬಿಕೆ, ತಂದೆಗೆ ಮಗನ ಬಗಗಿದ್ದ ಪ್ರೀತಿ – ವಾತ್ಸಲ್ಯವು ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ.

ಇತರೆ ವಿಷಯಗಳು :

9ನೇ ತರಗತಿ ಕನ್ನಡ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

1 thoughts on “ಮಗ್ಗದ ಸಾಹೇಬ ನೋಟ್ಸ್ | Maggada Saheba Kannada Notes

Leave a Reply

Your email address will not be published. Required fields are marked *