ಕನ್ನಡ ನುಡಿಮುತ್ತುಗಳು, Nudimuttugalu / Nudimuttu in Kannada, sharechat kannada subhashita nudimuttugalu list, short nudimuttugalu, ಸುಭಾಷಿತ,kannada quotes about life, nudimuttugalu in kannada with meaning, nudimuttugalu in kannada quotes, nudimuttugalu in kannada images
ಕನ್ನಡ ನುಡಿಮುತ್ತುಗಳು
ಮಾಡಿದ ಕೆಲಸವನ್ನು ಪೂರ್ಣಗೊಳಿಸುವ ಮುನ್ನ
ಪರೀಕ್ಷಿಸಿಕೊಳ್ಳುವುದು ಉತ್ತಮ,ಇಲ್ಲವಾದರೆ
ಸಮಯದ ವ್ಯರ್ಥವಾಗಬಹುದು.
ಕನ್ನಡ ನುಡಿಮುತ್ತುಗಳು nudimuttugalu in kannada
ಅಜ್ಞಾನದಿಂದ ಜ್ಞಾನದೆಡೆಗೆ ಹೋಗುವುದೇ ಎಲ್ಲ ವಿದ್ಯೆಗಳ ಗುರಿ.
ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡು ಹೋಗುವುದೇ ಎಲ್ಲ ಜ್ಯೋತಿಗಳ ಧರ್ಮ
ನಮ್ಮ ಬದುಕುಗಳಲ್ಲಿ ಅಜ್ಞಾನವು ತೊಲಗುವ ಜ್ಞಾನದ ಬೆಳಕು ಬೆಳಗುವ ಜ್ಯೋತಿಗಾಗಿ ಪ್ರಾರ್ಥಿಸಬೇಕು – ಅನಾಮಿಕ.

………………………………………………………………………………….
ಅಹಂಕಾರವಿಲ್ಲದ ಮನುಷ್ಯ ಯಾವ ಧರ್ಮಗ್ರಂಥವನ್ನೂ ಓದದೆ,
ಯಾವ ಮಂದಿರವನ್ನೂ ಪ್ರವೇಶಿಸದೆ ಮೋಕ್ಷ ಪಡೆಯಬಹುದು.
— ಸ್ವಾಮಿ ವಿವೇಕಾನಂದ
………………………………………………………………………………….
ಕೆಲಸವಿಲ್ಲದೆ ಕ್ಷಣ ಕಳೆದರೂ ಅದು ಕಳ್ಳತನ ಮಾಡಿದಂತೆ-ಗಾಂಧೀಜಿ
ಭವಿಷ್ಯವನ್ನು ನಾವೇ ರೂಪಿಸಿಕೊಂಡರೂ, ಅದು ವಿಧಿ ಎಂದುಕೊಳ್ಳವುದು ಮೂಢತನ- ಬೆಂಜಮಿನ್ ಡಿಸ್ರೇಲಿ
………………………………………………………………………………….
ಧರ್ಮದ ಇರುವಿಕೆಯಲ್ಲಿ ಮನುಷ್ಯ ಇಷ್ಟೊಂದು ದುಷ್ಟನಾಗಿರುವಾಗ, ಧರ್ಮವೇ ಇಲ್ಲದಿದ್ದರೆ ಅವನು ಏನಾಗಬಹುದಿತ್ತು? –ಬೆಂಜಮಿನ್ ಫ್ರಾಂಕ್ಲಿನ್
ಸುಳ್ಳು ಹೇಳುವುದರಿಂದ ಯಾರದ್ದಾದರೂ ಪ್ರಾಣ ಉಳಿಯುವಂತಿದ್ದರೆ ಅದು ಪಾಪ ಆಗುವುದಿಲ್ಲ -ರವೀಂದ್ರನಾಥ ಟ್ಯಾಗೋರ್
………………………………………………………………………………….
ಸರಳ ಜೀವನ ಮತ್ತು ಮೇಲ್ಮಟ್ಟದ ವಿಚಾರ ಮನುಷ್ಯನನ್ನು ಮಹಾನ್ ಆಗಿ ಮಾಡುತ್ತದೆ- ಗಾಂಧೀಜಿ
………………………………………………………………………………….
ಸಂಪ್ರದಾಯದ ಬಾವಿಯಲ್ಲಿ ತೇಲುವುದು ಒಳ್ಳೆಯದು. ಅದರಲ್ಲಿ ಮುಳುಗುವುದು ಆತ್ಮಹತ್ಯೆ-ಗಾಂಧೀಜಿ
………………………………………………………………………………….
ಕೆಲವರಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿ,
ಒಳ್ಳೆಯದನ್ನೇ ಬಯಸಿ ಅವರಿಗೆ ಅದು ಸಹ್ಯವಾಗುವುದಿಲ್ಲ….
ಏಕೆಂದರೆ ಅದಕ್ಕೆ ಅವರು ಯೋಗ್ಯರಾಗಿರುವುದಿಲ್ಲ…..
ಹಾಗೆಂದು ಒಳ್ಳೆಯದನ್ನು ಬಯಸುವ ನಿಮ್ಮ ಗುಣವನ್ನು ಬಿಡಬೇಡಿ…..
ಬೇರೆಯವರು ಸದ್ಭಾವನೆ ಸ್ವೀಕರಿಸದಿದ್ದರೆ ಅದು ನಿಮ್ಮ ತಪ್ಪಲ್ಲ…..
………………………………………………………………………………….
ಗುರಿ ಎನ್ನುವುದು ಕನಸು. ಆದರೆ ಅದು ಬರಿಯ ಕನಸಲ್ಲ , ಕನಸ್ಸನ್ನು ಬೆನ್ನು ಬಿಡದೆ ಅಟ್ಟಿಸಿಕೊಂಡು ಹೋಗಿ ಹಿಡಿಯಬೇಕದದ್ದೇ ಗುರಿ.
ಯಾವ ಮಹತ್ತರವಾದ ಗುರಿಯನ್ನು ಕನಸು ಕಾಣದೆ ಮುಟ್ಟಲು ಸಾದ್ಯವಿಲ್ಲ.
ಕಲ್ಪನೆಗಳು ವಿಲಾಸವಾಗಿ ಉಳಿಯದೆ, ಸಾಕಾರದ ದಿಕ್ಕಿನಲ್ಲಿ ಸಾಗಿದಾಗ ಮಾತ್ರವೇ ಸಾದನೆಗಳು ಸಾದ್ಯ….
………………………………………………………………………………….
ಬೇರೆಯವರ ಮನಸ್ಸನ್ನು ನೋಯಿಸುವುದು ಸುಲಭ
(ಮರವನ್ನು ಕತ್ತರಿಸುವ ಹಾಗೇ)
ಆದರೆ ಅದೇ ಮನಸ್ಸನ್ನು ಖುಷಿ ಪಡಿಸುವುದು ತುಂಬಾ ಕಷ್ಟ,
( ಬೆಳೆಯುವ ಗಿಡದ ಹಾಗೇ)
………………………………………………………………………………….
ನಡೆದಾಡುವ ದೇವರು, ತ್ರಿವಿಧ ದಾಸೋಹಿ,
ಕಾಯಕ ಯೋಗಿ, ಆಧುನಿಕ ಬಸವಣ್ಣ
ಶ್ರೀ ಶಿವಕುಮಾರ ಸ್ವಾಮಿ ಜೀ ರವರಿಗೆ
ಜನುಮ ದಿನದ ಶುಭಾಶಯಗಳು
ನಿಮ್ಮ ಅಗಲಿಕೆಯ ನೋವು ಇನ್ನು ಮಾಸಿಲ್ಲ..
………………………………………………………………………………….
ಕಲ್ಲಿನ ಮನಸು ಗಟ್ಟಿ, ಮನುಷ್ಯನ ಮನಸಲ್ಲ ಅದಕ್ಕೆ ನಿಂನಂತೆ ನನ್ನ ಮನಸು ನೀಡು ಅಂತ ಒಂದಾಗುತ್ತಾರೆ, ಅದು ಬೇಡಿಕೆ ಅಲ್ಲ ಅದರಿಂದ ವಿಪರ್ಯಸವು ಅಲ್ಲಾ, ಸರಿಯಾದ ಅರ್ಥದಲ್ಲಿ – ದೈವತ್ವದ ಒಡನೆ ಒಂದಾಣಿಕೆ.
………………………………………………………………………………….
ವಿದ್ಯೆ ಗಳಿಸಿ ಪಂಡಿತನಾಗಿ ಹಣ ಗಳಿಸಿ ಕೋಟ್ಯಧೀಶನಾಗು ಪ್ರೀತಿ ಗಳಿಸಿ ಜನ ನಾಯಕನಾಗಿ ಆದರೆ ಬಳಲಿ ಬಂದವರಿಗೆ ನೆರಳು ನೀಡಿದ ಮುಳ್ಳಿನ ಮರವಾಗಿದೆ ಫಲಭರಿತ ವೃಕ್ಷದಂತಾಗು.
…………………………………………………………………………………..
ನುಡಿಮುತ್ತುಗಳು
ಸಕ್ಕರೆ ಸಹವಾಸ ಮಾಡಿ ಹಾಲು ಸಿಹಿಹಾಗುತ್ತದೆ ಹುಳಿಯ ಸಹವಾಸ ಮಡಿದ ಹಾಲು ಒಡೆದು ಹೋಗುತ್ತದೆ ಅದೇ ರೀತಿ ಬದುಕು ಒಳ್ಳೆಯವರ ಸಹವಾಸ ಮಾಡಿದರೆ ಜೀವನ ಸುಖವಾಗುತ್ತದೆ ಕೆಟ್ಟವರ ಸಹವಾಸ ಮಾಡಿದರೆ ಜೀವನ ಒಡೆದು ಹೋಗುತ್ತದೆ.
……………………………………………………………………………………
ವರ್ಣ ಜಾತಿ ವರ್ಗಗಳನ್ನು ಆ ದೇವರೇ ಸೃಷ್ಟಿ ಮಾಡಿದ್ದರೂ ಅವನ್ನೆಲ್ಲ ಇಂದು ಸರ್ವೋದಯಕ್ಕಾಗಿ ನಾವು ಧ್ವಂಸ ಮಾಡಬೇಕಾಗುತ್ತದೆ. ಕಾಲರಾ, ಪ್ಲೇಗು, ಮಲೇರಿಯಾಗಳನ್ನು ದೇವರೇ ಸೃಷ್ಟಿ ಮಾಡಿದ್ದು ಅಂತಾ ಹೇಳಿ ನಾವು ಸುಮ್ಮನಿರುವುದಕ್ಕೆ ಆದೀತೆ? ಅನಾರೋಗ್ಯಕರವೂ ಮೃತ್ಯುಕರವೂ ಆಗಿರುವ ಅವನ್ನೆಲ್ಲ ನಾಶಪಡಿಸಿ ನಮ್ಮ ಆರೋಗ್ಯವನ್ನು ನಾವು ರಕ್ಷಿಸಿಕೊಳ್ಳುವಂತೆ ವರ್ಣ ಜಾತಿ ವರ್ಗ ಮೊದಲಾದ ದುರ್ಭಾವನೆಗಳನ್ನೆಲ್ಲ ಧ್ವಂಸ ಮಾಡಿ ಸಮಾಜ ಕ್ಷೇಮವನ್ನು ಸಾಧಿಸಬೇಕು.
– ಕುವೆಂಪು
……………………………………………………………………………………
ಜೀವನ ಎಂದರೆ ನಾವು ಪರಿಸ್ಥಿತಿಯೊಡನೆ ಮಾಡಿಕೊಳ್ಳುವಒಪ್ಪಂದ,,, ಜೀವನ ಎಂದರೇನು ಎಂದುತಿಳಿಯುವ ಹೊತ್ತಿಗೆ ಅರ್ಧ ಜೀವನವೇ ಮುಗಿದು ಹೋಗಿರುತ್ತದೆ,,ಜೀವನ ಎಂಬುದು ಕನ್ನಡಿ ಇದ್ದಂತೆನಕ್ಕರೆ ನಗುತ್ತದೆ ಅತ್ತರೆ ಅಳುತ್ತದೆ,ಆದರೂ ಕೆಲವೊಮ್ಮೆ ನಮ್ಮ ಹಣೆಬರಹ ಸರಿಯಿಲ್ಲದಾಗ ಎಷ್ಟೇ ನಕ್ಕರೂ
ಜೀವನವೆಂಬ ಕನ್ನಡಿ ನಗದೇ ಅಳುತ್ತದೆ.
ಶುಭಾಷಿತ ಎಂದರೇನು?
ಚೆನ್ನಾಗಿ ಆಡಿದ ಮಾತಿಗೆ ಸಂಸ್ಕೃತದಲ್ಲಿ ‘ಸುಭಾಷಿತ’ ಎನ್ನುತ್ತಾರೆ . (ಸು:ಚೆನ್ನಾಗಿ, ಭಾಷಿತ:ಹೇಳಿದ್ದು).