ರಾಷ್ಟ್ರೀಯ ಭಾವೈಕ್ಯತೆ | Rashtriya Bhavaikyate Essay in Kannada

Rashtriya Bhavaikyate prabandha in Kannada Best No1 information

Rashtriya Bhavaikyate, ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ , Rashtriya Bhavaikyate Essay In Kannada, rashtriya bhavaikya prabandha in kannada, ಕನ್ನಡದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ ಬರೆಯಿರಿ, Rashtriya Bhavaikyate Prabandha in Kannada, Rashtriya Bhavaikyate Essay in Kannada, ರಾಷ್ಟ್ರೀಯ ಭಾವೈಕ್ಯತೆ ಮಹತ್ವ

ರಾಷ್ಟ್ರೀಯ ಭಾವೈಕ್ಯತೆ Rashtriya Bhavaikyate

Spardhavani Telegram

ರಾಷ್ಟ್ರೀಯ ಭಾವೈಕ್ಯತೆ

ರಾಷ್ಟ್ರೀಯ ಭಾವೈಕ್ಯತೆ ನಮ್ಮ ಭಾರತದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಎಂಬುದು ಇಂದು ಹಿಂದೆಂದಿಗಿಂತಲೂ ಹೆಚ್ಚು ಹೆಚ್ಚಾಗಿ ಪ್ರಸ್ತಾಪವಾಗುತ್ತಿರುವ ಸಂಗತಿಯಾಗಿರುವುದು .

ಅದಕ್ಕೆ ಮುಖ್ಯ ಕಾರಣ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಕುಂಠಿತಗೊಳ್ಳುತ್ತಿದೆಯೇನೋ ಎಂಬ ರೀತಿಯಲ್ಲಿ ಪರಿಸ್ಥಿತಿ ಕಂಡುಬರುತ್ತಿರುವುದೇ ಆಗಿದೆ .

ಅಲ್ಲಲ್ಲಿ ಆಗಾಗ್ಯೆ ಕೋಮು ಗಲಭೆಗಳು , ಜಾತಿ , ಮತ , ಪಂಥ , ಪಂಗಡ , ಪಕ್ಷ ಭಾಷೆ , ಪ್ರಾಂತ್ಯ , ಪ್ರತ್ಯೇಕ ರಾಜ್ಯ , ರಾಷ್ಟ್ರಗಳ ಹೆಸರಿನಲ್ಲಿ ಸಮಾಜ ಘಾತುಕ ಕುಕೃತ್ಯಗಳು , ರಾಷ್ಟ್ರದ್ರೋಹಿ ಚಟುವಟಿಕೆಗಳು , ಹಿಂಸೆ , ಕ್ರೌರ್ಯ , ನಕ್ಸಲೈಟ್ ಚಟುವಟಿಕೆಗಳು , ಭಯೋತ್ಪಾದಕ ಚಟುವಟಿಕೆಗಳು ಮುಂತಾದವು ಸಂಭವಿಸಿರುವುದೇ ಕಾರಣವಾಗಿರುವುದು .

ಸಾಮಾನ್ಯವಾಗಿ ಒಂದು ರಾಷ್ಟ್ರವು ಭಾವನಾತ್ಮಕವಾಗಿ ಐಕ್ಯತೆಯಿಂದಿರುವುದನ್ನು ರಾಷ್ಟ್ರೀಯ ಭಾವೈಕ್ಯತೆ ಎನ್ನುತ್ತೇವೆ .

ಒಂದು ರಾಷ್ಟ್ರವು ಅನೇಕತೆಯಲ್ಲಿ ಏಕತೆಯನ್ನು ಸಾಧಿ ಸುವುದನ್ನು ರಾಷ್ಟ್ರೀಯ ಭಾವೈಕ್ಯತೆ ಎನ್ನುತ್ತೇವೆ .

ಒಂದು ರಾಷ್ಟ್ರವು ಸಾಮಜಿಕವಾಗಿ , ರಾಜಕೀಯವಾಗಿ , ಆರ್ಥಿಕವಾಗಿ , ಸಾಂಸ್ಕೃತಿಕವಾಗಿ ಏಕತೆಯನ್ನು ಸಾಧಿಸುವುದನ್ನು ರಾಷ್ಟ್ರೀಯ ಭಾವೈಕ್ಯತೆ ಎನ್ನುತ್ತೇವೆ .

file7ecpk970qkpyiuwgkor1612427283
ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ ಬರೆಯಿರಿ

ರಾಷ್ಟ್ರೀಯ ಭಾವೈಕ್ಯತೆಯ ಅರ್ಥ

ವಿವಿಧತೆಯಲ್ಲಿ ಏಕತೆ ಕಂಡ ದೇಶ ನಮ್ಮ ಭಾರತ , ವಿವಿಧ ತರಹದ ಸಂಸ್ಕೃತಿ ಗಳಿದ್ದು ಮತಗಳಿಂದ ಆದರೆ ಆ ಸ್ಥಳ ವಿವಿಧತೆಯಲ್ಲಿ ಏಕತೆ ; ನಾವೆಲ್ಲ ಭಾರತಿಯರು , ಭಾರತ ಮಕ್ಕಳೆಂಬ ಒಂದು ಬಾಂಧವ್ಯ ನಮ್ಮಲ್ಲಿ ಇದೆ.ಇದು ನಮ್ಮ ರಾಷ್ಟ್ರದ ರಾಷ್ಟ್ರೀಯ ಭಾವೈಕ್ಯತೆಯಾಗಿದೆ .

ಭಾರತ ವಿಶಾಲವಾದ ರಾಷ್ಟ್ರವಾಗಿದೆ ಮತ್ತು ವಿಶಿಷ್ಟ ಸಂವಿಧಾನ ಹೊಂದಿದೆ ಈ ಸಂವಿಧಾನದ ದೃಷ್ಟಿಯಲ್ಲಿ ಬಡವ – ಬಲ್ಲಿದ ಎಲ್ಲರೂ ಸಮಾನರು.

ಈ ಹಿನ್ನಲೆಯಲ್ಲಿಯೇ ಸ್ತ್ರೀ ಪುರುಷರೆಂಬ ಲಿಂಗ , ಜಾತಿ , ಭಾಷೆ , ಪ್ರಾಂತ , ಧರ್ಮ ಆಹಾರ , ಉಡುಗೆ – ತೊಡುಗೆ , ರೀತಿ – ನೀತಿ , ಸಂಪ್ರದಾಯಗಳ ಭೇದವನ್ನೆಣಿಸದೇ ನಾವೆಲ್ಲಾ ಒಂದೇ ಎಂದು ತಿಳಿಸುವುದೇ ರಾಷ್ಟ್ರೀಯ ಭಾವೈಕ್ಯತೆಯಾಗಿದೆ .

ವಿಷಯ ನಿರೂಪಣೆ:-

ಭಾರತವು ವಿವಿಧ ಧರ್ಮ , ಭಾಷೆ ಬುಡಕಟ್ಟು ಜನಾಂಗಗಳನ್ನು ಹೊಂದಿದ್ದು ದೇಶದ ಯಾವುದೇ ಮೂಲೆಗೆಹೋದರೂ ಅಲ್ಲಿ ವೈವಿಧ್ಯತೆಯನ್ನು ಕಾಣುತ್ತೇವೆ .

ಏಕೆಂದರೆ ಭಾರತೀಯ ನಾಗರಿಕತೆಯು ಯಾವಾಗಲು ಧಾರ್ಮಿಕ ಹಾಗೂ ನೈತಿಕ ತಳಹದಿಯ ಮೇಲೆ ಚಲಿಸುತ್ತದೆ.

ದೇಶದ ಎಲ್ಲ ಭಾಗಗಳಲ್ಲಿಯೂ ಸಾಂಸ್ಕೃತಿಕ ಮತ್ತು ಜೀವನ ಮಾರ್ಗದ ಒಗ್ಗಟ್ಟು ಹಾಗೂ ದೃಷ್ಟಿಕೋನವು ಧರ್ಮ , ನಂಬಿಕೆ ಮತ್ತು ಆಚರಣೆಗಳಲ್ಲಿ ವಿಶಾಲ ವೈವಿಧ್ಯತೆಯನ್ನು ಹೊಂದಿದೆ.

ಆದರೂ ನಮ್ಮಲ್ಲಿ ನಾವು ಭಾರತಿಯರು ಎಂಬ ಬಲವಾದ ಬೇರಿದೆ .

ನಮ್ಮ ದೇಶದ ರಾಷ್ಟ್ರಗೀತೆ ರಾಷ್ಟ್ರ ಭಾಷೆ , ರಾಷ್ಟ್ರಮುದ್ರೆ ಇವು ನಮ್ಮ ಏಕತೆಯ ಸಂಕೇತಗಳಾಗಿದೆ.

ಅಲ್ಲದೇ ವಂದೇ ಮಾತರಂ , ಸಾರೇ ಜಹಾಂಸೆ ಅಚ್ಚಾ , ಜನಗಣಮನ ಅಧಿನಾಯಕ ದಂತಹ ದೇಶ ಭಕ್ತಿಗೀತೆಗಳು ನಮ್ಮಲ್ಲಿ ದೇಶಪ್ರೇಮ , ದೇಶಾಭಿಮಾನವನ್ನು ಹುಟ್ಟಿಸುತ್ತವೆ .

ಇಡೀ ದೇಶವೇ ವೈವಿದ್ಯಮಯದ ಸಂಸ್ಕೃತಿಕ ಆಚರಣೆಯಲ್ಲಿರುವಾಗ ನಾವು ಒಂದೇ ಮನೆಯವರಂತೆ ಕೂಡಿ ಬಾಳುತ್ತಿರುವುದು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಬಹುದು .

download 2 2

ರಾಷ್ಟ್ರೀಯ ಬಾವೈಕ್ಯತೆ ಮೂಡಿಸುವ ಅಂಶಗಳು

ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಹಬ್ಬಗಳು :

೧ ) ಸ್ವತಂತ್ರ ದಿನಾಚರಣೆ .

೨ ) ಗಾಂಧಿ ಜಯಂತಿ

೩ ) ಗಣರಾಜ್ಯೋತ್ಸವ್ವ

೪ ) ಕರ್ನಾಟಕ ರಾಜ್ಯೋತ್ಸವ

೫ ) ಮಕ್ಕಳ ದಿನಾಚರಣೆ

೬ ) ಶಿಕ್ಷಕರ ದಿನಾಚರಣೆ

ಸಾಂಸ್ಕೃತಿಕ ಕಾರ್ಯಕ್ರಮಗಳು :

೧ ) ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು

೨ ) ಭಾರತೀಯ ಸಾಂಸ್ಕೃತಿಕ ಉತ್ಸವ

೩ ) ರಾಷ್ಟ್ರೀಯ ವಿಕಾಸ ಕಾರ್ಯಕ್ರಮಗಳು

೪ ) ಪುಥಳಿ ಸ್ಥಾಪನೆ ಮತ್ತು ಜಯಂತಿ ಆಚರಣೆಗಳು

೫ ) ಜನಜಾಗೃತಿ ಸಮ್ಮೇಳನಗಳು

೬ ) ರಾಷ್ಟ್ರಪ್ರೇಮ ಬೆಳೆಸುವ ಕಾರ್ಯಕ್ರಮಗಳು

ರಾಷ್ಟ್ರೀಯ ಕ್ರೀಡೆಗಳು :

ಹಾಕಿ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯಾಗಿದೆ .

ಭಾರತದ ಹಾಕಿ ಮಾಂತ್ರಿಕ ಧ್ಯಾನಚಂದ , ಇವರ ಹುಟ್ಟಿದ್ದು ಆಗಸ್ಟ್ ೨೯ ಪ್ರತಿ ವರ್ಷ ಭಾರತದಲ್ಲಿ ಈ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುವುದು.

ಸಾಮರಸ್ಯ ಮೂಡಿಸುವ ಇತಿಹಾಸದ ದಾಖಲೆಗಳು :

1 ) ರಾಜ್ಯ ನಿರ್ಮಾಣ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಮಾಹಾ ಗುಜರಾತ ಚಳುವಳಿಯ ಐತಿಹಾಸಿಕ ದಾಖಲೆ

2 ) ಕಾಸರಗೋಡಿನ ಇತಿಹಾಸವನ್ನು ಅನ್ವಲೋಕಿಸುವ ಶಾಸನಗಳ ಚಾರಿತ್ರಿಕ ದಾಖಲೆಗಳು

3 ) ಕೇಂದ್ರ ಮತ್ತು ರಾಜ್ಯಗಳ ಸಹಕಾರ ಸಾಮರಸ್ಯದ ಅಗತ್ಯತೆಯನ್ನು ಎತ್ತಿ ತೋರಿಸುವ ಮೈಸೂರು ರಾಜ್ಯದ ಇತಿಹಾಸದ ದಾಖಲೆಗಳು

4 ) ಭಾರತದ ಸಾಮರಸ್ಯ ಸಮಾನತೆ , ಸಹಬಾಳ್ವೆ ಮಾನವೀಯತೆ ಪ್ರಗತಿ , ಪ್ರೀತಿಯ ಪರಿಕಲ್ಪನೆಗಳು ಮೂಡಿಸುವ ಭಾರತದ ಭವ್ಯಇತಿಹಾಸದ ದಾಖಲೆಗಳು ,

ಉಪಸಂಹಾರ

ಎಲ್ಲರೂ ಎಲ್ಲರಿಗಾಗಿ ಎಂಬ ಮಂತ್ರದಿಂದ ಕಣ್ಣು ಬೇರೆಯಾದರೂ ನೋಟ ಒಂದೇ ಭಾಷೆ ಬೇರೆಯಾದರೂ ಜಾತಿ ಒಂದೇ ಜಾತಿ , ಕುಲ , ಧರ್ಮ ಬೇರೆಯಾದರೂ ದೇಶ ಒಂದೇಯಾಗಿದೆ . ನಾವೆಲ್ಲ ಒಂದೇ ತೊಟ್ಟಿಲಿನ ಮಕ್ಕಳು ನಾವು ಭಾರತಿಯರು ಎಂಬ ಐಕ್ಯತೆಯ ಮಂತ್ರ , ರಾಗ ವಾಗಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ .

FAQ

ಭಾವೈಕ್ಯತೆ ಎಂದರೇನು?

ಸರಳವಾಗಿ ಹೇಳುವುದಾದರೆ ವಿವಿಧತೆಯಲ್ಲೂ ಏಕತೆಯನ್ನು ಕಾಣುವುದೇ ಭಾವೈಕ್ಯತೆ.

ರಾಷ್ಟ್ರೀಯ ಭಾವೈಕ್ಯತೆ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ?

ಅಕ್ಟೋಬರ್ 31 ರಂದು ರಾಷ್ಟೀಯ ಐಕ್ಯತಾ ದಿನವನ್ನು ಆಚರಿಸಲಾಗುತ್ತದೆ.

ಇತರೆ ಪ್ರಬಂಧಗಳನ್ನು ಓದಿ

One thought on “ರಾಷ್ಟ್ರೀಯ ಭಾವೈಕ್ಯತೆ | Rashtriya Bhavaikyate Essay in Kannada

Leave a Reply

Your email address will not be published. Required fields are marked *