ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು | 9th Standard Ramarajya Kannada Notes

ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು | 9th Standard Ramarajya Kannada Notes

9th standard ramarajya kannada notes, 9ನೇ ತರಗತಿ ರಾಮರಾಜ್ಯ ಕನ್ನಡ ನೋಟ್ಸ್‌ , 9ನೇ ತರಗತಿ ರಾಮರಾಜ್ಯ ಕನ್ನಡ ನೋಟ್ಸ್‌, 9th Standard Ramarajya Kannada Notes Question Answer Pdf 2023, Kseeb Solutions For Class 9 Kannada Chapter 1 ರಾಮರಾಜ್ಯ ಕನ್ನಡ Pdf, 9th standard kannada textbook answers, kannada 9th standard ramarajya notes, 9th standard ramarajan notes, 9th standard ramarajya kannada, kannada 9th standard notes chapter 1 ramarajya, ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು, ರಾಮರಾಜ್ಯ ಪಾಠದ ಸಾರಾಂಶ

9th Standard Ramarajya Kannada Notes

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram

ರಾಮರಾಜ್ಯ ಪಾಠದ ಸಾರಾಂಶ

ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು | 9th Standard Ramarajya Kannada Notes
ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು | 9th Standard Ramarajya Kannada Notes

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿರಿ 9th Standard Ramarajya Kannada Notes

ಯಾರೊಡನೆ ಸಮಾಲೋಚಿಸುವುದು ರಾಜದೋಷ ಎಂದು ರಾಮನು ಹೇಳುತ್ತಾನೆ ?
ಅನುಭವವಿಲ್ಲದ ಅವಿವೇಕಿಗಳೊಡನೆ ಸಮಾಲೋಚಿಸುವುದು ರಾಜದೋಷ ಎಂದು ರಾಮನು ಹೇಳುತ್ತಾನೆ

ರಾಜನು ಯಾವ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು ?
ರಾಜನು ಅಲ್ಪಪ್ರಯತ್ನದಿಂದ ಬಹುಫಲವನ್ನು ಕೊಡತಕ್ಕ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು

ಕಷ್ಟಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಯಾರು ?
ಕಷ್ಟಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಪಂಡಿತ

ಜನರು ಅರಸನನ್ನು ಹೇಗೆ ತಿರಸ್ಕರಿಸಬಹುದು ?
ಬಲಾತ್ಕಾರದಿಂದ ಕೆಲಸ ಮಾಡಿಸಿಕೊಂಡು ಶೋಷಿಸುವ ಯಜಮಾನನಂತೆ ಅರಸನು ವರ್ತಿಸಿದರೆ ಜನರು ತಿರಸ್ಕರಿಸಬಹುದು .

ಅಮಾತ್ಯರು ಯಾವ ವಿಷಯದಲ್ಲಿ ನಿಪುಣರಾಗಿರಬೇಕು ?
ಅಮಾತ್ಯರು ರಾಜ್ಯಶಾಸ್ತ್ರದಲ್ಲಿ ನಿಪುಣರಾಗಿರಬೇಕು .

ದೇಶಕ್ಕೆ ದೊಡ್ಡ ಗಂಡಾಂತರ ತರಬಲ್ಲವರು ಯಾರು ?
ದೇಶಭ್ರಷ್ಟಗೊಳಿಸಿದ ಶತ್ರುಗಳು ಮರಳಿ ದೇಶದೊಳಕ್ಕೆ ಸೇರಿಕೊಂಡರೆ ಅವರು ದೇಶಕ್ಕೆ ದೊಡ್ಡ ಗಂಡಾಂತರ ತರಬಲ್ಲರು .

ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲವನು ಯಾರು ?
ಮೇಧಾವಿಯೂ ಶೂರನೂ ಕಾರ್ಯದಕ್ಷನೂ ರಾಜ್ಯಶಾಸ್ತ್ರವಿಶಾರದನೂ ಸಚಿವನು ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲನು .

ಈ ಕೆಳಗಿನ ಪ್ರಶ್ನೆಗಳಿಗೆ 5-6 ವಾಕ್ಯಗಳಲ್ಲಿ ಉತ್ತರಿಸಿರಿ . 9th Standard Ramarajya Kannada Notes

ಖಜಾನೆಯನ್ನು ಹೇಗೆ ನಿಭಾಯಿಸಬೇಕೆಂದು ರಾಮನು ಹೇಳುತ್ತಾನೆ ?

ಆದಾಯವು ವ್ಯಯಕ್ಕಿಂತ ( ಖರ್ಚಿಗಿಂತ ) ಹೆಚ್ಚಿರಬೇಕು.ರಾಜ್ಯದ ಬೊಕ್ಕಸದಲ್ಲಿ ಸಂಗ್ರಹಿಸುವ ಸಂಪತ್ತು ರಾಜ್ಯದ ಅಭಿವೃದ್ಧಿಯ ಕೆಲಸಕಾರ್ಯಗಳಿಗೆ ವಿನಿಯೋಗವಾಗಬೇಕು . ಖಜಾನೆಯನ್ನು ಬರಿದುಗೊಳಿಸಬಾರದು . ಹಾಗೆಂದು ಅದನ್ನು ತುಳುಕುವಷ್ಟು ತುಂಬಿಸಿಕೊಳ್ಳಲು ಅನರ್ಥದ ಆದಾಯವು ಖರ್ಚಿಗಿಂತ ಹೆಚ್ಚಿರಬೇಕು.ರಾಜ್ಯದ ಬೊಕ್ಕಸದಲ್ಲಿ ಸಂಗ್ರಹಿಸುವ ಸಂಪತ್ತು ರಾಜ್ಯದ ಅಭಿವೃದ್ಧಿಯ ಕೆಲಸಕಾರ್ಯಗಳಿಗೆ ವಿನಿಯೋಗವಾಗಬೇಕು . ಖಜಾನೆಯನ್ನು ಬರಿದುಗೊಳಿಸಬಾರದು . ಹಾಗೆಂದು ಅದನ್ನು ತುಳುಕುವಷ್ಟು ತುಂಬಿಸಿಕೊಳ್ಳಲು ಅನರ್ಥ ಅನ್ಯಾಯಗಳ ಮಾರ್ಗವನ್ನು ಹಿಡಿಯಬಾರದು ಎಂದು ರಾಮನು ಖಜಾನೆಯನ್ನು ನಿಭಾಯಿಸುವ ಬಗ್ಗೆ ಹೇಳುತ್ತಾನೆ.

ರಾಜ್ಯದ ಅಮಾತ್ಯರಲ್ಲಿ ಯಾವ ಗುಣಗಳಿರಬೇಕು ?

ಅಮಾತ್ಯನು ರಾಜ್ಯಶಾಸ್ತ್ರ ನಿಪುಣನಾಗಿರಬೇಕು.ಮಂತ್ರಾಲೋಚನೆ ಯನ್ನು ಗೌಪ್ಯವಾಗಿ ಇಡುವವನಾಗಿರಬೇಕು.ಮೇಧಾವಿಯೂ ಶೂರನೂ ಕಾರ್ಯದಕ್ಷನೂ ಆಗಿರಬೇಕು.ಲಂಚವನ್ನು ಮುಟ್ಟದವನೂ ಪ್ರಾಮಾಣಿಕನೂ ಆಗಿರಬೇಕು.ರಾಜ್ಯದ ಆಡಳಿತವನ್ನು ಸರಿಯಾಗಿ ನಿರ್ವಹಿಸಿ ರಾಜನಿಗೆ ಶ್ರೇಯಸ್ಸನ್ನು ತಂದುಕೊಡಬಲ್ಲವನಾಗಿರಬೇಕು

ಯಾವ ಮೂರು ವ್ಯಕ್ತಿಗಳನ್ನು ರಾಜನು ತ್ಯಜಿಸಬೇಕು ? ಯಾಕೆ ?

ಉಪಾಯದಿಂದ ಹಣ ಕೀಳುವ ವೈದ್ಯನನ್ನೂ ಒಡೆಯನನ್ನು ದೂಷಿಸುವ ಸೇವಕನನ್ನೂ ಖಜಾನೆಯ ಐಶ್ವರ್ಯದ ಮೇಲೆ ಕಣ್ಣಿಟ್ಟಿರುವ ಸೈನಿಕನನ್ನೂ ರಾಜನು ತ್ಯಜಿಸಬೇಕು ಏಕೆಂದರೆ ಈ ವ್ಯಕ್ತಿಗಳ ಕುತಂತ್ರದಿಂದಲೇ ಒಡೆಯನನ್ನು ದೂಷಿಸುವ ಸೇವಕನನ್ನೂ ಖಜಾನೆಯ ಐಶ್ವರ್ಯದ ಮೇಲೆ ಕಣ್ಣಿಟ್ಟಿರುವ ಸೈನಿಕನನ್ನೂ ರಾಜನು ತ್ಯಜಿಸಬೇಕು ಏಕೆಂದರೆ ಈ ವ್ಯಕ್ತಿಗಳ ಕುತಂತ್ರದಿಂದಲೇ ರಾಜನು ವಿಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು.ಆದ್ದರಿಂದ ಇವರಿಗೆ ಉಗ್ರ ಶಿಕ್ಷೆಯನ್ನು ನೀಡಿ ರಾಜನು ತನ್ನಿಂದ ಇಂಥವರನ್ನು ದೂರವಿಡಬೇಕು .

ದೂತನು ಹೇಗಿರಬೇಕು ?

ನಮ್ಮ ದೇಶದಲ್ಲಿ ಹುಟ್ಟಿ ಬೆಳೆದ ವಿದ್ಯಾಂಸನವನ್ನು ದೂತನನ್ನಾಗಿ ನೇಮಿಸಿಕೊಳ್ಲಬೇಕು.ದೂತನು ಕಾರ್ಯ ಸಮರ್ಥನೂ ಪ್ರತಿಭಾಶಾಲಿಯೂ ಆಗಿರಬೇಕು.ಹೇಳಿಕಳಿಸಿದ ಸಂದೇಶವನ್ನಷ್ಟೇ ತಿಳಿಸುವ ಸತ್ಯವಂತನಾಗಿರಬೇಕು . ವ್ಯಕ್ತಿ ವಸ್ತುಗಳ ಮೌಲ್ಯವನ್ನೂ ಯೋಗ್ಯತೆಯನ್ನೂ ಸರಿಯಾಗಿ ಗುರುತಿಸಬಲ್ಲ ನಿಷ್ಣಾತನಾಗಿರಬೇಕು .

ಮಂತ್ರಾಲೋಚನೆಯನ್ನು ಹೇಗೆ ನಡೆಸಬೇಕೆಂದು ರಾಮನ ಅಭಿಪ್ರಾಯ ?

ರಾಜ್ಯಶಾಸ್ತ್ರ ನಿಪುಣರಾದ ಅಮಾತ್ಯರೊಂದಿಗೆ ಮಂತ್ರಾಲೋಚನೆಯನ್ನು ಗೌಪ್ಯವಾಗಿ ನಡೆಸಬೇಕು.ಮಂತ್ರಾಲೋಚನೆಗೆ ಅಗತ್ಯಕ್ಕಿಂತ ಹೆಚ್ಚಿನ ಮಂದಿಯನ್ನು ಸೇರಿಸಿಕೊಳ್ಳಬಾರದು .

ಮಂತ್ರಾಲೋಚನೆಯ ವಿಷಯವು ಕಾರ್ಯರೂಪಕ್ಕೆ ಬರುವುದರೊಳಗೆ ರಾಷ್ಟ್ರದಲ್ಲಿ ಬಹಿರಂಗವಾಗಬಾರದು . ಮೊದಲೇ ಸಾಮಂತರಾಜರಿಗೆ ತಿಳಿಯಬಾರದು.ಅದು ಸಾಮಂತರಿಗೆ ಗೊತ್ತಾಗುವಷ್ಟರಲ್ಲಿ ಪೂರ್ಣವಾಗಿ ನಡೆದು ಹೋಗಿರಬೇಕು ಇಲ್ಲವೇ ಅರ್ಧದಷ್ಟಾದರೂ ಆಚರಣೆಯಲ್ಲಿ ಬಂದಿರಬೇಕು

ಸೇವಕರ ವಿಷಯದಲ್ಲಿ ರಾಜನು ಹೇಗೆ ವರ್ತಿಸಬೇಕು ?

ಸೇವಕರು ನಿರ್ಭಯರಾಗಿ ಬಂದು ಎದುರಿಗೆ ನಿಲ್ಲುವಷ್ಟು ಸಲಿಗೆಯನ್ನು ಕೊಡಬಾರದು.ಅಥವಾ

ಸೇವಕರು ನಿರ್ಭಯರಾಗಿ ಬಂದು ಎದುರಿಗೆ ನಿಲ್ಲುವಷ್ಟು ಸಲಿಗೆಯನ್ನು ಕೊಡಬಾರದು.ಅಥವಾ ಹತ್ತಿರವೇ ಸುಳಿಯದೆ ದೂರಕ್ಕೆ ಸರಿಯುವಂತೆ ಅಂಜಿಸಲೂಬಾರದು.ಅವರ ವಿಷಯದಲ್ಲಿ ಹೆಚ್ಚು ಸಲಿಗೆಯೂಸಲ್ಲದು ಹೆಚ್ಚು ಅಂಜಿಸುವುದೂ ಸಲ್ಲದು ಇವೆರಡರ ನಡುದಾರಿಯನ್ನು ರಾಜನು ಕಾಯ್ದುಕೊಳ್ಳಬೇಕು ಎಂದು ರಾಮನು ಹೇಳುತ್ತಾನೆ

ಈ ಕೆಳಗಿನ ಪ್ರಶ್ನೆಗಳಿಗೆ 10 ವಾಕ್ಯಗಳಲ್ಲಿ ಉತ್ತರಿಸಿರಿ . 9th Standard Ramarajya Kannada Notes

ರಾಜನಲ್ಲಿ ತಲೆದೋರಬಹುದಾದ ಹದಿನಾಲ್ಕು ದೋಷಗಳ ಬಗ್ಗೆ ವಿವರಿಸಿ .

ರಾಜನಲ್ಲಿ ಸಂಭವಿಸಬಹುದಾದ ದೋಷಗಳು ಹದಿನಾಲ್ಕು , ಅವು ನಾಸ್ತಿಕಬುದ್ಧಿ , ಸುಳ್ಳು , ಸಿಟ್ಟು , ಅನವಧಾನ , ಚಟುವಟಿಕೆಯಿಲ್ಲದೆ ಕೆಲಸವನ್ನು ತಡಮಾಡುವುದು , ಪ್ರಾಜರಾದ ಸಜ್ಜನರೊಡನೆ ಸೇರದಿರುವುದು , ಸೋಮಾರಿತನ , ಪಂಚೇಂದ್ರಿಯಗಳಿಗೆ ಅಧೀನನಾಗಿ ಇಂದ್ರಿಯ ಚಾಪಲ್ಯದಲ್ಲಿ ಮುಳುಗುವುದು , ಮಂತ್ರಿಗಳೊಡನೆ ಸಮಾಲೋಚಿಸದೆ ರಾಜ್ಯಕಾರ್ಯಗಳಲ್ಲಿ ತಾನೊಬ್ಬನೇ ನಿರ್ಧಾರವನ್ನು ತೆಗೆದುಕೊಳ್ಳುವುದು . ಅನುಭವವಿಲ್ಲದ ಅವಿವೇಕಿಗಳೊಡನೆ ಸಮಾಲೋಚಿಸುವುದು , ನಿಶ್ಚಯಿಸಿದ ಕಾರ್ಯಗಳನ್ನು ಆರಂಭಿಸುರುವರು , ಮಂತ್ರಾಲೋಚನೆಯನ್ನು ರಹಸ್ಯವಾಗಿಡದೆ ಬಹಿರಂಗಪಡಿಸುವುದು ಮಂಗಳಕರವಾದ ಶುಭಕಾರ್ಯವನ್ನು ಮಾಡದಿರುವುದು ಹಾಗೂ ಎಲ್ಲ ಶತ್ರುಗಳ ಮೇಲೂ ಏಕಕಾಲದಲ್ಲಿ ಯುದ್ಧಾರಂಭ – ಈ ಹದಿನಾಲ್ಕು ರಾಜದೋಷಗಳಿಗೆ ಅವಕಾಶವನ್ನು ಕೊಡಬೇಡ

ರಾಜ್ಯಾಡಳಿತದ ವಿಷಯದಲ್ಲಿ ರಾಮನ ಉಪದೇಶವನ್ನು ಸಂಗ್ರಹವಾಗಿ ಬರೆಯಿರಿ .

ರಾಜ್ಯವನ್ನು ಆಳತಕ್ಕವರಿಗೆ ಮಂತ್ರಾಲೋಚನೆಯು ಮುಖ್ಯವಾದದ್ದು.ಅದನ್ನು ಗೌಪ್ಯವಾಗಿ ಇಟ್ಟಿರಬೇಕು.ಮೇಧಾವಿಯೂ ಶೂರನೂ ಕಾರ್ಯದಕ್ಷನೂ ರಾಜ್ಯಶಾಸ್ತ್ರವಿಶಾರದನೂ ಆದ ಸಚಿವನನ್ನು ರಾಜನು ಹೊಂದಿರಬೇಕು . ಅವನು ಆಡಳಿತದಲ್ಲಿ ರಾಜನಿಗೆ ಶ್ರೇಯಸ್ಸನ್ನು ತಂದುಕೊಡುವನು ಅಧಿಕಾರಿಗಳನ್ನು ಅವರ ಕುಶಲತೆಗೆ ಯೋಗ್ಯತೆಗೆ ತಕ್ಕಂತೆ ನೇಮಿಸಿಕೊಳ್ಳಬೇಕು . ಸೇನಾನಾಯಕರನ್ನು ಸೈನಿಕರನ್ನು ರಾಜನು ಚೆನ್ನಾಗಿ ನೋಡಿಕೊಳ್ಳಬೇಕು.ದೇಶದಲ್ಲಿಯೇ ಹುಟ್ಟಿಬೆಳೆದ ವಿದ್ವಾಂಸನನ್ನು ದೂತನನ್ನಾಗಿ ನೇಮಿಸಿಕೊಳ್ಳಬೇಕು.ಶತ್ರು ಪಕ್ಷದಲ್ಲಿನ ಇಲಾಖೆಗಳನ್ನು ಗಮನಿಸಲು ಗೂಢಚಾರರನ್ನು ನೇಮಿಸಬೇಕು . ರಾಜ್ಯದ ಬೊಕ್ಕಸದಲ್ಲಿನ ಸಂಪತ್ತನ್ನು ಅಭಿವೃದ್ದಿಯ ಕೆಲಸಕಾರ್ಯಗಳಿಗೆ ಉಪಯೋಗಿಸಬೇಕು. ಖರ್ಚಿಗಿಂತ ಆದಾಯವು ಹೆಚ್ಚಿರುವ ಹಾಗೆ ರಾಜನು ನೋಡಿಕೊಳ್ಳಬೇಕು.ದೇಶದಲ್ಲಿಯೇ ಹುಟ್ಟಿಬೆಳೆದ ವಿದ್ವಾಂಸನನ್ನು ದೂತನನ್ನಾಗಿ ನೇಮಿಸಿಕೊಳ್ಳಬೇಕು.ಶತ್ರು ಪಕ್ಷದಲ್ಲಿನ ಇಲಾಖೆಗಳನ್ನು ಗಮನಿಸಲು ಗೂಢಚಾರರನ್ನು ನೇಮಿಸಬೇಕು . ರಾಜ್ಯದ ಬೊಕ್ಕಸದಲ್ಲಿನ ಸಂಪತ್ತನ್ನು ಅಭಿವೃದ್ಧಿಯ ಕೆಲಸಕಾರ್ಯಗಳಿಗೆ ಉಪಯೋಗಿಸಬೇಕು.ಖರ್ಚಿಗಿಂತ ಆದಾಯವು ಹೆಚ್ಚಿರುವ ಹಾಗೆ ನೋಡಿಕೊಳ್ಳಬೇಕು.ರಾಜನು ಯಂತ್ರ ಯಂತ್ರಜ್ಞರನ್ನು ಶಿಲ್ಪಿಗಳನ್ನು ಆಯುಧಗಳನ್ನು ಧನುರ್ಧಾರಿಗಳಾದ ಸೈನಿಕರನ್ನು ಹೊಂದಿರಬೇಕು

ಈ ಕೆಳಗೆ ಕೊಟ್ಟಿರುವ ಮಾತುಗಳ ಸ್ವಾರಸ್ಯವನ್ನು ವಿಸ್ತರಿಸಿ ಬರೆಯಿರಿ. 9th Standard Ramarajya Kannada Notes

ಪೂರ್ವಿಕರ ವ್ಯಕ್ತಿತ್ವದ ಅತ್ಯುತ್ತಮ ಅಂಶಗಳನ್ನು ರಾಜನು ಅಳವಡಿಸಿಕೊಳ್ಳಬೇಕು.
ಇತಿಹಾಸವನ್ನು ಅವಲೋಕಿಸಿದಾಗ ನಮಗೆ ಅನೇಕ ಮಹಾನುಭಾವರ ಪರಿಚಯವಾಗುತ್ತದೆ. ಅವರೆಲ್ಲ ತಮ್ಮ ಉದಾತ್ತ ವ್ಯಕ್ತಿತ್ವದಿಂದ ನಮ್ಮ ಗಮನ ಸೆಳೆಯುತ್ತಾರೆ. ತಮ್ಮ ವ್ಯಕ್ತಿತ್ವದಿಂದಾಗಿ ಅಪೂರ್ವವಾದ ಸಾಧನೆಯನ್ನು ಆದಕಾರಣ ರಾಮನು ಸಹ ಭರತನಿಗೆ ರಾಜನ ಆಡಳಿತದ ಬಗ್ಗೆ ಹೇಳುವಾಗ ರಾಜನು ತನ್ನ ಪೂರ್ವಿಕರ ವ್ಯಕ್ತಿತ್ವದ ಅತ್ಯತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳುತ್ತಾನೆ. ಈ ಅಂಶಗಳನ್ನು ಅಳವಡಿಸಿಕೊಳ್ಳುವುದರಿಂದ ಆಡಳಿತವು ಸುಲಭವಾಗುತ್ತದೆ. ಮತ್ತು ಪ್ರಜೆಗಳು ಸಂತುಷ್ಟರಾಗುತ್ತಾರೆ. ಉತ್ತಮ ವ್ಯಕ್ತಿತ್ವವುಳ್ಳ ರಾಜನು ಪ್ರಜೆಗಳ ಪ್ರೀತಿಗೆ ಗೌರವಕ್ಕೆ ಪಾತ್ರನಾಗುತ್ತಾನೆ.

ದೂತನು ಕಾರ್ಯಸಮರ್ಥನೂ ಪ್ರತಿಭಾಶಾಲಿಯೂ ಆಗಿರಬೇಕು
ದೂತನು ಕಾರ್ಯಸಮರ್ಥನೂ ಪ್ರತಿಭಾಶಾಲಿಯೂ ಆಗಿರಬೇಕು ನಮ್ಮ ದೇಶದಲ್ಲಿ ಹುಟ್ಟಿ ಬೆಳೆದ ವಿದ್ವಾಂಸನನ್ನು ದೂತನನ್ನಾಗಿ ನೇಮಿಸಿಕೊಳ್ಳಬೇಕು ಹೇಳಿಕಳಿಸಿದ ಸಂದೇಶವನ್ನು ಮಾತ್ರ ತಿಳಿಸುವಂತ ಸತ್ಯವಂತನಾಗಿರಬೇಕು. ವ್ಯಕ್ತಿ ವಸ್ತುಗಳ ಮೌಲ್ಯವನ್ನುಯೋಗ್ಯತೆಯನ್ನು ಸರಿಯಾಗಿ ಗುರುತಿಸಬಲ್ಲ ನಿಷ್ಣಾತನಾಗಿರಬೇಕು. ಹೀಗೆ ರಾಮನು ಹೇಳಿದಂತೆ ಚಾಣಾಕ್ಷತನವನ್ನು ಹೊಂದಿರುವ ದೂತನು ಇದ್ದರೆ ಆತನು ರಾಜನನ್ನು ಶತ್ರುಗಳ ಸಂಚಿನಿಂದ ಕಾಪಾಡಬಲ್ಲವನಾಗುವನು ಸುತ್ತಮುತ್ತಲಿನ ರಾಜ್ಯಗಳಲ್ಲಿ ನಡೆಯುವ ವಿಚಾರಗಳನ್ನು ಸರಿಯಾಗಿ ರಾಜನಿಗೆ ಮುಟ್ಟಿಸಬಲ್ಲವನಾಗಿರುತ್ತಾನೆ.

ಸಾವಿರ ಮೂರ್ಖರಿಗಿಂತ ಒಬ್ಬ ಪಂಡಿತ ಲೇಸು.
ಸಾವಿರ ಮೂರ್ಖರಿಗಿಂತಲೂ ಒಬ್ಬ ಪಂಡಿತನೇ ಲೇಸೆಂದು ತಿಳಿದು ಅವನನ್ನು ಆದರಿಸುವೆಯಾ? ಏಕೆಂದರೆ ಕಷ್ಟಕಾಲದಲ್ಲಿ ಪಂಡಿತನೊಬ್ಬನೇ ಸರಿಯಾದ ಉಪಾಯವನ್ನು ಬೋಧಿಸಿ ಕಾರ್ಯವನ್ನು ನಿರ್ವಹಿಸಬಲ್ಲ. ಮೂರ್ಖರ ಸಂಖ್ಯೆ ಸಾವಿರವಿರಲಿ, ಹತ್ತು ಸಾವಿರವೇ ಇರಲಿ, ರಾಜನಿಗೆ ಆದರಿಂದ ಯಾವ ಸಹಾಯವೂ ಆಗುವುದಿಲ್ಲ. ಮೇಧಾವಿಯೂ ಶೂರನೂ ಕಾರ್ಯದಕ್ಷನೂ ರಾಜ್ಯಶಾಸ್ತ್ರವಿಶಾರದನೂ ಆದ ಸಚಿವನು ಒಬ್ಬನೇ ಆದರೂ ರಾಜನಿಗಾಗಲೀ ರಾಜ್ಯದ ಆಡಳಿತವನ್ನು ನಿರ್ವಹಿಸುವವನಿಗಾಗಲೀ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲನು.

ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು | 9th Standard Ramarajya Kannada Notes
ರಾಮರಾಜ್ಯ ಪಾಠದ ಪ್ರಶ್ನೆ ಉತ್ತರಗಳು | 9th Standard Ramarajya Kannada Notes

ಸಂಬಂದಿಸಿದ ಇತರೆ ವಿಷಯಗಳು

ವಾಲಿಬಾಲ್ ಪಾಠದ ಪ್ರಶ್ನೆ ಉತ್ತರ

9ನೇ ತರಗತಿ ಕನ್ನಡ ನೋಟ್ಸ್

Leave a Reply

Your email address will not be published. Required fields are marked *