ಸಾಮಾಜಿಕ ಪಿಡುಗುಗಳು ಪ್ರಬಂಧ | Samajika Pidugu Galu Essay In Kannada

ಸಾಮಾಜಿಕ ಪಿಡುಗುಗಳು ಕುರಿತು ಪ್ರಬಂಧ | Samajika Pidugu Galu Essay In Kannada Best No1 Prabandha

Samajika Pidugu Galu Essay In Kannada, samajika pidugu galu prabandha , ಸಾಮಾಜಿಕ ಪಿಡುಗುಗಳ ಪ್ರಬಂಧ , samajika pidugu galu essay in kannada, ಸಾಮಾಜಿಕ ಪಿಡುಗುಗಳು ಬಗ್ಗೆ ಪ್ರಬಂಧ ಕನ್ನಡದಲ್ಲಿ, Samajika Pidugu Galu Prabandha in Kannada, Samajika Pidugu Galu Essay in Kannada ಸಾಮಾಜಿಕ ಪಿಡುಗುಗಳು essay in kannada Essay on Social Evils in Kannada

Samajika Pidugu Galu Essay In Kannada

ಸಾಮಾಜಿಕ ಪಿಡುಗುಗಳು ಕುರಿತು ಪ್ರಬಂಧವನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುವುದು.

Samajika Pidugu Galu Prabandha

Spardhavani Telegram

Samajika Pidugu Galu Essay In Kannada

ನಾವೆಲ್ಲರೂ ಸಮಾಜ ಜೀವಿಗಳೇ , ಸಮಾಜವನ್ನು ತೊರೆದು , ನಾವು ಯಾರೂ ಜೀವಿಸಲಾರವು . ಸಮಾಜವು ಜನರೆಲ್ಲರ ಹಿತರಕ್ಷಣೆಗಾಗಿ ಸಾಕಷ್ಟು ಕಟ್ಟಳೆಗಳನ್ನು ಮಾಡಿದೆ . ಅದರಿಂದ ಸಮಾಜ ಸಂರಕ್ಷಣೆಯು ಆಗುವುದು . ಆಂದರೆ ನಮ್ಮೆಲ್ಲರ ಸಂರಕ್ಷಣೆಯು ಸತತವೂ ಆಗುವುದು .

ಎಲ್ಲೆಲ್ಲೂ ಒಳ್ಳೆಯದು , ಕೆಟ್ಟದ್ದು ಇರುವಂತೆ ನಮ್ಮಲ್ಲಿಯೂ ಒಳ್ಳೆ ಯವರು , ಕೆಟ್ಟವರು ಇರುವುದು ಸಹಜ . ಕೆಟ್ಟವರ ಅತಿಸ್ವಾರ್ಥ , ಕುಹಕಗುಣ , ಕುಕನಡೆ ನುಡಿಯ ಕಾರಣ ಜನಸಮುದಾಯದಲ್ಲಿ ಮುಗ್ಧರು , ತಿಳಿವಳಿಕೆ ಕಡಿಮೆ ಇರುವವರು ಇಂತಹವರು ಇಲ್ಲದ ತೊಂದರೆಗಳಿಗೆ ಒಳಗಾಗುತ್ತಾರೆ .

ಜೀವನ ನಿರ್ವಹಣೆಯಲ್ಲಿ ಇಲ್ಲ ಸಲ್ಲದ ಸಮಸ್ಯೆಗಳು ಇಂತಹ ಜನರನ್ನೇ ಕಾಡುತ್ತಿರುತ್ತವೆ . ಇವುಗಳೇ ಪಿಡುಗುಗಳು ಎನ್ನಬಹುದು . ಈ ಪಿಡುಗುಗಳು ಜನಸಮುದಾಯದಲ್ಲಿ ಅಂದರೆ ಸಮಾಜದಲ್ಲಿ ಹರಡುವುದರಿಂದ , ಹರಡು ವಿಕೆಯ ಮೂಲಕ ರಾಷ್ಟ್ರಕ್ಯತೆ , ಭಾವೈಕ್ಯತೆಗೆ ಧಕ್ಕೆ ತರುವುದರಿಂದ ಇವನ್ನು ಸಾಮಾಜಿಕ ಪಿಡುಗುಗಳು ಎನ್ನುವರು .

ಈ ಸಾಮಾಜಿಕ ಪಿಡುಗುಗಳು ಒಂದೆರಡು ತರದವುಗಳಲ್ಲಿ ಹಲವಾರು ತರದವುಗಳು . ಇವುಗಳಲ್ಲಿ ಮುಖ್ಯವಾದುದು ಅಂದರೆ

ಅಸ್ಪೃಶ್ಯತೆ ಒಂದು ಸಾಮಾಜಿಕ ಪಿಡುಗು ಪ್ರಬಂಧ

ಸಾಮಾಜಿಕ ಪಿಡುಗುಗಳು ಕುರಿತು ಪ್ರಬಂಧ | Samajika Pidugu Galu Essay In Kannada Best No1 Prabandha
ಸಾಮಾಜಿಕ ಪಿಡುಗುಗಳು ಕುರಿತು ಪ್ರಬಂಧ | Samajika Pidugu Galu Essay In Kannada Best No1 Prabandha

ಇದು ಜಾತೀಯತೆಯ ಪಿಡುಗು . ಭಾರತದಲ್ಲಿರುವಷ್ಟು ಜಾತಿ – ಉವ ರೂ ಜಾತಿಗಳ ವಿಂಗಡಣೆ ವಿಶ್ವದಲ್ಲಿಯೇ ಬೇರೆಲ್ಲೂ ಇರುವಂತೆ ಕಂಡು ಬಂದಿಲ್ಲ . ಸರ್ಕಾರ ಹಾಗೂ ಸಾರ್ವಜನಿಕರು ಈ ಬಗ್ಗೆ ಎಚ್ಚತ್ತಿದ್ದರೂ ಇನ್ನೂ ಇದರ ತಾಯಿಬೇರನ್ನು ಕಿತ್ತುಹಾಕಲು ಸಾಧ್ಯವಾಗಿಲ್ಲ . ಈ ಪಿಡುಗು ಅಂದಿನ ದಿನದ್ದಲ್ಲ .

Samajika Pidugu Galu Prabandha in Kannada

ಅನಾದಿಕಾಲದಿಂದಲೂ ಬೆಳೆದು ಬಂದಿರುವ ಪಿಡುಗು . ವೇದಗಳ ಕಾಲದಲ್ಲಿ ವ್ಯಕ್ತಿಗಳಿಗನುಸಾರವಾಗಿ ಬ್ರಾಹ್ಮಣ , ಕ್ಷತ್ರಿಯ , ವೈಶ್ಯ ಹಾಗೂ ಶೂದ್ರ ಎಂಬ ನಾಲ್ಕು ಪಂಗಡಗಳು ಉದ್ಭವವಾದ ವಿಷಯ ವಿದಿತಗೊಂಡಿದ್ದರೂ ಮುಂದುವರಿದ ಸ್ವಾರ್ಥಾಂಧ ಪಂಗಡದವರು ಈ ಪಂಗಡಗಳನ್ನು ತಮ್ಮ ಮೂಗಿಗೆ ನೇರವಾಗಿ ಜಾತಿ – ಉಪಜಾತಿಗಳ ರೂಪದಲ್ಲಿ ಪರಿಗಣಿಸತೊಡಗಿದರು.

ಮೇಲುಜಾತಿ – ಕೀಳುಜಾತಿ ಎಂಬ ಸಂಕುಚಿತ , ಸಂಕೀರ್ಣ ಭಾವಗಳಿಗೆ ಜನತೆಯಲ್ಲಿ ಎಡೆಮಾಡಿಕೊಟ್ಟರು . ಮುಂದೆ ಈ ಹೀನ ಭಾವನೆಯೇ ಪರ್ಮರವಾಗಿ ಬೆಳೆದು , ಇಂದು ಸಮಸ್ಯೆಯನ್ನು ಬಿಡಿಸಿದಷ್ಟೂ ಕಗ್ಗಂಟು ಆಗುತ್ತಲೇ ಇದೆ . ಇಂದು ಪ್ರಾಂತೀಯತೆ , ವರ್ಣೀಯತೆ , ಭಾಷಾವಾರು ಸಮಸ್ಯೆಗಳಿಗೂ ಜಾತೀಯತೆಯೇ ಹಿನ್ನಲೆಯ ಪ್ರೇರಣ ರೂಪ ಎನಿಸಿದೆ.

ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧ

ಸಾಮಾಜಿಕ ಪಿಡುಗುಗಳು ಕುರಿತು ಪ್ರಬಂಧ | Samajika Pidugu Galu Essay In Kannada Best No1 Prabandha
ಸಾಮಾಜಿಕ ಪಿಡುಗುಗಳು ಕುರಿತು ಪ್ರಬಂಧ | Samajika Pidugu Galu Essay In Kannada Best No1 Prabandha

ಇದೊಂದು ಪ್ರಸ್ತುತ ಸ್ಥಿತಿಯಲ್ಲಿ ಪೆಡಂಭೂತದ ಆಕಾರವನ್ನು ಪಡೆದು , ಮಧ್ಯಮಸ್ತರದ ಹಾಗೂ , ಇನ್ನೂ ಕೆಳಮಟ್ಟದ ಕುಟುಂಬಗಳನ್ನು ಕಾಡುತ್ತಿದೆ . ಪ್ರಾರಂಭದಲ್ಲಿ ವರದಕ್ಷಿಣೆಯು ಒತ್ತಾಯವೆನಿಸಿರಲಿಲ್ಲ . ಇದರ ಆಸೆಯಂತೂ ವರನಿಗಾಗಲಿ , ವರನ ಕಡೆಯವರಿಗಾಗಲಿ ಎಳ್ಳಷ್ಟೂ ಇರಲಿಲ್ಲ .

ಆದರೆ ಹೆಣ್ಣಿನ ತಾಯ್ತಂದೆಯರು ಮಗಳ ಭಾವೀಜೀವನದ ಅಭ್ಯುದಯಕ್ಕೆಂದು ನಗ – ನಾಣ್ಯಗಳ ರೂಪದಲ್ಲಿ ಒಂದಿಷ್ಟು ಉಡುಗೊರೆಗಳನ್ನು ತಮ್ಮ ತಮ್ಮ ಶಕ್ಟ್ರಾನುಸಾರ ನೀಡುತ್ತಿದ್ದರು . ನೀಡದಿದ್ದರೂ ಯಾರ ನಿಂದೆಗಾಗಲಿ , ಇಂದಿನಂತೆ ಯಾವ ಚಿತ್ರ ಹಿಂಸೆಗಾಗಲಿ ,

ಸಾಮಾಜಿಕ ಪಿಡುಗುಗಳು ಪ್ರಬಂಧ

ಹೆಣ್ಣಾಗಲಿ , ಹೆಣ್ಣಿನ ಕಡೆಯವರಾಗಲಿ ಎಂದೂ ಗುರಿಯಾಗಿರ ಲಿಲ್ಲ . ದಿನಕ್ರಮೇಣ ವರನಿಗೆ , ವರನ ಕಡೆಯವರಿಗೆ ಇದು ಸಂಪ್ರದಾಯದ ರೂಪದಲ್ಲಿ ಬೆಳೆದು ಬಂದಿರಬೇಕು . ಹೆಣ್ಣುಮಕ್ಕಳು ಕಪ್ಪಾಗಿದ್ದರೆ , ಗುಣವಂತೆ ಯರಾಗಿದ್ದರೂ ಮದುವೆ ಆಗಲು ಮುಂದೆ ಬರುತ್ತಿರಲಿಲ್ಲ.

ಈ ಸಂದರ್ಭದಲ್ಲಿ ಅಂತಹವರಿಗೆ ಹಣದ ಆಸೆ , ಭೂಮಿ – ಕಾಣಿಕೆ ಯಥೇಚ್ಛವಾಗಿ ನೀಡುವ ಆಸೆ ತೋರಿಸಿದುದು ತಪ್ಪೇ ಸರಿ . ಇಂತಹ ತಪ್ಪು ಹಿರಿಯ ಮನೆತನದವರಿಂದ ನಡೆಯುತಿತ್ತು . ಆದರೆ ಬಲ್ಲಿದವರಂತೆ ಬಡಕುಟುಂಬದವರು ಹೇಗೆತಾನೇ ಇಷ್ಟೆಲ್ಲಾ ನಿಭಾಯಿಸಿಯಾರು ? ಆದರೆ ಬಾಲ್ಯದಲ್ಲಿಯೇ ಮದುವೆ ಮಾಡಿಕೊಡ ದಿದ್ದರೆ ಕುಲದಲ್ಲಿ ಸಮಾಜ ಬಹಿಷ್ಕಾರ ಹಾಕುತ್ತಿದ್ದುದೂ ಉಂಟು .

ಈ ಭಯಕ್ಕಾಗಿ ಇದ್ದಬದ್ದ ಚರ – ಸ್ಥಿರ ಆಸ್ತಿಗಳನ್ನು ಮಾರಿ , ಬಂದ ಹಣದಿಂದ ಹೆಣ್ಣುಮಕ್ಕಳ ಮದುವೆಯನ್ನು ಮಾಡಿ ಮುಗಿಸತೊಡಗಿದರು.

ಸಾಮಾಜಿಕ ಪಿಡುಗುಗಳು ಪ್ರಬಂಧ ಕನ್ನಡ

ಇಂದಿನಂತೆ ಹಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅಂದು ಪ್ರೋತ್ಸಾಹ ಇರಲಿಲ್ಲ . ಹಿರಿಯರಾಗುತ್ತಿದ್ದಂತೆ ಶಾಲೆಯನ್ನು ಬಿಡಿಸಿ ಮನೆಯಲ್ಲಿಯೇ ಮನೆಗೆಲಸಗಳಿಗೆ ಹಾಕಿಬಿಡುತ್ತಿದ್ದರು . ಇದರಿಂದ ಜನತೆಯಲ್ಲಿ ಹೆಣ್ಣು ಮಕ್ಕಳು ಎಷ್ಟೇ ಓದಿದ್ದರೂ ಮುಸುರೆ ತೊಳೆಯುವುದು ತಪ್ಪದು ” ಎಂಬ ಭಾವನೆ ಬೇರೂರಿತು .

ಅಂತಹವರನ್ನು ವಿದ್ಯಾವಂತ ಗಂಡುಗಳು ಮದುವೆ ಆಗಲು ಬಯಸುತ್ತಿರಲಿಲ್ಲ . ಇವರ ತೃಪ್ತಿಗಾಗಿ ಹೆಣ್ಣಿನ ಕಡೆಯವರು ಅಷ್ಟಿಷ್ಟು ಹಣವನ್ನು ವರೋಪಚಾರದ ಹೆಸರಿನಲ್ಲಿ ನೀಡಿ , ಮದುವೆಯ ಕಾರ್ಯವನ್ನು ಮುಗಿಸುತ್ತಿದ್ದರು.

ಇದರಿಂದ ವರದಕ್ಷಿಣೆಯ ಪಿಡುಗಿನೊಂದಿಗೆ ವರವಿಕ್ರಯದ ಸಂಪ್ರದಾಯವೂ ಬೆಳೆಯುತ್ತಾ ಬಂತು . ಈಗಂತೂ ಇದರ ದುಷ್ಪರಿಣಾಮವಾಗಿ ಹೆಣ್ಣು ಮಕ್ಕಳ ಬಾಳುವೆಯೇ ನರಕ ಸಾದೃಶ ಎನಿಸುತ್ತಿದೆ .

ಈ ವರದಕ್ಷಿಣೆಯ ಪೆಡಂಭೂತದ ಕೈಗೆ ಸಿಕ್ಕಿದ ನವವಿವಾಹಿತ ನವಕಿಶೋರಿಯರು ಇಂದು ಜೀವನದಲ್ಲಿ ಬೇಸತ್ತು , ವಿಷಸೇವನೆ , ಆತ್ಮಹತ್ಯೆ ಮೊದಲಾದ ದಾರುಣ ಪಾಶಗಳಿಂದ ಬಿಗಿಯಲ್ಪಟ್ಟು , ತಮ್ಮ ಜೀವನವನ್ನೇ ಕಡೆಗಾಣಿಸಿಕೊಳ್ಳುತ್ತಿದ್ದಾರೆ.

ಅನಕ್ಷರತೆ ಬಗ್ಗೆ ಪ್ರಬಂಧ

images 2 5

ಈ ಪಿಡುಗಿನಿಂದಲೂ ಸಮಾಜದ ಏಳಿಗೆಯೇ ಇಲ್ಲದೆ , ವಿಶ್ವಮಟ್ಟದಲ್ಲಿ ಭಾರತ ನಿಮ್ನಸ್ತರದ ದುಸ್ಥಿತಿಯಲ್ಲೇ ಇದೆ . ವ್ಯಕ್ತಿಯ ವಿಕಾಸ ಸಾಕ್ಷರತೆಯಿಂದಲೇ20 ಸಾಧ್ಯ . ಆದರೆ ಇಂದಿಗೂ ಭಾರತ ಸಂಪೂರ್ಣವಾಗಿ ಈ ನಿಟ್ಟಿನಲ್ಲಿ ಯ ಯಾಗಿಲ್ಲ . ಶಾಲೆ ಕಾಲೇಜುಗಳು ಹೆಚ್ಚುತ್ತಿವೆ .

ಆದರೆ ಅಲ್ಲಿನ ಶಿಕ್ಷಣ ಕೇ ಮುಂದುವರೆದಿರುವ ಜನರ ಮಕ್ಕಳಿಗೆ ಮಾತ್ರ ಸಫಲದಾಯಕ ರೀತಿಯ ಪ್ರಾಪ್ತವಾಗುತ್ತಿದೆ . ಇದರ ಕಾರಣ ಭಾರತೀಯರಲ್ಲಿ ಬಹುಮಂದಿ ಬಡತನ ಬೀಸುಗಲ್ಲಿನಲ್ಲಿ ಸಿಕ್ಕಿ , ಹಿಟ್ಟಾಗಿ ಹೋಗುತ್ತಿದ್ದಾರೆ . “ ಓದು ” ಎಂಬುದು ಇವ “ ಹೊಟ್ಟೆಗೆ ಹಿಟ್ಟಿಲ್ಲ , ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತಾಗಿದೆ .

ಇದರಿ ಇಂತಹ ಯೋಗ್ಯ ಶಿಕ್ಷಣಕ್ಕೇ ಇಂತಹ ಅತಿಸಂಖ್ಯೆಯ ಮಕ್ಕಳ ಗಮನ ಹರಿಯ ಹೊಟ್ಟೆಪಾಡಿಗಾಗಿ ಬಾಲಕಾರ್ಮಿಕರಾಗುತ್ತಿದ್ದಾರೆ . ಇದರಲ್ಲೂ ಬಹುಮಂ ಮಕ್ಕಳು ಬಾಲ್ಯದಲ್ಲಿಯೇ ಸಮಾಜ ಘಾತಕ ಕಾರ್ಯಗಳಲ್ಲಿ ತೊಡಗಿರುವುದ ಸಹ ಕಂಡುಬಂದಿದೆ.

ಸರ್ಕಾರ ಈ ಬಗ್ಗೆ ಹೆಚ್ಚಿನ ಮುತುರ್ವಜಿ ವಹಿಸುತ್ತಿದ್ದರು ಸಾರ್ವಜನಿಕ ಸಹಕಾರ ಅಷ್ಟಾಗಿ ಜಯಪ್ರದರೀತಿಯಲ್ಲಿ ಸಿಕ್ಕುತ್ತಿಲ್ಲ . ಇದರಿಂ ಸರ್ಕಾರ ಈ ನಿಟ್ಟಿನಲ್ಲಿ ಖರ್ಚು ಮಾಡುತ್ತಿರುವ ಬಹಳಷ್ಟು ಹಣ ವೃತ್ತ ಪೋಲಾಗುತ್ತಿದೆ .

ಮದ್ಯಪಾನ ಪ್ರಬಂಧ

download 10 4

ಇದೊಂದು ಪರಿವಾರ – ಕಂಟಕರೂಪದ ಪಿಡುಗು , ಬಡವ – ಬಲ್ಲಿದರೆ ರಲ್ಲಿಯೂ ಈ ಪಿಡುಗು ಸಾಂಕ್ರಾಮಿಕ ರೋಗದಂತೆ ಒಬ್ಬರಿಗೊಬ್ಬರಿಗೆ ಅಂಟುತ್ತಿದೆ . ಈಗಂತೂ ಸ್ತ್ರೀಯರು – ಪುರುಷ , ಮುದುಕರು – ಮಕ್ಕಳು ಎಲ್ಲ ರಲ್ಲಿಯೂ ಇದರ ಸೇವನೆ ಸರ್ವೆ ಸಾಮಾನ್ಯವೆನಿಸಿದೆ .

ಇದರಲ್ಲಿ ಅಶಿಕ್ಷಿತರಿ ಗಿಂತಲೂ ಶಿಕ್ಷಿತರ ಸಂಖ್ಯೆಯೇ ಹೆಚ್ಚಿರುವಂತೆ ಕಂಡುಬರುತ್ತಿದೆ . ಮದ್ಯಪಾ ಬಡ ಜನರಿಗೆ ತಮ್ಮ ದೈನಿಕ ದಣಿವಿನ ಪರಿಹಾರದ ಸಾಮಗ್ರಿ ಆಗಿದ್ದರೆ , ಶಿಕ್ಷಿತರಿಗೆ ಇದು ಸಂಸ್ಕೃತಿ – ಸಭ್ಯತೆಯ ರೂಪದಲ್ಲಿ ರೂಢಿಗೆ ಬರುತ್ತಿದೆ .

ಇದರಿಂದ ಕುಟುಂಬ ಗಳ ಸರ್ವನಾಶ , ವಂಶದ ಏಳಿಗೆ ಇಲ್ಲ , ಮಕ್ಕಳ ಹೊಟ್ಟೆ – ಬಟ್ಟೆ , ವಿದ್ಯಾಭ್ಯಾಸ ಗಳಿಗೆ ಧಕ್ಕೆ , ಇಷ್ಟೇ ಏಕೆ ಕುಡುಕನ ಆರೋಗ್ಯಕ್ಕೂ ಕುಂದು . ಇದು ತಿಳಿದಿದ್ರೂ ಸಹ ನಮ್ಮ ಸಭ್ಯ ಜನರೇ ಇದನ್ನು ರೂಡಿಸಿಕೊಳ್ಳುತ್ತಿರು ವುದನ್ನು ಕಂಡಾಗ ಅಳುವುದೋ ನಗುವುದೋ ತಿಳಿಯದಾಗಿದೆ . ಇದೇನೇ ಇರಲಿ ಈ ನಮ್ಮ ರಾಷ್ಟ್ರವನ್ನೇ ಆರ್ಥಿಕ ಹಾಗೂ ಆರೋಗ್ಯ ದೃಷ್ಟಿಯಿಂದ ಜನತೆಯನ್ನು ಅಧೋಗತಿಗೆ ತರುತ್ತಿದೆ .

ಇವೆಲ್ಲಾ ಪಿಡುಗುಗಳ ಮೂಲಕಾರಣ ಜನತೆಯಲ್ಲಿ ಸಾಮಾಜಿಕ ಪ್ರಜ್ಞೆಯೇ ಇಲ್ಲದಿರುವುದು . ಶಿಕ್ಷಣದ ಮೂಲಕ ಈ ಪಿಡುಗುಗಳ ನಿವಾರಣೆ ಸಾಧ್ಯ . ಚಲನಚಿತ್ರಗಳು , ರೇಡಿಯೋ , ದೂರದರ್ಶನಗಳಲ್ಲೂ ಇದರ ದುಷ್ಪರಿಣಾಮನ್ನು ಪ್ರದರ್ಶಿಸಿದಾಗ ಜನರಲ್ಲಿ ತಮ್ಮ ಅಕ್ಷಮ್ಯ ಅಪರಾಧದ ಅರಿವು ಮೂಡದಿರದು .

ಶಿಕ್ಷಕರು ಗ್ರಾಮಗಳಿಗೆ ಹೋಗಿ , ಅಲ್ಲಿನ ಅವಿದ್ಯಾವಂತರಿಗೆ ತಿಳಿಸಬೇಕು . ಮಕ್ಕಳ ಮುಂದೆ ಸುಶಿಕ್ಷಿತರೂ ಸಹ ತುಂಬಾ ಜಾಗೃತರಾಗಿ ವರ್ತಿಸುವುದು ಸಹ ಅನಿವಾರ್ಯ .ಇನ್ನೊಂದು ದಾರುಣ ಪಿಡುಗು ನಿರುದ್ಯೋಗ , ಇದರಿಂದ ದೇಶದ ಬಡತನ ಇನ್ನಷ್ಟು ಉಲ್ಬಣಸ್ಥಿತಿಗೇ ಬರುತ್ತಿದೆ .

ಇದರ ಕಾರಣ ಶಿಕ್ಷಿತರೆನಿಸಿದ್ದರೂ , ಇವರಿಗೆ ಸ್ವಾವಲಬಂನೆಗೆ ಅನುಕೂಲವಾದ ಶಿಕ್ಷಣ ದೊರೆಯುತ್ತಿಲ್ಲ . ಜೊತೆಗೆ ಜನಸಂಖ್ಯೆ ಗುಣಾಕಾರ ರೀತಿಯಲ್ಲಿ ಬೆಳೆಯುತ್ತಿರುವುದರಿಂದ , ಅವರು ಸುಶಿಕ್ಷಿತರೇ ಅಲ್ಲದುದರಿಂದ , ಇನ್ನು ಅನಕ್ಷರಸ್ಥರ ಸಂಖ್ಯೆಯೇ ಪೂರ್ಣತಃ ಕಡಿಮೆ ಆಗದಿರುವುದರಿಂದ ಈ ನಿರುದ್ಯೋಗ ಸಮಸ್ಯೆ ಸಮಸ್ಯೆಯಾಗಿಯೇ ಇಂದಿಗೂ ಉಳಿದಿದೆ .

768 512 11748110 thumbnail 3x2 unem

ಸಮಾಜ ಸರ್ಕಾರದೊಂದಿಗೆ , ಸರ್ಕಾರ ಸಮಾಜದೊಂದಿಗೆ ಬೆರೆತು , ಸಹಕರಿಸಿ ಕಾರ್ಯಕೃತರಾದಾಗ ಮಾತ್ರ ಈ ಪಿಡುಗಳನ್ನು ಬಡಿದೋಡಿಸಲು ಸಾಧ್ಯ ಆದೀತು .

ಯಾವುದಾದರೂ ನಾಲ್ಕು ಸಾಮಾಜಿಕ ಪಿಡುಗುಗಳನ್ನು ಹೆಸರಿಸಿ

  • ಅನಕ್ಷರತೆ
  • ಬಾಲ್ಯವಿವಾಹ
  • ಜಾತೀಯತೆ
  • ವರದಕ್ಷಣೆ
  • ಅಸ್ಪೃಶ್ಯತೆ.

ಮುಂದೆ ಓದಿ…

FAQ

ಸಾಮಾಜಿಕ ಪಿಡುಗು ಎಂದರೇನು ?

ಸಮಾಜದ ಅಭಿವೃದ್ದಿಗೆ ತೊಡಕನ್ನುಂಟು ಮಾಡುವ ಪದ್ದತಿಗಳನ್ನು ಸಾಮಾಜಿ ಪಿಡುಗು ಎಂದು ಕರೆಯುವರು.

ಜಾತಿ ವ್ಯವಸ್ಥೆಯ ನಾಲ್ಕು ವರ್ಗಗಳು ಯಾವುವು?

1.ಬ್ರಾಹ್ಮಣರು 2.ಕ್ಷತ್ರಿಯರು 3.ವೈಶ್ಯರು 4.ಶೂದ್ರರು

ಇತರೆ ಮಾಹಿತಿ

Leave a Reply

Your email address will not be published. Required fields are marked *