Ativrushti Anavrushti Prabandha in Kannada, ಕನ್ನಡದಲ್ಲಿ ativrushti ಮತ್ತು anavrushti ಮೇಲೆ ಪ್ರಬಂಧ, Athirusti and anarusti reason in kannada,PDF
ಪರಿವಿಡಿ
Ativrushti Anavrushti Prabandha in Kannada
ನಾವು ವಾಸಿಸುವ ಭೂಮಿ , ಅದರಲ್ಲಿರುವ ಬೆಟ್ಟಗುಡ್ಡಗಳು , ನದಿಗಳು , ಸಾಗರ – ಸರೋವರಗಳು , ಹಳ್ಳ – ಕೊಳ್ಳಗಳು , ಅರಣ್ಯ ಪಶುಪಕ್ಷಿಗಳು , ಆಕಾಶ , ವಾಯು – ಇವೆಲ್ಲವೂ ನಮ್ಮ ಪರಿಸರವೆನಿಸಿವೆ .
ಈ ಪರಿಸರವನೇ ಪುಕೃತಿ ಅಥವಾ ನಿಸರ್ಗ ಎನ್ನಲಾಗುತ್ತದೆ . ಪರಿಸರವನ್ನು ಸ್ಕೂಲವಾಗಿ ಸಹ ಪರಿಸರ , ಮಾನವ ನಿರ್ಮಿತ ಪರಿಸರವೆಂದು ವಿಭಾಗ ಮಾಡ ಸಾಗರ , ನದಿ , ಅರಣ್ಯ , ಬೆಟ್ಟಗುಡ್ಡ , ಪರ್ವತ ಮುಂತಾದುವು ಸಹಜ ಪರಿಸರವಾಗಿವೆ .
ಕೃಷಿಭೂಮಿ , ಅಣೆಕಟ್ಟುಗಳು , ಕಾಲುವೆಗಳು ಇತ್ಯಾದಿ ಮಾನವ ನಿರ್ಮಿತ ಪರಿಸರವಾಗಿವೆ . ಪರಿಸರವಿಲ್ಲದೆ ಮಾನವನ ಬದುಕೇ ಇಲ್ಲ .
ಮನುಷ್ಯ ಸ್ವಾರ್ಥಕ್ಕಾಗಿ ಸುಖಕ್ಕಾಗಿ ಪರಿಸರದ ದುರ್ಬಳಕೆ ಮಾಡುತ್ತಿದ್ದಾನೆ . ನಿಸರ್ಗ ಹಾಳು ಮಾಡುತ್ತಿದ್ದಾನೆ . ಇದರ ಪರಿಣಾಮವಾಗಿ ಅನಾವೃಷ್ಟಿ , ಅಕಾಲವೃಷ್ಟಿ , ಹವಾಮಾನದ ಏರುಪೇರು , ಸುನಾಮಿ , ಪ್ರವಾಹ , ಚಂಡಮಾರುತ , ಭೂಕಂಪ ಮುಂತಾದ ಪ್ರಕೃತಿವಿಕೋಪಗಳಿಗೆ ಒಳಗಾಗಿ , ಸಂಕಷ್ಟವನ್ನು ಅನುಭವಿಸುತ್ತಿದ್ದಾನೆ .
ಅತಿವೃಷ್ಟಿ ಅನಾವೃಷ್ಟಿ ಪ್ರಬಂಧ
ಇತ್ತೀಚೆಗೆ ಕರ್ನಾಟಕದ ರಾಯಚೂರು , ವಿಜಾಪುರ , ಗುಲ್ಬರ್ಗ , ಬೀದರ್ ಜಿಲ್ಲೆಗಳಲ್ಲಿ ಅಕಾಲದಲ್ಲಿ ಅತಿವೃಷ್ಟಿಯಾಯಿತು .
ಆ ಭಾಗದಲ್ಲಿ ಎಂದೂ ಬೀಳದಷ್ಟು ಮಳೆ ಸುರಿಯಿತು . ಊರುಊರುಗಳೇ ಪ್ರವಾಹದಲ್ಲಿ ಮುಳುಗಿದವು . ಜಲಪುಳಯವೇ ಆಯಿತು .
ಸಾವಿರಾರು ಮನೆಗಳು ಉರುಳಿದವು . ಜನ ಜಾನುವಾರುಗಳೂ ಪ್ರವಾಹದಲ್ಲಿ ಸಿಲುಕಿ ಪ್ರಾಣಕಳೆದುಕೊಂಡರು . ಬೆಳೆದ ಬೆಳೆ ಹಾಳಾಯಿತು . ನಿಲ್ಲಲು ನೆಲೆಯಿಲ್ಲ , ತಿನ್ನಲು ಆಹಾರವಿಲ್ಲದ ಗತಿ ಬಂತು . ಹೆಲಿಕಾಪ್ಟರ್ , ದೋಣಿ , ತೆಪ್ಪಗಳನ್ನು ಬಳಸಿ ಜನರನ್ನು ನೀರಿಲ್ಲದೆ ಕಡೆಗೆ ಸಾಗಿಸಬೇಕಾಯಿತು .
ಹೆಲಿಕಾಪ್ಟರ್ಗಳಿಂದಲೇ ಆಹಾರದ ಪೊಟ್ಟಣಗಳನ್ನು ಜನರಿರುವಲ್ಲಿಗೆ ಎಸೆಯಬೇಕಾಯಿತು . ಆಂಧ್ರದ ಕೆಲವು ಭಾಗದಲ್ಲೂ ಇದೇ ಪರಿಸ್ಥಿತಿ ಉಂಟಾಗಿತ್ತು .
ಇಂತಹ ಪುಕೃತಿ ವಿಕೋಪವನ್ನು ಕರ್ನಾಟಕದ ಜನರು ಇರಲಿಲ್ಲ ; ಇದು ಅತಿವೃಷ್ಟಿಯ ಪರಿಣಾಮ .
ಮಳೆ ಹೆಚ್ಚಾಗುವುದರಿಂದ ಆಗುವ ಪರಿಣಾಮಗಳು
ಬೀಳಬೇಕಾದಷ್ಟು ಮಳೆ ಬಾರದಿರುವುದನ್ನು ಎನ್ನುತ್ತಾರೆ . ಆಗ ಬೆಳೆ ಕುಡಿಯಲು ನೀರೂ ಸಿಕ್ಕುವುದಿಲ್ಲ . ಜನ – ಜಾನುವಾರುಗಳೂ ಆಹಾರ ನೀರಿಗಾಗಿ ಆಹಾರದ ಅಭಾವ ತಲೆದೋರು ತ್ತದೆ .
ಇತ್ತೀಚೆಗೆ ಚಾಮರಾಜನಗರ , ಮೈಸೂರು ಜಿಲ್ಲೆಯ ಕೆಲವು ಭಾಗ , ಕೋಲಾರ , ಕೊಳ್ಳೆಗಾಲ , ಚಿಂತಾಮಣಿ ಮೊದಲಾದ ಕಡೆ ಅನ ಅನಾವ್ರಪ್ರಯಾಗಿದೆ .
ಬೇಕಾದಾಗ – ಬೀಳುವ ಸಮಯದಲ್ಲಿ ಮಳೆ ಸುರಿಯದೇ , ಬೇಡಾವಾದಾಗ ಮಳೆ ಬೀಳುವುದೇ ಅಕಾಲವೃಷ್ಟಿ , ಅದರಿಂದ ಬೆಳೆದ ಬೆಳೆ ಹಾಳಾಗುತ್ತದೆ . ರೈತನಿಗೆ ನಪ್ಪವಾಗುತ್ತದೆ . ಈ ಬಗೆಯ ಪುಕೃತಿ ವಿಕೋಪಗಳು ಸಾಕಷ್ಟು ಅನಾಹುತಗಳಿಗೆ ಕಾರಣ ವಾಗುತ್ತವೆ .
ಅತಿವೃಷ್ಟಿಯಿಂದ ಆಗುವ ಪರಿಣಾಮಗಳು?
ಹವಮಾನದ ಎರುಪೇರಿನಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಲೆ ಬರುವುದನ್ನು ಅತಿವೃಷ್ಟಿ ಎಂದು ಕರೆಯುತ್ತಾರೆ.
ಅನಾವೃಷ್ಟಿ ಎಂದರೇನು?
ಬೀಳಬೇಕಾದಷ್ಟು ಮಳೆ ಬಿಳದೇ ಇರುವುದನ್ನು ಅನಾವೃಷ್ಟಿ ಎಂದು ಕರೆಯುತ್ತಾರೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಬಂಧಗಳ ವಿವರಣೆ
ಇನ್ನಷ್ಟು ಪ್ರಬಂಧಗಳನ್ನು ಓದಿ :
ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ
- ಕನ್ನಡ
- ಇತಿಹಾಸ
- ಭೂಗೋಳಶಾಸ್ತ್ರ
- ಭಾರತದ ಸಂವಿಧಾನ
- ವಿಜ್ಞಾನ
- ಅರ್ಥಶಾಸ್ತ್ರ
- ಮಾನಸಿಕ ಸಾಮರ್ಥ್ಯ
- ಇಂಗ್ಲೀಷ್ ವ್ಯಾಕರಣ
- ಪ್ರಚಲಿತ ವಿದ್ಯಮಾನ
- ಸಾಮಾನ್ಯ ಜ್ಞಾನ