ಅಂತರ್ಜಲದ ಬಗ್ಗೆ ಪ್ರಬಂಧ | Antarjala Kuritu Prabandha

ಅಂತರ್ಜಲ ಬಗ್ಗೆ ಪ್ರಬಂಧ | Antarjala Bhagya Prabandha Best No1 Essay In Kannada

Antarjala Bhagya Prabandha, ಅಂತರ್ಜಲ ಬಗ್ಗೆ ಪ್ರಬಂಧ , ಅಂತರ್ಜಲ ಪ್ರಬಂಧ, ಅಂತರ್ಜಲ ಸಂರಕ್ಷಣೆ ಪ್ರಬಂಧ, ಅಂತರ್ಜಲದ ಬಗ್ಗೆ ಪ್ರಬಂಧ, ಅಂತರ್ಜಲ ಎಂದರೇನು, antharjala kannada prabandha, antarjala kuritu prabandha

Antarjala Bhagya Prabandha

ಈ ಲೇಖನದಲ್ಲಿ ಅಂತರ್ಜಲದ ಕುರಿತು ಪ್ರಬಂಧವನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram
ಅಂತರ್ಜಲ ಬಗ್ಗೆ ಪ್ರಬಂಧ | Antarjala Bhagya Prabandha Best No1 Essay In Kannada

ಅಂತರ್ಜಲ ಬಗ್ಗೆ ಪ್ರಬಂಧ

ರಾಜ್ಯದ ಸಂಕೀರ್ಣ ಭೂವೈಜ್ಞಾನಿಕ ಲಕ್ಷಣಗಳು, ಬೇರೆ ಬೇರೆ ಭಾಗದಲ್ಲಿರುವ ವಾಯುಗುಣ, ಮಣ್ಣಿನಗುಣ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ರಾಜ್ಯದಲ್ಲಿರುವ ಸುಮಾರು 2000ಕ್ಕೂ ಅಧಿಕ ನಿರೀಕ್ಷಣಾ ಬಾವಿಗಳಲ್ಲಿ ದಾಖಲಾದ ಜಲಮಟ್ಟದ ಏರಿಳಿತಗಳನ್ನು ಗಣನೆಗೆ ತೆಗೆದುಕೊಂಡು, ರಾಜ್ಯದ ಸರಾಸರಿ ಮಳೆಯ ಸುಮಾರು ಶೇ.10 ರಷ್ಟು ನೀರಿನ ಅಂಶವನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಒಟ್ಟು ಸುಮಾರು 1000 ಕೋಟಿ ಘನಮೀಟರ್ ಗಳಷ್ಟು ನೀರು ಪ್ರತಿವರ್ಷ ಮರುಭರ್ತಿ ಯಾಗುತ್ತದೆಂದು ಅಂದಾಜಿಸಲಾಗಿದೆ.

Antarjala Essay In Kannada

ಆದರೆ ಈ ಎಲ್ಲಾ ಲೆಕ್ಕಾಚಾರಗಳು ನೂರಕ್ಕೆ ನೂರರಷ್ಟು ಖಚಿತ, ವೈಜ್ಞಾನಿಕ ಪರಿಶೀಲನೆ ಮತ್ತು ಪ್ರಯೋಗಗಳ ಮೇಲೆ ಆಧರಿತವಾಗಿಲ್ಲ. ಕರ್ನಾಟಕದ ಮೇಲೆ ಲಕ್ಷಣಗಳಿಗೆ ಅನುಗುಣವಾಗಿ ಇಲ್ಲಿನ ನೀರಿನ ಹರಿವು ಬಹುಮಟ್ಟಿಗೆ ಪಶ್ಚಿಮದಿಂದ ಪೂರ್ವದ ಕಡೆಗೇ ಇದೆಯಾದರೂ, ಪಶ್ಚಿಮ ದಿಕ್ಕಿಗೆ ಹರಿಯುವ ನದಿ ಜಾಲವೂ ಇದೆ. ಒಟ್ಟಿನಲ್ಲಿ ಕರ್ನಾಟಕದ ಜಲಸಂಪತ್ತನ್ನು

ಎ) ಪಶ್ಚಿಮಕ್ಕೆ ಹರಿಯುವ ನದಿಜಾಲ,

ಬಿ) ಕೃಷ್ಣಾ ನದಿ ಜಾಲ,

ಸಿ) ಕಾವೇರಿ ನದಿಜಾಲ,

ಡಿ) ಗೋದಾವರಿ ನದಿಜಾಲ ಹಾಗೂ

ಇ)ಪಾಲಾರ್-ಪೆನ್ನಾರ್ ನದೀಜಾಲವೆಂದು ಐದು ಭಾಗಗಳಾಗಿ ವಿಂಗಡಿಸಬಹುದಾಗಿದೆ.

ಪಶ್ಚಿಮ ಘಟ್ಟಗಳಲ್ಲಿ ಉಗಮಿಸಿ ಪಶ್ಚಿಮ ದಿಕ್ಕಿಗೇ ಹರಿಯುವ ನದಿಗಳ ಸಮೂಹವನ್ನು ಪಶ್ಚಿಮ ನದಿಜಾಲ ಸೂಚಿಸುತ್ತದೆ.

ಅಂತರ್ಜಲ ಬಗ್ಗೆ ಪ್ರಬಂಧ | Antarjala Bhagya Prabandha Best No1 Essay In Kannada

Antarjala Kuritu Prabandha

ಕೃಷ್ಣಾ ನದಿ ಜಾಲ – – ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಹರಿದು, ಆಂಧ್ರಪ್ರದೇಶದ ಮೂಲಕ ಸಮುದ್ರ ಸೇರುವ ಒಂದು ಮುಖ್ಯ ನದಿ ಕೃಷ್ಣಾ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿಯುವ ಕಾವೇರಿ ಮುಖ್ಯವಾಗಿ ಬಯಲು ಸೀಮೆಯಾದ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಜಲಸಮೃದ್ಧಿಯನ್ನುಂಟುಮಾಡುವಂಥ ಮುಖ್ಯವಾದ ನದಿ.

Antharjala Kannada Prabandha

ಗೋದಾವರಿಯನ್ನು ಸೇರುವ ಉಪನದಿಗಳನ್ನು ಒಳಗೊಂಡಿರುವ ಬೀದರ್ ಜಿಲ್ಲೆಯ ಮಾಂಜರಾ, ಕಾರಂಜಾ, ಮಧುರನಾಲಾ, ದೇವನಾಲಾ, ಹೆಬ್ಬಳ ಮೊದಲಾದವನ್ನು ಲಕ್ಷ್ಯದಲ್ಲಿರಿಸಿಕೊಂಡಿರುವುದರಿಂದ ಈ ಜಲವ್ಯವಸ್ಥೆಯನ್ನು ಗೋದಾವರಿ ನದಿ ಜಾಲವೆನ್ನಲಾಗಿದೆ. ನಂದಿದುರ್ಗದ ಪೂರ್ವಕ್ಕೆ ಹರಿಯುವ ನದಿಗಳನ್ನು ಪಾಲಾರ್ ಪೆನ್ನಾರ್ ನದಿಜಾಲ ಒಳಗೊಂಡಿದೆ.

ಅಂತರ್ಜಲದ ಬಗ್ಗೆ ಪ್ರಬಂಧ

ಅಂತರ್ಜಲ ಬಗ್ಗೆ ಪ್ರಬಂಧ | Antarjala Bhagya Prabandha Best No1 Essay In Kannada

ಅಂತರ್ಜಲ ಸಂರಕ್ಷಣೆ ಪ್ರಬಂಧ

ಅಂತರ್ಜಲ ಎಂದರೆ ನಾವು ಬಾವಿಗಳು, ಕೈ ಪಂಪ್‌ಗಳು ಇತ್ಯಾದಿಗಳಿಂದ ಹೊರತೆಗೆಯುವ ನೆಲದೊಳಗೆ ಇರುವ ನೀರು. ಹೆಚ್ಚಿನ ಅಂತರ್ಜಲವನ್ನು ಹೊರತೆಗೆಯುವುದರಿಂದ ಮತ್ತು ಅದರ ದುರ್ಬಳಕೆಯಿಂದಾಗಿ, ಅಂತರ್ಜಲವೂ ಕಡಿಮೆಯಾಗುತ್ತದೆ.

ಕೆರೆ, ಜಲಾಶಯಗಳ ನಿರ್ಮಾಣದ ಮೂಲಕ ಅಂತರ್ಜಲವನ್ನು ಸಂರಕ್ಷಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು. ಅಂತರ್ಜಲವನ್ನು ಕಲುಷಿತಗೊಳಿಸುವುದರಿಂದ ಭೂಮಾಲಿನ್ಯವನ್ನೂ ನಿಲ್ಲಿಸಬೇಕಾಗಿದೆ.

ಅಂತರ್ಜಲ ಬಗ್ಗೆ ಪ್ರಬಂಧ | Antarjala Bhagya Prabandha Best No1 Essay In Kannada

ನೀರಿನ ಸಂರಕ್ಷಣೆ ಪ್ರಬಂಧ

ಭೂಮಿ ಯ ಮೇಲಿನ ಸಂಪೂರ್ಣ ಜೀವನ ಚಕ್ರ ವನ್ನು ನಿರ್ವಹಿಸಲು ಗಾಳಿ ಹಾಗು ನೀರು ಮತ್ತು ಆಹಾರವು ಅತೀ ಅವಶ್ಯಕವಾಗಿದೆ, ಒಂದರ ಕೊರತೆ ಇದ್ದರು ಯಾರೂ ಬದುಕಲು ಸಾಧ್ಯವಿಲ್ಲ. ನೀರು ಒಂದು ಅಮೂಲ್ಯ ಆಸ್ತಿ ಮತ್ತು ಅದರ ಪ್ರತಿ ಹನಿಯು ಬಹಳ ಮೌಲ್ಯಯುತವಾದುದ್ದು.

ಭೂಮಿಯಲ್ಲಿ ಶೇ.70 ರಷ್ಟು ನೀರಿದ್ದರೂ ನಾವು ಶೇ.1ರಷ್ಟು ನೀರನ್ನು ಮಾತ್ರ ಬಳಸ ಬಹುದಾಗಿದೆ. ಆದ್ದರಿಂದ, ನಾವು ಉತ್ತಮ ಆಲೋಚನೆಗಳನ್ನೂ ಬೆಳೆಸಿಕೊಂಡು ಸೀಮಿತ ನೀರನ್ನು ಬಳಸಬೇಕು. ನೀರಿನ ಸಂರಕ್ಷಣೆ ಎಂದರೆ ಅನಗತ್ಯ ನೀರಿನ ಬಳಕೆಯನ್ನು ಕಡಿಮೆ ಮಾಡಲು ನೀರನ್ನು ಸಮರ್ಥವಾಗಿ ಬಳಸುವ ಒಂದು ಪ್ರಕ್ರಿಯೆ.

ಇನ್ನಷ್ಟು ಓದಿರಿ

FAQ

ಅಂತರ್ಜಲ ಎಂದರೇನು?

ಅಂತರ್ಜಲವು ಭೂಮಿಯ ಮೇಲ್ಮೈ ಕೆಳಗೆ ಕಲ್ಲು ಮತ್ತು ಮಣ್ಣಿನ ರಂಧ್ರಗಳ ಸ್ಥಳಗಳಲ್ಲಿ ಮತ್ತು ಕಲ್ಲಿನ ರಚನೆಗಳ ಮುರಿತಗಳಲ್ಲಿ ಇರುವ ನೀರು. ಪ್ರಪಂಚದಲ್ಲಿ ಸುಲಭವಾಗಿ ಲಭ್ಯವಿರುವ ಎಲ್ಲಾ ಸಿಹಿನೀರಿನ ಸುಮಾರು 30 ಪ್ರತಿಶತವು ಅಂತರ್ಜಲವಾಗಿದೆ. ಬಂಡೆಯ ಒಂದು ಘಟಕ ಅಥವಾ ಅಸಂಘಟಿತ ನಿಕ್ಷೇಪವನ್ನು ಜಲಚರ ಎಂದು ಕರೆಯಲಾಗುತ್ತದೆ, ಅದು ಬಳಸಬಹುದಾದ ಪ್ರಮಾಣದ ನೀರನ್ನು ನೀಡುತ್ತದೆ.

ಅಂತರ್ಜಲ ಮಟ್ಟವು ಕುಸಿಯಲು ಕಾರಣವಾಗುವ ಅಂಶಗಳು ಯಾವುವು?

ಹೆಚ್ಚುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ಕೈಗಾರಿಕೆಗಳು, ಕೃಷಿ ಚಟುವಟಿಕೆಗಳು

Leave a Reply

Your email address will not be published. Required fields are marked *