ಜಾಲಿಯ ಮರದಂತೆ ಕನ್ನಡ ನೋಟ್ಸ್‌ | 2nd Puc Kannada Jaliya Maradante Question Answer

ಜಾಲಿಯ ಮರದಂತೆ ಕನ್ನಡ ನೋಟ್ಸ್‌ | 2nd Puc Kannada Jaliya Maradante Question Answer

Jaliya Maradante in Kannada, ಜಾಲಿಯ ಮರದಂತೆ notes, ನೋಟ್ಸ್‌ ಪ್ರಶ್ನೆ ಉತ್ತರಗಳು, 2nd puc Kannada Jaliya Maradante poem Question Answer Notes pdf, ಜಾಲಿಯ ಮರದಂತೆ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು, 2nd Puc Kannada Jaliya Maradante Poem Question Answer Notes Pdf Download 5th chapter Notes

2nd Puc Kannada Jaliya Maradante Question Answer

ಜಾಲಿಯ ಮರದಂತೆ ಕನ್ನಡ ಪ್ರಾಂಶೋತ್ತರಗಳನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ವಿದ್ಯಾರ್ಥಿಗಳಿಗಾಗಿ ಉಚಿತವಾಗಿದೆ

Spardhavani Telegram

ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )

ಜಾಲಿಯ ಮರದಂತಿರುವವರು ಯಾರು ?
ಜಾಲಿಯ ಮರದಂತಿರುವವರು ದುರ್ಜನರು .

ಯಾರಿಗೆ ನೆರಳು ಸಿಗುವುದಿಲ್ಲ ?
ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳು ಸಿಗುವುದಿಲ್ಲ .

ಜಾಲಿಯ ರಸಸ್ವಾದ ಹೇಗಿರುತ್ತದೆ ?
ಜಾಲಿಯ ರಸಸ್ವಾದ ವಿಷದಂತಿರುತ್ತದೆ .

ದುರ್ಗಂಧ ಬಿಡದಿರುವುದು ಯಾವುದು ?
ದುರ್ಗಂಧ ಬಿಡದಿರುವುದು ಊರಹಂದಿ

ಯಾವ ಮಾತಿಗೆ ಕೊನೆಯಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ ?
ಬಿನ್ನಾಣದ ಮಾತಿಗೆ ಕೊನೆಯಿಲ್ಲವೆಂದು ಪುರಂದರದಾಸರು ಹೇಳಿದ್ದಾರೆ .

ಜಾಲಿಯ ಮುಳ್ಳು ಹೇಗೆ ಆವರಿಸಿರುತ್ತದೆ ?
ಬುಡದಿಂದ ತುದಿಯವರೆಗೂ ಜಾಲಿಯ ಮುಳ್ಳು ಆವರಿಸಿರುತ್ತದೆ .

ತತ್ವಜ್ಞಾನವನ್ನು ಕೇಳದವರಾರು ?
ತತ್ವಜ್ಞಾನವನ್ನು ಕೇಳದವರು ದುರ್ಜನರು .

2nd Puc Kannada Jaliya Maradante Question Answer PDF

ಜಾಲಿಯ ಮರದಂತೆ ಕನ್ನಡ ನೋಟ್ಸ್‌ | 2nd Puc Kannada Jaliya Maradante Question Answer
ಜಾಲಿಯ ಮರದಂತೆ ಕನ್ನಡ ನೋಟ್ಸ್‌ | 2nd Puc Kannada Jaliya Maradante Question Answer

ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )

ಯಾರಿಗೆ ತತ್ವಜ್ಞಾನ ಹೇಳಿ ಪ್ರಯೋಜನವಿಲ್ಲ ?

ದುರ್ಜನರಿಗೆ ತತ್ವಜ್ಞಾನ ಹೇಳಿ ಪ್ರಯೋಜನವಿಲ್ಲ .

ಯಾರಿಗೆ ಷಡ್ರಸಾನ್ನವನಿಕ್ಕಿ ಉಪಯೋಗವಿಲ್ಲ ? ಏಕೆ ?

ಊರ ಹಂದಿಗೆ ಷಡ್ರಸಾನ್ನವನಿಕ್ಕಿ ಉಪಯೋಗವಿಲ್ಲ . ಏಕೆಂದರೆ ಅದಕ್ಕೆ ನಾರುವ ದುರ್ಗಂಧವೇ ಪ್ರಿಯವಾಗಿರುತ್ತದೆ .

ದುರ್ಜನರ ಕಾರ್ಯ ಯಾವ ಬಗೆಯದು ?

ದುರ್ಜನರು ಇತರರಿಗೆ ಉಪಕಾರ ಮಾಡುವುದಂತು ಇಲ್ಲವೆ ಇಲ್ಲ . ಕೇವಲ ಬಿನ್ನಾಣದ ಮಾತುಗಳನ್ನಾಡುತ್ತಾ , ಮೋಸಗೊಳಿಸುತ್ತಲೆ ಇರುತ್ತಾರೆ . ಇವರ ಕಾರ್ಯವೆಲ್ಲ ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ ಇರುತ್ತದೆ ಎಂಬುದಾಗಿ ಪುರಂದರದಾಸರು ಹೇಳಿದ್ದಾರೆ .

ಜಾಲಿಯ ಮರದ ನಿರರ್ಥಕತೆಯನ್ನು ಪುರಂದರದಾಸರು ಹೇಗೆ ತಿಳಿಸಿದ್ದಾರೆ ?

ಜಾಲಿಯ ಮರವು ಆಮೂಲಾಗ್ರ ಅಂದರೆ ಬುಡದಿಂದ ತುದಿಯವರೆಗೂ ಮುಳ್ಳಿನಿಂದ ಕೂಡಿರುತ್ತದೆ . ಇದರಲ್ಲಿ ಎಲೆಗಳಾಗಲಿ , ಸುವಾಸನೆ ಬೀರುವ ಹೂವಾಗಲಿ , ಹಣ್ಣಾಗಲಿ ಬಿಡುವುದಿಲ್ಲ . ಇದರಿಂದಾಗಿ ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಾಗಲಿ , ಹಸಿದು ಬಂದವರಿಗೆ ಹಣ್ಣಾಗಲಿ ಸಿಗುವುದಿಲ್ಲ ಕೂರಲು ಕೂಡ ಸ್ಥಳ ದೊರಕದು . ಅದರಿಂದ ಬರುವ ರಸಸ್ವಾದವು ವಿಷದಂತೆ ಇರುತ್ತದೆ ಎಂಬುದಾಗಿ ಪುರಂದರದಾಸರು ಹೇಳಿದ್ದಾರೆ .

2nd Puc Kannada Jaliya Maradante Question Answer Summary

ಜಾಲಿಯ ಮರದಂತೆ ಕನ್ನಡ ನೋಟ್ಸ್‌ | 2nd Puc Kannada Jaliya Maradante Question Answer
ಜಾಲಿಯ ಮರದಂತೆ ಕನ್ನಡ ನೋಟ್ಸ್‌ | 2nd Puc Kannada Jaliya Maradante Question Answer

ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )

ಸಮಾಜ ಕಂಟಕರ ಬಗೆಗೆ ಪುರಂದರದಾಸರ ಅಭಿಪ್ರಾಯಗಳನ್ನು ಸಂಗ್ರಹಿಸಿರಿ .

ದುರ್ಜನರು ಸಮಾಜಕಂಟಕರಾಗಿರುತ್ತಾರೆ . ಇವರಿಂದ ಸಮಾಜದ ಜನರು ಮೋಸ ಹೋಗುತ್ತಾ ತೊಂದರೆಗೆ ಸಿಲುಕುವರು . ಇವರು ಸತ್ಪುರುಷರಿಗೆ ಆಶ್ರಯ ನೀಡುವುದಾಗಲಿ , ದುರ್ಬಲರಿಗೆ ಸಹಾಯ ಮಾಡುವ ಮನಸ್ಸಾಗಲಿ ಇರುವುದಿಲ್ಲ . ಇವರು ಸ್ನೇಹಪರರು ಕೂಡ ಆಗಿರುವುದಿಲ್ಲ . ಇವರಿಗೆ ಜ್ಞಾನದ ಗಂಧವು ಇರುವುದಿಲ್ಲ . ಹಿತನುಡಿಗಳು ಕೂಡ ಇವರಿಗೆ ರುಚಿಸದು . ಆದ್ದರಿಂದ ದುರ್ಜನರು ಸಮಾಜದ ಕಂಟಕರಾಗಿರುತ್ತಾರೆ ಎಂಬುದಾಗಿ ಪುರಂದರದಾಸರು ತಿಳಿಸಿಕೊಟ್ಟಿದ್ದಾರೆ .

ಜಾಲಿಮರ ಮತ್ತು ದುರ್ಜನರನ್ನು ಸಮೀಕರಿಸುವುದರ ಔಚಿತ್ಯವನ್ನು ಚರ್ಚಿಸಿ .

ಜಾಲಿಮರ ಮತ್ತು ದುರ್ಜರನ್ನು ಪುರಂದರದಾಸರು ಸಮೀಕರಿಸುತ್ತ ಈ ರೀತಿ ಹೇಳಿದ್ದಾರೆ . “ ಹೇಗೆ ಜಾಲಿ ಮರವು ಹೂವಿಲ್ಲದ , ಹಣ್ಣಿಲ್ಲದ , ನೆರಳಿಲ್ಲದ , ರಸಹೀನವಾಗಿರುತ್ತದೆಯೋ ಅದೇ ರೀತಿ ದುರ್ಜನರು ಉತ್ತಮ ಗುಣಗಳಿಂದ ದೂರ ಉಳಿದು , ಅವಗುಣಗಳನ್ನು ಬೆಳೆಸಿಕೊಂಡಿರುತ್ತಾರೆ . ದುರ್ಜನರು ಸತ್ಪುರುಷರಿಗೆ ಆಶ್ರಯಕೊಡುವುದಿಲ್ಲ . ದುರ್ಬಲರಿಗೆ ಸಹಾಯ ಮಾಡುವುದಿಲ್ಲ . ಜ್ಞಾನದ ಗಂಧವು ಇವರಿಗಿರುವುದಿಲ್ಲ . ಸ್ನೇಹರಸದ ಅರಿವು ಇವರಿಗಿರುವುದಿಲ್ಲ . ಆಮೂಲಾಗ್ರ ಕಂಟಕ ವೃತ್ತಿಯನ್ನೇ ಮೆರೆಸುವ ದುರ್ಜನರು , ಜಾಲಿಯ ಮರದಂತೆಯೇ ಸರಿ . –

ಜಾಲಿಯ ಮರವು ನಿರಪಯುಕ್ತವೆಂಬುದನ್ನು ಪುರಂದರದಾಸರು ಹೇಗೆ ನಿರೂಪಿಸಿದ್ದಾರೆ ?

ಜಾಲಿಯ ಮರವು ಬುಡದಿಂದ ತುದಿಯವರೆಗೆ ಅಂದರೆ ಆಮೂಲಾಗ್ರ ಮುಳ್ಳಿನಿಂದ ತುಂಬಿಕೊಂಡಿರುತ್ತದೆ . ಬಿಸಿಲಲ್ಲಿ ಬಳಲಿ ಬಂದವರಿಗೆ ಎಲೆಗಳಿಲ್ಲ . ಕಾರಣ ನೆರಳು ಇರುವುದಿಲ್ಲ . ಹಸಿದು ಬಂದವರಿಗೆ ಈ ಮರದಿಂದ ಹಣ್ಣು ಕೂಡ ದೊರಕದು . ಏಕೆಂದರೆ ಇದರಲ್ಲಿ ಹಣ್ಣು ಕೂಡ ಬಿಡುವುದಿಲ್ಲ . ಇದು ಈ ಮರದಿಂದ ಹೂವಿನ ಸುವಾಸನೆಯೂ ಇರದು . ಕೂರಲು ಸ್ಥಳವು ಇರುವುದಿಲ್ಲ . ಇದರಲ್ಲಿ ವಿಷದ ಸ್ವಾದವಿರುತ್ತದೆ . ಆದ್ದರಿಂದ ಜಾಲಿಯ ಮರವು ನಿರುಪಯುಕ್ತವೆಂಬುದನ್ನು ಪುರಂದರದಾಸರು ನಿರೂಪಿಸಿದ್ದಾರೆ .

ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ : 2nd Puc Kannada Jaliya Maradante Question Answer

“ ಬಿನ್ನಾಣದ ಮಾತಿಗೆ ಕೊನೆಯಿಲ್ಲ”

ʼಪುರಂದರದಾಸರ ‘ ಜಾಲಿಯ ಮರದಂತೆ ‘ ಎಂಬ ಕೀರ್ತನೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ದುರ್ಜನರ ವರ್ತನೆಯನ್ನು ಈ ಮೇಲಿನ ವಾಕ್ಯದ ಮೂಲಕ ಕವಿಯು ಟೀಕೆ ಮಾಡಿರುವರು . ಸದಾ ದುಷ್ಟತನದ ಕಾರ್ಯಗಳಲ್ಲಿ ಮುಳುಗಿರುವ ದುರ್ಜನರಿಂದ ಸಮಾಜಕ್ಕೆ ಎಳ್ಳಷ್ಟು ಉಪಯೋಗವಿಲ್ಲ . ಆದರೂ ಅವರು ತನ್ನಿಂದಲೇ ಹಾಗಾಯ್ತು , ಹೀಗಾಯ್ತು ಎಂದು ಜಂಬ ಕೊಚ್ಚುತ್ತಿರುತ್ತಾರೆ . ಆದ್ದರಿಂದ ಕವಿಯು ಅವರ ಜಂಬದ ವರ್ತನೆಯನ್ನು “ ಬಿನ್ನಾಣದ ಮಾತಿಗೆ ಕೊನೆಯಿಲ್ಲ ‘ ಎಂದು ಟೀಕೆ ಮಾಡಿದ್ದಾರೆ .

“ ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ “

ʼಪುರಂದರದಾಸರು ರಚಿಸಿದ ‘ ಜಾಲಿಯ ಮರದಂತೆ ‘ ಎಂಬ ಕೀರ್ತನೆಯ ಆರಂಭದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು . ದುರ್ಜನರನ್ನು ಜಾಲಿಯ ಮರದೊಂದಿಗೆ ಹೋಲಿಸಿರುವ ಕವಿಯು , ಜಾಲಿಯ ಮರದಲ್ಲಿ ಬುಡದಿಂದ – ತುದಿಯವರೆಗೂ ಮುಳ್ಳುಗಳೇ ತುಂಬಿರುತ್ತವೆ . ಇದೇ ರೀತಿ ದುರ್ಜನರಲ್ಲಿಯೂ ಬರಿಯ ಕೆಟ್ಟ ವಿಚಾರ – ದುಷ್ಟಬುದ್ಧಿಗಳೇ ತುಂಬಿರುತ್ತವೆ . ಆದ್ದರಿಂದ ದುರ್ಜನರು ಸಮಾಜದಲ್ಲಿ ಜಾಲಿಯಮರದಂತೆ ನಿರುಪಯುಕ್ತರು , ಅವರು ಒಳ್ಳೆಯವರನ್ನು ಚುಚ್ಚುವ ಮುಳ್ಳುಗಳಿದ್ದಂತೆ ಎಂದು ಕವಿ ಹೇಳಿರುವರು .

“ ನಾರುವ ದುರ್ಗಂಧ ಬಿಡಬಲ್ಲುದೆ “

ʼಪುರಂದರದಾಸರು ರಚಿಸಿರುವ ‘ ಜಾಲಿಯ ಮರದಂತೆ ‘ ಎಂಬ ಕೀರ್ತನೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ದುರ್ಜನರಿಗೆ ಮಾನ್ಯತೆ ನೀಡುವುದು ವ್ಯರ್ಥವೆಂಬುದನ್ನು ವಿವರಿಸುವಾಗ ಕವಿಯು ಈ ಮೇಲಿನ ವಾಕ್ಯವನ್ನು ಹೇಳಿದ್ದಾರೆ . ಊರಿನ ಹೊಲಸಿನಲ್ಲಿ ಜೀವಿಸುವ ಹಂದಿಯನ್ನು ತಂದು , ಅದಕ್ಕೆ ಷಡ್ರಸಾನ್ನ ಭೋಜನ ಮಾಡಿಸಿದ ಮಾತ್ರಕ್ಕೆ ಅದು ತನ್ನ ಮೈಯಿಂದ ದುರ್ಗಂಧ ಬೀರುವುದನ್ನು ಬಿಡುವುದಿಲ್ಲ . ಇದರಂತೆಯೇ ಸದಾ ದುಷ್ಟ ಕೆಲಸದಲ್ಲಿ ಮುಳುಗಿರುವ ದುರ್ಜನರಿಗೆ ತತ್ರೋಪದೇಶಗಳನ್ನು ಹೇಳಿದರೆ ಅವರು ತಮ್ಮ ಸ್ವಭಾವ ಬದಲಾಯಿಸಿಕೊಳ್ಳುವುದಿಲ್ಲ . ಆದ್ದರಿಂದ ಕವಿಯು ಹಂದಿ ಮತ್ತು ದುರ್ಜನರ ಮೂಲಸ್ವಭಾವಗಳನ್ನು ಬದಲಾಯಿಸಲು ಪ್ರಯತ್ನಿಸುವುದು ವ್ಯರ್ಥವಾದ ಕೆಲಸವೆಂದಿದ್ದಾರೆ .

“ ಕುಸುಮವಾಸನೆಯಿಲ್ಲ ಕೂಡಲು ಸ್ಥಳವಿಲ್ಲ”

ʼಪುರಂದರದಾಸರ ‘ ಜಾಲಿಯ ಮರದಂತೆ ‘ ಎಂಬ ಸುಪ್ರಸಿದ್ಧ ಕೀರ್ತನೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಜಾಲಿಯ ಮರವನ್ನು ಕುರಿತು ಕವಿಯು ಈ ಮೇಲಿನ ಮಾತನ್ನಾಡಿದ್ದಾರೆ . ಜಾಲಿಯ ಮರವು ಅಡಿಯಿಂದ ಮುಡಿಯವರೆಗೆ ಮುಳ್ಳನ್ನೇ ತುಂಬಿಕೊಂಡಿರು ತದೆ . ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಾಗಲಿ , ಹಸಿದು ಬಂದವರಿಗೆ ಹಣ್ಣಾಗಲಿ ಅದರಿಂದ ಸಿಗುವುದಿಲ್ಲ . ಅದರ ಹೂವು ಕೂಡ ಸುವಾಸನೆಯನ್ನು ಬೀರುವುದಿಲ್ಲ .ಮರದ ಕೆಳಗೆಲ್ಲಾ ಮುಳ್ಳು ಬಿದ್ದಿರುತ್ತದೆಯಾದ್ದರಿಂದ ಜಾಲಿಯ ಮರದ ಕೆಳಗೆ ಕುಳಿತುಕೊಳ್ಳಲೂ ಸ್ಥಳವಿರುವುದಿಲ್ಲ . ಒಟ್ಟಾರೆ ಜಾಲಿಯ ಮರದಿಂದ ಯಾವ ಉಪಯೋಗವೂ ಇರುವುದಿಲ್ಲವೆಂದು ಕವಿ ವಿವರಿಸಿದ್ದಾರೆ .

ಜಾಲಿಯ ಮರದಂತೆ ಕನ್ನಡ ನೋಟ್ಸ್‌ | 2nd Puc Kannada Jaliya Maradante Question Answer
ಜಾಲಿಯ ಮರದಂತೆ ಕನ್ನಡ ನೋಟ್ಸ್‌ | 2nd Puc Kannada Jaliya Maradante Question Answer

ಇತರೆ ಮಾಹಿತಿ

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು

ಬಸವಣ್ಣನವರ ವಚನಗಳು ಕನ್ನಡ ನೋಟ್ಸ್‌

ಕದಡಿದ ಸಲಿಲಂ ತಿಳಿವಂದದೆ ಕನ್ನಡ ನೋಟ್ಸ್‌

Leave a Reply

Your email address will not be published. Required fields are marked *