Kannada Rajyotsava Prabandha in Kannada , karnataka rajyotsava kannada speech , ಕನ್ನಡ ರಾಜ್ಯೋತ್ಸವದ ಭಾಷಣಗಳು,ಕನ್ನಡ ರಾಜ್ಯೋತ್ಸವ ಮೇಲೆ ಕನ್ನಡ ಪ್ರಬಂಧ , ನಿಮ್ಮ ಶಾಲೆಯಲ್ಲಿ ಆಚರಿಸಿದ ಕನ್ನಡ ರಾಜ್ಯೋತ್ಸವದ ಬಗ್ಗೆ ವರದಿ ಬರೆಯಿರಿ , beautiful kannada rajyotsava images, ಕನ್ನಡ ರಾಜ್ಯೋತ್ಸವ ಭಾಷಣ 2023
Kannada Rajyotsava Information In Kannada
ಈ ಲೇಖನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಹತ್ವ, ಕನ್ನಡ ರಾಜ್ಯೋತ್ಸವದ ಭಾಷಣಗಳು , ಕನ್ನಡ ರಾಜ್ಯೋತ್ಸವ ಮೇಲೆ ಕನ್ನಡ ಪ್ರಬಂಧ , ಕನ್ನಡ ಭಾಷಣ ವಿಷಯಗಳು , ನಿಮ್ಮ ಶಾಲೆಯಲ್ಲಿ ಆಚರಿಸಿದ ಕನ್ನಡ ರಾಜ್ಯೋತ್ಸವದ ಬಗ್ಗೆ ವರದಿ ಬರೆಯಿರಿ , ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ ಕನ್ನಡದಲ್ಲಿ ಕನ್ನಡ ರಾಜ್ಯೋತ್ಸವದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.


ಪೀಠಿಕೆ
ಪ್ರತಿ ಕನ್ನಡಿಗನ ಹೆಮ್ಮೆಯ ಹಬ್ಬ ಕನ್ನಡ ರಾಜ್ಯೋತ್ಸವ ಪ್ರತಿ ಕನ್ನಡಿಗನ ಹೆಮ್ಮೆಯ ಹಬ್ಬ ಕನ್ನಡ ರಾಜ್ಯೋತ್ಸವ ಕರುನಾಡು.
ಕನ್ನಡಿಗರ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ ಕರುನಾಡಿನ ಕನ್ನಡಿಗರ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ ಮಹಾಕವಿ ಕುವೆಂಪುರವರು ಹೇಳುವ ಪ್ರಕಾರ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡ ವಾಗಿರು ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. 1956 ರ ನವೆಂಬರ್ ಒಂದರಂದು ದಕ್ಷಿಣ ಭಾರತದ ಎಲ್ಲ ಕನ್ನಡ ಭಾಷೆ ಮಾತನಾಡುವ ಪ್ರದೇಶ ಗಳನ್ನು ಕರ್ನಾಟಕ ಎಂಬ ಒಂದು ರಾಜ್ಯ ವನ್ನು ರೂಪಿಸಲು ವಿಲೀನಗೊಳಿಸಲಾಯಿತು.
ಅಂದಿನಿಂದ ಈ ದಿನವನ್ನು ಕರ್ನಾಟಕ ರಾಜ್ಯೋತ್ಸವ ಅಥವಾ ಕನ್ನಡ ರಾಜ್ಯೋತ್ಸವ ದಿನ ಎಂದು ಕರೆಯುತ್ತಾರೆ.
ಕನ್ನಡಿಗರ ಈ ದಿನವನ್ನು ಕರ್ನಾಟಕ ರಾಜ್ಯ ರಚನೆಯ ದಿನ ವಾಗಿ ಆಚರಿಸುತ್ತಾರೆ. ಈ ದಿನದಂದು ಇಡೀ ಕರ್ನಾಟಕ ರಾಜ್ಯ ಹಬ್ಬ ದಂತೆ ಕಂಗೊಳಿಸುತ್ತದೆ.
ಕನ್ನಡ ರಾಜ್ಯೋತ್ಸವದ ಮಹತ್ವ

ವಿಷಯ ವಿವರಣೆ
ಕರ್ನಾಟಕ ಹುಟ್ಟಿಗೆ ಕಾರಣರಾದ ಕನ್ನಡ ಕುಲಪುರೋಹಿತ ಎಂದೇ ಹೆಸರಾದ ಆಲೂರು ವೆಂಕಟ ರಾವ್ ರವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿ ಯನ್ನು ಸ್ವಾತಂತ್ರ್ಯ ಪೂರ್ವವೇ 1905 ರಲ್ಲಿ ಪ್ರಾರಂಭಿಸಿದರು.
ನಂತರ ಭಾರತ ಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯ ವಾದ ನಂತರ ಭಾಷೆಗಳ ಆಧಾರದ ಮೇಲೆ 1956 ನವೆಂಬರ್ 1 ರಂದು ರಾಜ್ಯ ಗಳನ್ನು ವಿಂಗಡಿಸಿದರು. ಅದರಂತೆ ಮದ್ರಾಸ್, ಮುಂಬೈ ಮತ್ತು ಹೈದ್ರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ನಂತರ ಮೈಸೂರು ರಾಜ್ಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಯಿತು. ಅವುಗಳೆಂದರೆ ಉತ್ತರ ಕರ್ನಾಟಕ, ಹಳೆಮೈಸೂರು, ಮಲೆನಾಡು.
1973 ರ ನವೆಂಬರ್ 1 ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಅವಧಿಯಲ್ಲಿ ಮೈಸೂರು ರಾಜ್ಯ ವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಧರ್ಮ, ಜಾತಿ ಲಿಂಗ ಬೇಧ ವಿಲ್ಲದೆ ರಾಜ್ಯಾದ್ಯಂತ ಅನೇಕ ಜನರು ಕರ್ನಾಟಕ ದಾದ್ಯಂತ ರಾಜ್ಯ ಧ್ವಜದ ಕೆಂಪು ಮತ್ತು ಹಳದಿ ಗಳನ್ನು ಪ್ರದರ್ಶಿಸುತ್ತಾರೆ.
ಕನ್ನಡ ರಾಜ್ಯೋತ್ಸವ ವನ್ನು ಸಂಭ್ರಮ ದಿಂದ ಆಚರಿಸ ಲು ಎಲ್ಲ ಡಿ ಸಕಲ ಸಿದ್ಧತೆಗಳು ನಡೆಯುತ್ತಿದೆ ಮತ್ತು ವಿವಿಧ ಕಾರ್ಯಕ್ರಮ ಗಳು ಸ್ಪರ್ಧೆ ಗಳನ್ನು ಏರ್ಪಡಿಸಲಾಗುತ್ತದೆ. ಕನ್ನಡ ರಾಜ್ಯೋತ್ಸವ ವನ್ನು ಸಂಭ್ರಮದಿಂದ ಉತ್ಸಾಹದಿಂದ ಆಚರಿಸಲು ಎಲ್ಲ ಕಡೆ ಸಕಲ ಸಿದ್ಧತೆಗಳನ್ನು ನಡೆಸುತ್ತಾರೆ ಮತ್ತು ವಿವಿಧ ಕಾರ್ಯಕ್ರಮಗಳು ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ.

ಉಪಸಂಹಾರ
ಕನ್ನಡ ರಾಜ್ಯೋತ್ಸವವು ಒಂದು ಸಂಭ್ರಮದ ಹಬ್ಬ. ಕನ್ನಡ ರಾಜ್ಯೋತ್ಸವ ಆಚರಣೆಯ ಲ್ಲಿ ನಮ್ಮ ನಿಮ್ಮೆಲ್ಲರ ಪಾತ್ರ ಹೆಚ್ಚು ಮಹತ್ವದಾಗಿದೆ. ನಮ್ಮ ನಾಡು ಸುಂದರ ನಾಡು, ನಮ್ಮ ಪ್ರಕೃತಿ ಸೌಂದರ್ಯ ದಿಂದ ತುಂಬಿದೆ. ಕರ್ನಾಟಕ ಒಂದು ಸುಂದರ ಬಿಡು ನಮ್ಮ ಕರ್ನಾಟಕ ಕಲೆ, ಸಾಹಿತ್ಯ, ನಾಟಕ, ನೃತ್ಯ ಮುಂತಾದ ಕಲೆಗಳಿಂದ ಶ್ರೀಮಂತ ವಾಗಿದೆ.
ನಮ್ಮ ಮೈಸೂರು ನಗರವನ್ನು ಕಲೆಯ ತವರೂರು ಎಂದು ಹೇಳುತ್ತಾರೆ. ಆದ್ದರಿಂದ ನಾವು ನೀವು ಎಲ್ಲರೂ ನಮ್ಮ ನಾಡು ನುಡಿ ಮತ್ತು ಕಲೆ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿಯೂ ನಮ್ಮೆಲ್ಲರದು.
ನಮ್ಮ ಹೆಮ್ಮೆ. ಇದು ನಮ್ಮ ಹಬ್ಬ. ಇದು ಕನ್ನಡಿಗರ ಹೆಮ್ಮೆಯ ಹಬ್ಬ. ಜೈ ಭುವನೇಶ್ವರಿ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
FAQ
ಕರ್ನಾಟಕ ಹುಟ್ಟಿಗೆ ಕಾರಣರಾದ ಕನ್ನಡ ಕುಲಪುರೋಹಿತ ಎಂದೇ ಹೆಸರಾದವರುಯಾರು?
ಆಲೂರು ವೆಂಕಟ ರಾವ್
ಭಾಷೆಗಳ ಆಧಾರದ ಮೇಲೆ ರಾಜ್ಯ ಗಳನ್ನು ವಿಂಗಡಿಸಿದ್ದು ಯಾವಾಗ ?
1956 ನವೆಂಬರ್ 1 ರಂದು
ಸಂಬಂದಿಸಿದ ಇತರೆ ವಿಷಯಗಳನ್ನು ಓದಿ
- ಕನ್ನಡ ರಾಜ್ಯೋತ್ಸವ ಭಾಷಣ 2023
- ಕರ್ನಾಟಕ ರಾಜ್ಯೋತ್ಸವ ಭಾಷಣ
- ಸಾಹಿತ್ಯ ಕರ್ನಾಟಕ
- ಕರ್ನಾಟಕದ ಹಳೆಯ ಹೆಸರು
- ಕನ್ನಡ ರಾಜ್ಯೋತ್ಸವ ಶುಭಾಷಯಗಳು 2023