ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ನೋಟ್ಸ್ | 1st PUC Kannada Vachanagalu Notes

ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ನೋಟ್ಸ್ | 1st PUC Kannada Vachanagalu Notes

Vachanagalu in Kannada Notes, ಕನ್ನಡ ವಚನಗಳು PDF, 1st PUC Kannada Textbook Answers, allama prabhu Vachanagalu Questions and Answers Pdf, Notes, 1st PUC Kannada Vachanagalu Notes Question Answer Pdf, Allama Prabhu, Akkamahadevi, Gattivalayya Vachanagalu in Kannada Notes, ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ನೋಟ್ಸ್ ಪ್ರಶ್ನೋತ್ತರಗಳು, 1st Puc Kannada 2nd Poem Notes Ghattivalayya Vachanagalu in Kannada 1st Puc Kannada Vachanagalu Questions and Answers KSEEB Solutions For Class 11 Kannada Poem 2 Notes, first puc kannada vachanagalu notes, ಫಸ್ಟ್ ಪಿಯುಸಿ ವಚನಗಳು ನೋಟ್ಸ್ , ಅಲ್ಲಮಪ್ರಭು ವಚನಗಳು in kannada

ಪರಿವಿಡಿ

vachanagalu in kannada notes

ಕವಿ ಪರಿಚಯ:
ಅಲ್ಲಮಪ್ರಭು 12 ನೇ ಶತಮಾನದಲ್ಲಿದ್ದ ವಚನಕಾರದಲ್ಲಿ ಮಹತ್ವದ ವಚನಕಾರನೆಂದು ಪ್ರಸಿದ್ಧವಾಗಿರುವರು

ಜನ್ಮಸ್ಥಳ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ

ತಂದೆ : ನಿರಹಂಕಾರ

ತಾಯಿ : ಸುಜ್ಞಾನಿ

ಬಾಲ್ಯದಲ್ಲಿ ಕಾಮಲತೆ ಎಂಬ ತರುಣಿಯಲ್ಲಿ ಮೋಹಿತನಾಗಿದ್ದು , ಅವಳ ಮರಣದಿಂದ ವಿರಕ್ತಿಯನ್ನು ಹೊಂದಿದನೆಂದು ಹೇಳಲಾಗಿದೆ .

ಅಲ್ಲಮನ ಗುರು : ಅನಿಮಿಷಯ್ಯ

ಅಂಕಿತ ನಾಮ : ಗುಹೇಶ್ವರ

ಅಲ್ಲಮನ ಉದ್ದೇಶ : ಜ್ಞಾನ ಪ್ರಸಾರಣ ಅಲ್ಲಮನ ಉದ್ದೇಶವಾಗಿತ್ತು

ಬಸವಣ್ಣನವರು ಸ್ಥಾಪಿಸಿದ ಶೂನ್ಯಸಿಂಹಾಸನದ ಪೀಠವನ್ನು ಈತ ಅಲಂಕರಿಸಿದ್ದನು.

ಸಂಕೀರ್ಣತೆ ಈತನ ವಚನಗಳ ವೈಶಿಷ್ಟ್ಯವಾಗಿದೆ .

ವಚನಗಳ ಭಾವಾರ್ಥ / ಸಾರಾಂಶ

ಕಾಲುಗಳೆಂಬವು ಗಾಲಿ ಕಂಡಯ್ಯಾ

allama prabhu Vachanagalu Questions and Answers Pdf

ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ

ಬಂದಿಯ ಹೊಡೆವವರೈವರೂ ಮಾನಿಸರು ,

ಒಬ್ಬರಿಗೊಬ್ಬರು ಸಮವಿಲ್ಲಯ್ಯ

ಅದರಿಚ್ಚೆಯನರಿದು ಹೊಡೆಯದಿರ್ದಡೆ

ಅದರಚ್ಚು ಮುರಿಯಿತ್ತು , ಗುಹೇಶ್ವರಾ

ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ನೋಟ್ಸ್

ಕನ್ನಡ ವಚನಗಳು | Vachanagalu in Kannada Notes Best No1 Notes
ಕನ್ನಡ ವಚನಗಳು | Vachanagalu in Kannada Notes Best No1 Notes

ಈ ಮೇಲಿನ ವಚನದಲ್ಲಿ ಅಲ್ಲಮಪ್ರಭುವು ದೇಹವನ್ನು ಬಂಡಿಗೆ ಹೋಲಿಸಿದ್ದಾರೆ . ಬಂಡಿ ಮುಂದೆ ಸಾಗಲು ಗಾಲಿಗಳು ಬೇಕೇಬೇಕು ಹಾಗಾಗಿ ಮನುಷ್ಯನ ದೇಹವೆಂಬ ಬಂಡಿಗೆ ಅವನ ಕಾಲುಗಳೆರಡು ಗಾಲಿಗಳು ಇದಂತೆ ಎಂದಿದ್ದಾರೆ . ಕಾಲು ಓಡಾಡಲು ಅಗತ್ಯವಾದುದರಿಂದ ಅವುಗಳನ್ನು ಬಂಡಿಯ ಚಕ್ರಕ್ಕೆ ಹೋಲಿಸಿರುವುದು ಸೂಕ್ತವಾಗಿದೆ .

ಅಲ್ಲಮಪ್ರಭುಗಳು ದೇಹವನ್ನು ತುಂಬಿದ ಬಂಡಿಗೆ ಹೋಲಿಸಿದ್ದಾರೆ . ತುಂಬಿದ ಬಂಡಿಯನ್ನು ಎಚ್ಚರಿಕೆಯಿಂದ ಮುನ್ನಡೆಸಬೇಕು . ಅದೇ ರೀತಿ ದೇಹವನ್ನು ಅತ್ಯಂತ ಜಾಗರೂಕತೆಯಿಂದ , ಎಚ್ಚರದಿಂದ ನೋಡಿಕೊಳ್ಳಬೇಕು .

ಅಲ್ಲಮಪ್ರಭು ಪಂಚೇಂದ್ರಿಯಗಳನ್ನು ಬಂಡಿ ಹೊಡೆಯುವವರಿಗೆ ಸಮೀಕರಿಸಿದ್ದಾರೆ . ಬಂಡಿ ಹೊಡೆಯುವವನಿಗೆ ಬಂಡಿಯನ್ನು ಜಾಗರೂಕತೆ ಯಿಂದ ಮುನ್ನಡೆಸುವ ಪರಿಣತಿಯಿರಬೇಕು ಎಂದು ತಿಳಿಸಿದ್ದಾರೆ .

ದೇಹವೆಂಬ ಬಂಡಿಯನ್ನು ಹೊಡೆವವರು ನಮ್ಮ ಪಂಚೇಂದ್ರಿಯಗಳು , ನೋಟ , ಸ್ಪರ್ಶ , ಶ್ರವಣ , ರುಚಿ , ಗಂಧಗಳ ಅನುಭವಕ್ಕೆ ಬಲಿಯಾದ ಮನುಷ್ಯ ದೇಹಸುಖಕ್ಕೆ ಬಲಿಯಾಗುವ ಸಂದರ್ಭಗಳೇ ಅಧಿಕ .

ಹಾಗಾಗದಂತೆ ಪಂಚೇಂದ್ರಿಯಗಳ ಮೇಲಿನ ಹಿಡಿತ ಮುಖ್ಯ . ಪಂಚೇಂದ್ರಿಯಗಳೆಲ್ಲವೂ ಒಂದಕ್ಕೊಂದು ಸರಿಸಾಟಿಯಿಲ್ಲದವು . ಎಲ್ಲವೂ ಬೇರೆ ಬೇರೆಯ ಅಗತ್ಯಗಳನ್ನು ಪೂರೈಸುವಂಥವು . ಪಂಚೇಂದ್ರಿಯಗಳ ಮೂಲಕವೇ ನಮಗೆ ಸಕಲ ಅನುಭವಗಳೂ ಲಭಿಸುವುದರಿಂದ , ಅವುಗಳೇ ದೇಹವೆಂಬ ಬಂಡಿಗೆ ಆಧಾರ .

ಆದರೆ ಇಂದ್ರಿಯ ಜನ್ಯವಾದ ಅನುಭವಗಳು ಮನುಷ್ಯನನ್ನು ಎತ್ತೆತ್ತಲೋ ಒಯ್ಯಬಾರದು . ಹಾಗಾದಲ್ಲಿ ಆ ಬಂಡಿಯ ಅಚ್ಚು , ಎಂದರೆ ಆತ್ಮನಾಶವಾಗುತ್ತದೆ . ಆದ್ದರಿಂದ ಪಂಚೇಂದ್ರಿಯಗಳನ್ನು ಬಳಸಿಕೊಂಡೇ ದೇಹವೆಂಬ ಬಂಡಿಯನ್ನು ಮುನ್ನಡೆಸಿ ಆತ್ರೋದ್ಧಾರವನ್ನು ಕಂಡುಕೊಳ್ಳಬೇಕು ಎನ್ನುವುದು ಅಲ್ಲಮಪ್ರಭುವಿನ ಚಿಂತನೆಯಾಗಿದೆ .

ಕನ್ನಡ ವಚನಗಳು | Vachanagalu in Kannada Notes Best No1 Notes

ಶಬ್ದಗಳ ಅರ್ಥ :

ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು ?

ಹಸಿವು ಹೋಹುದೇ

ಅಂಗದ ಮೇಲೆ ಲಿಂಗ ಸ್ವಾಯತವಾದಡೇನು ?

ಭಕ್ತನಾಗಬಲ್ಲನೇ ?

ಇಟ್ಟ ಕಲ್ಲು ಮಳೆಯ ಮೇಲೆ ಸಿಲುಕಿದಡೆ ,

ಆ ಕಲ್ಲು ಲಿಂಗವೆ ? ಆ ಮಳೆ ಭಕ್ತನೆ ? ಇಟ್ಟಾತ ಗುರುವೆ

ಇಂತಪ್ಪವರ ಕಂಡಡೆ ನಾಚುವೆನಯ್ಯಾ , ಗುಹೇಶ್ವರಾ .

ಬೆಡಗಿನ ವಚನಗಳಿಂದ ಪ್ರಸಿದ್ಧನಾಗಿರುವ ಅಲ್ಲಮಪ್ರಭುವು ಭಕ್ತರಂತೆ ವೇಷ ತೊಟ್ಟಿರುವ ಡಾಂಭಿಕರ ನಡವಳಿಕೆಯನ್ನು ತನ್ನ ಈ ವಚನದಲ್ಲಿ ವಿಮರ್ಶಿಸಿದ್ದಾನೆ .

ಭಕ್ತಿಯೆಂಬುದು ಶಿವನನ್ನು ಕಾಣಬೇಕೆಂಬ ಉತ್ಕಟವಾದ ಹಸಿವಿನ೦ತೆ . ಹ ಊಟ ಹಾಕಿ ತೃಪ್ತಿಪಡಿಸಬೇಕೇ ಹೊರ ತು , ರುಚಿಯಾದ ಊಟದ ಪೊಟ್ಟಣವನ್ನು ತಂದು ಹಸಿದವನ ಹೊಟ್ಟೆಗೆ ಕಟ್ಟಿದರೆ ಅವನ ಮೇಲ್ನೋಟಕ್ಕೆ ಕಾಣುವುದಿಲ್ಲವಾದರೂ ಹೊಟ್ಟೆಯೊಳಗೆ ಹುಟ್ಟಿ ತಲ್ಲಣಗೊಳಿಸುತ್ತದೆ .

ಹೊಟ್ಟೆ ಹಸಿದವನಿಗೆ ಹೊಟ್ಟೆ ತುಂಬ ಹಸಿವು ಇಂಗುವುದೇ ? ಇಂಗಲಾರದು . ಅದರಂತೆಯೇ ಶಿವಲಿಂಗವನ್ನು ಕರಡಿಗೆಯಲ್ಲಿಟ್ಟು , ಶಿವದಾರವನ್ನು ಮೈಮೇಲೆ ಧರಿಸಿದ್ದ ಮಾತ್ರಕ್ಕೆ ಅವನು ಶಿವಭಕ್ತನಾಗಿ ಬಿಡುವನ ? ಮಳೆಯ ಮೇಲೆ ಬಂಡೆ ಕಲ್ಲು ಬಿದ್ದಿರಲು ಅದು ಶಿವಲಿಂಗ , ಮಳೆಯೇ ಶಿವಭಕ್ತ ಕಲ್ಲನ್ನು ಮಳೆಯ ಮೇಲೆ ಎಸೆದಾತ ಗುರು ಎನ್ನಲಾಗದು .

ಭಕ್ತನಲ್ಲದವನ ಮೈಮೇಲಿನ ಶಿವಲಿಂಗವು ಮಳೆಯ ಮೇಲೆ ಬಿದ್ದಿರುವ ಕಲ್ಲಿನಂತೆ ಎಂದು ಅಲ್ಲಮಪ್ರಭುವು ವಿಮರ್ಶಿಸಿದ್ದಾನೆ . ದೇವರು ನಿಜವಾದ ಭಕ್ತನ ಅಂತರಂಗದಲ್ಲಿರುತ್ತಾನೆ , ಬಾಹ್ಯ ಪ್ರದರ್ಶನ ವಸ್ತುಗಳಲ್ಲಲ್ಲ ಎಂಬುದನ್ನು ಅಲ್ಲಮಪ್ರಭುವು ಈ ವಚನದ ಮೂಲಕ ಸಾರಿದ್ದಾನೆ.

ಕನ್ನಡ ವಚನಗಳು | Vachanagalu in Kannada Notes Best No1 Notes

ಶಬ್ದಗಳ ಅರ್ಥ :

ನಾ ದೇವನಲ್ಲದೆ ನೀ ದೇವನೆ ?

ನೀ ದೇವನಾದಡೆ ಎನ್ನನೇಕೆ ಸಲಹೆ ?

ಅಲೈದು ಒಂದು ಕುಡಿತ ಉದಕವನೆರೆವೆ

ಹಸಿದಾಗ ಒಂದು ತುತ್ತು ಓಗರವನಿಕ್ಕುವೆ .

ನಾದೇವ ಕಾಣಾ , ಗುಹೇಶ್ವರಾ .

ವಚನಕಾರರು ಹಾಗೂ ಭಕ್ತಿಪರಂಪರೆಯ ಕವಿಗಳು ದೇವರನ್ನು ತಮ್ಮ ಹಾಗೆಯೇ ಪರಿಭಾವಿಸಿ ಸಂಪಾದಿಸಬಲ್ಲರು , ಜಗಳವಾಡಬಲ್ಲರು , ಸವಾಲು ಎಸೆಯಬಲ್ಲರು.

ಈ ವಚನದಲ್ಲಿ ಅಲ್ಲಮನು ಪ್ರಭು ಮನುಷ್ಯನನ್ನು ಸಲಹುವವನು ದೇವರು ಎಂಬ ಭಾವನೆಯು ಸುಳ್ಳಾಗುವಂತೆ ಹಸಿವ ನೀರಡಿಕೆಗಳು ಮನುಷ್ಯನನ್ನು ತಲ್ಲಣಗೊಳಿಸುವುದರಿಂದ ದೇವರಿಗೆ ಸವಾಲು ಹಾಕಿದ್ದಾನೆ .

ದೇವರೇ ಆಗಿದ್ದರೆ ನೀನು ಏಕೆ ಸಲಹುತ್ತಿಲ್ಲ ? ಮನುಷ್ಯನಾದ ನಾನೇ ಹಸಿದವನಿಗೆ ತುತ್ತು ಊಟವನ್ನು , ಬಾಯಾರಿಕೇಯದವನಿಗೆ ನೀರನ್ನು ಕೊಡಬಲ್ಲೆ . ಹಾಗಾಗಿ ನಿನ್ನ ಹೆಚ್ಚುಗಾರಿಕೆಯೇನೂ ಇಲ್ಲ . ಸಲಹದ ನೀನು ದೇವರಲ್ಲ . ಸಲಹುವ ನಾನೇ ( ಇಲ್ಲಿ ನಾನು ಎನ್ನುವುದು ಸಲಹುವ ಯಾರಾದರೂ ಸರಿ ಎಂಬರ್ಥದಲ್ಲಿದೆ ) ದೇವರು ಎಂದಿದ್ದಾರೆ .

ಇದು ತಾನು ದೇವರಿಗಿಂತ ಶ್ರೇಷ್ಠ ಎಂಬ ಅಹಂ ತೋರಿಸುವುದಿಲ್ಲ . ಬದಲಿಗೆ ಮನುಷ್ಯನ ಮೂಲಭೂತ ಸಮಸ್ಯೆಯಾ ಹಸಿವು , ನೀರಡಿಕೆಗಳನ್ನು ನೀಗಿಸಬೇಕಾದ ಮಹತ್ವವನ್ನು ತಿಳಿಸುತ್ತದೆ . ‘ ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲೆಡೆ ವಸುಧೆಯೊಳಗಾತನೆ ಗಾರುಡಿಗ ರಾಮನಾಥ ‘ ಎನ್ನುವ ದಾಸಿಮಯ್ಯನ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು . ಇಲ್ಲಿ ಅಲ್ಲಮನ ಜೀವಪರವಾದ ಚಿಂತನೆ ಪ್ರಕಟವಾಗಿದೆ .

1st Puc Kannada allama prabhu Vachanagalu Notes

ಶಬ್ದಗಳ ಅರ್ಥ :

ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದಡೇನು ?

ಹಸಿವು ಹೋಹುದೇ

ಅಂಗದ ಮೇಲೆ ಲಿಂಗ ಸ್ವಾಯತವಾದಡೇನು ?

ಭಕ್ತನಾಗಬಲ್ಲನೇ ?

ಇಟ್ಟ ಕಲ್ಲು ಮೆಳೆಯ ಮೇಲೆ ಸಿಲುಕಿದಡೆ

ಆ ಕಲ್ಲು ಲಿಂಗವೆ ? ಆ ಮಳೆ ಭಕ್ತನೆ ? ಇಟ್ಟಾತ ಗುರುವೆ ?

ಇಂತಪ್ಪವರ ಕಂಡಡೆ ನಾಚುವೆನಯ್ಯಾ , ಗುಹೇಶ್ವರಾ .

12ನೇ ಶತಮಾನದ ಬಹುಮುಖ್ಯ ವಚನಕಾರರಲ್ಲಿ ಒಬ್ಬರಾದ ಅಲ್ಲಮಪ್ರಭುಗಳು ರಚಿಸಿರುವ ವಚನವಿದಾಗಿದೆ . ಇಲ್ಲಿ ಆಡಂಬರ ಹಾಗೂ ಯಾಂತ್ರಿಕ ಭಕ್ತಿಯನ್ನು ಪ್ರಶ್ನಿಸಿರುವರಲ್ಲದೆ ಶರಣ ಮತ್ತು ಆರಾಧನೆಯ ನಡುವಿನ ವ್ಯತ್ಯಾಸವನ್ನು ಇಲ್ಲಿ ಖಂಡಿಸಿರುವರು

ಬೆಡಗಿನ ವಚನಗಳಿಂದ ಪ್ರಸಿದ್ಧನಾಗಿರುವ ಅಲ್ಲಮಪ್ರಭುವು ಭಕ್ತರಂತೆ ವೇಷ ತೊಟ್ಟಿರುವ ಡಾಂಭಿಕರ ನಡೆವಳಿಕೆಯನ್ನು ತನ್ನ ಈ ವಚನದಲ್ಲಿ ವಿಮರ್ಶಿಸಿದ್ದಾನೆ . ಭಕ್ತಿಯೆಂಬುದು ಶಿವನನ್ನು ಕಾಣಬೇಕೆಂಬ ಉತ್ಕಟವಾದ ಹಸಿವಿನಂತೆ , ಹಸಿವು ಮೇಲ್ನೋಟಕ್ಕೆ ಕಾಣುವುದಿಲ್ಲವಾದರೂ ಹೊಟ್ಟೆಯೊಳಗೆ ಹುಟ್ಟಿ ತಲ್ಲಣಗೊಳಿಸುತ್ತದೆ .

2nd PUC Kannada Vachanagalu Notes

ಹೊಟ್ಟೆ ತುಂಬಾ ಊಟ ಹಾಕಿ ಹೊಟ್ಟೆ ಹಸಿದವನಿಗೆ ತೃಪ್ತಿಪಡಿಸಬೇಕೇ ಹೊರತು , ರುಚಿಯಾದ ಊಟದ ಪೊಟ್ಟಣವನ್ನು ತಂದು ಹಸಿದವನ ಹೊಟ್ಟೆಗೆ ಕಟ್ಟಿದರೆ ಅವನ ಹಸಿವು ಇಂಗುವುದೇ ? ಕಂಡಿತ ಇಂಗಲಾರದು ಹಾಗಾಗಿ.

ಅದರಂತೆಯೇ ಶಿವಲಿಂಗವನ್ನು ಕರಡಿಗೆಯಲ್ಲಿಟ್ಟು , ಶಿವದಾರವನ್ನು ಮೈಮೇಲೆ ಧರಿಸಿದ ಮಾತ್ರಕ್ಕೆ ಅವನು ಶಿವಭಕ್ತನಾಗಿಬಿಡುವನೆ ? ಮಳೆಯ ಮೇಲೆ ಕಲ್ಲು ಬಿದ್ದಿರಲು ಅದು ಶಿವಲಿಂಗ , ಮಳೆಯೇ ಶಿವಭಕ್ತ , ಕಲ್ಲನ್ನು ಎಸೆದಾತ ಗುರು ಎನ್ನಲಾಗದು .

ಭಕ್ತನಲ್ಲದವನ ಮೈಮೇಲಿನ ಶಿವಲಿಂಗವು ಮೆಳೆಯ ಮೇಲೆ ಬಿದ್ದಿರುವ ಕಲ್ಲಿನಂತೆ ಎಂದು ಅಲ್ಲಮಪ್ರಭುವು ವಿಮರ್ಶಿಸಿದ್ದಾನೆ . ದೇವರು ನಿಜವಾದ ಭಕ್ತನ ಅಂತರಂಗದಲ್ಲಿರುತ್ತಾನೆ , ಬಾಹ್ಯ ಪ್ರದರ್ಶನದ ವಸ್ತುಗಳಲ್ಲಲ್ಲ ಎಂಬುದನ್ನು ಅಲ್ಲಮಪ್ರಭುವು ಈ ವಚನದ ಮೂಲಕ ಸಾರಿದ್ದಾನೆ .

2nd puc kannada notes vachanagalu

ಕನ್ನಡ ವಚನಗಳು

ನಾ ದೇವನಲ್ಲದೆ ನೀ ದೇವನೆ ?

ನೀ ದೇವನಾದಡೆ ಎನ್ನನೇಕೆ ಸಲಹೆ ?

ಆರೈದು ಒಂದು ಕುಡಿತೆ ಉದಕವನೆರೆವೆ ,

ಹಸಿದಾಗ ಒಂದು ತುತ್ತು ಓಗರವನಿಕ್ಕುವೆ .

ನಾದೇವ ಕಾಣಾ , ಗುಹೇಶ್ವರಾ .

Vachanagalu in Kannada Notes

ಭಕ್ತಿಪರಂಪರೆಯ ಹಾಗೂ ವಚನಕಾರರು ಕವಿಗಳು ದೇವರನ್ನು ತಮ್ಮ ಹಾಗೆಯೇ ಪರಿಭಾವಿಸಿ ಸಂವಾದಿಸಬಲ್ಲರು , ಜಗಳವಾಡಬಲ್ಲರು , ಸವಾಲು ಎಸೆಯಬಲ್ಲರು . ಈ ವಚನದಲ್ಲಿ ಅಲ್ಲಮನು ಮನುಷ್ಯನನ್ನು ಸಲಹುವವನು ದೇವರು ಎಂಬ ಭಾವನೆಯು ಸುಳ್ಳಾಗುವಂತೆ ಹಸಿವು , ನೀರಡಿಕೆಗಳು ಮನುಷ್ಯನನ್ನು ತಲ್ಲಣಗೊಳಿಸುವುದರಿಂದ ದೇವರಿಗೆ ಸವಾಲು ಹಾಕಿದ್ದಾನೆ .

ಮನುಷ್ಯನಾದ ನಾನೇ ಹಸಿದವನಿಗೆ ತುತ್ತು ಊಟವನ್ನು ಬಾಯಾರಿದವನಿಗೆ ನೀರನ್ನು ಕೊಡಬಲ್ಲೆ . ಹಾಗಾಗಿ ನಿನ್ನ ಹೆಚ್ಚುಗಾರಿಕೆಯೇನೂ ಇಲ್ಲ . ಸಲಹದ ನೀನು ದೇವರಲ್ಲ . ಸಲಹುವ ನಾನೇ ದೇವರು ಎಂದಿದ್ದಾನೆ .

ಇದು ತಾನು ದೇವರಿಗಿಂತ ಶ್ರೇಷ್ಠ ಎಂಬ ಅಹಂ ತೋರಿಸುವುದಿಲ್ಲ . ಬದಲಿಗೆ ಮ ಮೂಲಭೂತ ಸಮಸ್ಯೆಯಾದ ಹಸಿವು , ನೀರಡಿಕೆಗಳನ್ನು ನೀಗಿಸಬೇಕಾದ ಮಹತ್ವವನ್ನು ತಿಳಿಸುತ್ತದೆ . ‘ ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲೆಡೆ ವಸುಧೆಯೊಳಗಾತನೆ ಗಾರುಡಿಗ ರಾಮನಾಥ ‘ ಎನ್ನುವ ದಾಸಿಮಯ್ಯನ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದ .

ಕನ್ನಡ ವಚನಗಳು | Vachanagalu in Kannada Notes Best No1 Notes

ಕನ್ನಡ ವಚನಗಳು | Vachanagalu in Kannada Notes Best No1 Notes
ಕನ್ನಡ ವಚನಗಳು | Vachanagalu in Kannada Notes Best No1 Notes

ಒಂದು ವಾಕ್ಯದಲ್ಲಿ ಉತ್ತರಿಸಿ

ಅಕ್ಕನು ಹೇಳುವ ತೊದರು ಯಾವುದು ?

ಅಕ್ಕನು ರತ್ನದ ಸಂಕೋಲೆಯನ್ನು ತೊಡರು ಎಂದಿದ್ದಾರೆ

ಲೋಕದ ಚೇಷ್ಟೆಗೆ ಬೀಜವಾದುದು ಯಾವುದು

ಲೋಕದ ಚೇಷ್ಟೆಗೆ ರವಿಯು ಬೀಜವಾಗಿದ್ದಾನೆ

ಭವ ಯಾವಾಗ ಕೆಡುವುದು ?

ಆತ್ಮಪರಮಾತ್ಮನಲ್ಲಿ ಲೀನವಾದಾಗ ಭವ ಕೆಡುವುದು

ಸತ್ಯವ ನುಡಿವುದು ಯಾವುದರ ಶೃಂಗಾರವಾಗಬೇಕು ?

ಸತ್ಯವನ್ನು ನುಡಿಯುವುದು ನಾವು ಆಡುವ ಮಾತಿಗೆ ಶೃಂಗಾರವಾಗಬೇಕು

ಅಕ್ಕ ಹೇಳುವ ಬಂಧನ ಯಾವುದು ?

ಅಕ್ಕ ಹೇಳುವ ಬಂಧನ ಮುತ್ತಿನ ಬಲೆ ಎಂಬುದು

ಅಕ್ಕನ ವಚನಗಳ ಅಂಕಿತ ಯಾವುದು ?

ಚೆನ್ನಮಲ್ಲಿಕಾರ್ಜುನ

ಕರಣಂಗಳ ಚೇಷ್ಟೆಗೆ ಬೀಜವಾದುದು ಯಾವುದು ?

ಕರಣಂಗಳ ಚೇಷ್ಟೆಗೆ ಮನವೇ ಬೀಜ

ಕಣ್ಣೆ ಶೃಂಗಾರ ಯಾವುದು

ಗುರುಹಿರಿಯರನ್ನು ನೋಡುವುದೇ ಕಣ್ಣುಗಳಿಗೆ ಶೃಂಗಾರ

ಕಾಲುಗಳನ್ನು ಯಾವುದಕ್ಕೆ ಹೋಲಿಸಲಾಗಿದೆ ?

ಕಾಲುಗಳನ್ನು ದೇಹವೆಂಬ ಬಂಡಿಯ ಗಾಲಿಗಳಿಗೆ ಹೋಲಿಸಲಾಗಿದೆ

ದೇಹವೆಂಬುದು ಏನು ?

ದೇಹವೆಂಬುದು ‘ ತುಂಬಿದ ಬಂಡಿ ‘ ಎಂದಿದ್ದಾರೆ ಅಲ್ಲಮಪ್ರಭು

ಕಟ್ಟೋರಗದ ಮೊಟ್ಟೆಯನ್ನು ಎಲ್ಲಿ ಕಟ್ಟಲಾಗಿದೆ ?

ಕಟ್ಟೋಗರದ ಮೊಟ್ಟೆಯನ್ನು ಹಸಿದವರ ಹೊಟ್ಟೆಯ ಮೇಲೆ ಕಟ್ಟಲಾಗಿದೆ

ಇಟ್ಟ ಕಲ್ಲು ಎಲ್ಲಿ ಸಿಲುಕಿದರೆ ಲಿಂಗವೆಂದು ಕೇಳುತ್ತಾನೆ ?

ಇಟ್ಟ ಕಲ್ಲು ಮಳೆಯ ಮೇಲೆ ಸಿಲುಕಿದಡೆ ಲಿಂಗವೇ ? ಎಂದು ಕೇಳಿದ್ದಾರೆ

ಹಸಿದಾಗ ಏನನ್ನು ನೀಡಬೇಕೆಂದು ಅಲ್ಲಮ ಹೇಳುತ್ತಾನೆ ?

ಹಸಿದಾಗ ಒಂದು ತುತ್ತು ಓಗರ ( ಅನ್ನವನ್ನು ನೀಡಬೇಕೆಂದು ಅಲ್ಲಮ ಹೇಳಿದ್ದಾನೆ

ದಯ ಧರ್ಮದ ಮೊನೆ ಯಾವುದಕ್ಕೆ ಇರುವುದಿಲ್ಲ ?

ದಯ ಧರ್ಮದ ಮೊನೆಯು ಇರಿಯುವ ಆಯುಧಕ್ಕೆ ಇರುವುದಿಲ್ಲ

ತಪವನ್ನು ಘಟ್ಟಿವಾಳಯ್ಯ ಏನೆಂದು ಕರೆಯುತ್ತಾರೆ ?

ಘಟ್ಟಿವಾಳಯ್ಯನವರು ತಪವನ್ನು ಬಂಧನವೆಂದು ಕರೆದಿದ್ದಾರೆ

ನಗೆಗೆ ಈಡಾಗುವುದು ಯಾವುದು ?

ಕಟ್ಟಿನ ವ್ರತದ ಭಾಷೆಯು ನಗೆಗೀಡಾಗುವುದು

ಭಾಷೆಹೀನರ ಕಂಡಾಗ ಏನಾಯಿತು ?

ಭಾಷೆಹೀನರನ್ನು ಕಂಡಾಗ ನಾಚಿಕೆಯಾಯಿತು

ಘಟ್ಟಿವಾಳಯ್ಯನವರ ವಚನಗಳ ಅಂಕಿತ ಯಾವುದು

ಚಿಕ್ಕಯ್ಯಪ್ರಿಯ ಸಿದ್ಧಲಿಂಗ ‘ ಎಂಬುದು ಘಟ್ಟಿವಾಳಯ್ಯನವರ ವಚನಗಳ ಅಂಕಿತ

ಕನ್ನಡ ವಚನಗಳು | Vachanagalu in Kannada Notes Best No1 Notes

ಕನ್ನಡ ವಚನಗಳು | Vachanagalu in Kannada Notes Best No1 Notes
ಕನ್ನಡ ವಚನಗಳು | Vachanagalu in Kannada Notes Best No1 Notes

ಕನ್ನಡ ವಚನಗಳು | Vachanagalu in Kannada Notes Best No1 Notes

2 – 3 ವಾಕ್ಯಗಳಲ್ಲಿ ಉತ್ತರಿಸಿ

ಕೈದು , ಕಾಳೋರಗಗಳಿಗೆ ಏನೇನು ಇರುವುದಿಲ್ಲ ?

ಇರಿವ ಕೈದುವಿಗೆ ದಯಧರ್ಮಗಳಿರುವುದಿಲ್ಲ . ಕಾಳೋರಗದ ದಾಡೆಯಲ್ಲಿ ಅಮೃತದ ಸುಧೆ ಇರುವುದಿಲ್ಲ .

ತಗಹು , ಸೂತಕಗಳು ಯಾವುವು ?

ನೇಮವೆಂಬುದು ತಗಹು ( ಕಟ್ಟುಪಾಡು ) ಮತ್ತು ಶೀಲವೆಂಬುದು ಸೂತಕ ಎಂದು ಘಟ್ಟಿವಾಳಯ್ಯನವರು ಅಭಿಪ್ರಾಯ ಪಟ್ಟಿದ್ದಾರೆ .

ಕಾಲು ಮತ್ತು ದೇಹವನ್ನು ಯಾವುದಕ್ಕೆ ಹೋಲಿಸಲಾಗಿದೆ ?

ದೇಹವನ್ನು ತುಂಬಿದ ಬಂಡಿಗೆ ಹೋಲಿಸಲಾಗಿದೆ ಮತ್ತು ಕಾಲುಗಳನ್ನು ಬಂಡಿಯ ಗಾಲಿಗಳಿಗೆ ಹೋಲಿಸಲಾಗಿದೆ .

ಯಾರನ್ನು ಕಂಡರೆ ಅಲ್ಲಮ ನಾಚುವೆನೆಂದು ಹೇಳುವನು ?

ಆಡಂಬರ ಮತ್ತು ಯಾಂತ್ರಿಕ ಭಕ್ತರನ್ನು ಅಲ್ಲಮಪ್ರಭುವು ವಿಡಂಬಿಸಿದ್ದಾರೆ . ಅಂಗದ ಮೇಲೆ ಲಿಂಗವ ಧರಿಸಿ , ಅಂತರಂಗ ಭಕ್ತಿಯಿಲ್ಲದೆ ಭಕ್ತರಂತೆ ಮೆರೆವವರನ್ನು ಕಂಡರೆ ತಾವು ನಾಚುವುದಾಗಿ ಅಲ್ಲಮಪ್ರಭುವು ಹೇಳುವನು .

ಅಲ್ಲಮ ಏನನ್ನು ನೀಡುವುದರಿಂದ ನಾ ದೇವ ಎಂದು ಹೇಳುತ್ತಾನೆ ?

ದೇಹ ನೀರಡಿಕೆಗೆ ಒಳಗಾದಾಗ ಆರೈದು ಕುಡಿತೆ ಉದಕವನ್ನೆರೆವುದರಿಂದ , ಹಸಿದಾಗ ಒಂದು ತುತ್ತು ಅನ್ನ ( ಓಗರ ) ವನ್ನು ನೀಡಿ ಆರೈಕೆ ಮಾಡುವುದರಿಂದಾಗಿ ‘ ನಾ ದೇವ ‘ ಎಂದು ದೇವರಿಗೆ ಹೇಳಿದ್ದಾನೆ.

ಕೈದು , ಕಾಳೋರಗಗಳಿಗೆ ಏನೇನು ಇರುವುದಿಲ್ಲ ?

ಇರಿವ ಕೈದುವಿಗೆ ದಯಧರ್ಮಗಳಿರುವುದಿಲ್ಲ . ಕಾಳೋರಗದ ದಾಡೆಯಲ್ಲಿ ಅಮೃತದ ಸುಧೆ ಇರುವುದಿಲ್ಲ .

ತಗಹು , ಸೂತಕಗಳು ಯಾವುವು ?

ನೇಮವೆಂಬುದು ತಗಹು ( ಕಟ್ಟುಪಾಡು ) ಮತ್ತು ಶೀಲವೆಂಬುದು ಸೂತಕ ಎಂದು ಘಟ್ಟಿವಾಳಯ್ಯನವರು ಅಭಿಪ್ರಾಯ ಪಟ್ಟಿದ್ದಾರೆ

ರತ್ನ ಮುತ್ತು ಏನನ್ನು ಸೂಚಿಸುತ್ತವೆ ?

ರತ್ನವು ತೊಡರಿನ ಸಂಕೋಲೆಯನ್ನೂ ಮುತ್ತು ಬಲೆಯ ಬಂಧನವನ್ನೂ ಸೂಚಿಸುತ್ತವೆ .

ಲೋಕ ಹಾಗೂ ಕರಣಗಳ ಚೇಷ್ಟೆಗೆ ಬೀಜ ಯಾವುದು ?

ಲೋಕದ ಚೇಷ್ಟೆಗೆ ರವಿಯು ಬೀಜ , ಕರಣಗಳ ಚೇಷ್ಟೆಗೆ ಮನವೇ ಬೀಜ .

ಕಣ್ಣು ಹಾಗೂ ಕರ್ಣಗಳಿಗೆ ಶೃಂಗಾರ ಯಾವುದು ?

ಗುರುಹಿರಿಯರನ್ನು ನೋಡುವುದು ಕಣ್ಣಿಗೆ ಶೃಂಗಾರ , ಪುರಾತನರ ಸಂಗೀತವನ್ನು ಕೇಳುವುದು ಕರ್ಣಕ್ಕೆ ಶೃಂಗಾರ.

ಕನ್ನಡ ವಚನಗಳು | Vachanagalu in Kannada Notes Best No1 Notes

5-6 ವಾಕ್ಯಗಳಲ್ಲಿ ಉತ್ತರಿಸಿ :

ಲೋಕದ ಭಜನೆಯಲ್ಲಿ ಸಿಲುಕಿದವರಿಗೆ ಮುಕ್ತಿಯಿಲ್ಲ ಎಂಬುದನ್ನು ಅಕ್ಕ ಹೇಗೆ ನಿರೂಪಿಸಿದ್ದಾಳೆ ?

ಅಕ್ಕಮಹಾದೇವಿಯು ಮಹಾ ಅನುಭಾವಿಯಾದ ಶಿವಶರಣೆ . ಅವಳು ಲೌಕಿಕದಿಂದ ಬಿಡಿಸಿಕೊಂಡು ಅಲೌಕಿಕದಲ್ಲಿ ಬದುಕಿದವಳು . ಲೋಕದ ಮಾಯೆಯನ್ನು ಅಕ್ಕಮಹಾದೇವಿ ಮುತ್ತು ರತ್ನ , ಚಿನ್ನಗಳಿಗೆ ಹೋಲಿಸಿ , ಅವುಗಳ ಮಾಯೆಗೆ ಸಿಲುಕಿದವರಿಗೆ ಮುಕ್ತಿಯಿಲ್ಲ ಎಂದಿರುವಳು.

ಬೇಡಿಯು ಕಬ್ಬಿಣದಾದ್ದರೇನು , ರತ್ನದ್ದಾದರೇನು ? ಅದು ಬಂಧನವೇ ತಾನೆ ? ಅದೇರೀತಿ ಬಲೆಯು ಮುತ್ತಿನದಾದ ರೇನು , ನೂಲಿನದಾದರೇನು ? ಬಂಧಿಸಿಯೇ ಬಂಧಿಸುತ್ತದೆ . ಚಿನ್ನದ ಕತ್ತಿಯಾದರೇನು ? ಅದರಿಂದ ತಲೆಯನ್ನು ಕತ್ತರಿಸಿದರೆ ಸಾಯದೇ ಉಳಿಯುವುದಿಲ್ಲ .

ಹೀಗೆಯೇ ಜಗದ ಮಾಯೆ ಕೂಡ ನಮ್ಮನ್ನು ಆಕರ್ಷಿಸಿ , ಬಂಧಿಸಿಡುತ್ತದೆ . ಈ ಬಂಧನದಲ್ಲಿ ಸಿಲುಕಿ , ಅದರ ಭಜನೆಯಲ್ಲಿ ತೊಡಗುವವರಿಗೆ ಮುಕ್ತಿ ಸಿಗದು . ಲೌಕಿಕದ ಆಕರ್ಷಣೆ , ಜನನ – ಮರಣಗಳ ಸಂಕೋಲೆಯಿಂದ ಬಿಡಿಸಿಕೊಳ್ಳಬೇಕು . ಆಗ ಮಾತ್ರ ಮುಕ್ತಿ ದೊರಕೀತು ಎಂಬುದು ಅಕ್ಕಮಹಾದೇವಿಯ ಅಭಿಪ್ರಾಯವಾಗಿದೆ.

ಹುಟ್ಟು – ಸಾವನ್ನು ಮೀರುವುದು ಹೇಗೆಂದು ಅಕ್ಕಮಹಾದೇವಿ ತನ್ನ ವಚನದಲ್ಲಿ ವಿವರಿಸಿದ್ದಾಳೆ ?

ಅಕ್ಕಮಹಾದೇವಿ ಒಬ್ಬ ಅನುಭಾವಿ ಕವಯಿತ್ರಿ . ಹುಟ್ಟು – ಸಾವು , ಜಗದ ಜಂಜಡಗಳಿಂದ ಬಿಡಿಸಿಕೊಳ್ಳದಿದ್ದರೆ ಅಲೌಕಿಕ ವಾದ ಆನಂದ ದೊರೆಯದೆಂಬುದನ್ನು ಪ್ರತಿಪಾದಿಸಿದಳು . ಅವಳ ಅಭಿಪ್ರಾಯದಲ್ಲಿ ನಮ್ಮ ಎಲ್ಲ ಆಸೆ , ಆಕಾಂಕ್ಷೆ , ಮಾಯೆ , ಸೆಳೆತ , ಆಕರ್ಷಣೆಗಳಿಗೆ ನಮ್ಮಮನಸ್ಸೆ ಮೂಲಕಾರಣ .

ಮನಸ್ಸನ್ನು ಈ ಸೆಳೆತದಲ್ಲಿ ಹರಿಯಬಿಡಬಹುದು ಅಥವಾ ನಿಯಂತ್ರಿಸಿಕೊಂಡು ಅವುಗಳಿಂದ ಬಿಡಿಸಿಕೊಳ್ಳಬಹುದು . ಎಲ್ಲವೂ ನಮ್ಮ ಕೈಯಲ್ಲಿದೆ .

ಇರುವ ಒಂದು ಮನಸ್ಸನ್ನು ದೇವರಲ್ಲಿ ನೆಲೆಗೊಳಿಸಿಕೊಂಡರೆ ಉಳಿದೆಲ್ಲ ಮಾಯೆಯಿಂದ ಪಾರಾದಂತೆ , ದೇವನಲ್ಲಿ ಮನವನ್ನು ಅಥವಾ ಆತ್ಮವನ್ನು ಲೀನಗೊಳಿಸಿಕೊಂಡವನು ಭವವನ್ನು ಜಯಿಸಿದಂತೆ ಎಂಬುದು ಮಹಾದೇವಿಯಕ್ಕನ ಅಭಿಪ್ರಾಯವಾಗಿದೆ . ಅವಳು ಸ್ವತಃ ಚೆನ್ನಮಲ್ಲಿಕಾರ್ಜುನನಲ್ಲಿ ಮನಸ್ಸನ್ನು ನೆಲೆಗೊಳಿಸಿ ಭವವನ್ನು ಜಯಿಸಿದವಳು .

ಆದ್ದರಿಂದ ಹುಟ್ಟು – ಸಾವನ್ನು ಗೆಲ್ಲಲು ಪರಮಾತ್ಮನಲ್ಲಿ ಮನವನ್ನು ಲೀನಗೊಳಿಸುವುದೇ ಸುಲಭ ಮಾರ್ಗವೆಂದು ಸ್ವಾನುಭವದಿಂದ ವಿವರಿಸಿದ್ದಾಳೆ .

ಕನ್ನಡ ವಚನಗಳು | Vachanagalu in Kannada Notes Best No1 Notes

ಬದುಕು ಸಾರ್ಥಕವಾಗಬೇಕಾದರೆ ಯಾವ ಅಂಶಗಳು ಇರಬೇಕೆಂದು ಅಕ್ಕಮಹಾದೇವಿ ಹೇಳುತ್ತಾಳೆ ?

ಅಕ್ಕಮಹಾದೇವಿಯು ಬದುಕಿನ ಸಾರ್ಥಕತೆಯನ್ನು ತನ್ನ ವಚನವೊಂದರಲ್ಲಿ ಸೊಗಸಾಗಿ ವಿವರಿಸಿರುವಳು . ಅವಳ ಅಭಿಪ್ರಾಯದಂತೆ ಗುರುಹಿರಿಯರನ್ನು ನೋಡುವುದೇ ಕಣ್ಣಿಗೆ ಭೂಷಣ . ಹಿಂದಿನವರ ಸಂಗೀತವನ್ನು ಕೇಳುವುದು ಕಿವಿಗೆ ಅಲಂಕಾರ .

ನಮ್ಮ ಮಾತು ಮೌಲ್ಯಯುತವೆನಿಸಿಕೊಳ್ಳಬೇಕಾದರೆ ಸದಾ ಸತ್ಯವನ್ನೇ ನುಡಿಯಬೇಕು , ಸುಳ್ಳಾಡಬಾರದು . ಇನ್ನೊಬ್ಬರೊಂದಿಗೆ ಸಂಭಾಷಿಸುವಾಗ ಸದ್ಭಕ್ತರ ನುಡಿಗಳನ್ನು ಉಲ್ಲೇಖಿಸಬೇಕು , ಚರ್ಚಿಸಬೇಕು . ಹಾಗೆಯೇ ನಾವು ಮಾಡುವ ದಾನ ಶ್ರೇಷ್ಠವೆನಿಸಿಕೊಳ್ಳಬೇಕಾದರೆ ಸತ್ಪಾತ್ರರಿಗೆ , ಅರ್ಹರಿಗೆ ದಾನ ಮಾಡಬೇಕು .

ಅದು ಕೊಡುವ ಕೈಗೆ ಭೂಷಣ . ಶಿವಶರಣರ ಸಮೂಹದೊಡನೆ ಜೀವಿಸುವುದರಿಂದ ಜೀವನಕ್ಕೆ ಅರ್ಥ ಲಭಿಸುತ್ತದೆ . ಈ ರೀತಿಯಲ್ಲದವನ ಬದುಕಿನಿಂದ ಯಾವ ಉಪಯೋಗವೂ ಇಲ್ಲ . ಬದುಕು ಸಾರ್ಥಕಗೊಳ್ಳಬೇಕಾದರೆ ಈ ಮೇಲೆ ಹೇಳಿದ ರೀತಿಯಲ್ಲಿ ಬದುಕನ್ನು ನಡೆಸುವುದು ಅವಶ್ಯ ಎಂಬುದು ಅಕ್ಕಮಹಾದೇವಿಯ ಅಭಿಪ್ರಾಯವಾಗಿದೆ .

ಕನ್ನಡ ವಚನಗಳು | Vachanagalu in Kannada Notes Best No1 Notes

ಇತರೆ ಪ್ರಮುಖ ಮಾಹಿತಿ

Download PDF Book Click Here

Leave a Reply

Your email address will not be published. Required fields are marked *