S Nijalingappa Information In Kannada, ಎಸ್ ನಿಜಲಿಂಗಪ್ಪ ಜೀವನ ಚರಿತ್ರೆ, s nijalingappa biography in kannada, ಎಸ್ ನಿಜಲಿಂಗಪ್ಪ ಅವರ ಮಾಹಿತಿ,
S Nijalingappa Information In Kannada
ಎಸ್ ನಿಜಲಿಂಗಪ್ಪ ಅವರ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು>

ಎಸ್ ನಿಜಲಿಂಗಪ್ಪ ಅವರ ಬಗ್ಗೆ

ಸಿದ್ದವನಹಳ್ಳಿ ನಿಜಲಿಂಗಪ್ಪ ಅವರು ಭಾರತೀಯ ಸ್ವಾತಂತ್ರ್ಯ ಕಾರ್ಯಕರ್ತ, ಕಾಂಗ್ರೆಸ್ ಪಕ್ಷದ ರಾಜಕಾರಣಿ ಮತ್ತು ವಕೀಲರಾಗಿದ್ದರು, ಅವರು 1956 ಮತ್ತು 1958 ರ ನಡುವೆ ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು ಮತ್ತು ಮತ್ತೊಮ್ಮೆ 1962 ರಿಂದ 1968 ರವರೆಗೆ ಅವರು ಕರ್ನಾಟಕ ರಾಜ್ಯದ 4 ನೇ ಮುಖ್ಯಮಂತ್ರಿಯಾಗಿದ್ದರು.
S Nijalingappa In Kannada

ಸಿದ್ಧ ವನಹಳ್ಳಿ ನಿಜಲಿಂಗಪ್ಪ ನವರು ಸಿದ್ಧವನಹಳ್ಳಿ ನಿಜಲಿಂಗಪ್ಪ ಅವರು ಹುಟ್ಟಿದ್ದು ಡಿಸೆಂಬರ್ 10 -1902.ಬಳ್ಳಾರಿ ಜಿಲ್ಲೆಯ ಒಂದು ಹಳ್ಳಿ
ಬಾಲ್ಯ ಜೀವನ
ಚಿಕ್ಕಂದಿನಿಂದಲೇ ಪಾಲಕರನ್ನು ಕಳೆದುಕೊಂಡು ತಮ್ಮ ತಾಯಿಯ ಸಹೋದರಿಯ ಮನೆ ಆದಂತಹ ಚಿತ್ರದುರ್ಗದಲ್ಲಿ ಬೆಳೆದರು.
ಶಿಕ್ಷಣ
ತಮ್ಮ ಪದವಿಯನ್ನ ಮುಗಿಸಿ, ಕಾನೂನು ಪದವಿ ಮುಗಿಸಿದ್ದಾರೆ
ವೃತ್ತಿ
ನ್ಯಾಯವಾದಿ ಯಾಗಿ ವೃತ್ತಿಯನ್ನ ಆರಂಭಿಸಿದ್ದಾರೆ
1936ರಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಒಬ್ಬ ವೀಕ್ಷಕನಾಗಿ ಭಾಗವಹಿಸಿ ರಾಜಕೀಯದ ಅಭಿರುಚಿಯನ್ನು ಬೆಳೆಸಿ ಕೊಳ್ತಾರೆ. ಆಮೇಲೆ ಅಂದಿನ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ 1946ರಿಂದ 1950 ರವರೆಗೆ ಅಂದಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ.
ಆನಂತರ ಅವರು 1952ರಲ್ಲಿ ಭಾರತ ಗಣರಾಜ್ಯ ವಾಗಿ ಘೋಷಣೆ ಆದ ಹೊಸದರಲ್ಲಿ ಚಿತ್ರದುರ್ಗ ಕ್ಷೇತ್ರ ದಿಂದ ಸಂಸದರಾಗಿಯೂ ಕೂಡ ಕೆಲಸ ಮಾಡ್ತಾರೆ.
ಮುಂದೆ 1958 ರ ಅವಧಿಗೆ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿ 62 ರಿಂದ 68 ರವರೆಗೆ ಮತ್ತೊಂದು ಅವಧಿಗೆ ಕರ್ನಾಟಕದ ಮುಖ್ಯಮಂತ್ರಿ ಗಳಾಗುತ್ತಾರೆ.
ಎಸ್ ನಿಜಲಿಂಗಪ್ಪ ಜೀವನ ಚರಿತ್ರೆ

ಕರ್ನಾಟಕ ಏಕೀಕರಣದ ರೂವಾರಿ ಸ್ವತಂತ್ರ ಹೋರಾಟಗಾರ ಆಗಿರತಕ್ಕಂತ ನಿಜಲಿಂಗಪ್ಪ ನವರು ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಅನ್ನೋದಕ್ಕೆ ಭಾಜನರು ಕೂಡ ಆಗ್ತಾರೆ.
ಅವರ ಮುಖ್ಯ ಮಂತ್ರಿ ತ್ವದ ಅವಧಿಯಲ್ಲಿ ಕರ್ನಾಟಕದಲ್ಲಿ. ಕೈಗಾರಿಕೆ, ಕೃಷಿ, ನೀರಾವರಿ, ಮತ್ತು ಸಾರಿಗೆ ಕ್ಷೇತ್ರ ಗಳಲ್ಲಿ ಅಭೂತಪೂರ್ವ ವಾದ ಸಾಧನೆಯನ್ನು ಅವರು ಮಾಡಿದ್ದಾರೆ. ಅವರ ಪಕ್ಷ ನಿಷ್ಠೆ ಮತ್ತು ದಕ್ಷ ಆಡಳಿತವನ್ನು ಪರಿಗಣಿಸಿ ಕೇಂದ್ರ ಕಾಂಗ್ರೆಸ್ ಹೈ ಕಮಾಂಡ್ ಅವರನ್ನ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತದೆ. ಬಹುಶಃ ಭಾರತದ ಇತಿಹಾಸದಲ್ಲಿ ಕನ್ನಡಿಗನೊಬ್ಬ ಶತಮಾನ ಕಂಡ ಪಕ್ಷದ ರಾಷ್ಟ್ರಮಟ್ಟದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದಂತಹ ಅವಕಾಶ ನಿಜಲಿಂಗಪ್ಪ ಅವರಿಗೆ ಸಿಗುತ್ತದೆ.
ಅವರು ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ನಲ್ಲಿ ದೊಡ್ಡ ಮಟ್ಟದ ವಿಪ್ಲವ ಆರಂಭವಾಗುತ್ತದೆ.
ಇಂದ್ರ ವಿರೋಧಿ ಅಲೆ, ಮತ್ತು ಇಂದ್ರ ಭಟ್ಟಂಗಿಗಳ ಒಂದು ಗುಂಪು. ಕೊನೆಗೆ 1969 ರಲ್ಲಿ ಐತಿಹಾಸಿಕ ಕಾಂಗ್ರೆಸ್ ಪಕ್ಷ ಪ್ರಥಮ ಬಾರಿಗೆ ವಿಭಜನೆ ಗೊಳ್ಳುತ್ತದೆ 67 ಮತ್ತು 68 ಎರಡು ಅವಧಿಗೆ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷತೆಯನ್ನು ವಹಿಸುತ್ತಾರೆ
ಕಾಂಗ್ರೆಸ್ ವಿಭಜನೆಯಾದ ಮೇಲೆ ಕಾಂಗ್ರೆಸ್ ಆರ್ ಮತ್ತು ಕಾಂಗ್ರೆಸ್ ಓ ಅಂತ ಕಾಂಗ್ರೆಸ್ ಆರ್ ಅಂದ್ರೆ ಇಂದ್ರಾ ಮುಖಂಡತ್ವ ಕಾಂಗ್ರೆಸ್ ಓ ಅಂದ್ರೆ ನಿಜಲಿಂಗಪ್ಪ ನವರು ಮುರಾರ್ಜಿ ದೇಸಾಯಿ ಅವರು ನೀಲಂ ಸಂಜೀವ್ ರೆಡ್ಡಿ ಅವರು ಮತ್ತು ಕಾಮರಾಜರು ಎಲ್ಲಾ ಘಟಾನುಘಟಿ ನಾಯಕರು.
ಇಂದ್ರನ ಕಾಂಗ್ರೆಸ್ ನಿಂದ ಹೊರಹಾಕಿ ಕಾಂಗ್ರೆಸ್ ವಿಭಜನೆಗೆ ಕಾರಣರಾಗುತ್ತಾರೆ ಆದರೆ ದುರದೃಷ್ಟ ಯಾವೆಲ್ಲ ಘಟಾನುಘಟಿ ನಾಯಕರು ಇಂದಿರಾರನ್ನು ಕಾಂಗ್ರೆಸ್ ನಿಂದ ಹೊರ ಹಾಕಿದ್ರು ಅವರಷ್ಟೇ ಉಳಿದುಕೊಳ್ತಾರೆ. ಜನ ಮತ್ತು ಉಳಿದ ಭಟ್ಟಂಗಿಗಳ ಇಂದಿರಾಗಾಂಧಿ ಹತ್ರ ಹೋಗುತ್ತಾರೆ.

s nijalingappa biography in kannada
69 ರ ನಂತರ ನಿಜಲಿಂಗಪ್ಪ ನವರು ರಾಜಕೀಯ ದಿಂದ ಕ್ರಮೇಣವಾಗಿ ನಿವೃತ್ತಿಗೆ ಹೋಗ್ತಾರೆ
ನಿಜಲಿಂಗಪ್ಪ ಎಷ್ಟೊಂದು ಸರಳ ವ್ಯಕ್ತಿಯಾಗಿದ್ದರು ಅಂದ್ರೆ ಅವರು ತಮ್ಮ ವಕೀಲ ವೃತ್ತಿಯಿಂದ ಗಳಿಸಿದಂತಹ ಒಂದು ಮನೆಯನ್ನ ಬಿಟ್ರೆ ಚಿತ್ರದುರ್ಗದಲ್ಲಿ ಬೆಂಗಳೂರಲ್ಲಿ ಅವರಿಗೆ ಯಾವುದೇ ಆಸ್ತಿ ಇರಲಿಲ್ಲ.
ಅವರ ಕೊನೆಗಾಲದಲ್ಲೂ ಕೂಡ ಅವರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ತಗೋತಾರೆ ಬೆಂಗಳೂರಿಗೆ ಅವರಿಗೆ ಮನೆ ಇರುವುದಿಲ್ಲ.
ಅವರ ಅಂತ್ಯಸಂಸ್ಕಾರ ಕೂಡ ಚಿತ್ರದುರ್ಗದಲ್ಲಿ ಆಗುತ್ತದೆ ಇಂತಹ ಒಬ್ಬ ಸರಳ ನಾಯಕ ರಾಷ್ಟ್ರ ಮಟ್ಟದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಮಾಡಿದವರು ಇಂತವರ ಬಗ್ಗೆ ಇಂದಿನ ತಲೆಮಾರಿನ ಜನ ನಾವು ತಿಳ್ಕೋ ಬೇಕಾಗಿದೆ.
FAQ
ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು?
ನಿಜಲಿಂಗಪ್ಪ
ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ?
ನಿಜಲಿಂಗಪ್ಪ
ಇತರೆ ಪ್ರಬಂಧಗಳನ್ನು ಓದಿ
ಮಹಾತ್ಮ ಗಾಂಧಿ ಜೀವನ ಚರಿತ್ರೆ ಕನ್ನಡ ಪ್ರಬಂಧ Gandhiji Information in Kannada
ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ