ಸ್ವಚ್ಛ ಭಾರತ ಅಭಿಯಾನ ಪ್ರಬಂಧ | Swachh Bharat Abhiyan Essay in Kannada

ಸ್ವಚ್ಛ ಭಾರತ ಅಭಿಯಾನ ಪ್ರಬಂಧ | Swachh Bharat Abhiyan Essay in Kannada

ಸ್ವಚ್ಛ ಭಾರತ ಅಭಿಯಾನ ಪ್ರಬಂಧ, Swachh Bharat Abhiyan, Swachh Bharat Mission information In kannada Essay, Swachata Essay in Kannada, Swachh Bharat Abhiyan Essay in Kannada, ಸ್ವಚ್ಛ ಭಾರತ ಅಭಿಯಾನ ಬಗ್ಗೆ ಪ್ರಬಂಧ, Swachh Bharat Abhiyan in Kannada Prabandha, ಸ್ವಚ್ಛ ಭಾರತ ಕನ್ನಡ ಪ್ರಬಂಧ Essay On Swachh Bharat Abhiyana in Kannada

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಸ್ವಚ್ಛ ಭಾರತ ಅಭಿಯಾನದ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸ್ಪಧಾತ್ಮಕ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ ಉಪಯುಕ್ತ ಆಗುವಂತೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಇದು ಸಂಪೂರ್ಣ ಉಚಿತವಾಗಿದ್ದು ಇತರ ವಿದ್ಯಾರ್ಥಿಗಳಿಗೂ ಉಪಯುಕ್ತ ಎಂದಾದರೆ ತಪ್ಪದೆ ಶೇರ್ ಮಾಡಿ ಹಾಗೂ ನ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ.

ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಕನ್ನಡದಲ್ಲಿ ಪ್ರಬಂಧ

Spardhavani Telegram

ಪೀಠಿಕೆ:

ಗಾಂಧೀಜಿಯವರ ಮಹಾತ್ವಾಕಾಂಕ್ಷೆಯ ಕನಸು ಸ್ವಚ್ಛಭಾರತ . ಅದನ್ನು ನೆರವೇರಿಸಲು ನಮ್ಮ ದೇಶದ ಈಗಿನ ಪ್ರಧಾನಿ ನರೇಂದ್ರಮೋದಿಯವರು ಯೋಚಿಸಿ , ಈ ಶುಭ ಸಮಯದಲ್ಲಿ ಗಾಂಧಿ ಕನಸಾದ ನಿರ್ಮಲ ಭಾರತವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಭಿಯಾನಕ್ಕೆ ಗಾಂಧೀಜಿಯವರ 145 ನೇ ಹುಟ್ಟುಹಬ್ಬದ ದಿನದಂದು ( ಗಾಂಧೀಜಯಂತಿ ) ಅಕ್ಟೋಬರ್ 2 ರಂದು ಚಾಲನೆ ನೀಡಿದರು .

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಸ್ವಚ್ಛ ಭಾರತ ಅಭಿಯಾನ ಪ್ರಬಂಧ
ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಅದರಲ್ಲಿ ಸುಮಾರು 3 ಲಕ್ಷಕ್ಕಿಂತಲೂ ಅಧಿಕ ಕೇಂದ್ರ ಸರರ್ಕಾರದ ನೌಕರರು ಭಾಗವಹಿಸಿದ್ದರು . ಎಲ್ಲರೂ ಭಾರತದ ಸ್ವಚ್ಛತೆ ಕಾಪಾಡುವುದಾಗಿ ಪಣ ತೊಟ್ಟಿರುತ್ತಾರೆ . ಅಭಿಯಾನದ ಪ್ರತಿಯೊಂದು ಹಂತದಲ್ಲೂ ಕೇಂದ್ರ ಹಾಗೂ ರಾಜ್ಯ ಸರಕಾರಿ ನೌಕರರ ಜತೆಗೆ ಎನ್‌ಜಿಒಗಳು , ಶೈಕ್ಷಣಿಕ ಹಾಗೂ ಆರೋಗ್ಯ ಸಂಸ್ಥೆಗಳು , ಪಟ್ಟಣ , ಪುರಸಭೆ , ನಗರಸಭೆ ಮಹಾನಗರ ಪಾಲಿಕೆಗಳು , ಸ್ವಯಂ ಸೇವಾ ಸಂಸ್ಥೆಗಳು , ಯುವ ಸಂಘಸಂಸ್ಥೆಗಳು , ಮಾರುಕಟ್ಟೆ ಒಕ್ಕೂಟಗಳು , ಕೈಗಾರಿಕೆ ಹಾಗೂ ವಾಣಿಜ್ಯ ಸಂಘ ಸಂಸ್ಥೆಗಳು ಪಾಲ್ಗೊಳ್ಳುವುದು ಬಹಳ ಮುಖ್ಯವಾಗಿದೆ .

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಇದರಿಂದ ನಾವು ಭಾರತವನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು . ಸ್ವಚ್ಛ ಭಾರತದ ಅರ್ಥ ಎಲ್ಲರಿಗೂ ತಿಳಿದೇ ಇದೆ . ನಾವು ಮನೆಯ ಸುತ್ತಮುತ್ತಲಿನ ಪರಿಸರ , ಸರಕಾರಿ ಕಚೇರಿ , ಶಾಲೆ , ಆಸ್ಪತ್ರೆ , ರಸ್ತೆ , ಮಾರುಕಟ್ಟೆ , ಬಸ್ ಹಾಗೂ ರೈಲ್ವೆ ನಿಲ್ದಾಣ , ಉದ್ಯಾನವನ , ಸ್ಮಾರಕಗಳು ಹೀಗೆ ಅನೇಕ ಸಾರ್ವಜನಿಕ ಸ್ವತ್ತುಗಳಲ್ಲಿ ಶುಚಿತ್ವ ಕಾಪಾಡುವುದು .

ಮಲಿನಯುಕ್ತ ನದಿ ಹಾಗೂ ಕೆರೆಗಳನ್ನು ಶುದ್ದೀಕರಿಸುವುದು ಸೇರಿದಂತೆ ಅನೇಕ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಇಲಾಖೆಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ . ಅದಲ್ಲದೆ ತಮ್ಮ ಕಛೇರಿಯ ಸುತ್ತ ಇರುವಂತಹ ಕಸ , ಕಟ್ಟಡ ತ್ಯಾಜ್ಯ , ಅನುಪಯುಕ್ತ ವಾಹನಗಳು ಹಾಗೂ ಇತರೆ ವಸ್ತುಗಳನ್ನು ವಿಲೇವಾರಿ ಮಾಡುವಂತೆಯೂ ಸೂಚಿಸಲಾಗಿದೆ

ಸ್ವಚ್ಛ ಭಾರತ ಅಭಿಯಾನ ಪ್ರಬಂಧ | Swachh Bharat Abhiyan Essay in Kannada
ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಶುಚಿತ್ವದ ಬಗ್ಗೆ ಮಕ್ಕಳಿಗೆ ಪ್ರೇರಣೆ ನೀಡುವ ಸಲುವಾಗಿ ಸ್ವಚ್ಛಭಾರತ – ಸ್ವಚ್ಛವಿದ್ಯಾಲಯ ಎಂಬ ಕೈಪಿಡಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ . ಶಾಲೆಯ ಶೌಚಾಲಯ , ಕೊಠಡಿಗಳು , ಕುಡಿಯುವ ನೀರಿನ ಸ್ಥಳ -ಒಳಾಂಗಣ ಆವರಣ ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಹೇಗೆ ಸ್ವಚ್ಛವಾಗಿರಿಸಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಈ ಕೈಪಿಡಿಯಲ್ಲಿದೆ .

ಸ್ವಚ್ಛಭಾರತ ಫಲಿತಾಂಶವನ್ನು ಪಡೆಯಲು ಎಲ್ಲರೂ ವಾರಕ್ಕೆ 2 ಗಂಟೆಯಷ್ಟು ಸಮಯವನ್ನು ಮೀಸಲಿಟ್ಟರ ವರ್ಷದೊಳಗೆ ಅದ್ಭುತ ಫಲಿತಾಂಶವನ್ನು ಕಾಣಬಹುದಾಗಿದೆ . ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಕನಸಿನ ಸ್ವಚ್ಛಭಾರತ ಅಭಿಯಾನದ ಪಟ್ಟಿಯಲ್ಲಿ ಸಾಂಸ್ಕೃಕ ನಗರಿ ಮೈಸೂರು ಮೊದಲ ಸ್ಥಾನದಲ್ಲಿದೆ . ದೇಶದ 476 ನಗರಗಳ ಪೈಕಿ ಕರ್ನಾಟಕದ 4 ನಗರಗಳು ಟಾಪ್ 10 ಪಟ್ಟಿಯಲ್ಲಿವೆ .

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಸ್ವಚ್ಛ ಭಾರತ ಅಭಿಯಾನ ಪ್ರಬಂಧ
ಸ್ವಚ್ಛ ಭಾರತ ಅಭಿಯಾನ ಪ್ರಬಂಧ

2014-15 ನೇ ಸಾಲಿನಲ್ಲಿ ಶೌಚಾಲಯ ನಿರ್ಮಾಣ , ಕಸ ವಿಲೇವಾರಿ ಕುಡಿಯುವ ನೀರಿನ ಲಭ್ಯತೆ ಅಂತರ್ಜಲದ ಲಭ್ಯತೆ , ಮುಂತಾದ ಅಂಶಗಳ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿದೆ . ದಕ್ಷಿಣ ಭಾರತದ 39 ನಗರಗಳು ಟಾಪ್ 100 ರಲ್ಲಿ ಸ್ಥಾನಪಡೆಯುವಲ್ಲಿ ಯಶಸ್ವಿಯಾಗಿದೆ .

ದೇಶದ ರಾಜಧಾನಿಗಳ ಪಟ್ಟಿಯಲ್ಲಿ ಬೆಂಗಳೂರು 7 ನೇ ಸ್ಥಾನದಲ್ಲಿದೆ . ಎಲ್ಲರೂ ಮನೆಯ ಮುಂದಿನ ಕಸ ವಿಲೇವಾರಿ ಮಾಡಿ ಮನೆಯ ಮುಂದೆ ಹಾಗೂ ಮನೆಯ ಒಳಗೆ ಸ್ವಚ್ಛವಾಗಿಟ್ಟುಕೊಂಡರೆ ಇಡೀ ನಾಡೇ ಸುಂದರವಾಗಿ ಮಾರ್ಪಡುತ್ತದೆ .

ಸ್ವಚ್ಛತಾ ಅಭಿಯಾನದ ಪ್ರಯೋಜನಗಳು

ಸರ್ಕಾರ ನಡೆಸುತ್ತಿರುವ ಈ ಅಭಿಯಾನದಿಂದ ಜನರು ಸ್ವಚ್ಛತೆಯ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಸ್ವಚ್ಛತೆ ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಸ್ವಚ್ಛತೆಯಿಂದ ನಾವು ಅನೇಕ ಪ್ರಯೋಜನಗಳನ್ನು ಪಡೆದುಕೊಂಡಿದ್ದೇವೆ-

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

  1. ನಾವು ಇಂದು ಸ್ವಚ್ಛ ಪರಿಸರದಲ್ಲಿ ಬದುಕುತ್ತಿದ್ದೇವೆ. ಎಲ್ಲೆಡೆ ಸ್ವಚ್ಛತೆಯಿಂದಾಗಿ ನಮ್ಮ ಪರಿಸರ ಅತ್ಯಂತ ಸ್ವಚ್ಛವಾಗುತ್ತಿದೆ.
  2. ಶುಚಿತ್ವದಿಂದ ರೋಗ ಹರಡುವುದು ಕಡಿಮೆಯಾಗಿ ಜನರು ಆರೋಗ್ಯವಂತರಾಗುತ್ತಿದ್ದಾರೆ ಕೊಳೆಯಾಗಲಿ, ರೋಗವಾಗಲಿ ಇರುವುದಿಲ್ಲ.
  3. ಸುತ್ತಲೂ ಕಸ ಇಲ್ಲದಿದ್ದಾಗ ಎಲ್ಲವೂ ತುಂಬಾ ಸುಂದರವಾಗಿ ಕಾಣುತ್ತದೆ.
ಸ್ವಚ್ಛತೆಗಾಗಿ ತೆಗೆದುಕೊಂಡ ಕ್ರಮಗಳು

ಇಡೀ ದೇಶವನ್ನು ಸ್ವಚ್ಛಗೊಳಿಸುವುದು ಯಾವುದೇ ಒಬ್ಬ ವ್ಯಕ್ತಿಯ ಜವಾಬ್ದಾರಿಯಲ್ಲ, ಅಥವಾ ಸರ್ಕಾರ ಮಾತ್ರ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಈ ಕೆಲಸವನ್ನು ನಾವೆಲ್ಲರೂ ಒಟ್ಟಾಗಿ ಮಾಡಬೇಕು. ಇದಕ್ಕಾಗಿ ಸರ್ಕಾರವೂ ಹಲವು ಕೆಲಸಗಳನ್ನು ಮಾಡಿದೆ.

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

  1. ಸರ್ಕಾರವು ಬಯಲು ಶೌಚವನ್ನು ನಿಷೇಧಿಸಿದೆ ಮತ್ತು ಬಯಲು ಶೌಚದಲ್ಲಿ ನೊಣಗಳು ಕುಳಿತುಕೊಳ್ಳದಂತೆ ಮತ್ತು ರೋಗ ಹರಡದಂತೆ ಅನೇಕ ಶೌಚಾಲಯಗಳನ್ನು ನಿರ್ಮಿಸಿದೆ.
  2. ರಸ್ತೆಗಳನ್ನು ಸರಿಯಾಗಿ ಸ್ವಚ್ಛಗೊಳಿಸುವ ಸಲುವಾಗಿ, ಸ್ವಚ್ಛತೆಗಾಗಿ ನಿಯಮಿತವಾಗಿ ಬರುವ ನೈರ್ಮಲ್ಯ ಕಾರ್ಯಕರ್ತರನ್ನು ನೇಮಿಸಲಾಗಿದೆ.
  3. ವಿವಿಧೆಡೆ ಡಸ್ಟ್‌ಬಿನ್‌ಗಳನ್ನು ಹಾಕಲಾಗುತ್ತದೆ ಮತ್ತು ಕಸವನ್ನು ಮನೆ ಮತ್ತು ಅಂಗಡಿಗಳಿಗೆ ತರಲು ವಾಹನಗಳನ್ನು ಕಳುಹಿಸಲಾಗುತ್ತದೆ. ವಿವಿಧ ರೀತಿಯ ಕಸಕ್ಕಾಗಿ ವಿವಿಧ ಬಣ್ಣದ ಕಸದ ತೊಟ್ಟಿಗಳನ್ನು ಇಡಲಾಗಿದೆ.
  4. ಸ್ಥಳದಿಂದ ಸ್ಥಳಕ್ಕೆ ಅನೇಕ ತಂಡಗಳಿಂದ ಶಿಬಿರಗಳನ್ನು ಸಹ ಆಯೋಜಿಸಲಾಗಿದೆ.
ಸ್ವಚ್ಛ ಭಾರತ ಅಭಿಯಾನ ಪ್ರಬಂಧ | Swachh Bharat Abhiyan Essay in Kannada
Swachh Bharat Abhiyan prabandha in Kannada

FAQ

ಸ್ವಚ್ಛ ಭಾರತ ಅಭಿಯಾನ ಪ್ರಾಂಭವಾದ ವರ್ಷ ?

2015-2016

ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸಿದ ಪ್ರಧಾನಿ ?

ನರೇಂದ್ರ ಮೋದಿ

ಇವುಗಳನ್ನು ಓದಿ

ರಾಷ್ಟ್ರಧ್ವಜದ ಬಗ್ಗೆ ಪ್ರಬಂಧ

ನಮ್ಮ ದೇಶ ಭಾರತ

ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಹೀಗಿರಲಿ

ಸ್ವಾತಂತ್ರ್ಯ ದಿನಾಚರಣೆಗೆ ಸಂಬಂದಿಸಿದ ಪ್ರಶ್ನೋತ್ತರಗಳು

Leave a Reply

Your email address will not be published. Required fields are marked *