ಹಲುಬಿದಳ್ ಕಲ್ಮರಂ ಕರಗುವಂತೆ notes | Halubidal Kalmaram Karaguvante

ಹಲುಬಿದಳ್ ಕಲ್ಮರಂ ಕರಗುವಂತೆ notes | Halubidal Kalmaram Karaguvante

ಹಲುಬಿದಳ್ ಕಲ್ಮರಂ ಕರಗುವಂತೆ notes, Halubidal Kalmaram Karaguvante, Chapter 4 Questions and Answers Pdf, Notes, saramsha, Summary, ಪ್ರಥಮ ಪಿ.ಯು.ಸಿ ಕನ್ನಡ ಹಲುಬಿದಳ್‌ ಕಲ್ಮರಂ ಕರಗುವಂತೆ ನೋಟ್ಸ್ ಪ್ರಶ್ನೋತ್ತರಗಳು, 1st PUC Halubidal Kalmaram Karaguvante Kannada Notes Question Answer Summary Mcq Pdf Download in Kannada Medium Karnataka State Syllabus , Kseeb Solutions For Class 11 Kannada Poem 4 Notes 1st Puc Kannada 4th Poem Notes Halubidal Kalmaram Karaguvante Lesson Summary in Kannada halubidal kalmaram karaguvante kannada saramsha1st PUC Kannada

Halubidal Kalmaram Karaguvante Notes

Spardhavani Telegram

ಕವಿ ಪರಿಚಯ Halubidal Kalmaram Karaguvante Notes

ಜೈಮಿನಿ ಭಾರತ’ವೆಂಬ ಅಪೂರ್ವ ಕೃತಿಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿರುವ ಮಹಾಕವಿ ಲಕ್ಷ್ಮೀಶನು ( ಕ್ರಿ.ಶ. 1550 ) ಕನ್ನಡ ಸಾಹಿತ್ಯ ಪರ೦ಪರೆಯ ಮಹತ್ವದ ಕವಿ .

ಜನ್ಮಸ್ಥಳ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿರುವ ‘ ದೇವನೂರು ‘

ಲಕ್ಷ್ಮೀಶನ ನಿಜವಾದ ಹೆಸರು : ಲಕ್ಷ್ಮೀಕಾಂತ ಹೆಬ್ಬಾರ್

ದೇವನೂರಿನ ಲಕ್ಷ್ಮೀರಮಣ ಸ್ವಾಮಿ

ಆರಾಧ್ಯದೈವ

ಜೈಮಿನಿ ‘ ಎಂಬ ಮುನಿಯು ಸಂಸ್ಕೃತದಲ್ಲಿ ಬರೆದಿದ್ದ ಕೌರವ ಪಾಂಡವರ ಕುರುಕ್ಷೇತ್ರ ಯುದ್ಧಾನಂತರದ ಅಶ್ವಮೇಧಯಾಗದ ಕಥೆಯನ್ನೇ ಲಕ್ಷ್ಮೀಶನು ಕನ್ನಡದಲ್ಲಿ ಸಂಗ್ರಹಿಸಿ ಸೊಗಸಾಗಿ ಹೇಳಿರುವನು .

ಈ ಕೃತಿಯು ವಾರ್ಧಕ ಷಟ್ನದಿಯಲ್ಲಿ ರಚಿತವಾಗಿದೆ ಹಾಗು ಹಲವು ರಮ್ಯ ಕಥೆಗಳಿಂದಾಗಿ ಕಥಾಸರಿತ್ಸಾಗರವೆನಿಸಿದೆ .

ಬಿರುದುಗಳು

  • ಕವಿಚೂತವನ ಚೈತ್ರ
  • ಉಪಮಾಲೋಲ

Halubidal Kalmaram Karaguvante Notes

ಹಲುಬಿದಳ್‌ ಕಲ್ಮರಂ ಕರಗುವಂತೆ ನೋಟ್ಸ್ | Halubidal Kalmaram Karaguvante Notes
ಹಲುಬಿದಳ್‌ ಕಲ್ಮರಂ ಕರಗುವಂತೆ ನೋಟ್ಸ್ | Halubidal Kalmaram Karaguvante Notes

ಒಂದು ವಾಕ್ಯದಲ್ಲಿ ಉತ್ತರಿಸಿ Halubidal Kalmaram Karaguvante Notes


ಸೌಮಿತ್ರಿ ಸೀತೆಯನ್ನು ಎಲ್ಲಿಗೆ ಕರೆದುಕೊಂಡು ಹೋದನು ?

ಸೌಮಿತ್ರಿಯು ಸೀತೆಯನ್ನು ಗಂಗಾನದೀ ತೀರದ ಅರಣ್ಯಕ್ಕೆ ಕರೆದುಕೊಂಡು ಹೋದನು .

ಲಕ್ಷ್ಮಣನ ಮಾತು ಕೇಳಿದ ಸೀತೆ ಭೂಮಿಗೆ ಹೇಗೆ ಬಿದ್ದಳು ?

ಲಕ್ಷಣನ ಮಾತು ಕೇಳಿದ ಸೀತೆಯು ಬಿರುಗಾಳಿಯ ಹೊಡೆತಕ್ಕೆ ಸಿಲುಕಿದ ಫಲಿತ ಕದಳಿಯಂತೆ ಭೂಮಿಯ ಮೇಲೆ ಬಿದ್ದಳು .

ರಾಮನ ಆಜ್ಞೆ ಏನು ?

ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರಬೇಕೆಂಬುದೇ ರಾಮನ ಆಜ್ಞೆಯಾಗಿತ್ತು .

ಕಾಡಿನಲ್ಲಿ ತನಗೆ ಯಾರ ನೆರವುಂಟೆಂದು ಸೀತೆ ಹೇಳುತ್ತಾಳೆ ?

ಕಾಡಿನಲ್ಲಿರುವ ಉಗ್ರ ಜಂತುಗಳ ನೆರವು ತನಗುಂಟೆಂದು ಸೀತೆಯು ಹೇಳುತ್ತಾಳೆ .

ಸೀತೆಯಾರಲ್ಲಿ ತಪ್ಪಿಲ್ಲವೆಂದು ಹೇಳುತ್ತಾಳೆ ?

ರಘುರಾಮನಲ್ಲಿ ತಪ್ಪಿಲ್ಲವೆಂದು ಸೀತೆ ಹೇಳುತ್ತಾಳೆ .

ಲಕ್ಷ್ಮಣನಿಗೆ ಏನೆಂದು ಹಾರೈಸಿ ಸೀತೆ ಬೀಳ್ಕೊಡುತ್ತಾಳೆ ?

ಸೀತೆ ಲಕ್ಷ್ಮಣನ ಪ್ರಯಾಣದಲ್ಲಿ ಅಡಿಗಡಿಗೆ ಕ್ಷೇಮ – ಸುಖವಾಗಲೆಂದು ಹಾರೈಸಿ ಬೀಳ್ಕೊಡುತ್ತಾಳೆ .

ಭೂದೇವಿಯ ಮಗಳು ಯಾರು ?

ಭೂದೇವಿಯ ಮಗಳು ಸೀತೆ .


ವಾಲ್ಮೀಕಿ ಏನನ್ನು ಹುಡುಕುತ್ತಾ ವನಕ್ಕೆ ಬಂದನು ?

ವಾಲ್ಮೀಕಿ ಯೂಪವನ್ನು ಅರಸುತ್ತಾ ವನಕ್ಕೆ ಬಂದನು .

ರಾವಣಾರಿ ಎಂದರೆ ಯಾರು ?

ರಾವಣಾರಿ ಎಂದರೆ ಶ್ರೀರಾಮ ,

.ಸೀತೆಯನ್ನು ಆಶ್ರಮಕ್ಕೆ ಕರೆತಂದವರು ಯಾರು ?

ಸೀತೆಯನ್ನು ವಾಲ್ಮೀಕಿ ಆಶ್ರಮಕ್ಕೆ ಕರೆತಂದನು .

ಹಲುಬಿದಳ್‌ ಕಲ್ಮರಂ ಕರಗುವಂತೆ ನೋಟ್ಸ್ | Halubidal Kalmaram Karaguvante Notes
ಹಲುಬಿದಳ್‌ ಕಲ್ಮರಂ ಕರಗುವಂತೆ ನೋಟ್ಸ್ | Halubidal Kalmaram Karaguvante Notes

2-3 ವಾಕ್ಯಗಳಲ್ಲಿ ಉತ್ತರಿಸಿ Halubidal Kalmaram Karaguvante Notes

ಸೀತೆ ಪ್ರವೇಶಿಸಿದ ಕಾಡು ಹೇಗಿತ್ತು ?

ಸೀತೆಯು ಪ್ರವೇಶಿಸಿದ ಅರಣ್ಯವು ಉಗ್ರ ಮೃಗ – ಪಕ್ಷಿಗಳ ಸಮೂಹದಿಂದ ಕಿಕ್ಕಿರಿದಿತ್ತು . ಪೊದೆಗಳು ಅಡಿಗಡಿಗೂ ಇದ್ದು , ಸಹಿಸಲಸಾಧ್ಯವಾದ ಭಯಂಕರ ಕಾಡಾಗಿದ್ದಿತು .

ಲಕ್ಷಣ ದುಃಖಿತನಾಗಲು ಕಾರಣವೇನು ?

ಲಕ್ಷಣನಿಗೆ ಶ್ರೀರಾಮನು ಸೀತೆಯನ್ನು ಬಿಟ್ಟು ಬಿಟ್ಟಿರುವ ಸಂಗತಿಯನ್ನು ಹೇಳುವುದು ಹೇಗೆ ಎಂಬ ದುಃಖ ಒಂದುಕಡೆ ಯಾದರೆ , ಮಹಾರಾಣಿಯಂತಿರಬೇಕಾದ ಸುಕೋಮಲ ಸೀತೆಯನ್ನು ಕಾಡಿನಲ್ಲಿ ಒಂಟಿಯಾಗಿ ಬಿಟ್ಟುಹೋಗಬೇಕೆಂಬ ದುಃಖ ಮತ್ತೊಂದು ಕಡೆ . ಬಿಡದಿದ್ದರೆ ರಾಮನು ಕೋಪಿಸಿಕೊಳ್ಳಬಹುದೆಂಬ ಆತಂಕ ಮತ್ತೊಂದು ಕಡೆ

ಮೂರ್ಛಿತಳಾದ ಸೀತೆಯನ್ನು ಲಕ್ಷ್ಮಣ ಹೇಗೆ ಉಪಚರಿಸಿದನು ?

ಮೂರ್ಛಿತಳಾದ ಸೀತೆಯನ್ನು ಕಂಡು ದುಃಖಿಸಿದ ಲಕ್ಷ್ಮಣನು , ದೊಡ್ಡದೊಂದು ಎಲೆಯನ್ನು ಛತ್ರಿಯಂತೆ ಹಿಡಿದು ನೆರಳನ್ನು ಒದಗಿಸಿದನು . ನೀರನ್ನು ಸಿಂಪಡಿಸಿದನು . ತನ್ನ ಮೇಲಸ್ತ್ರದ ತುದಿಯಿಂದ ಗಾಳಿ ಬೀಸಿ ಸೀತೆಯನ್ನು ಉಪಚರಿಸಿದನು .

ಸೀತೆಗೆ ಸೌಮಿತ್ರಿಯು ಹಿಂತಿರುಗಿ ಹೋಗೆಂದು ಏಕೆ ಹೇಳಿದಳು ?

ಕಾಡಿನಲ್ಲಿ ತಡಮಾಡಿದರೆ ಶ್ರೀರಾಮನು ಕೋಪಿಸಿಕೊಳ್ಳಬಹುದು ಮತ್ತು ಅಯೋಧ್ಯೆಯಲ್ಲಿ ರಾಮನು ಏಕಾಂಗಿ ಯಾಗಿರುವನಾದ್ದರಿಂದ ಸೀತೆಯು ಸೌಮಿತ್ರಿಯನ್ನು ಹಿಂದಿರುಗಿ ಹೋಗೆಂದು ಹೇಳಿದಳು .

ಸೀತೆಯನ್ನು ಕಾಡಿನ ಪ್ರಾಣಿಗಳು ಹೇಗೆ ಉಪಚರಿಸಿದವು ?

ಕಾಡಿನಲ್ಲಿರುವ ಮೃಗ , ಪಕ್ಷಿ , ಜಂತುಗಳೆಲ್ಲಾ ಸೀತೆಗೊದಗಿದ ಕಡುಕಷ್ಟಕ್ಕಾಗಿ ಮರುಗಿದವು . ಅವುಗಳು ಜೋಲುಮೇರೆ . ಯನ್ನು ಹಾಕಿಕೊಂಡು , ತಮ್ಮೊಳಗಿನ ವೈರವನ್ನು ಮರೆತವು , ಆಹಾರ ಸ್ವೀಕಾರವನ್ನು ಮರೆತು , ಸೀತೆಯ ಸುತ್ತ ನಿಂತು ಅವಳ ದುಖದಲ್ಲಿ ಭಾಗಿಯಾಗುವ ಮೂಲಕ ಅವಳನ್ನು ಉಪಚರಿಸಿದವು .

ಹಲುಬಿದಳ್ ಕಲ್ಮರಂ ಕರಗುವಂತೆ notes | Halubidal Kalmaram Karaguvante
ಹಲುಬಿದಳ್‌ ಕಲ್ಮರಂ ಕರಗುವಂತೆ ನೋಟ್ಸ್ | Halubidal Kalmaram Karaguvante Notes

5-6 ವಾಕ್ಯಗಳಲ್ಲಿ ಉತ್ತರಿಸಿ Halubidal Kalmaram Karaguvante Notes

ಲಕ್ಷಣದು ಮಹಾರಣ್ಯವನ್ನು ಪ್ರವೇಶಿಸಿದ ಸನ್ನಿವೇಶವನ್ನು ವಿವರಿಸಿ

ಸೀತೆ ಮತ್ತು ಲಕ್ಷ್ಮಣರು ಆಯೋಧ್ಯೆಯಿಂದ ಹೊರಟು ಗಂಗಾನದೀ ತೀರದಲ್ಲಿ ರಥದಿಂದ ಇಳಿದರು . ಇಬ್ಬರೂ ಮೊದಲಿಗೆ ಗಂಗಾನದಿಗೆ ನಮಸ್ಕರಿಸಿದರು .

ಗಂಗೆಯಲ್ಲಿ ಮಿಂದು.ನಾವಿಕರ ನೆರವಿನಿಂದ ದೋಣಿಯಲ್ಲಿ ಗಂಗೆಯನ್ನು ದಾಟಿ ಘೋರಾರಣ್ಯ ವನ್ನು ಪ್ರವೇಶಿಸಿದರು . ಆರಣ್ಯವು ಉಗ್ರ ಮೃಗ – ಪಕ್ಷಿಗಳ ಸಮೂಹದಿಂದ ‘ ಭೂ ‘ ಎನ್ನುತ್ತಿತ್ತು . ಕಾಲಿಡಲು ಸಾಧ್ಯವಿಲ್ಲವೆಂಬ ಪೊದೆಗಳ ಕರ್ಕಶವಾದ ಹಾದಿಯಲ್ಲಿ ಅವರು ಮುಂದುವರೆದರು .

ಆ ಭಯಂಕರವಾದ ಅರಣ್ಯವು ಜಾನಕಿಗೆ ಹಲವು ಬಗೆಯ ಭ್ರಮೆಯನ್ನು ಮೂಡಿಸಿತು . ಆ ಮಹಾ ಅಡವಿಯು ಜಾನಕಿಯ ಕಣ್ಣಿಗೆ ಘೋರತರವಾಗಿ ಕಂಡಿತು . ಋಷಿಮುನಿಗಳ ಆಶ್ರಮಗಳು ಕಣ್ಣಿಗೆ ಕಾಣದೆ ಸೀತೆ ಕಂಗಾಲಾದಳು . ಲಕ್ಷ್ಮಣನು ದುಃಖದಿಂದ ಮೌನವಾಗಿದ್ದನು .

ಕಾಡಿನಲ್ಲಿ ಜಾನಕಿ ಏನೇನು ಕಾಣಲು ಬಯಸಿದಳು ?

ಭೀಕರವಾದ ಕಾಡಿಗೆ ಲಕ್ಷ್ಮಣನು ಕರೆತಂದುದನ್ನು ನೋಡಿ ಜಾನಕಿಗೆ ಆಶ್ಚರ್ಯವಾಯಿತು . ವಾಸ್ತವವಾಗಿ ಅವಳು ಋಷಿ ಮುನಿಗಳ ಆಶ್ರಮಕ್ಕೆ ಭೇಟಿ ನೀಡಬೇಕೆಂಬ ಬಯಕೆಯನ್ನು ಹೊಂದಿದ್ದಳು . ಉತ್ತಮ ಮುನಿಪರ ಪವಿತ್ರವಾದ ವನಗಳನ್ನು ಅವಳು ನಿರೀಕ್ಷಿಸಿದ್ದಳು .

ಸಿದ್ದರ ಆಶ್ರಮಗಳನ್ನು ಮಂಗಳಕರವಾದ ಸ್ಥಳಗಳನ್ನು ಹವಿಸ್ಸಿನ ಕಂಪು ಬೀರುವ ಹೊಗೆಯನ್ನು ಯಜ್ಞ ಯಾಗ , ಹೋಮಾದಿಗಳು ನಡೆವ ತಾಣವನ್ನು ಋಷಿಗಳು ವಾಸಮಾಡುವ ಕುಟೀರಗಳನ್ನು , ಕುಟೀರಗಳಿಂದ ಹೊರಹೊಮ್ಮುವ ವೇದಶಾಸ್ತ್ರ ಪಾರಾಯಣದ ಧ್ವನಿಗಳನ್ನು ಜಾನಕಿಯು ಕಾಣಬಯಸಿದ್ದಳು . ಆದರೆ ಯಾವುವೂ ಇಲ್ಲದ ಘೋರಾರಣಕ್ಕೆ ಲಕ್ಷ್ಮಣನು ಸೀತೆಯನ್ನು ಕರೆತಂದು ಆಕೆಯನ್ನು ನಿರಾಸೆಗೊಳಿಸಿದನು .

ಸೀತೆಯನ್ನು ಕಾಡಿನಲ್ಲಿ ಬಿಡಲು ಬಂದ ಲಕ್ಷಣನ ಬೇಗುದಿ ಹೇಗಿತ್ತು ?

ಶ್ರೀರಾಮನ ಆಜ್ಞೆಯನ್ನು ಮೀರಲಾರದೆ ಸೀತೆಯನ್ನು ಕಾಡಿನಲ್ಲಿ ಬಿಟ್ಟುಹೋಗಲು ಬಂದ ಲಕ್ಷ್ಮಣನ ಮನಸ್ಸಿನ ದುಃಖ ಅಪಾರವಾದುದು . ಮನದಲ್ಲಿಯೇ ಅಪಾರವಾದ ದುಃಖವನ್ನು ನುಂಗಿಕೊಂಡು ಮೌನವಾಗಿದ್ದನು . ರಾಮನ ಸೀತಾಪರಿತ್ಯಾಗದ ವಿಷಯವನ್ನು ಸೀತೆಗೆ ತಿಳಿಸುವುದು ಹೇಗೆಂದು ಅವನು ಪೇಚಾಡಿಕೊಂಡನು .

ಅಲ್ಲದೆ ಸೂರ್ಯವಂಶದ ಮಹಾರಾಣಿಯಾದ ಸೀತೆಯನ್ನು ಕಾಡಿನಲ್ಲಿ ಒಂಟಿಯಾಗಿ ಬಿಟ್ಟು ಹೋಗಬೇಕೆನ್ನುವ ವಿಚಾರ ಅವನನ್ನು ಅಪಾರವಾಗಿ ನೋಯಿಸಿತು .

ಬಿಟ್ಟು ಹೋಗದಿದ್ದರೆ ಶ್ರೀರಾಮನೇನೆನ್ನುವನೋ ಎಂಬ ಭಯ . ವಿಚಾರ ತಿಳಿದು ಮೂರ್ಛಗೆ ಜಾರಿದ ಸೀತೆಯನ್ನು ಆತ ಅಳುತ್ತಲೇ ಉಪಚರಿಸುವನು . ಕೊನೆಗೆ ತುಂಬು ಗರ್ಭಿಣಿಯಾದ ಆಕೆಯ ಕ್ಷೇಮಕ್ಕಾಗಿ , ವನವೃಕ್ಷಗಳನ್ನು , ವನದೇವತೆ , ದಿಗ್ಗೇವತೆಗಳನ್ನೂ , ಪಂಚಭೂತಗಳನ್ನು ನೆಲತಾಯಿಯನ್ನೂ ಕೈ ಮುಗಿದು ಪ್ರಾರ್ಥಿಸಿ ಅಳುತ್ತಲೇ ಅಯೋಧ್ಯೆಗೆ ಹಿಂದಿರುಗುವನು .

1st puc kannada 4th poem summary


ರಾಮನ ಆಜ್ಞೆಯ ಲಕ್ಷಣನು ಸೀತೆಗೆ ಹೇಗೆ ತಿಳಿಸಿದ ?

ಲಕ್ಷ್ಮಣನು ಸೀತೆಗೆ ರಾಮನ ಆಜ್ಞೆಯನ್ನು ತಿಳಿಸಲಾಗದೆ ಒದ್ದಾಡಿದನು . ಕೊನೆಗೆ ನಿಧಾನವಾಗಿ ” ದೇವಿ ನಾನು ಇದು ವರೆಗೂ ಈ ಸಂಗತಿಯನ್ನು ನಿನಗೆ ಹೇಳಲಾಗಲಿಲ್ಲ . ಶ್ರೀರಾಮನು ತನ್ನನ್ನು ಒಂದು ಅಪವಾದ ಒಂದು ಆವರಿಸಿದ್ದರಿಂದ ನಿನ್ನನ್ನು ಪರಿತ್ಯಾಗ ಮಾಡಿದ್ದಾನೆ . ಅವನ ಆಜ್ಞೆಯಂತೆ ನಾನು ನಿನ್ನನ್ನು ಕಾಡಿಗೆ ಕರೆತಂದುಬಿಟ್ಟಿದ್ದೇನೆ .

ಪ್ರಭುವಿನ ಆಜ್ಞೆಯನ್ನು ಮೀರಲಾಗದ ಈ ಕಾಡಿಗೆ ನಿನ್ನನ್ನು ಕರೆತರಬೇಕಾಯ್ತು . ಇಲ್ಲಿಂದ ಮುಂದೆ ನೀನು ಎಲ್ಲಿಗೆ ಬೇಕಾದರೂ ಹೋಗಬಹುದು ‘ ‘ ಎಂದು ನುಡಿದನು . ಲಕ್ಷಣನು ಈ ವಿಚಾರವನ್ನು ಮೆಲ್ಲನೆ , ಯೋಚಿಸಿ ಹೇಳಿದನಾದರೂ ಸೀತೆಗೆ ಅದು ಬಿರುಗಾಳಿಯಂತೆ ಬಂದು ಅಪ್ಪಳಿಸಿತು .

ಸೀತೆ ಹಿಂದಿನ ಘಟನೆಗಳನ್ನು ನೆನಪಿಸಿಕೊಂಡು ಹೇಗೆ ದುಃಖಿಸುತ್ತಾಳೆ ?

ಶ್ರೀರಘುರಾಮನ ಮನೋವಲ್ಲಭೆಯಾದ ತಾನು ಈ ದಟ್ಟಡವಿಯಲ್ಲಿ ಪಿಶಾಚಿಯಂತೆ ಅಲೆಯಬೇಕಾಯಿತಲ್ಲಾ ಎಂದು ದುಃಖಿಸುವ ಸೀತೆಗೆ ಹಿಂದಿನ ಘಟನೆಗಳೆಲ್ಲಾ ನೆನಪಿಗೆ ಬರುತ್ತವೆ .

ಶ್ರೀರಾಮನು ಕೌಶಿಕ ಮುನಿಗಳೊಡನೆ ಮಿಥಿಲಾಪುರ ಬಂದುದು , ಜನಕನು ಪಣವಾಗಿಟ್ಟಿದ್ದ ಹರಧನಸ್ಸನ್ನು ಮುರಿದು ಸೀತೆಯನ್ನು ವರಿಸಿದ್ದು , ಆನಂತರದ ದಿನಗಳಲ್ಲಿ ಇಬ್ಬರೂ ಸುಖವಾಗಿ ರಮಿಸಿದ್ದು

ಆರಣ್ಯವಾಸದ ಕಷ್ಟದಲ್ಲೂ ರಾಮ ಜೊತೆ ಬಿಡದ ನೋಡಿಕೊಂಡಿದ್ದು , ರಾವಣನು ಹೊತ್ತೊಯ್ದಾಗ , ಕೆಪಿ ಸೈನ್ಯದೊಂದಿಗೆ ಲಂಕೆಗೆ ಸೇತುವೆ ಕಟ್ಟಿ , ದೈತ್ಯಾಕಿದೆತ್ತರೊಡನೆ ಹೋರಾಡಿ ಸೀತೆಯನ್ನು ಕಾಪಾಡಿದ್ದು , ಸೀತೆಯನ್ನು ಅಗ್ನಿಪರೀಕ್ಷೆಗೆ ನೂಕಿ ಪತಿವ್ರತೆಯೆಂದು ಪರೀಕ್ಷಿಸಿದ್ದು – ಇವೆಲ್ಲವೂ ನೆನಪಾಗುತ್ತವೆ .

ಇಷ್ಟೆಲ್ಲಾ ಪ್ರೀತಿಯಿಂದ ನೋಡಿಕೊಂಡ ಶ್ರೀರಾಮನು ಈಗ ತನ್ನಲ್ಲಿ ಯಾವ ಅಪರಾಧವನ್ನು ಕಂಡು ತನ್ನನ್ನು ತ್ಯಜಿಸಿದನೆಂದು ಪರಿಪರಿಯಾಗಿ ಅವಳು ದುಃಖಿಸುತ್ತಾಳೆ .

ಕಾಡಿನಲ್ಲಿ ಸೀತೆಯನ್ನು ರಕ್ಷಿಸುವ ಜವಾಬ್ದಾರಿಯನ್ನು ಲಕ್ಷ್ಮಣನು ಯಾರಿಗೆ , ಹೇಗೆ ವಹಿಸುತ್ತಾನೆ ? ಸೀತೆಯು ಸೌಮಿತ್ರಿಯನ್ನು ಆಯೋಧ್ಯೆಗೆ ಹಿಂದಿರುಗಬೇಕೆಂದು ಸೂಚಿಸಿದಾಗ ಅವನು ಕಾಡಿನಲ್ಲಿರುವ ಪ್ರತಿಯೊಂದನ್ನೂ ಸೀತೆಯನ್ನು ರಕ್ಷಿಸಬೇಕೆಂದು ಬೇಡಿಕೊಳ್ಳುತ್ತಾನೆ . ಅವನು ಅರಣ್ಯವನ್ನು ಬೇಡಿಕೊಳ್ಳುತ್ತಾನೆ .

Halubidal Kalmaram Karaguvante

ಕಾಡಿನಲ್ಲಿರುವ ಮರಗಳಿಗೆ ಸೀತೆ ಯನ್ನು ಕಾಪಾಡುವಂತೆ ಕೋರುತ್ತಾನೆ . ಕಾಡಿನಲ್ಲಿರುವ ಕ್ರಿಮಿಕೀಟಗಳನ್ನು ಪಕ್ಷಿಗಳನ್ನು ಗಿಡಮರಬಳ್ಳಿಗಳನ್ನು ಪ್ರಾರ್ಥಿಸುವನು . ಹುಲ್ಲಿನ ಪೊದೆಗಳನ್ನು ಕೇಳಿಕೊಳ್ಳುವನು . ಪಂಚಭೂತಗಳನ್ನು ಕುರಿತು ಸೀತೆಯ ಕ್ಷೇಮಕ್ಕಾಗಿ ಬೇಡುವನು .

ದಿಕ್ಕಿನ ದೇವತೆಗಳನ್ನು ಧರ್ಮದೇವತೆಯನ್ನೂ ಸೀತೆಯ ರಕ್ಷಣೆಗಾಗಿ ವಿನ ೦ ತಿಸುವನು , ಜಗನ್ಮಾತೆ ಎನಿಸಿರುವ ಗಂಗಾದೇವಿಯನ್ನು ಸೀತೆಯನ್ನು ಸಲಹ ಬೇಕೆಂದನು . ಮತ್ತು ಸೀತೆಯ ತಾಯಿ ಭೂಮಿ ತಾಯಿಯನ್ನು ಪೊರೆಯಬೇಕೆಂದು ಸೂಚಿಸಿದನು . ಈ ಮೇಲಿನ ಎಲ್ಲರಿಗೂ ಸೀತೆಯನ್ನು ನಿಮ್ಮ ಮಗಳಂತೆ ಕಾಪಾಡಿರೆಂದು ಲಕ್ಷ್ಮಣನು ಕೈಮುಗಿದು ಪ್ರಾರ್ಥಿಸಿದನು .

ಸೀತೆ ಕಲ್ಮರಂ ಕರಗುವಂತೆ ದುಃಖಿಸಿದ ಪರಿಯನ್ನು ವಿವರಿಸಿ .

ಲಕ್ಷಣನು ಆಯೋಧ್ಯೆಗೆ ಹಿಂದಿರುಗಿದ ಬಳಿಕ ಸೀತೆಯು ಕಾಡಿನಲ್ಲಿ ಅಬಲೆಯಾದಳು . ತಾನು ಮುಂದೆ ಎಲ್ಲಿಗೆ , ಹೇಗೆ ಹೋಗಬೇಕು ? ತನ್ನ ಮುಂದಿನ ದಾರಿ ಯಾವುದೊಂದು ದಿಕ್ಕು ದಿಕ್ಕುಗಳನ್ನೂ ನೋಡಿ , ದಿಕ್ಕು ತೋಚದಾದಳು . ಅವಳ ಮೈ , ಕೈ ಗಳೆಲ್ಲವೂ ಶಿಥಿಲಗೊಂಡಿತ್ತು , ಮೈ ತುಂಬಾ ಧೂಳು ಮೆತ್ತಿಕೊಂಡಿತ್ತು .

ಹಲುಬಿದಳ್ ಕಲ್ಮರಂ ಕರಗುವಂತೆ notes

ತಲೆಕೂದಲು ಬಿಚ್ಚಿಕೆದರಿ , ವಿಕಾರಗೊಂಡಿತ್ತು . ಇದಾವುದನ್ನೂ ಗಮನಿಸದ ಸೀತೆಯು ” ನಾನು ಮಿಥಿಲೇಶ್ವರನಾದ ಜನಕರಾಜನ ವಂಶದಲ್ಲಿ ಮಗಳಾಗಿ ಜನಿಸಿದವಳು . ರಘುವಂಶದ ದಶರಥ ಮಹಾರಾಜನ ಸೊಸೆಯಾದವಳು . ಇಂತಹ ತಾನು ಈ ದಟ್ಟವಾದ ಅಡವಿಯಲ್ಲಿ ಬಿದ್ದು ದುಃಖಿಸುವಂತಾಯಿತ ? ಅಯ್ಯೋ ವಿಧಿಯೇ ‘ ‘ ಎಂದು ಹಲುಬಿದಳು , ಅವಳ ಶೋಕವನ್ನು ಕಂಡು ಅಲ್ಲಿದ್ದ ಮರಗಳು , ಕಲ್ಲುಗಳೂ ದುಃಖದಿಂದ ಕರಗಿದವೆಂದು ಕವಿ ವರ್ಣಿಸಿದ್ದಾನೆ .

ವಾಲ್ಮೀಕಿ ಸೀತೆಯನ್ನು ಹೇಗೆ ಸಂತೈಸುತ್ತಾನೆ ?

ವಾಲ್ಮೀಕಿ ಮಹರ್ಷಿಯು ತನ್ನ ಶಿಷ್ಯರೊಡಗೂಡಿ ಯೂಪವನ್ನರಸುತ್ತಾ ಅರಣ್ಯಕ್ಕೆ ಬಂದವನು ಗ್ರೀಷ್ಮಋತುವಿನ ಬಿಸಿಲಿನ ಧಗೆಗೆ ಸಿಲುಕಿ ಬಸವಳಿದು ಬಿದ್ದು ರೋದಿಸುತ್ತಿದ್ದ ಸೀತೆಯನ್ನು ಕಾಣುತ್ತಾರೆ . ಅವರು ಸೀತೆಯ ಬಳಿ ಬಂದು “ ದೇವಿ , ಶೋಕಿಸ ಬೇಡ , ನೀನು ಅವಳಿ ಮಕ್ಕಳನ್ನು ಪಡೆಯಲಿರುವೆ .

ನನ್ನನ್ನು ಸಂದೇಹಿಸಬೇಡ , ನಾನು ಜನಕ ಮಹಾರಾಜನಿಗೆ ಪರಿಚಿತನು , ಅನ್ಯನಲ್ಲ . ನೀನು ನಮಾಶ್ರಮಕ್ಕೆ ಬಂದು ಸುಖವಾಗಿರು . ಅಲ್ಲಿ ನಿನ್ನ ಎಲ್ಲಾ ಬಯಕೆಗಳನ್ನೂ ನೆರವೇರಿಸಿ ನೋಡಿಕೊಳ್ಳುತ್ತೇವೆ .

1st PUC Kannada

ನಿನಗಿಷ್ಟ ಬಂದಂತೆ ನೀನು ಇರಬಹುದು . ನಿನ್ನನ್ನು ಕ್ಷೇಮವಾಗಿ ನೋಡಿಕೊಳ್ಳುತ್ತೇವೆ ‘ ಎಂದು ಸಂತೈಸಿ , ಸಮಾಧಾನಪಡಿಸಿ ಸೀತೆಯನ್ನು ತನ್ನ ತಪೋವನಕ್ಕೆ ಕರೆದುಕೊಂಡು ಹೋಗುವರು .


“ ಕರುಣಾಳು ರಾಘವನಲ್ಲಿ ತಪ್ಪಿಲ್ಲ ” ಎಂಬ ಸೀತೆಯ ನಿಲುವನ್ನು ವಿಶ್ಲೇಷಿಸಿ .

ಶ್ರೀರಾಮನು ತನ್ನನ್ನು ಕಾಡಿಗೆ ಅಟ್ಟಿದ ವಿಚಾರವನ್ನು ತಿಳಿದಾಕ್ಷಣ ಸೀತೆಯು ಪರಿಪರಿಯಾಗಿ ದುಃಖಿಸಿದಳು . ರಾಮನ ಮನೋವಲ್ಲಭೆಯಾದ ತನ್ನನ್ನು ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಜೊತೆಬಿಡದವನು ,

ಈಗ ಯಾವ ಅಪರಾಧವನ್ನು ಕಂಡು ನನ್ನನ್ನು ಪರಿತ್ಯಜಿಸಿದನೆಂದು ಚಿಂತಿಸಿದಳು . ಕೊನೆಗೆ ಅಪವಾದ ಬಂದಾಗ ಶ್ರೀರಾಮನು ಇಂತಹ ನಿರ್ಧಾರಕ್ಕೆ ಬಂದಿರಬಹುದು .

ಕರುಣಾಳುವಾದ ಶ್ರೀರಾಮನಲ್ಲಿ ತಪ್ಪಿಲ್ಲ . ಹೆಣ್ಣಾಗಿ ಹುಟ್ಟಿದ ತನ್ನ ಪಾಪವೇ ಹೀಗೆ ಕಾಡಿಸುತ್ತಿದೆ . ಯಾವ ಯಾವ ತಪ್ಪುಗಳನ್ನು ಹಿಂದಿನ ಜನ್ಮದಲ್ಲಿ ಮಾಡಿದ್ದೆನೋ ?

ಅದಕ್ಕಾಗೇ ವಿಧಿಯು ಈ ಜನ್ಮದಲ್ಲಿ ನನ್ನನ್ನು ಇಂತಹ ಕಷ್ಟಗಳಿಗೆ ಗುರಿಮಾಡಿದೆ ಎಂದು ಸಂತೈಸಿಕೊಳ್ಳುವಳು . ಇಲ್ಲಿ ಹೆಣ್ಣಾದವಳು ಎಲ್ಲಾ ನೋವನ್ನೂ ನುಂಗಿ ಬದುಕದೆ ವಿಧಿಯಿಲ್ಲ ಎಂಬ ಸಾಮಾಜಿಕ ಅಸಮಾನತೆಯು ಎದ್ದು ಕಾಣುತ್ತಿದೆ .

ಪುರುಷನ ನಿರ್ಧಾರವನ್ನು ಪ್ರಶ್ನಿಸುವಂತಿಲ್ಲ , ಪಾಲಿಸದೆ ವಿಧಿಯಿಲ್ಲ ಎಂಬ ಧೋರಣೆ ಇಲ್ಲಿ ಗೋಚರಿಸುತ್ತದೆ . ಇನ್ನೊಂದು ದೃಷ್ಟಿಯಿಂದ ನೋಡಿದರೆ ಈ ಮಾತನ್ನು ಸೀತೆಯು ವ್ಯಂಗ್ಯದಿಂದ ಆಡಿರುವಂತೆಯೂ ತೋರುತ್ತದೆ .

‘ ಪುರುಷೋತ್ತಮ’ನೆನಿಸಿದ ರಾಮ ಎಂದಿಗೂ ತಪ್ಪು ಮಾಡುವುದೇ ಇಲ್ಲ , ತಪ್ಪೆಲ್ಲಾ ಹೆಣ್ಣಾಗಿ ಹುಟ್ಟಿದ ತನ್ನದು ಎಂದು ಸೀತೆ ಇಲ್ಲಿ ನೋವು , ದುಃಖ ಮತ್ತು ಹತಾಶೆಗಳಿಂದ ವ್ಯಂಗ್ಯವಾಗಿ ನುಡಿಯುತ್ತಿದ್ದಾಳೆಂದೂ ಪರಿಭಾವಿಸಬಹುದು .

Halubidal Kalmaram Karaguvante Notes

ಹಲುಬಿದಳ್ ಕಲ್ಮರಂ ಕರಗುವಂತೆ notes | Halubidal Kalmaram Karaguvante
ಹಲುಬಿದಳ್‌ ಕಲ್ಮರಂ ಕರಗುವಂತೆ ನೋಟ್ಸ್ | Halubidal Kalmaram Karaguvante Notes
ಭಾಷಾಭ್ಯಾಸ :

ಇವುಗಳನ್ನು ಬಿಡಿಸಿ ಬರೆಯಿರಿ : Halubidal Kalmaram Karaguvante Notes

ಕಲ್ಮರಂ → ಕಲ್ + ಮರಂ

ಶಿವಾವಾಸ → ಶಿವ + ಆವಾಸ

ಬಿದ್ದಳಂಗನೆ → ಬಿದ್ದಳು + ಅಂಗನೆ

ಜಗಜ್ಜನನಿ – ಜಗತ್ + ಜನನಿ

ಮಹಾಟವಿ → ಮಹಾ + ಅಟವಿ

ನಾವನ್ಯರಲ್ಲ → ನಾವು + ಅನ್ಯರಲ್ಲ .

Halubidal Kalmaram Karaguvante Notes

ರಾವಣಾರಿ ಎಂದರೆ ಯಾರು?

ರಾವಣಾರಿ ಎಂದರೆ ಶ್ರೀರಾಮ

ರಾಮನ ಆಜ್ಞೆ ಏನು Class 11

ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರಬೇಕೆಂಬುದೇ ರಾಮನ ಆಜ್ಞೆಯಾಗಿತ್ತು

ದಿವ್ಯಜ್ಞಾನಿ ಎಂದು ಯಾರನ್ನು ಕರೆಯಲಾಗಿದೆ?

ಸಹದೇವ

ಇತರೆ ವಿಷಯಗಳನ್ನು ಓದಿರಿ

ಡೌನ್ಲೋಡ್ ಪಿಡಿಎಫ್ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *